ಆಲೂಗಡ್ಡೆ

ಬೆಳ್ಳಿಪೊರೆ

Helminthosporium solani

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ರೇಖೀಯವಾದ ಕಂದು ಬಣ್ಣದ ಅಂಚಿರುವ ಬೆಳ್ಳಿಯ ಗಾಯಗಳು ಗೆಡ್ಡೆಗಳ ಮೇಲೆ ಕಾಣಿಸುತ್ತವೆ.
  • ತೊಳೆಯದ ಆಲೂಗಡ್ಡೆಗಳ ಮೇಲೆ ರೋಗಲಕ್ಷಣಗಳು ನೋಡಲು ಕಷ್ಟವಾಗಬಹುದು.
  • ವಿವಿಧ ಆಲೂಗಡ್ಡೆ ವೈವಿಧ್ಯತೆಗಳಲ್ಲಿ ಸಿಪ್ಪೆಯು ವಿವಿಧ ರೀತಿಗಯಲ್ಲಿರುವ ಕಾರಣದಿಂದಾಗಿ ಗಾಯಗಳು ವ್ಯಾಪಕವಾಗಿ ಬದಲಾಗುತ್ತವೆ.
  • ಇತರ ರೋಗಕಾರಕಗಳಿಂದ ದ್ವಿತೀಯ ಸೋಂಕುಗಳು ಸಹ ತಗುಲಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ರೋಗಲಕ್ಷಣಗಳು ಸಾಮಾನ್ಯವಾಗಿ ಕೊಯ್ಲಿನ ಸಮಯದಲ್ಲಿ ಕಂಡುಬರುತ್ತವೆ ಆದರೆ ರೋಗವು ಶೇಖರಣೆಯಲ್ಲಿ ಬೆಳವಣಿಗೆಯಾಗುತ್ತದೆ. ಶೇಖರಣೆಯ ಸಮಯದಲ್ಲಿ, ರೇಖೀಯವಾದ ಕಂದು ಬಣ್ಣದ ಅಂಚಿರುವ ಬೆಳ್ಳಿಯ ಗಾಯಗಳು ಆಲೂಗೆಡ್ಡೆಗಳ ಮೇಲೆ ಕಾಣಿಸುತ್ತವೆ. ಗಾಯಗಳು ನಂತರ ಒಗ್ಗೂಡುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗಬಹುದು, ಅವು ತೊಳೆಯದ ಆಲೂಗಡ್ಡೆಗಳ ಮೇಲೆ ಕಾಣದೇ ಇರಬಹುದು. ವಿವಿಧ ಆಲೂಗಡ್ಡೆ ವೈವಿಧ್ಯತೆಗಳಲ್ಲಿ ಸಿಪ್ಪೆಯು ವಿವಿಧ ರೀತಿಗಯಲ್ಲಿರುವ ಕಾರಣದಿಂದಾಗಿ ಗಾಯಗಳು ವ್ಯಾಪಕವಾಗಿ ಬದಲಾಗುತ್ತವೆ. ಸೋಂಕಿತ ಆಲೂಗಡ್ಡೆಗಳ ಹೊರ ಚರ್ಮದ ಪದರವು ಮೃದುವಾಗುತ್ತದೆ ಮತ್ತು ಸುಕ್ಕುಗಳು ಮೂಡಿ ಅಂತಿಮವಾಗಿ ಸಿಪ್ಪೆ ಕಿತ್ತುಬರುತ್ತದೆ. ಇತರ ರೋಗಕಾರಕಗಳಿಂದ ದ್ವಿತೀಯ ಸೋಂಕುಗಳು ಸಹ ತಗುಲಬಹುದು.

Recommendations

ಜೈವಿಕ ನಿಯಂತ್ರಣ

ನೈಸರ್ಗಿಕ ಬಯೋಸೈಡ್ಗಳು (ಹೈಡ್ರೋಜನ್ ಪೆರಾಕ್ಸೈಡ್) ಅಥವಾ ಜೈವಿಕ ಉತ್ಪನ್ನಗಳು (ಬ್ಯಾಸಿಲಸ್ ಸಬ್ಟಿಲಿಸ್, ಲವಂಗ ಎಣ್ಣೆ) ಬೆಳ್ಳಿ ಪೊರೆಯಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿತ್ವವನ್ನು ತೋರಿಸಿವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ನಾಟಿ ಮಾಡುವ ಮೊದಲು ಅಥವಾ ಕೊಯ್ಲಿಗೆ ಮುಂಚೆ ಬೀಜ ಆಲೂಗೆಡ್ಡೆಗಳ ಮೇಲೆ ಶಿಲೀಂಧ್ರನಾಶಕಗಳನ್ನು ಹಾಕಿದರೆ ಸೋಂಕನ್ನು ತಡೆಗಟ್ಟಬಹುದು. ಥೈಬೇಂಡಜೋಲ್ ಅನ್ನು, ಗೆಡ್ಡೆಗಳ ಮೇಲೆ ಪುಡಿ ರೀತಿಯಲ್ಲಿ ಬಳಸುವುದರಿಂದ, ಮುಂದಿನ ಋತುವಿನಲ್ಲಿ ಅಥವಾ ಶೇಖರಣೆಯ ಸಮಯದಲ್ಲಿ ಬೆಳ್ಳಿಪೊರೆ ರೋಗದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

ಅದಕ್ಕೆ ಏನು ಕಾರಣ

ಬೆಳ್ಳಿಪೊರೆ ರೋಗವು ಬೀಜದಿಂದ ಹರಡುವ ಶಿಲೀಂಧ್ರವಾದ ಹೆಲ್ಮಿನ್ಥೋಸ್ಪೋರಿಯಮ್ ಸೊಲಿನಿಯಿಂದ ಉಂಟಾಗುತ್ತದೆ. ಇದು ದೀರ್ಘಕಾಲದವರೆಗೆ ಗೆಡ್ಡೆಗಳಲ್ಲಿ ಇರುತ್ತದೆ ಮತ್ತು ಸಿಪ್ಪೆಕೆ ಸೋಂಕು ಮಾಡುತ್ತದೆ. ಮಣ್ಣಿನ ಮೂಲಕ, ಸೋಂಕಿತ ಬೀಜ ಗೆಡ್ಡೆಗಳು ಅಥವಾ ಶೇಖರಣಾ ಕೊಠಡಿಗಳಲ್ಲಿ ಉಳಿದ ಬೀಜಕಗಳನ್ನು ಬಳಸುವುದರಿಂದ ಸೋಂಕು ಉಂಟಾಗಬಹುದು. ಶೇಖರಣೆಯ ಸಮಯದಲ್ಲಿ ತಾಪಮಾನವು 3 ಡಿಗ್ರಿ ಸೆಲ್ಶಿಯಸ್ ಇದ್ದಾಗ ಮತ್ತು ಆರ್ದ್ರತೆಯು ಶೇ. 90 ಗಿಂತ ಕಡಿಮೆಯಿದ್ದಾಗ ರೋಗದ ಬೆಳವಣಿಗೆಯನ್ನು ತಡೆಗಟ್ಟಬಹುದು. ಶೇಖರಣೆಯ ಸಮಯದಲ್ಲಿ ಗೆಡ್ಡೆಗಳ ಮೇಲೆ ಘನೀಕರಣದ ರಚನೆಯಾದರೆ (ಬೆಚ್ಚಗಿನ ಗಾಳಿಯು ತಣ್ಣನೆಯ ಗೆಡ್ಡೆಗಳನ್ನು ಮುಟ್ಟಿದಾಗ) ಅದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಆಲೂಗಡ್ಡೆ ಇನ್ನೂ ತಿನ್ನಲಾರ್ಹವಾಗಿದ್ದರೂ, ಅವುಗಳ ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಕಡಿಮೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಸಹಿಷ್ಣು ಆಲೂಗಡ್ಡೆ ಪ್ರಭೇದಗಳಿವೆಯೇ ಎಂದು ವಿಚಾರಿಸಿ.
  • ವ್ಯಾಪಕವಾದ ಬೆಳೆ ಸರದಿ ವ್ಯವಸ್ಥೆಯನ್ನು ಅಳವಡಿಸಿ.
  • ಗೆಡ್ಡೆಗಳನ್ನು ಬೇಗನೆ ತೆಗೆದರೆ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಬಹುದು.
  • ಕೊಯ್ಲಿನ ನಂತರ ತಾವಾಗೇ ಬೆಳೆದ ಸಸ್ಯಗಳನ್ನು ತೆಗೆದು ಹಾಕಿ.
  • ರಾಶಿಗಳ ನಡುವೆ ಉಪಯೋಗಿಸುವ ಉಪಕರಣಗಳು ಮತ್ತು ನಿರ್ವಹಣೆ ಸಾಧನಗಳನ್ನು ಸ್ವಚ್ಛಗೊಳಿಸಿ ಮತ್ತು ಸೋಂಕು ಮುಕ್ತಗೊಳಿಸಿ.
  • ನಿರಂತರವಾಗಿ ತಂಪಾಗಿರುವ ಮತ್ತು ಓಣ ಜಾಗಗಳಲ್ಲಿ ಮತ್ತು ಚೆನ್ನಾಗಿ ಗಾಳಿಯಾಡುವ ಜಾಗಗಳಲ್ಲಿ ಆಲೂಗಡ್ಡೆಗಳನ್ನು ಶೇಖರಿಸಿ.
  • ಕೊಯ್ಲಿನ ನಂತರ ಉತ್ತಮ ನೈರ್ಮಲ್ಯ ಪದ್ಧತಿ ಮತ್ತು ಆಯುವ ಕೆಲಸಗಳು ಅತ್ಯಗತ್ಯ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ