ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಸೃಷ್ಟಿಸುವುದು

ಪ್ರಪಂಚದಾದ್ಯಂತದ ಸಣ್ಣ-ಪ್ರಮಾಣದ ರೈತರು ಮತ್ತು ಕೃಷಿ ವ್ಯಾಪಾರಿಗಳನ್ನು ಬೆಂಬಲಿಸಲು ನಾವು ಬಯಸುತ್ತೇವೆ. AI ತಂತ್ರಜ್ಞಾನ, ಡೇಟಾ ಅನಾಲಿಟಿಕ್ಸ್ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ಬಳಸಿಕೊಂಡು, ಸರಿಯಾದ ಪರಿಹಾರಗಳನ್ನು ಒದಗಿಸುವುದು, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ.

ಡಿಜಿಟಲ್ ಕೃಷಿಯೊಂದಿಗೆ ಸಣ್ಣ ಪ್ರಮಾಣದ ರೈತರ ಸಬಲೀಕರಣ

ಜಗತ್ತಿಗೆ ಆಹಾರವನ್ನು ಉತ್ಪಾದಿಸುವಲ್ಲಿ ಅವರು ಎಷ್ಟು ಮುಖ್ಯ ಎಂಬುದನ್ನು ಮತ್ತು ಅವರು ಎದುರಿಸುತ್ತಿರುವ ತೊಂದರೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಸಂಪನ್ಮೂಲಗಳು, ತಂತ್ರಜ್ಞಾನ ಮತ್ತು ಮಾಹಿತಿಯ ಸೀಮಿತ ಲಭ್ಯತೆಯಿಂದ ಅವರಿಗೆ ಕೃಷಿಯನ್ನು ಸುಧಾರಿಸಲು ಕಷ್ಟವಾಗಬಹುದು. ಅದಕ್ಕಾಗಿಯೇ ನಾವು ಪ್ಲಾಂಟಿಕ್ಸ್ಅನ್ನು ನಿರ್ಮಿಸಿದ್ದೇವೆ. ಇದು ರೈತರಿಗೆ ಮಾಹಿತಿ, ತಂತ್ರಜ್ಞಾನ ಮತ್ತು ಕೃಷಿ ಸಲಹೆಗಳು ಲಭ್ಯವಾಗುವಂತೆ ಮಾಡುತ್ತವೆ.

ಸುಸ್ಥಿರ ಮತ್ತು ಲಾಭದಾಯಕ ಕೃಷಿಯನ್ನು ಬೆಂಬಲಿಸುವುದು

ನಮ್ಮ ಕೃಷಿ ವ್ಯವಸ್ಥೆಯ ಬೆನ್ನೆಲುಬಾಗಿರುವ ಸಣ್ಣ ಪ್ರಮಾಣದ ರೈತರು ಮತ್ತು ಕೃಷಿ ರಿಟೇಲ್ ವ್ಯಾಪಾರಿಗಳ ಸಬಲೀಕರಣದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ನಮ್ಮ ಎರಡು ಅಪ್ಲಿಕೇಶನ್ ಗಳು, ಪ್ಲಾಂಟಿಕ್ಸ್ ಮತ್ತು ಪ್ಲಾಂಟಿಕ್ಸ್ ಪಾರ್ಟ್ನರ್, ಕೇವಲ ಸಾಧನಗಳಲ್ಲ; ಅವು ಕೃಷಿ ಉದ್ಯಮವನ್ನು ಪರಿವರ್ತಿಸುವ ಆಂದೋಲನದ ಅಡಿಪಾಯವಾಗಿದ್ದು, ರೈತರಿಗೆ ತಮ್ಮ ಜೀವನ ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಜೊತೆಗೆ, ಕೃಷಿ-ರಿಟೇಲ್ ವ್ಯಾಪಾರಿಗಳು ತಮ್ಮ ಕೃಷಿ ಸಮುದಾಯಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಬಹುದು.

ನಿಮ್ಮ ಕೃಷಿ ಆದಾಯವನ್ನು ಹೆಚ್ಚಿಸಿ

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ

ನಿಮ್ಮ ಕೃಷಿ-ರಿಟೇಲ್ ವ್ಯಾಪಾರವನ್ನು ಬೆಳೆಸಿ

ಪ್ಲಾಂಟಿಕ್ಸ್ ಪಾರ್ಟ್ನರ್ ಆಗಿ

ಗಮನ, ಕಾಳಜಿ, ಸಶಕ್ತತೆ, ಹಂಚಿಕೆ!

ನಮ್ಮ ಬ್ರಾಂಡ್ ಮೌಲ್ಯವು ನಾವು ಏನನ್ನು ನಂಬುತ್ತೇವೆ ಮತ್ತು ನಮ್ಮ ವ್ಯವಹಾರವನ್ನು ಹೇಗೆ ನಡೆಸಲು ಬಯಸುತ್ತೇವೆ ಎಂಬುದನ್ನು ಪ್ರತಿನಿಧಿಸುತ್ತವೆ. ಅವು ನಾವು ಮಾಡುವ ಎಲ್ಲವನ್ನೂ ರೂಪಿಸುವ ಮಾರ್ಗದರ್ಶಿ ತತ್ವಗಳಾಗಿವೆ.

ಗಮನ

ಸಾಂಪ್ರದಾಯಿಕ ಚಿಂತನೆಗೆ ಸವಾಲೆಸೆದರೂ ಸರಿಯಾದ ಕೆಲಸವನ್ನು ಮಾಡುವ ವಿಷಯದಲ್ಲಿ ನಾವು ಬದ್ಧರಾಗಿದ್ದೇವೆ. ನಾವು ಸಾಧ್ಯವಾದಷ್ಟು ದೊಡ್ಡ ಪ್ರಭಾವ ಮತ್ತು ಹೆಚ್ಚಿನ ಮೌಲ್ಯವನ್ನು ಸೃಷ್ಚಿಸಲು ಶ್ರಮಿಸುತ್ತಿದ್ದೇವೆ.

ಕಾಳಜಿ

ಕಾಳಜಿಯೆಂಬುದು ನಮ್ಮ ಕ್ರಿಯೆಗಳು ನಮ್ಮ ಸಾಮಾಜಿಕ ಮತ್ತು ನೈಸರ್ಗಿಕ ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅರಿವನ್ನು ಹೊಂದಿರುವುದಾಗಿದೆ. ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ. ಆದ್ದರಿಂದ ನಾವು ಮಾಡುವ ಎಲ್ಲದರಲ್ಲೂ ದಯೆ, ಸಹಾನುಭೂತಿ ಮತ್ತು ನೆರವನ್ನು ತುಂಬಲು ಪ್ರಯತ್ನಿಸುತ್ತೇವೆ.

ಸಶಕ್ತತೆ

ಉತ್ತಮವಾದ ಜೀವನವನ್ನು ನಡೆಸಲು ಮತ್ತು ಬೆಳೆಯಲು ಸಹಾಯ ಮಾಡುವ ಸ್ಮಾರ್ಟ್ ಆಯ್ಕೆಗಳನ್ನು ಮಾಡಲು ಸಾಧ್ಯವಾಗುವಂತೆ ನಾವು ಜನರನ್ನು ಸಶಕ್ತಗೊಳಿಸುತ್ತೇವೆ. ಇದು ಹೆಚ್ಚಿನ ಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ.

ಹಂಚಿಕೆ

ವಿಶ್ವಾಸಾರ್ಹ ಮಾಹಿತಿಯ ಲಭ್ಯತೆ ನಮ್ಮ ಬಳಕೆದಾರರಿಗೆ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಆದ್ದರಿಂದ ನಾವು ನಿಖರವಾದ, ಸಂಬಂಧಿತ ಮತ್ತು ಪಕ್ಷಪಾತವಿಲ್ಲದ ಮಾಹಿತಿಯನ್ನು ಎಲ್ಲಿ ಮತ್ತು ಯಾವಾಗ ಅಗತ್ಯವಿದೆಯೋ ಆಗ ಒದಗಿಸುತ್ತೇವೆ.

ಉಜ್ವಲ ಭವಿಷ್ಯ ನಿರ್ಮಾಣ

ಜರ್ಮನಿ ಮತ್ತು ಭಾರತದಲ್ಲಿ ಕಚೇರಿಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಕಂಪನಿಯಾಗಿ, ಜೀವನದ ಎಲ್ಲಾ ಕ್ಷೇತ್ರಗಳು ಮತ್ತು ವೈವಿಧ್ಯಮಯ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಪ್ರಗತಿ, ಜಾಣ್ಮೆ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವ, ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬಹುದಾದ ವಾತಾವರಣವನ್ನು ಸೃಷ್ಟಿಸುವ ಕೆಲಸದ ಸಂಸ್ಕೃತಿಯನ್ನು ಬೆಳೆಸಲು ನಾವು ಕಟಿಬದ್ಧರಾಗಿದ್ದೇವೆ.

ಗ್ರಾಹಕರೇ ಮೊದಲ ಆದ್ಯತೆ
ಗ್ರಾಹಕರ ಧ್ವನಿ
ನಮ್ಮ ಬಳಕೆದಾರರಿಗೆ ಉತ್ತಮ ಸೇವೆಯನ್ನು ತಲುಪಿಸಲು ನಾವು ಗ್ರಾಹಕರ ಪ್ರತಿಕ್ರಿಯೆ ಮತ್ತು ನಿರೀಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸುತ್ತೇವೆ.
ಜನ ಕೇಂದ್ರೀತ
ಕೆಲಸ-ಜೀವನದ ಸಮತೋಲನ
ನಾವು ಉದ್ಯೋಗಿಗಳ ವೈಯಕ್ತಿಕ ಅಗತ್ಯಗಳನ್ನು ಪರಿಗಣಿಸುತ್ತೇವೆ ಮತ್ತು ಕೆಲಸದ ಸಮಯದಲ್ಲಿ ಮತ್ತು ನಂತರ ಅವರ ಸಮಯವನ್ನು ಆನಂದಿಸುವಂತೆ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇವೆ.
ಪ್ರಗತಿಯ ಆಧಾರಸ್ತಂಭಗಳು
ದೂರದೃಷ್ಟಿ
ನಾವು ಬಲವಾದ ಉದ್ದೇಶದ ಪ್ರಜ್ಞೆಯೊಂದಿಗೆ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ನಾವು ನಮ್ಮ ಪ್ರಯತ್ನಗಳಲ್ಲಿ ನಾವೀನ್ಯತೆ ತರಲು ಮತ್ತು ಭವಿಷ್ಯಕ್ಕೆ ಸಿದ್ಧರಾಗಿರಲು ನಿರ್ಧರಿಸಿದ್ದೇವೆ.
ನೈತಿಕ ನಡವಳಿಕೆ
ಒಳಗೊಳ್ಳುವಿಕೆ
ಲಿಂಗ, ಧರ್ಮ, ಜಾತಿ, ಜನಾಂಗ, ಆದಾಯ ಮತ್ತು ಅಂಗವೈಕಲ್ಯವನ್ನು ಗಮನಿಸದೆ ನಾವು ಎಲ್ಲರನ್ನೂ ಸಮಾನವಾಗಿ ಸ್ವಾಗತಿಸುತ್ತೇವೆ ಮತ್ತು ಪರಿಗಣಿಸುತ್ತೇವೆ.