ದಾಳಿಂಬೆ

ದಾಳಿಂಬೆಯ ಕಾಂಡಕೊರಕ

Cerosterna scabrator

ಕೀಟ

5 mins to read

ಸಂಕ್ಷಿಪ್ತವಾಗಿ

  • ಮರಿಹುಳುಗಳು ಮುಖ್ಯ ಕಾಂಡಗಳ ತೊಗಟೆಯಲ್ಲಿ ತೂತುಗಳನ್ನು ಕೊರೆಯುತ್ತವೆ.
  • ವಯಸ್ಕ ಕೀಟಗಳು ಎಳೆಯ ಚಿಗುರುಗಳ ತೊಗಟೆಯನ್ನು ತಿನ್ನುತ್ತವೆ.
  • ಗಿಡದ ಬುಡದಲ್ಲಿ ಕೀಟ ವಿಸರ್ಜನೆಯ ಒಣ ಹುಡಿ ಕಂಡು ಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದಾಳಿಂಬೆ

ರೋಗಲಕ್ಷಣಗಳು

ಮರಿಹುಳುಗಳು ಮುಖ್ಯ ಕಾಂಡಗಳ ತೊಗಟೆಯಲ್ಲಿ ತೂತುಗಳನ್ನು ಕೊರೆದು ಸಸ್ಯರಸ ಹರಿದಾಡುವ ಭಾಗದಿಂದ ಆಹಾರ ಸಂಪಾದಿಸಿಕೊಳ್ಳುತ್ತವೆ. ವಯಸ್ಕ ಕೀಟಗಳು ಹಗಲು ಚುರುಕಾಗಿದ್ದು ಎಳೆಯ ಚಿಗುರುಗಳ ತೊಗಟೆಯನ್ನು ತಿನ್ನುತ್ತವೆ. ಮುಖ್ಯ ಕಾಂಡದಲ್ಲಿ ತೂತುಗಳು ಕಾಣಸಿಗುತ್ತವೆ, ಗಿಡದ ಬುಡದಲ್ಲಿ ಕೀಟ ವಿಸರ್ಜಿಸಿದ ಪದಾರ್ಥ ಮತ್ತು ಒಣ ಹುಡಿ ಕಂಡು ಬರುತ್ತದೆ. ಕೋಯೆಲೊಸ್ಟರ್ನಾ ಸ್ಪೈನೇಟರ್ ದಾಳಿಂಬೆ ಗಿಡದ ಮೇಲೆ ಮಾತ್ರವೇ ದಾಳಿ ಮಾಡುವ ಕೀಟವಲ್ಲ. ಇದು ಹಲವು ಬಗೆಯ ಗಿಡಗಳಿಂದ ಆಹಾರ ಸಂಪಾದಿಸಿಕೊಳ್ಳುವ ಕೀಟ, ಹಾಗೂ ವಾಸ್ತವದಲ್ಲಿ ಇದು ಸಣ್ಣಮಟ್ಟಿನ ಹಾನಿಯನ್ನಷ್ಟೆ ಮಾಡುತ್ತದೆ. ಮರದ ಸತ್ತು ಹೋದ ಭಾಗಗಳನ್ನು ವಂಶಾಭಿವೃದ್ಧಿಗೆ ಆರಿಸಿಕೊಳ್ಳುತ್ತದೆಯಾದರೂ ಜೀವವಿರುವ ರೆಂಬೆಗಳ ಮೇಲೆ ಕೂಡ ದಾಳಿಯಿಡುತ್ತದೆ.

Recommendations

ಜೈವಿಕ ನಿಯಂತ್ರಣ

ಡಾಮ್ಸೆಲ್ ಬಗ್, ಎಲ್ಮ್ ಲೀಫ್ ಬೀಟಲ್, ಕೆಲವು ಜಾತಿಯ ಜೇಡಗಳು, ಜಿಯೋಕಾರಿಸ್ ಎಸ್‍ಪಿಪಿ, ಪರಾವಲಂಬಿ ಟ್ಯಾಕಿನಿಡ್ ನುಸಿಗಳು ಅಥವಾ ಬ್ರಾಕೊನಿಡ್ ಕಣಜಗಳ ಕಾಂಡಕೊರಕದ ಸಹಜ ವೈರಿಗಳು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕಾಂಡಕೊರಕವು ಕೊರೆದ ತೂತುಗಳಿಗೆ ಸೂಕ್ತ ಕೀಟನಾಶಕಗಳನ್ನು ಚುಚ್ಚಿ ಹಾಗೂ ತೂತುಗಳನ್ನು ಜೇಡಿಮಣ್ಣಿನಿಂದ ಮುಚ್ಚಿ ಹಾಕಿ. ಕ್ಲಾರ್ಪೈರಿಫೋಸ್ (0.05%) ರಾಸಾಯನಿಕವಿರುವ, ಎಲೆಗಳ ಮೇಲೆ ಸಿಂಪಡಿಸುವ ಕೀಟನಾಶಕಗಳನ್ನು ಬಳಸುವುದರಿಂದ ಕೂಡ ಕಾಂಡಕೊರಕದ ಸಂಖ್ಯೆಯನ್ನು ತಗ್ಗಿಸಬಹುದು.

ಅದಕ್ಕೆ ಏನು ಕಾರಣ

ಮೇಲೆ ವಿವರಿಸಲಾಗಿರುವ ಸೋಂಕಿನ ಲಕ್ಷಣಗಳಿಗೆ ಕೋಯೆಲೊಸ್ಟರ್ನಾ ಸ್ಪೈನೇಟರ್ ನ ಲಾರ್ವಾ ಹಾಗೂ ಝಿಯೂಝೆರಾ ಜೀನಸ್ಸಿನ ಹಲವು ವರ್ಗದ ಕೀಟಗಳು ಕಾರಣ. ಪ್ಯೂಪಾವಸ್ಥೆಗೆ ಬಂದ ನಂತರ ವಯಸ್ಕ ಕೀಟವು ತೊಗಟೆಯಲ್ಲಿ ವರ್ತುಲಾಕಾರದ ತೂತು ಕೊರೆದು ಹೊರಗೆ ಬರುತ್ತದೆ. ಪೇಲವ ಹಳದಿ-ಕಂದು ಬಣ್ಣದಲ್ಲಿರುವ ಇವು 30ರಿಂದ 35 ಮಿಮೀ ಉದ್ದವಿರುತ್ತವೆ. ತಿಳಿ ಊದಾ ಬಣ್ಣದ ರೆಕ್ಕೆ ಕವಚಗಳಿದ್ದು ವಿವಿಧ ಗಾತ್ರದ ಕಪ್ಪು ಚುಕ್ಕೆಗಳಿರುತ್ತವೆ. ನೀಲಿ ಬಣ್ಣದ ಉದ್ದನೆಯ ಕಾಲುಗಳಿರುತ್ತವೆ. ಹೆಣ್ಣು ಕೀಟವು ಎಳೆಯ ರೆಂಬೆಗಳ ತೊಗಟೆಯಡಿಯಲ್ಲಿ ಮೊಟ್ಟೆಯಿಡುವ ಚೀಲವೊಂದರಲ್ಲಿ 20ರಿಂದ 40 ಮೊಟ್ಟೆಗಳನ್ನಿಡುತ್ತದೆ. ಎರಡು ವಾರದ ನಂತರ ಮೊಟ್ಟೆಯೊಡೆದು ಹೊರಬರುವ ಮರಿಹುಳುಗಳು ಸುತ್ತಲಿರುವ ಮೃದು ಅಂಗಾಂಶವನ್ನು ತಿನ್ನತೊಡಗುತ್ತವೆ. ಬಳಿಕ ಅವು ಕಾಂಡ ಮತ್ತು ಬೇರುಗಳನ್ನು ಕೊರೆಯತೊಡಗುತ್ತವೆ. ಲಾರ್ವಾ ಸ್ಥಿತಿಯು ಒಂಬತ್ತರಿಂದ ಹತ್ತು ತಿಂಗಳವರೆಗೆ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಸಿಯನ್ನು ಸೂಕ್ತ ಸಮಯದಲ್ಲಿ ನೆಡುವುದರಿಂದ ಕಾಂಡಕೊರಕಗಳ ಸಂಖ್ಯೆ ಅಧಿಕವಿರುವ ಋತುವನ್ನು ತಪ್ಪಿಸಬಹುದು.
  • ಮರಗಳ ನಡುವೆ ಸರಿಯಾದ ಅಂತರವಿರಲಿ, ಅಥವಾ ಮರಗಳು ಹತ್ತಿರವಿದ್ದಲ್ಲಿ ಅಡ್ಡಕ್ಕೆ ಬೆಳೆದ ರೆಂಬೆಗಳನ್ನು ಕತ್ತರಿಸಿ ಹಾಕಿ.
  • ಒಣಗುತ್ತಿರುವ ರೆಂಬೆಗಳಿವೆಯೇ ಎಂದು ಆಗಾಗ ಪರಿಶೀಲಿಸುವುದರ ಮೂಲಕ ಸೋಂಕು ಎರಗಿದ್ದನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ.
  • ಸೋಂಕು ತಗುಲಿದ ರೆಂಬೆಗಳನ್ನು ಆಯ್ದು ನಾಶ ಮಾಡಿ.
  • ಬೇಸಗೆಯಲ್ಲಿ ಮಣ್ಣಿನ ಆಳಕ್ಕೆ ಉಳುವುದರಿಂದ ಸುಪ್ತಾವಸ್ಥೆಯಲ್ಲಿರುವ ಕೀಟಗಳನ್ನು ಹೊರಗೆಳೆದು ಬಿಸಿಲಿಗೆ ಒಡ್ಡಬಹುದು, ಅಲ್ಲದೆ ಈ ಕೀಟವನ್ನು ತಿನ್ನುವ ಜೀವಿಗಳ ಕಣ್ಣಿಗೆ ಬೀಳುವಂತೆಯೂ ಮಾಡಬಹುದು.
  • ಗಿಡದ ಬುಡವನ್ನು ಪ್ಲಾಸ್ಟಿಕ್ಕಿನ ಹೊದಿಕೆಯಿಂದ ಮುಚ್ಚುವುದರಿಂದ ಹಾನಿಕಾರಕ ಕೀಟಗಳ ಮತ್ತು ಕಳೆಯ ತೊಂದರೆ ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ.
  • ಸೋಂಕು ತಗುಲಿದ ಮರಗಳನ್ನು ಬೇರುಸಮೇತ ಕಿತ್ತು ಸುಟ್ಟು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ