ಮರಗೆಣಸು

ಕಸಾವ ಬಡ್ ನೆಕ್ರೋಸಿಸ್ (ಮರಗೆಣಸಿನ ಮೊಗ್ಗು ಕೊಳೆತ)

Unknown Pathogen

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಈ ರೋಗವು ಕಾಂಡದಲ್ಲಿ ಕಂದು ಅಥವಾ ಬೂದು ಬಣ್ಣದ ಶಿಲೀಂಧ್ರಗಳ ಹೊದಿಕೆಯಂತೆ ಕಾಣುತ್ತದೆ.
  • ನೆಕ್ರೋಟಿಕ್ ಪ್ರದೇಶಗಳು ಮೊಗ್ಗುಗಳನ್ನು ಆವರಿಸುತ್ತವೆ.
  • ಅವುಗಳ ಚಿಗುರೊಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ರೋಗಕ್ಕೆ ಸೂಕ್ಷ್ಮವಿರುವ ಪ್ರಭೇದಗಳಲ್ಲಿ, ಕಾಂಡದ ಮೇಲ್ಮೈಯಲ್ಲಿ ಕಂದು ಅಥವಾ ಬೂದು ಬಣ್ಣದ ಕಲೆಗಳು ಕಾಣಿಸಿಕೊಳ್ಳುವುದು ಮರಗೆಣಸಿನ ಮೊಗ್ಗು ಕೊಳೆತದ ಮುಖ್ಯ ಲಕ್ಷಣವಾಗಿದೆ. ಈ ತೇಪೆಗಳು ಕಾಂಡದ ಮೇಲೆಲ್ಲ ಹರಡುತ್ತವೆ ಮತ್ತು ಅವು ಶಿಲೀಂಧ್ರದ ರಾಶಿಗೆ ಅನುಗುಣವಾಗಿ ಕ್ರಮೇಣ ಎಪಿಡರ್ಮಿಸ್ ಮೇಲೆ ಬೆಳೆಯುತ್ತವೆ. ಕೆಲವೊಮ್ಮೆ ಅವು ಎಲೆಗಳ ಮೇಲೂ ಕಾಣಿಸಿಕೊಳ್ಳುತ್ತವೆ. ಶಿಲೀಂಧ್ರ ಬೆಳೆದು ಸಸ್ಯ ಅಂಗಾಂಶಗಳನ್ನು ತಿನ್ನುವುದರಿಂದ ಅವು ನೆಕ್ರೋಟಿಕ್ ಆಗುತ್ತವೆ. ಈ ನೆಕ್ರೋಟಿಕ್ ಪ್ರದೇಶಗಳು ಹೆಚ್ಚಾಗಿ ಕಾಂಡದ ಮೇಲೆ ಮೊಗ್ಗುಗಳನ್ನು ಆವರಿಸುತ್ತವೆ ಮತ್ತು ಇವುಗಳು ಸಾಯುತ್ತವೆ. ಕಾಂಡದ ತುಂಡುಗಳ ಚಿಗುರೊಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಶಿಲೀಂಧ್ರಕ್ಕೆ ಯಾವುದೇ ಜೈವಿಕ ನಿಯಂತ್ರಣ ಪರಿಹಾರಗಳು ತಿಳಿದಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಯಾವಾಗಲೂ ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಸಾಮಾನ್ಯ ಶಿಲೀಂಧ್ರನಾಶಕ ಸ್ಪ್ರೇಗಳನ್ನು ವಿರಳವಾಗಿ ಶಿಫಾರಸು ಮಾಡಲಾಗುತ್ತದೆ. ಹೀಗಾಗಿ, ಗಮನವನ್ನು ಮುಂಜಾಗ್ರತಾ ಕ್ರಮಗಳು ಮತ್ತು ಉತ್ತಮ ಕೃಷಿ ಅಭ್ಯಾಸಗಳ ಮೇಲೆ ಹಾಕಬೇಕು.

ಅದಕ್ಕೆ ಏನು ಕಾರಣ

ಮರಗೆಣಸಿನ ಮೊಗ್ಗು ಕೊಳೆತ ಕಾಂಡಗಳು ಮತ್ತು ಎಲೆಗಳ ಮೇಲ್ಮೈಯಲ್ಲಿ ಉಂಟಾಗುವ ಶಿಲೀಂಧ್ರದಿಂದ ಉಂಟಾಗುತ್ತದೆ. ರೋಗದ ಇನಾಕ್ಯುಲಮ್‌ನ ಮುಖ್ಯ ಮೂಲವೆಂದರೆ ಸೋಂಕಿತ ಮರಗೆಣಸು ಸಸ್ಯಗಳು. ಕೊಯ್ಲಿನ ನಂತರ ನೆಲದ ಮೇಲೆ ಉಳಿಯುವ ಕಾಂಡಗಳು ಮತ್ತು ಎಲೆಗಳು ಸಹ ರೋಗವನ್ನು ಹರಡಲು ಸಹಾಯ ಮಾಡುತ್ತವೆ. ಈ ಕಸಗಳ ಮೇಲೆ ಉತ್ಪತ್ತಿಯಾಗುವ ಶಿಲೀಂಧ್ರ ಬೀಜಕಗಳು ನಂತರ ಗಾಳಿಯ ಮೂಲಕ ಸಸ್ಯದಿಂದ ಸಸ್ಯಕ್ಕೆ ಅಥವಾ ಇತರ ಹೊಲಗಳಿಗೆ ಸಾಗಬಹುದು. ಆದಾಗ್ಯೂ, ಹರಡುವುದಕ್ಕೆ ಮುಖ್ಯ ವಾಹಕವೆಂದರೆ ನಾಟಿಗೆ ಸೋಂಕಿತ ಕಾಂಡದ ತುಂಡುಗಳನ್ನು ಬಳಸುವುದು. ಸೋಂಕಿತ ಮೊಗ್ಗುಗಳನ್ನು ಹೊಂದಿರುವ ಈ ಕಾಂಡದ ತುಂಡುಗಳು ಚಿಗುರೊಡೆಯಲು ವಿಫಲವಾಗುತ್ತವೆ ಮತ್ತು ಅವುಗಳನ್ನು ಹೊಲದಲ್ಲಿ ಸುಲಭವಾಗಿ ಪತ್ತೆ ಮಾಡಬಹುದು. ಶಿಲೀಂಧ್ರಕ್ಕೆ ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ಹುಲ್ಲುಗಳು, ಸಿರಿಧಾನ್ಯಗಳು, ಬಾಳೆಹಣ್ಣು ಮತ್ತು ಮಾವು. ಆರ್ದ್ರ ವಾತಾವರಣದಲ್ಲಿ ಬೆಳೆಯುವ ಮರಗೆಣಸಿನಲ್ಲಿ ಈ ರೋಗವು ಸಾಮಾನ್ಯವಾಗಿ ಕಂಡುಬರುತ್ತದೆ. ಹೆಚ್ಚಿನ ಸಾಪೇಕ್ಷ ಆರ್ದ್ರತೆಯಲ್ಲಿ ಸರಿಯಾದ ಕೃಷಿ ನೈರ್ಮಲ್ಯ ಹೊಂದಿರದ ಹೊಲಗಳು ವಿಶೇಷವಾಗಿ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡಲು ರೋಗರಹಿತ ಕಾಂಡದ ತುಂಡುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ (ಪ್ರಮಾಣೀಕೃತ ಮೂಲಗಳಿಂದ).
  • ಲಭ್ಯವಿದ್ದರೆ ರೋಗ ನಿರೋಧಕ ಪ್ರಭೇದಗಳನ್ನು ನೆಡಿ.
  • ಕಳೆ ನಿರ್ವಹಣೆ ಮತ್ತು ಸಸ್ಯಗಳ ನಡುವೆ ಸಾಕಷ್ಟು ಜಾಗ ಬಿಡುವುದು ವಾತಾಯನವನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ.
  • ಇದು ಹೊಲದಲ್ಲಿ ಶಿಲೀಂಧ್ರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  • ಮೇಲ್ವಿಚಾರಣೆ ಮಾಡಿ ಮತ್ತು ತಕ್ಷಣವೇ ರೋಗಪೀಡಿತ ಕಟ್ಟಿಂಗ್ ಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ (ಸುಡುವ ಅಥವಾ ಹೂಳುವ ಮೂಲಕ).
  • ಮತ್ತು ಅವುಗಳನ್ನು ಆರೋಗ್ಯಕರವಾದವುಗಳೊಂದಿಗೆ ಬದಲಾಯಿಸಿ.
  • ಸಸ್ಯದ ಅವಶೇಷಗಳನ್ನು ಹೊಲದಿಂದ ಯೋಗ್ಯ ದೂರಕ್ಕೆ ತೆಗೆದುಕೊಂಡು ಹೋಗಿ ನಾಶಪಡಿಸಬೇಕು.
  • ರೋಗಕ್ಕೆ ಆಶ್ರಯ ನೀಡದ ಸಸ್ಯಗಳೊಂದಿಗೆ ಬೆಳೆ ಸರದಿ ಮಾಡುವುದರಿಂದ ಹೊಲದಲ್ಲಿನ ಶಿಲೀಂಧ್ರದ ಉಳಿಕೆಯನ್ನು ತಪ್ಪಿಸಬಹುದು.
  • ಹೊಲದ ಕೆಲಸದ ನಂತರ ನಿಮ್ಮ ಉಪಕರಣಗಳನ್ನು ಸೋಂಕುರಹಿತಗೊಳಿಸಲು ಖಚಿತಪಡಿಸಿಕೊಳ್ಳಿ.
  • ಸೋಂಕಿತ ಜಾಗದಿಂದ ಇತರ ಹೊಲಗಳಿಗೆ ಕಟ್ಟಿಂಗ್ ಗಳನ್ನು ಸಾಗಿಸಬೇಡಿ.
  • ರೋಗವನ್ನು ತಡೆಗಟ್ಟಲು ಬಳಕೆಯ ನಂತರ ಕೃಷಿ ಉಪಕರಣಗಳನ್ನು ಸಾಮಾನ್ಯ ಬ್ಲೀಚ್ ದ್ರಾವಣದಿಂದ ಸೋಂಕುರಹಿತಗೊಳಿಸಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ