ಕಡಲೆಕಾಯಿ

ಝಿಂಕ್ ಕೊರತೆ (ಸತುವಿನ ಕೊರತೆ)

Zinc Deficiency

ಕೊರತೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುವುದು ತುದಿಯಿಂದ ಪ್ರಾರಂಭವಾಗುತ್ತದೆ.
  • ಮುಖ್ಯ ಎಲೆಯನಾಳಗಳು ಹಸಿರಾಗಿಯೇ ಉಳಿಯುತ್ತವೆ.
  • ಎಲೆಯ ರೂಪಗೆಡುವುದು.
  • ಕಾಂಡದ ಸುತ್ತಲು ಎಲೆಗಳು ಗುಂಪುಕಟ್ಟುವುದು.
  • ಕುಂಠಿತ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

31 ಬೆಳೆಗಳು
ಸೇಬು
ಬಾಳೆಹಣ್ಣು
ಹುರುಳಿ
ಹಾಗಲಕಾಯಿ
ಇನ್ನಷ್ಟು

ಕಡಲೆಕಾಯಿ

ರೋಗಲಕ್ಷಣಗಳು

ಸತುವಿನ ಕೊರತೆಯ ರೋಗಲಕ್ಷಣಗಳು ಸಸ್ಯಗಳ ಜಾತಿಯಿಂದ ಜಾತಿಗೆ ಬದಲಾಗುತ್ತವೆ ಆದರೆ ಹಲವಾರು ಲಕ್ಷಣಗಳು ಸಾಮಾನ್ಯವಾಗಿವೆ. ಹಲವು ಜಾತಿಗಳಲ್ಲಿ ಎಲೆಗಳು ಹಳದಿಯಾಗುತ್ತವೆ. ಹೆಚ್ಚಾಗಿ ಅಂತರ್ ನಾಳ ಕ್ಲೊರೋಸಿಸ್ ಕಾಣಿಸಿಕೊಳ್ಳುತ್ತದೆ. ( ಎಲೆಯ ಮುಖ್ಯ ನಾಳಗಳು ಹಸಿರು ಬಣ್ಣದಲ್ಲಿಯೇ ಇರುತ್ತವೆ). ಕೆಲವು ಜಾತಿಗಳಲ್ಲಿ, ಚಿಗುರು ಎಲೆಗಳು ಹೆಚ್ಚು ತೊಂದರೆಗೆ ಒಳಗಾಗುತ್ತವೆ. ಆದರೆ, ಇನ್ನೂ ಕೆಲವು ಜಾತಿಗಳಲ್ಲಿ ಹಳೆಯ ಮತ್ತು ಹೊಸ ಎಲೆಗಳೆರಡರಲ್ಲೂ ರೋಗಲಕ್ಷಣಗಳು ಕಾಣುತ್ತವೆ. ಹೊಸ ಎಲೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಮತ್ತು ಕಿರಿದಾಗಿರುತ್ತವೆ ಮತ್ತು ಎಲೆಗಳ ಅಂಚು ವಕ್ರವಾಗಿರುತ್ತದೆ. ಕಾಲಾನಂತರದಲ್ಲಿ, ಕ್ಲೋರೊಟಿಕ್ ಚುಕ್ಕೆಗಳು ಕಂಚಿನ ಬಣ್ಣ ತಾಳುತ್ತವೆ ಮತ್ತು ಕೊಳೆತಂತೆ ಕಾಣುವ ಜಾಗಗಳು ಅಂಚಿನಿಂದ ಹರಡಲು ಪ್ರಾರಂಭಿಸಬಹುದು. ಇನ್ನೂ ಕೆಲವು ಬೆಳೆಗಳಲ್ಲಿ, ಸತು ಕೊರತೆಯಿರುವ ಎಲೆಗಳಲ್ಲಿ ತೊಟ್ಟುಗಳ ನಡುವಣ ಅಂತರ ಕಡಿಮೆಯಾಗುತ್ತದೆ. ಆದ್ದರಿಂದ ಎಲೆಗಳು ಕಾಂಡದ (ರೋಸೆಟಿಂಗ್) ಮೇಲೆ ಗುಂಪು ಗುಂಪಾಗಿರುತ್ತವೆ. ಹೊಸ ಎಲೆಗಳ ನಿರ್ಬಂಧಿತ ಬೆಳವಣಿಗೆಯಿಂದಾಗಿ ( ಕಿರು ಎಲೆಗಳು) ಎಲೆಯ ವಿರೂಪತೆ ಮತ್ತು ಕುಂಠಿತ ಬೆಳವಣಿಗೆ ಉಂಟಾಗಬಹುದು ಮತ್ತು ತೊಟ್ಟುಗಳ ನಡುವೆ ಆಂತರ ಕಡಿಮೆಯಾಗಬಹುದು.

Recommendations

ಜೈವಿಕ ನಿಯಂತ್ರಣ

ಬೀಜದ ಪಾತಿಗೆ ಅಥವಾ ಸಸಿ ನೆಟ್ಟ ಕೆಲವು ದಿನಗಳ ನಂತರ ಭೂಮಿಗೆ ಸಾವಯವ ಗೊಬ್ಬರವನ್ನು ಹಾಕುವುದರಿಂದ ಕೊರತೆಯಿಂದಾದ ಅವ್ಯವಸ್ಥೆಯನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

  • ಸತು (Zn) ಹೊಂದಿರುವ ಗೊಬ್ಬರವನ್ನು ಬಳಸಿ.
  • ಉದಾಹರಣೆ: ಝಿಂಕ್ ಸಲ್ಫೇಟ್ (ZnSO4) ಅನ್ನು ಸಾಮಾನ್ಯವಾಗಿ ಎಲೆಗಳ ದ್ರವೌಷಧಗಳಲ್ಲಿ ಬಳಸಲಾಗುತ್ತದೆ.
  • ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.

ಹೆಚ್ಚಿನ ಶಿಫಾರಸುಗಳು:

  • ನಿಮ್ಮ ಬೆಳೆ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭದ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ.
  • ಬಿತ್ತನೆ ಮಾಡುವ ಮೊದಲೇ ಸತುವನ್ನು ಮಣ್ಣಿಗೆ ಹಾಕಬೇಕು.
  • ಸತುವಿನಿಂದ ಬೀಜ ಲೇಪನವು ಬೆಳೆಗೆ ಪೋಷಕಾಂಶವನ್ನು ಒದಗಿಸುತ್ತದೆ.

ಅದಕ್ಕೆ ಏನು ಕಾರಣ

ಸತುವಿನ ಕೊರತೆಯು ಮುಖ್ಯವಾಗಿ ಕ್ಷಾರೀಯ (ಹೆಚ್ಚು ಪಿಎಚ್), ಸಾವಯವ ಪದಾರ್ಥ ಕಡಿಮೆಯಿರುವ ಮರಳು ಮಣ್ಣುಗಳಲ್ಲಿ ಕಂಡುಬರುವ ಒಂದು ಸಮಸ್ಯೆಯಾಗಿದೆ. ಮಣ್ಣಿನಲ್ಲಿ ಹೆಚ್ಚಿನ ಮಟ್ಟದ ಫಾಸ್ಫರಸ್ ಮತ್ತು ಕ್ಯಾಲ್ಸಿಯಂ (ಕ್ಯಾಲ್ಯುರಿಯಸ್ ಮಣ್ಣು) ಇದ್ದರೂ, ಅದು ಸಸ್ಯಗಳಿಗೆ ಸತುವಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಫಾಸ್ಫರಸ್ ಹಾಕುವುದರಿಂದ ಸತುವಿನ ಹೀರುವಿಕೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸುಣ್ಣದ ಕಲ್ಲು ಅಥವಾ ಚಾಕ್ (ಸುಣ್ಣ ಸೇರಿಸುವುದು) ನಂತಹ ಕ್ಯಾಲ್ಸಿಯಂ-ಸಮೃದ್ಧವಾದ ವಸ್ತುಗಳನ್ನು ಸೇರಿಸುವುದರಿಂದ ಕೂಡ ಮಣ್ಣಿನ ಆಮ್ಲೀಯತೆ ಹೆಚ್ಚಿ, ಸಸ್ಯಗಳಲ್ಲಿ ಸತುವಿನ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ (ಮಣ್ಣಿನಲ್ಲಿನ ಮಟ್ಟಗಳು ಬದಲಾಗದೇ ಇದ್ದರೂ ಸಹ). ಸಸ್ಯಕ ಹಂತದಲ್ಲಿ ಮಣ್ಣು ತಂಪು ಮತ್ತು ಆರ್ದ್ರವಾಗಿದ್ದಾಗಲೂ ಸತುವಿನ ಕೊರತೆ ಒಂದು ಸಮಸ್ಯೆಯಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಬೀಜ ಬಿತ್ತುವ ಅಥವಾ ಸಸಿ ನೆಡುವ ಮೊದಲು ಸಾವಯವ ಗೊಬ್ಬರವನ್ನು ಹಾಕಿ.
  • ಮಣ್ಣಿನಿಂದ ಸತುವನ್ನು ಹೀರಬಲ್ಲ ಅಥವಾ ಸತು ಕೊರತೆಗೆ ಸಹಿಷ್ಣುವಾಗಿರುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಮಣ್ಣಿಗೆ ಸುಣ್ಣವನ್ನು ಸೇರಿಸಬೇಡಿ.
  • ಇದು ಪಿಎಚ್ ಅನ್ನು ಹೆಚ್ಚಿಸುತ್ತದೆ ಮತ್ತು ಸತುವಿನ ಹೀರುವಿಕೆಯನ್ನು ಕಡಿಮೆಮಾಡುತ್ತದೆ.
  • ಸತು ಸಂಯುಕ್ತಗಳನ್ನು ಒಳಗೊಂಡಿರುವ ರಸಗೊಬ್ಬರಗಳನ್ನು ಬಳಸಿ.
  • ಅಮೋನಿಯಮ್ ಸಲ್ಫೇಟ್ ಗಿಂತ ಹೆಚ್ಚಾಗಿ ಯೂರಿಯಾ (ಆಮ್ಲೀಯತೆಯನ್ನು ಉತ್ಪತ್ತಿ ಮಾಡುವ) ಆಧರಿತ ರಸಗೊಬ್ಬರಗಳನ್ನು ಬಳಸಿ.
  • ನಿಯಮಿತವಾಗಿ ನೀರಾವರಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿ.
  • ರಂಜಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಬೇಡಿ.
  • ಶಾಶ್ವತವಾಗಿ ನೀರು ನಿಂತಿರುವ ಕೃಷಿ ಭೂಮಿಯಲ್ಲಿ ನೀರು ಬಸಿದು ಹೋಗಲು ಮತ್ತು ಒಣಗಲು ಆಗಾಗ್ಗೆ ಅವಕಾಶ ಮಾಡಿಕೊಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ