ತೊಗರಿ ಬೇಳೆ & ಮಸೂರ್ ಬೇಳೆ

ಪಾಡ್ ಫ್ಲೈ

Melanagromyza obtusa

ಕೀಟ

5 mins to read

ಸಂಕ್ಷಿಪ್ತವಾಗಿ

  • ಬೀಜಕೋಶದ ಗೋಡೆಗಳ ಮೇಲೆ ರಂಧ್ರಗಳು.
  • ಹಾನಿಗೊಳಗಾದ ಧಾನ್ಯಗಳು ಪಕ್ವವಾಗುವುದಿಲ್ಲ.
  • ಕಪ್ಪು ನೊಣಗಳು.
  • ಕೆನೆ ಬಿಳಿ ಮ್ಯಾಗಟ್‌ಗಳು.


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ಸಂಪೂರ್ಣವಾಗಿ ಬೆಳೆದ ಲಾರ್ವಾಗಳು, ಅಗಿಯುವ ಮೂಲಕ ಬೀಜಕೋಶದ ಗೋಡೆಗಳಲ್ಲಿ ರಂಧ್ರಗಳನ್ನು ರೂಪಿಸುವವರೆಗೆ ರೋಗಲಕ್ಷಣಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಇದು ಒಂದು ಕಿಟಕಿಯಂತೆ ರಂಧ್ರವನ್ನು ಬಿಡುತ್ತದೆ ಮತ್ತು ಬೀಜಕೋಶದೊಳಗೆ ಕೋಶಾವಸ್ಥೆಯಾದ ನಂತರ ನೊಣಗಳು ಹೊರಗೆ ಬರುತ್ತವೆ. ಪ್ಯೂಪಾಗಳು ಧಾನ್ಯಗಳೊಳಗೆ ಕೊರೆದುಕೊಂಡು ಹೋಗುತ್ತವೆ, ಮತ್ತು ಸುರಂಗಗಳನ್ನು ಮಾಡುತ್ತವೆ. ಅದರ ಮೂಲಕ ಅವು ಪ್ರೌಢ ಹುಳುಗಳಾಗಿ ಹೊರಗೆ ಬರುತ್ತವೆ. ಪೀಡಿತ ಧಾನ್ಯಗಳು ಸುಕ್ಕುಗಟ್ಟುತ್ತವೆ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಲಾರ್ವಾಗಳ ವಿಸರ್ಜನೆಯಿಂದಾಗಿ, ಸೋಂಕಿತ ಸಸ್ಯ ಭಾಗಗಳಲ್ಲಿ ಶಿಲೀಂಧ್ರಗಳು ಬೆಳೆಯಬಹುದು. ಹಾನಿಗೊಳಗಾದ ಬೀಜಗಳು ಮಾನವನ ಬಳಕೆಗೆ ಅನರ್ಹವಾಗುತ್ತವೆ ಮತ್ತು ಮೊಳಕೆಯೊಡೆಯಲು ಅನರ್ಹವಾಗುತ್ತವೆ. ಒಣ ಬೀಜಕೋಶಗಳಲ್ಲಿ ಸೂಜಿತಲೆಯ ಗಾತ್ರದ ರಂಧ್ರಗಳನ್ನು ಕಾಣಬಹುದು. ಬೀಜಗಳು ಸುಕ್ಕುಗಟ್ಟಿದಂತೆ, ಪಟ್ಟೆಯಂತೆ ಕಾಣುತ್ತವೆ ಮತ್ತು ಅವುಗಳನ್ನು ಭಾಗಶಃ ತಿನ್ನಲಾಗಿರುತ್ತದೆ.

Recommendations

ಜೈವಿಕ ನಿಯಂತ್ರಣ

ಎಮ್. ಒಬ್ಟುಸಾದ ನೈಸರ್ಗಿಕ ಶತ್ರುಗಳನ್ನು ಸಂರಕ್ಷಿಸಿ. ಬೇವಿನ ಬೀಜದ ಕಷಾಯವನ್ನು ನಾಲ್ಕು ವಾರಗಳವರೆಗೆ (50 ಗ್ರಾಂ / ಲೀ ನೀರು) ಸಿಂಪಡಿಸಿ ಅಥವಾ ಜಲೀಯ ಬೇವಿನ ಕರ್ನಲ್ ಕಷಾಯವನ್ನು ಹದಿನೈದು ದಿನ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೊನೊಕ್ರೊಟೊಫಾಸ್, ಅಸೆಫೇಟ್ ಅಥವಾ ಲ್ಯಾಂಬ್ಡಾ-ಸಿಹಲೋಥ್ರಿನ್ ಅನ್ನು ಹೂಬಿಡುವ ಹಂತದಲ್ಲಿ ಸಿಂಪಡಿಸಿ ಮತ್ತು ನಂತರ 10-15 ದಿನಗಳ ನಂತರ ಮತ್ತೆ ಸಿಂಪಡಿಸಿ. ನಿರ್ದಿಷ್ಟ ಕೀಟನಾಶಕಗಳಿಗೆ ಪ್ರತಿರೋಧವನ್ನು ತಡೆಗಟ್ಟಲು, ಒಂದೇ ಋತುವಿನಲ್ಲಿ ಪರ್ಯಾಯ ದ್ರವೌಷಧಗಳನ್ನು ಸಿಂಪಡಿಸಲು ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ಮೆಲನಾಗ್ರೊಮಿಜಾ ಒಬ್ಟುಸಾದ ಮ್ಯಾಗಟ್‌ನಿಂದ ಹಾನಿ ಉಂಟಾಗುತ್ತದೆ. ಇದು ಬೆಳೆಯುತ್ತಿರುವ ಧಾನ್ಯದ ಗೋಡೆಗಳನ್ನು ತಿನ್ನುತ್ತದೆ. ಪ್ರೌಢ ನೊಣಗಳು (2-5 ಮಿಮೀ ಉದ್ದ) ತೊಗರಿ ಬೇಳೆ ಮತ್ತು ಇತರ ಆತಿಥೇಯ ಸಸ್ಯಗಳ ಅಪಕ್ವವಾದ ಬೀಜಕೋಶಗಳ ಗೋಡೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದ ಲಾರ್ವಾಗಳು ಕೆನೆ ಬಿಳಿ ಬಣ್ಣದಲ್ಲಿದ್ದರೆ, ಪ್ಯೂಪ ಕಿತ್ತಳೆ-ಕಂದು ಬಣ್ಣದಲ್ಲಿ ಕಾಣಿಸುತ್ತದೆ. ಮ್ಯಾಗಟ್ ಗಳು ಬೀಜದ ಮೇಲ್ಪದರವನ್ನು ಒಡೆಯದೆ ಬೀಜದ ಹೊರಚರ್ಮದ ಕೆಳಗೆ ಕೊರೆಯುತ್ತವೆ. ನಂತರ ಅದು ಕೋಟಿಲೆಡಾನ್‌ಗಳೊಳಗೆ ಕೊರೆದುಕೊಂಡು ಹೋಗುತ್ತವೆ. ಅಂತಿಮ ಇನ್ಸ್ಟಾರ್ ಮ್ಯಾಗಟ್ ಕೋಶಾವಸ್ಥೆಗೆ ಹೋಗುವ ಮುನ್ನ ಬೀಜವನ್ನು ಹಾಗೇ ಬಿಟ್ಟು ಬೀಜಕೋಶದಲ್ಲಿ ರಂಧ್ರಗಳನ್ನುಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ನೆಡಲು ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ಬಳಸಿ.
  • ಎಂ.
  • ಅಬ್ಟುಸಾ ಹರಡುವುದನ್ನು ತಪ್ಪಿಸಲು ಋತುವಿನ ಆರಂಭದಲ್ಲಿ ಬೆಳೆಯನ್ನು ಬಿತ್ತನೆ ಮಾಡಿ.
  • ಉತ್ತಮ ಭೂಮಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ ಮತ್ತು ನಿಯಮಿತವಾಗಿ ಕಳೆಗಳನ್ನು ತೆಗೆದುಹಾಕಿ.
  • ಕೀಟಗಳ ಚಿಹ್ನೆಗಳಿಗಾಗಿ ನಿಮ್ಮ ಹೊಲವನ್ನು ಪರಿಶೀಲಿಸಿ ಮತ್ತು ಪ್ರೌಢ ನೊಣಗಳನ್ನು ಹಿಡಿಯಲು ಜಿಗುಟಾದ ಬಲೆಗಳನ್ನು ಬಳಸಿ.
  • ಹುಲ್ಲುಜೋಳ, ಮೆಕ್ಕೆಜೋಳ ಮತ್ತು ನೆಲಗಡಲೆ ಜೊತೆ ಅಂತರ ಬೆಳೆ ಮಾಡುವುದರಿಂದ ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ.
  • ಆತಿಥೇಯವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಅಭ್ಯಾಸ ಮಾಡಿ.
  • ಒಂದು ಪ್ರದೇಶದಲ್ಲಿ ವಿಭಿನ್ನ ಅವಧಿಯ ತಳಿಗಳ ಮಿಶ್ರಣವನ್ನು ಬೆಳೆಯುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ