ಭತ್ತ

ಕೆಂಪು ಪಟ್ಟಿ ರೋಗ

Gonatophragmium sp.

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಆರಂಭದಲ್ಲಿ ಪಿನ್-ಗಾತ್ರದ, ಹಳದಿ-ಹಸಿರು ಎಲೆಗಳ ತಳಭಾಗದ ಮೇಲೆ ಕಿತ್ತಳೆ ಕಲೆಗಳಿರುತ್ತವೆ.
  • ಎಲೆಗಳು ಬೆಳೆಯುತ್ತಿದ್ದಂತೆ, ಕೆಂಪು ಗೆರೆಗಳು ಅಥವಾ ಪಟ್ಟೆಗಳು ಈ ತಾಣಗಳಿಂದ ಎಲೆ ತುದಿಯ ಕಡೆಗೆ ವಿಸ್ತರಿಸುತ್ತವೆ, ಸಾಮಾನ್ಯವಾಗಿ ಪ್ರತಿ ಎಲೆಗೆ ಒಂದು ಅಥವಾ ಎರಡು ಪಟ್ಟೆಗಳು ಮಾತ್ರ ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಸಸ್ಯಗಳು ಸಂತಾನೋತ್ಪತ್ತಿಯ ಹಂತವನ್ನು ತಲುಪಿದಾಗ, ಹೂಗೊಂಚಲು ಮೂಡಲು ಪ್ರಾರಂಭವಾಗುವಾಗ ರೋಗವು ಸಾಮಾನ್ಯವಾಗಿ ಸಂಭವಿಸುತ್ತದೆ. ಆರಂಭದಲ್ಲಿ, ಎಲೆಯ ಗಾಯಗಳು ಹಳದಿ-ಹಸಿರು ಬಣ್ಣದಿಂದ ಕಿತ್ತಳೆ ಬಣ್ಣದ ಪಿನ್-ಗಾತ್ರದ ತಾಣಗಳಾಗಿ, ಎಲೆಯ ಗರಿಯ ತಳದಲ್ಲಿ ಕಾಣುತ್ತವೆ. ರೋಗದ ಬೆಳವಣಿಗೆಯಾದಾಗ, ಗಾಯ ಕೆಂಪು ಗೆರೆಗಳನ್ನು ಮತ್ತು ಪಟ್ಟಿಗಳನ್ನು ರೂಪಿಸಿ, ಎಲೆ ತುದಿ ಕಡೆಗೆ ಎಲೆ ಕವಚದ ಜೊತೆಗೆ ವಿಸ್ತರಿಸುತ್ತದೆ. ಗಾಯಗಳು ಕೊಳೆತು ಒಟ್ಟಿಗೆ ಸೇರಿಕೊಳ್ಳಬಹುದು. ಇದು ಎಲೆಗೆ ರೋಗಗ್ರಸ್ತ ರೂಪವನ್ನು ನೀಡುತ್ತದೆ. ರೋಗಲಕ್ಷಣಗಳನ್ನು ಕಿತ್ತಳೆ ಎಲೆ ಕೊಳೆತ ಕಾಯಿಲೆಯೆಂದು ತಪ್ಪಾಗಿ ತಿಳಿಯಬಹುದು ಮತ್ತು ತೀವ್ರ ಹಂತಗಳಲ್ಲಿ ಬ್ಯಾಕ್ಟೀರಿಯಾ ಎಲೆ ರೋಗದಿಂದ ಇದನ್ನು ಬೇರೆಯದಾಗಿ ಬಹುತೇಕ ಗುರುತಿಸಲಾಗುವುದಿಲ್ಲ. ಆದಾಗ್ಯೂ, ಕೆಂಪು ಪಟ್ಟೆಯಾಗಿ, ಪ್ರತಿ ಎಲೆಗೆ ಒಂದು ಅಥವಾ ಎರಡು ಅಂತಹ ಗಾಯಗಳು ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ಎಲೆಗಳ ತುದಿಯ ಕಡೆಗೆ ವಿಸ್ತರಿಸಿರುವ ಪಟ್ಟೆಯೊಂದಿಗೆ ಅವು ವಿಶಿಷ್ಟವಾದ ಕಿತ್ತಳೆ ಬಣ್ಣದ ಕಲೆಗಳನ್ನು ಪ್ರದರ್ಶಿಸುತ್ತವೆ.

Recommendations

ಜೈವಿಕ ನಿಯಂತ್ರಣ

ಈ ಕ್ಷಣದವರೆಗೆ ಜೈವಿಕ ನಿಯಂತ್ರಣ ಲಭ್ಯವಿಲ್ಲ. ನೀವು ಯಾವುದನ್ನಾದರೂ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ಒಟ್ಟಾಗಿ ತಡೆಗಟ್ಟುವ ಕ್ರಮಗಳ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಥಿಯೊಫನೇಟ್ ಮಿಥೈಲ್ ಹೊಂದಿರುವ ಸ್ಪ್ರೇಗಳು ಪರಿಣಾಮಕಾರಿಯಾಗಿ ರೋಗವನ್ನು ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಗೊನಟೊಫ್ರಾಗ್ಮಿಯಮ್ನ ಕುಲದಿಂದಾಗಿ ರೋಗಲಕ್ಷಣಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಆರಂಭಿಕ ಸಸಿ ಹಂತದ ನಂತರ ಸಸ್ಯದಲ್ಲಿ ಇದು ಇರುತ್ತವೆಯಾದರೂ, ಸಸ್ಯಗಳು ಸಂತಾನೋತ್ಪತ್ತಿಯ ಹಂತವನ್ನು ತಲುಪಿದಾಗ, ಹೂಗೊಂಚಲು ಮೂಡಲು ಪ್ರಾರಂಭವಾಗುವಾಗ, ರೋಗಲಕ್ಷಣಗಳು ಸಾಮಾನ್ಯವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಹೆಚ್ಚಿನ ತಾಪಮಾನ, ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಅಧಿಕ ಎಲೆ ಆರ್ದ್ರತೆ ಮತ್ತು ಹೆಚ್ಚಿನ ಸಾರಜನಕ ಸರಬರಾಜು ಮುಂತಾದ ಪರಿಸರ ಅಂಶಗಳು ರೋಗ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ. ರೋಗಕಾರಕವು ಸಸ್ಯ ಅಂಗಾಂಶವನ್ನು ಪ್ರವೇಶಿಸಿ, ನಾಳಗಳ ಮೂಲಕ ಎಲೆಗಳ ತುದಿಗೆ ಸಾಗಿಸುವ ವಿಷವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ವಿಶಿಷ್ಟವಾದ ಪಟ್ಟೆಯನ್ನು ರೂಪಿಸುತ್ತದೆ. ಕೆಂಪು ಪಟ್ಟೆ ಆಗ್ನೇಯ ಏಷ್ಯಾ ಮತ್ತು ಭಾರತದಲ್ಲಿ ಭತ್ತ ಉತ್ಪಾದನೆಗೆ ಅಪಾಯಕಾರಿಯಾಗಿದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ, ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಸಸ್ಯಗಳ ನಡುವೆ ಸಾಕಷ್ಟು ಸ್ಥಳಾವಕಾಶವನ್ನು ಮತ್ತು ಸೂಕ್ತ ಬೀಜಗಳ ದರಗಳ ಖಚಿತಪಡಿಸಿಕೊಳ್ಳಿ.
  • ರೋಗಲಕ್ಷಣಗಳ ಚಿಹ್ನೆಗಳಿಗೆ ನಿಯಮಿತವಾಗಿ ಪ್ರದೇಶವನ್ನು ಮೇಲ್ವಿಚಾರಣೆ ಮಾಡಿ.
  • ಸಾರಜನಕದ ಅತಿಯಾದ ಬಳಕೆ ಬೇಡ.
  • ಹೂಗೊಂಚಲು ಆರಂಭವಾಗುವ ಸಮಯದಲ್ಲಿ, ಮರುಕಳಿಸುವ ಒಳಚರಂಡಿ ವ್ಯವಸ್ಥೆ ರೋಗದ ಅಭಿವೃದ್ಧಿಯನ್ನು ತಪ್ಪಿಸುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ