Cell injury
ಇತರೆ
5 mins to read
ಎಲೆಗಳ ನಾಳಗಳ ನಡುವೆ ಸುಟ್ಟಂತಹ ಮತ್ತು ಮಸುಕಾದ ಕಂದು ಬಣ್ಣದ ತೇಪೆಗಳು ಕಾಣಿಸಿಕೊಳ್ಳುತ್ತವೆ. ಅರಳಿದ ಮತ್ತು ಎಳೆಯ ಹಣ್ಣುಗಳು ಹಾನಿಗೊಳಗಾಗುತ್ತವೆ. ಎಲೆಗಳ ಮೇಲೆ ಗಾಯಗಳು ಅಥವಾ ಮೇಲ್ಮೈಗಳ ಮೇಲೆ ಗುಂಡಿಗಳು ಕಾಣುತ್ತವೆ. ಹಾಗೆಯೇ ಬಣ್ಣ ಕಳೆದುಕೊಳ್ಳುತ್ತವೆ. ಅಂಗಾಂಶಗಳು ನೀರಿನಲ್ಲಿ ನೆನೆದಂತೆ ಕಾಣುತ್ತವೆ. ಗಾಯಗೊಂಡ ಅಂಗಾಂಶಗಳು ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ದುರ್ವಾಸನೆ ಬೀರುತ್ತವೆ. ಎಲೆಗಳು ಅಕಾಲಿಕವಾಗಿ ಉದುರಬಹುದು.
ಇದು ನೈಸರ್ಗಿಕ ವಿದ್ಯಮಾನವಾಗಿರುವುದರಿಂದ ಜೈವಿಕ ನಿಯಂತ್ರಣ ಸಾಧ್ಯವಿಲ್ಲ.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇದು ನೈಸರ್ಗಿಕ ವಿದ್ಯಮಾನವಾಗಿರುವುದರಿಂದ ರಾಸಾಯನಿಕ ನಿಯಂತ್ರಣ ಸಾಧ್ಯವಿಲ್ಲ.
ಸಸ್ಯದ ಅಂಗಾಂಶದೊಳಗೆ ಮಂಜುಗೆಡ್ಡೆ ರೂಪುಗೊಂಡಾಗ ಮತ್ತು ಸಸ್ಯ ಕೋಶಗಳನ್ನು ಗಾಯಗೊಳಿಸಿದಾಗ ಹಿಮ ಹಾನಿ ಸಂಭವಿಸುತ್ತದೆ. ಆದ್ದರಿಂದ, ಶೀತ ತಾಪಮಾನಕ್ಕಿಂತ ಹೆಚ್ಚಾಗಿ ಮಂಜುಗಡ್ಡೆಯ ರಚನೆಯಿಂದಾಗುವ ಹಾನಿ ಸಸ್ಯವನ್ನು ಗಾಯಗೊಳಿಸುತ್ತದೆ. ತಣ್ಣನೆಯ ಗಾಳಿಯು ನಿತ್ಯಹರಿದ್ವರ್ಣ ಎಲೆಗಳಿಂದ ತೇವಾಂಶವನ್ನು, ಬೇರುಗಳಿಗಿಂತ ಹೆಚ್ಚಾಗಿ ಎಳೆದುಕೊಳ್ಳುತ್ತದೆ. ಇದು ಎಲೆಗಳ ಕಂದುಬಣ್ಣಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಎಲೆಗಳ ಸುಳಿಗಳು ಮತ್ತು ಅಂಚುಗಳಲ್ಲಿ ಈ ಹಾನಿ ಕಾಣುತ್ತದೆ. ಸಂಪೂರ್ಣವಾಗಿ ಬೆಳೆದ ಸಸ್ಯಗಳಿಗಿಂತ ಎಳೆಯ ಸಸ್ಯಗಳು ಹಿಮ ಹಾನಿಗೆ ಹೆಚ್ಚು ಒಳಗಾಗುತ್ತವೆ.