ಕಡಲೆಕಾಯಿ

ಕಬ್ಬಿಣದ ಕೊರತೆ

Iron Deficiency

ಕೊರತೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿ ಬಣ್ಣ ಪಡೆಯುತ್ತವೆ, ಇದು ಅಂಚಿನಿಂದ ಪ್ರಾರಂಭವಾಗುತ್ತದೆ.
  • ಎಲೆಯ ಸಿರೆಗಳು ಹಸಿರು ಬಣ್ಣದಲ್ಲಿರುತ್ತವೆ.
  • ನಂತರದ ಹಂತಗಳಲ್ಲಿ, ಎಲೆಗಳು ಕಂದು ಬಣ್ಣದ ಚುಕ್ಕೆಗಳೊಂದಿಗೆ ಬಿಳಿ ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಬಹುದು.
  • ಕುಂಠಿತ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

57 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಕಡಲೆಕಾಯಿ

ರೋಗಲಕ್ಷಣಗಳು

ಕಬ್ಬಿಣದ ಕೊರತೆಯ ಲಕ್ಷಣಗಳು ಮೊದಲು ಎಳೆಯ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮೇಲ್ಭಾಗದ ಎಲೆಗಳ ಕ್ಲೋರೋಸಿಸ್ (ಹಳದಿ ಬಣ್ಣ) ಮೂಲಕ ಮೊದಲ ಲಕ್ಷಣಗಳು ಕಂಡು ಬರುತ್ತವೆ. ಮಧ್ಯ ನಾಳ ಮತ್ತು ಎಲೆಯ ನಾಳಗಳು ಸ್ಪಷ್ಟ ಹಸಿರು ಬಣ್ಣದಲ್ಲೇ (ಅಂತರ್ ನಾಳ ಕ್ಲೋರೋಸಿಸ್) ಉಳಿದಿರುತ್ತವೆ. ನಂತರದ ಹಂತಗಳಲ್ಲಿ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇಡೀ ಎಲೆಯು ಬಿಳಿ ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮತ್ತು ಕಂದು ಒಣ ಚುಕ್ಕೆಗಳು ಎಲೆಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಅಂಚಿನಲ್ಲಿ ಒಣ ತೇಪೆಗಳಿಗೆ ಕಾರಣವಾಗುತ್ತದೆ. ಬಾಧಿತ ಭಾಗಗಳನ್ನು ಜಮೀನಿನಲ್ಲಿ ಸುಲಭವಾಗಿ ದೂರದಿಂದಲೇ ಗುರುತಿಸಬಹುದು. ಕಬ್ಬಿಣದ ಕೊರತೆಯಿರುವ ಸಸ್ಯದಲ್ಲಿ ಕುಂಠಿತ ಬೆಳವಣಿಗೆಯುಂಟಾಗುತ್ತದೆ ಮತ್ತು ಇಳುವರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಸಣ್ಣ ಹಿಡುವಳಿದಾರರು ನೆಟ್ಟಲ್ ಸ್ಲಾಗ್ ಮತ್ತು ಪಾಚಿಯ ಸಾರದಿಂದ ಮಾಡಿದ ಎಲೆಯ ರಸಗೊಬ್ಬರವನ್ನು ಬಳಸಬಹುದು. ಪ್ರಾಣಿ ಗೊಬ್ಬರ, ಪೀಟ್ ಮತ್ತು ಕಾಂಪೋಸ್ಟ್ ಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ಕಬ್ಬಿಣ ಸೇರಿಸಿದಂತಾಗುತ್ತದೆ. ನಿಮ್ಮ ಬೆಳೆಗಳ ಹತ್ತಿರದಲ್ಲಿ ಡಂಡೇಲಿಯನ್ ಗಳನ್ನು ನೆಡಿ. ಏಕೆಂದರೆ ಇದು ಹತ್ತಿರದ ಬೆಳೆಗಳಿಗೆ, ವಿಶೇಷವಾಗಿ ಮರಗಳಿಗೆ ಕಬ್ಬಿಣ ಲಭ್ಯವಾಗುವಂತೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

  • ಕಬ್ಬಿಣ ಭರಿತ ರಸಗೊಬ್ಬರಗಳನ್ನು ಬಳಸಿ (ಉದಾ. ಫೆರಸ್ ಸಲ್ಫೇಟ್ ಫೆ 19%).
  • ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.
  • ನಿಮ್ಮ ಬೆಳೆಯ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆಯ ಋತು ಪ್ರಾರಂಭವಾಗುವ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ಕಬ್ಬಿಣದ ಕೊರತೆಯು ಉಷ್ಣವಲಯದ ಮಣ್ಣಿನಲ್ಲಿ ಅಥವಾ ಬಸಿದ ಮಣ್ಣಿನಲ್ಲಿ ಗಂಭೀರವಾದ ಸಮಸ್ಯೆಯಾಗಿರಬಹುದು. ಅದರಲ್ಲೂ ಮುಖ್ಯವಾಗಿ ತಂಪಾದ, ಆರ್ದ್ರ ವಸಂತ ಕಾಲದಲ್ಲಿ. ಹುಲ್ಲುಜೋಳ, ಜೋಳ, ಆಲೂಗಡ್ಡೆ ಮತ್ತು ಬೀನ್ಸ್ ತೀವ್ರವಾಗಿ ಸೋಂಕಿಗೆ ಒಳಗಾಗುವ ಬೆಳೆಗಳಾಗಿದ್ದು, ಗೋಧಿ ಮತ್ತು ಕುದುರೆ ಮೇವು ಸೊಪ್ಪು ಕಡಿಮೆ ಸೂಕ್ಷ್ಮತೆ ಹೊಂದಿವೆ. ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾದ ಕಲ್ಕಾರಿಯಸ್ ಮತ್ತು ಕ್ಷಾರೀಯ ಮಣ್ಣುಗಳು (pH 7.5 ಅಥವಾ ಹೆಚ್ಚು) ವಿಶೇಷವಾಗಿ ಕಬ್ಬಿಣದ ಕೊರತೆಗೆ ಒಳಗಾಗುತ್ತವೆ. ದ್ಯುತಿಸಂಶ್ಲೇಷಣೆಗೆ ಮತ್ತು ಲೆಗ್ಯೂಮ್ ಗಳಲ್ಲಿ ಬೇರು ಗಂಟುಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಕಬ್ಬಿಣ ಮುಖ್ಯವಾಗಿದೆ. ಆದ್ದರಿಂದ, ಕಬ್ಬಿಣದ ಕೊರತೆ ಬೇರು ಗಂಟಿನ ದ್ರವ್ಯರಾಶಿಯನ್ನು, ಸಾರಜನಕ ಸ್ಥಿರೀಕರಣ ಮತ್ತು ಬೆಳೆ ಇಳುವರಿಯನ್ನು ನಿಧಾನಗೊಳಿಸುತ್ತದೆ. ಅಂದಾಜು ನಿರ್ಣಾಯಕ ಮಟ್ಟವು ಸುಮಾರು 2.5 ಮಿಗ್ರಾಂ/ಕೆಜಿ ಸಸ್ಯ ಒಣ ಅಂಗಾಂಶವಾಗಿದೆ. ಕಬ್ಬಿಣದ ಕೊರತೆಯು ಸಸ್ಯಗಳಲ್ಲಿ ಕ್ಯಾಡ್ಮಿಯಮ್ ನ ಹೆಚ್ಚಳ ಮತ್ತು ಶೇಖರಣೆಯನ್ನೂ ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕಬ್ಬಿಣದ ಕೊರತೆಗೆ ಬೇಗನೆ ತುತ್ತಾಗದ ಪ್ರಭೇದಗಳನ್ನು ಆಯ್ಕೆಮಾಡಿ.
  • ಬೆಳೆಸಿರುವ ಸಸ್ಯಗಳ ಹತ್ತಿರ ಡ್ಯಾಂಡೆಲಿಯನ್ ನೆಡಿ.
  • ಕಬ್ಬಿಣವನ್ನು ಟ್ರೇಸ್ ಅಂಶವಾಗಿ ಹೊಂದಿರುವ ರಸಗೊಬ್ಬರಗಳು ಒಳ್ಳೆಯದು.
  • ಸಾಧ್ಯವಾದರೆ, ಸುಣ್ಣಯುಕ್ತ, ಕ್ಷಾರೀಯ ಮಣ್ಣುಗಳಲ್ಲಿ ಕೊರತೆಗೆ ಸೂಕ್ಷ್ಮವಾಗಿರುವ ಬೆಳೆಗಳನ್ನು ನೆಡುವುದನ್ನು ತಪ್ಪಿಸಿ.
  • ಒಳಚರಂಡಿ ವ್ಯವಸ್ಥೆ ಸುಧಾರಿಸಿ ಮತ್ತು ಅತಿಯಾಗಿ ನೀರು ಹಾಕಬೇಡಿ.
  • ಸುಣ್ಣ ಹಾಕಬೇಡಿ.
  • ಇದು ಮಣ್ಣಿನ pH ಮಟ್ಟವನ್ನು ಹೆಚ್ಚಿಸುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ