ಕಡಲೆಕಾಯಿ

ನೆಲಗಡಲೆ ಎಲೆ ಗಣಿಗಾರ

Aproaerema modicella

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲಿನ ಭಾಗಗಳಲ್ಲಿ ಸುರಂಗ ಕೊರೆದಂತಿರುವ ಪತ್ರಕಗಳು ಮತ್ತು ಎಲೆಗಳ ಮೇಲೆ ಸಣ್ಣ ಕಂದು ಬಣ್ಣದ ಮಚ್ಚೆಗಳು.
  • ತೀವ್ರವಾಗಿ ಬಾಧಿತ ಹೊಲವು ದೂರದಿಂದ ಸುಟ್ಟುಹೋದಂತೆ ಕಂಡುಬರುತ್ತದೆ.
  • ಪತ್ರಕಗಳು ಮಡಚಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಕಡಲೆಕಾಯಿ

ರೋಗಲಕ್ಷಣಗಳು

ಮೆಸೊಫಿಲ್ ಅನ್ನು ತಿನ್ನುವುದರಿಂದ ಸುರಂಗ ಕೊರೆದ ಪತ್ರಕಗಳು ಮತ್ತು ಎಲೆಯ ಮೇಲೆ ಸಣ್ಣ ಕಂದು ಬಣ್ಣಗಳು ಕಂಡುಬರುತ್ತವೆ. ಲಾರ್ವಾಗಳು ಪತ್ರಕಗಳನ್ನು ಒಟ್ಟಿಗೆ ಹೆಣೆದು ಮಡಿಕೆಗಳೊಳಗೆ ಸೇರಿಕೊಂಡು ಅವುಗಳನ್ನು ತಿನ್ನುತ್ತವೆ. ದೂರದಿಂದ, ತೀವ್ರವಾಗಿ ಆಕ್ರಮಣಕ್ಕೆ ಒಳಗಾದ ಹೊಲಗಳು ಸುಟ್ಟಂತೆ ಕಾಣುತ್ತವೆ. ಪೀಡಿತ ಎಲೆಗಳು ಒಣಗುತ್ತವೆ ಮತ್ತು ಸಸ್ಯಗಳ ಒಣಗುವಿಕೆ ಸಂಭವಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಜೇಡಗಳು, ಉದ್ದನೆಯ ಕೊಂಬಿನ ಮಿಡತೆ, ಪ್ರೇಯಿಂಗ್ ಮಾಂಟಿಸ್, ಇರುವೆಗಳು, ಲೇಡಿ ಬರ್ಡ್ ಜೀರುಂಡೆಗಳು, ಮಿಡತೆಗಳು ಮುಂತಾದ ನೈಸರ್ಗಿಕ ಜೈವಿಕ ನಿಯಂತ್ರಕಗಳ ಸಂಖ್ಯೆಯನ್ನು ಸಂರಕ್ಷಿಸಿ. ಎಲೆ ಗಣಿಗಾರದ ಪರಾವಲಂಬಿ ಗೊನಿಯೋಜಸ್ ಎಸ್ಪಿಪಿಯನ್ನು ಹೆಚ್ಚಿಸಲು ಪೆನ್ನಿಸೆಟಮ್ ಗ್ಲಾಕಮ್ ನೊಂದಿಗೆ ಅಂತರ್ ಬೆಳೆ ಮಾಡಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹೊರಹೊಮ್ಮಿದ 30 ದಿನಗಳ ನಂತರ (ಡಿಎಇ) ಸಸಿ ಹಂತದಲ್ಲಿ ಪ್ರತೀ ಸಸ್ಯಕ್ಕೆ 5 ಲಾರ್ವಾ, ಅಥವಾ ಹೂಬಿಡುವ ಹಂತದಲ್ಲಿ (50 ಡಿಎಇ) 10 ಲಾರ್ವಾಗಳು, ಮತ್ತು ಬೀಜಕೋಶ ಭರ್ತಿ ಹಂತದಲ್ಲಿ (70 ಡಿಎಇ) ಪ್ರತಿ ಸಸ್ಯಕ್ಕೆ 15 ಲಾರ್ವಾಗಳು ಇದ್ದಾಗ ಮಾತ್ರ ರಾಸಾಯನಿಕ ದ್ರವೌಷಧಗಳನ್ನು ಶಿಫಾರಸು ಮಾಡಲಾಗುತ್ತದೆ. ಕೀಟ ಸಂಖ್ಯೆಯು ಆರ್ಥಿಕ ಮಿತಿ ಮಟ್ಟಕ್ಕಿಂತ ಹೆಚ್ಚಿದ್ದರೆ ಮಾತ್ರ, ಬಿತ್ತನೆ ಮಾಡಿದ 30-45 ದಿನಗಳ ನಡುವೆ ಡೈಮೆಥೊಯೇಟ್ 200-250 ಮಿಲಿ / ಹೆಕ್ಟೇರ್ (ಕ್ಲೋರೊಪಿರಿಫೊಸ್ @ 2.5 ಮಿಲಿ / ಲೀ ಅಥವಾ ಅಸೆಫೇಟ್ @ 1.5 ಗ್ರಾಂ / ಲೀ) ಅಥವಾ ಪ್ರೊಫೆನೊಫೋಸ್ 20 ಇಸಿ 2 ಮಿಲಿ / ಲೀ ದರದಲ್ಲಿ ಬಳಸಿ.

ಅದಕ್ಕೆ ಏನು ಕಾರಣ

ಎಲೆ ಗಣಿಗಾರದ ಲಾರ್ವಾದಿಂದ ನೆಲಗಡಲೆಗೆ ಹಾನಿ ಉಂಟಾಗುತ್ತದೆ. ಎಲೆ ಗಣಿಗಾರ ಮೊಟ್ಟೆಗಳು ಹೊಳೆಯುವ ಬಿಳಿಯಾಗಿರುತ್ತವೆ ಮತ್ತು ಪತ್ರಕಗಳ ಕೆಳಭಾಗದಲ್ಲಿ ಒಂಟಿಯಾಗಿ ಇಡುತ್ತವೆ. ಆದರೆ ಲಾರ್ವಾಗಳು ತಿಳಿ ಹಸಿರು ಅಥವಾ ಕಂದು ಬಣ್ಣದಲ್ಲಿದ್ದು, ಗಾಢ ಬಣ್ಣದ ತಲೆ ಮತ್ತು ಪ್ರೋಥೊರಾಕ್ಸ್‌ ಇರುತ್ತದೆ. ವಯಸ್ಕ ಎಲೆ ಗಣಿಗಾರ ಒಂದು ಸಣ್ಣ ಚಿಟ್ಟೆ. ಇದು ಸುಮಾರು 6 ಮಿಮೀ ಉದ್ದ ಇರುತ್ತದೆ. ಇದರ ರೆಕ್ಕೆಗಳು ಕಂದು-ಬೂದು ಬಣ್ಣದಲ್ಲಿರುತ್ತವೆ. ವಯಸ್ಕ ಕೀಟಗಳ ಪ್ರತಿಯೊಂದು ಮುಂಭಾಗದ ರೆಕ್ಕೆಗಳಲ್ಲೂ ಬಿಳಿ ಚುಕ್ಕೆಗಳು ಇರುತ್ತವೆ. ಲಾರ್ವಾಗಳು ಎಲೆಗಳಲ್ಲಿ ಸುರಂಗ ಕೊರೆದು ಪತ್ರಕಗಳನ್ನು ತಿನ್ನುತ್ತವೆ. ಅವು 5-6 ದಿನಗಳ ನಂತರ ಸುರಂಗದಿಂದ ಹೊರಬರುತ್ತವೆ ಮತ್ತು ಪಕ್ಕದ ಎಲೆಗಳಿಗೆ ವಲಸೆ ಹೋಗುತ್ತವೆ ಮತ್ತು ಬಲೆ ಎಲೆಗಳನ್ನು ತಿನ್ನುತ್ತವೆ ಮತ್ತು ಕೋಶಾವಸ್ಥೆ ಪ್ರವೇಶಿಸುತ್ತವೆ. ಎಲೆಯಲ್ಲಿ ಸುರಂಗ ಕೊರೆದ ಪ್ರದೇಶಗಳು ಒಣಗುತ್ತವೆ. ಎಲೆ ಗಣಿಗಾರಗಳು ಮಳೆಗಾಲದ ಮತ್ತು ಮಳೆಗಾಲದ ನಂತರದ ಬೆಳೆಗಳಲ್ಲಿ ಸಕ್ರಿಯವಾಗಿದ್ದು, ನಷ್ಟವು 25% ರಿಂದ 75% ವರೆಗೆ ಇರಬಹುದು.


ಮುಂಜಾಗ್ರತಾ ಕ್ರಮಗಳು

  • ಐಸಿಜಿವಿ 87160 ಮತ್ತು ಎನ್‌ಸಿಎಸಿ 17090 ನಂತಹ ನಿರೋಧಕ ಪ್ರಭೇದಗಳನ್ನು ಬಳಸಿ.
  • ಇದು ಹೆಚ್ಚಿನ ಎಲೆ ಗಣಿಗಾರಿಕೆ ಸಂಭವಿಸುವ ಪ್ರದೇಶಗಳಲ್ಲಿ ಉತ್ತಮ ಇಳುವರಿಯನ್ನು ನೀಡುತ್ತವೆ.
  • ತಡವಾದ ಮುತ್ತುವಿಕೆಯನ್ನು ಪಾರಾಗಲು ಬೇಗನೆ ನೆಡಬೇಕು.
  • ಸಜ್ಜೆ ಅಥವಾ ಕೌಪಿಯಂತಹ ಬಲೆ ಬೆಳೆಗಳೊಂದಿಗೆ ಅಂತರ್ ಬೆಳೆ ಮಾಡಿ.
  • ರಾತ್ರಿಯ ಸಮಯದಲ್ಲಿ ಪತಂಗಗಳನ್ನು ಆಕರ್ಷಿಸಲು ಮತ್ತು ಕೀಟಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಲು ಬೆಳಕಿನ ಬಲೆಗಳನ್ನು ಬಳಸಿ.
  • ಕೀಟಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸೋಯಾಬೀನ್ ಮತ್ತು ಕಳೆಗಳಾದ ಲುಸರ್ನ್, ಅಮರಂಥಸ್, ಬೆರ್ಸೀಮ್ ಮತ್ತು ಇಂಡಿಗೊಫೆರಾ ಹಿರ್ಸುಟಾದಂತಹ ಪರ್ಯಾಯ ಆತಿಥೇಯ ಸಸ್ಯಗಳನ್ನು ತೆಗೆದುಹಾಕಿ.
  • ಭತ್ತದ ಒಣಹುಲ್ಲಿನೊಂದಿಗೆ ಮುಚ್ಚಿಗೆ ಹಸಿಗೊಬ್ಬರವನ್ನು ಬಳಸುವ ಅಭ್ಯಾಸ ಮಾಡಿ.
  • ಇದು ಎಲೆ ಗಣಿಗಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  • ಉತ್ತಮ ಇಳುವರಿಗಾಗಿ ಮೆಕ್ಕೆಜೋಳ, ಹತ್ತಿ, ಹುಲ್ಲುಜೋಳದಂತಹ ಬೆಳೆಗಳೊಂದಿಗೆ ಬೆಳೆ ಸರದಿ ಅಭ್ಯಾಸ ಮಾಡಿ.
  • ಇದು ಎಲೆ ಗಣಿಗಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ