ಭತ್ತ

ಭತ್ತದ ತೆನೆ ಕಡಿವ ಕಂಬಳಿಹುಳು

Mythimna separata

ಕೀಟ

5 mins to read

ಸಂಕ್ಷಿಪ್ತವಾಗಿ

  • ಕಂಬಳಿಹುಳುಗಳು ಎಲೆಯ ತುದಿ, ಅಂಚುಗಳು ಮತ್ತು ಕೆಲವೊಮ್ಮೆ ಸಂಪೂರ್ಣ ಎಲೆಗಳನ್ನು ತಿಂದಿರುತ್ತವೆ.
  • ಹೂಗೊಂಚಲುಗಳು ತಳದಿಂದಲೇ ಕತ್ತರಿಸಿದಂತಾಗಿರುತ್ತವೆ.
  • ಬೆನ್ನಿನ ಮೇಲೆ ಪಟ್ಟೆಗಳಿರುವ ಹುಲ್ಲು ಹಸಿರು ಬಣ್ಣದ ಸಣ್ಣ ಲಾರ್ವಾಗಳು ಸಸ್ಯಗಳ ಮೇಲೆ ಕಾಣಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ರೋಗಲಕ್ಷಣಗಳೆಂದರೆ ಎಲೆಯ ತುದಿಗಳು ಅಥವಾ ಎಲೆಯ ಅಂಚುಗಳಲ್ಲಿ ಕೀಟ ತಿಂದಿರುವುದರಿಂದಾಗಿರುವ ಹಾನಿ, ಮತ್ತು ಕೆಲವೊಮ್ಮೆ ಮಧ್ಯನಾಳವನ್ನು ಮಾತ್ರ ಬಿಟ್ಟುಬಿಡುತ್ತದೆ (ಎಲೆಯ ಅಸ್ಥಿಪಂಜರೀಕರಣ). ಸೋಂಕು ತೀವ್ರವಾದ ಸಂದರ್ಭದಲ್ಲಿ, ಹಳೆಯ ಮರಿಹುಳುಗಳು ಸಂಪೂರ್ಣ ಎಲೆಗಳನ್ನು ಮತ್ತು ಸಂಪೂರ್ಣ ಸಸಿಗಳನ್ನೇ ತಳದಿಂದ ತೆಗೆದುಹಾಕಬಹುದು. ಎಂ. ಸೆಪರಾಟಾದ ವಿಶಿಷ್ಟ ಲಕ್ಷಣಗಳೆಂದರೆ ಹೂಗೊಂಚಲುಗಳ ಬುಡವನ್ನು ಕತ್ತರಿಸುವುದು. ಮತ್ತು ಉಳಿದವು ಕ್ರಮೇಣ ಬಾಗುತ್ತವೆ ಅಥವಾ ಉದುರುತ್ತವೆ. ಬೆನ್ನಿನಲ್ಲಿ ಪಟ್ಟೆಗಳಿರುವ ಹುಲ್ಲು ಹಸಿರು ಬಣ್ಣದ ಸಣ್ಣ ಲಾರ್ವಾಗಳು ಸಸ್ಯಗಳ ಮೇಲೆ ಕಾಣಿಸುತ್ತವೆ. ಹಾನಿಯು ಸಾಮಾನ್ಯವಾಗಿ ಹೊಲದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಕೀಟಗಳು ಏಕಾಏಕಿ ಹೆಚ್ಚಾದ ಸಮಯದಲ್ಲಿ ಅನೇಕ ಹೊಲಗಳಿಗೆ ಒಂದೇ ಬಾರಿಗೆ ಸೋಂಕಾಗಬಹುದು ಏಕೆಂದರೆ ಲಾರ್ವಾಗಳು ಹೊಲದಿಂದ ಹೊಲಕ್ಕೆ ಗುಂಪುಗಳಲ್ಲಿ ವಲಸೆ ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಕಣಜಗಳ ಕೆಲವು ಆಕ್ರಮಣಕಾರಿ ತಳಿಗಳಾದ ಕೋಟಿಯಾ ರುಫಿಕ್ರಸ್ ಮತ್ತು ಯೂಪ್ಟೆರೋಮಲಸ್ ಪರ್ನಾರೆಯನ್ನು ಹೊಲಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಲಾಗಿದ್ದು, ಈ ಕೀಟಗಳು ಎಮ್. ಸೆಪೆರಾಟಾ ಲಾರ್ವಾಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವುಗಳನ್ನು ನಿಧಾನವಾಗಿ ಕೊಲ್ಲುತ್ತವೆ. ಒಂದು ಪ್ರಮುಖ ಕೃಷಿ ವಿಧಾನವೆಂದರೆ ಕೀಟವು ಗೂಡುಹುಳು ಹಂತದಲ್ಲಿರುವಾಗ ಅವುಗಳನ್ನು ಮುಳುಗಿಸಲು ನೀರಿನ ಮಟ್ಟವನ್ನು ಹೆಚ್ಚಿಸುವುದು. ಎಮ್. ಸೆಪರಾಟಾದ ಲಾರ್ವಾಗಳು ಸಸ್ಯದಿಂದ ಸಸ್ಯಕ್ಕೆ ಹರಡುವುದನ್ನು ಮಿತಿಗೊಳಿಸಲು ನೀರು ಹರಿಸುವುದು ಉತ್ತಮ ಮಾರ್ಗವಾಗಿದೆ. ಭತ್ತದ ಗದ್ದೆಗಳಲ್ಲಿ ಬಾತುಕೋಳಿಗಳನ್ನು ಬಿಡುವುದರಿಂದಲೂ ಸಹ ಕೀಟ ಸಂಖ್ಯೆಯನ್ನು ನಿಯಂತ್ರಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಂಬಳಿಹುಳುಗಳು ಇನ್ನೊಂದು ಹೊಲಕ್ಕೆ ಹೋಗುವುದನ್ನು ತಡೆಗಟ್ಟಲು, ಸೋಂಕಿತ ಪ್ರದೇಶಗಳ ಸುತ್ತಲೂ ಸಿಪರ್ಮೆಥರಿನ್ ಅನ್ನು ಸಿಂಪಡಿಸಿ. ಇದರಿಂದ ಲಾರ್ವಾಗಳು ವಲಸೆ ಹೋಗುವುದನ್ನು ತಪ್ಪಿಸಬಹುದು. ಸೈನಿಕ ಹುಳುವಿನ ಸೋಂಕು ಹೆಚ್ಚಿದ್ದರೆ, ರಾಸಾಯನಿಕ ಸಿಂಪಡಿಕೆ ಅವಶ್ಯಕವಾಗಿದೆ. 1 ಮಿಲಿ / 1 ಲೀ ನೀರಿನಷ್ಟು ಸಿಪರ್ಮೆಥರಿನ್ ಅನ್ನು ಸಿಂಪಡಿಸಲು ಸೂಚಿಸಲಾಗುತ್ತದೆ. ಸಿಂಪಡಿಕೆಗೆ ಉತ್ತಮ ಸಮಯವೆಂದರೆ ಹಗಲಿನ ನಂತರದ ಸಮಯ.

ಅದಕ್ಕೆ ಏನು ಕಾರಣ

ಮಿಥಿಮ್ನಾ ಸೆಪರಾಟಾ ಎಂದು ಕರೆಯಲ್ಪಡುವ ಭತ್ತದ ತೆನೆ ಕಡಿವ ಕಂಬಳಿಹುಳುವಿನ ಲಾರ್ವಾದಿಂದ ಈ ಹಾನಿ ಉಂಟಾಗುತ್ತದೆ. ದೊಡ್ಡ ಹುಳುಗಳ ಮುಂದಿನ ರೆಕ್ಕೆಗಳು ಕಪ್ಪು ಬೂದು ಅಥವಾ ಕೆಂಪು-ಹಳದಿ ಗುರುತಿನೊಂದಿಗೆ ಬೂದು ಹಳದಿ ಬಣ್ಣದ್ದಾಗಿರುತ್ತವೆ ಮತ್ತು ಅವುಗಳ ಮೇಲೆ ಹಲವಾರು ಕಪ್ಪು ಚುಕ್ಕೆಗಳಿರುತ್ತವೆ. ಹೆಣ್ಣು ಹುಳುಗಳು ಗುಂಡಾಕಾರದ, ಹಸಿರು ಬಿಳಿ ಬಣ್ಣ ಅಥವಾ ಬಿಳಿಯ ಮೊಟ್ಟೆಗಳನ್ನು ಎಲೆಗಳ ಮೇಲೆ ಇಡುತ್ತವೆ, ಅವುಗಳು ತೆರೆದಿರಬಹುದು ಅಥವಾ ಅವುಗಳ ಮೇಲೆ ಕಪ್ಪು ಅಥವಾ ತೆಳುವಾದ ಹೊದಿಕೆಯಂತಹ ಆವರಣ ಇರಬಹುದು. ಬೆನ್ನಿನ ಮೇಲೆ ಪಟ್ಟೆಗಳಿರುವ ಹುಲ್ಲು ಹಸಿರು ಬಣ್ಣದ ಸಣ್ಣ ಲಾರ್ವಾಗಳು ಸಸ್ಯಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಹಾನಿಯನ್ನು ಉಂಟುಮಾಡುತ್ತವೆ. ಬರಗಾಲದ ಸಮಯದ ನಂತರ ಬರುವ ಭಾರಿ ಮಳೆಯಿಂದ ದೊಡ್ಡ ಹುಳುಗಳ ಆಯುಷ್ಯ ಹೆಚ್ಚಾಗುತ್ತದೆ ಮತ್ತು ಅದು ಮೊಟ್ಟೆ ಇಡುವುದಕ್ಕೆ ಮತ್ತು ಮೊಟ್ಟೆಗಳು ಒಡೆಯುವುದಕ್ಕೆ ಸೂಕ್ತವಾದುದು. ಸಾರಜನಕ ರಸಗೊಬ್ಬರಗಳು ಸಸ್ಯದ ಬೆಳವಣಿಗೆಯನ್ನು ಸುಧಾರಿಸುತ್ತವೆ ಮತ್ತು ಲಾರ್ವಾಗಳಿಗೆ ಆಹಾರ ಒದಗಿಸುತ್ತವೆ ಮತ್ತು ಅವು ಹೆಚ್ಚು ಕಾಲ ಬದುಕುಳಿಯುತ್ತವೆ. ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ಬಾರ್ಲಿ, ಗೋಧಿ, ಮೆಕ್ಕೆ ಜೋಳ, ಓಟ್, ಹುಲ್ಲು ಜೋಳ, ಕಬ್ಬು, ಬಿದಿರು, ಹತ್ತಿ, ಗೆಣಸು, ತಂಬಾಕು ಮತ್ತು ಬ್ರಾಸಿಕಾದ ಜಾತಿಗಳು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಅಧಿಕ-ಜೊಂಡಿರುವ ಪ್ರಭೇದಗಳನ್ನು ನೆಡಿ.
  • ಎಂ.
  • ಸೆಪರಾಟಾ ಇದೆಯೇ ಎಂಬುದನ್ನು ಕಂಡುಹಿಡಿಯಲು ಭೂಮಿಯನ್ನು ನಿಯಮಿತವಾಗಿ ಪರಿಶೀಲಿಸಿ.
  • ಮೊಟ್ಟೆಗಳ ರಾಶಿಯನ್ನು ಮತ್ತು ಲಾರ್ವಾಗಳನ್ನು ಕೈಯಿಂದ ಹೆಕ್ಕಿ, ನಾಶ ಮಾಡಿ.
  • ಕಳೆಗಳು ( ಹುಲ್ಲುಗಳು) ಬರದಂತೆ ನೋಡಿಕೊಳ್ಳಿ ಏಕೆಂದರೆ ಅವುಗಳು ಸಹ ಪರ್ಯಾಯ ಆಶ್ರಯದಾತ ಸಸ್ಯಗಳಾಗಿವೆ.
  • ರಸಗೊಬ್ಬರಗಳನ್ನು ಸಮಂಜಸವಾಗಿ ಬಳಸಿ ಏಕೆಂದರೆ ಅವುಗಳು ಕೀಟಗಳಿಗೆ ಅನುಕೂಲ ಮಾಡಿಕೊಡುತ್ತವೆ.
  • ಲಾರ್ವಾಗಳು ಇತರ ಹೊಲಗಳಿಗೆ ಹೋಗುವುದನ್ನು ತಡೆಯಲು ತಡೆಗಳನ್ನು ರಚಿಸಿ (ಉದಾಹರಣೆಗೆ ಹಳ್ಳಗಳು).
  • ಹೊಂಡಗಳು ಅಥವಾ ಕಂದಕಗಳನ್ನು ಅಗಿಯಿರಿ ಮತ್ತು ಎಲೆಗಳು ಅಥವಾ ಬೂದಿಯಿಂದ ಅವುಗಳನ್ನು ಮುಚ್ಚಿ.
  • ಇದರಿಂದ ಕಂಬಳಿಹುಳುಗಳು ಅಲ್ಲೇ ಉಳಿದುಕೊಳ್ಳುತ್ತವೆ.
  • ಮರಿಹುಳುಗಳನ್ನು ಉಳಿಸಿಕೊಳ್ಳಲು ಕ್ಷೇತ್ರದ ಸುತ್ತಲೂ ಕೊಂಬೆಗಳನ್ನು ಇರಿಸಿ.
  • ಬೀಜಪಾತಿಗೆ ನೀರು ಹರಿಸುವ ಮೂಲಕ ಕಂಬಳಿಹುಳುಗಳು ಮುಳುಗುವಂತೆ ಅಥವಾ ಅವುಗಳು ಸಸ್ಯಗಳ ಮೇಲ್ಭಾಗಕ್ಕೆ ಹೋಗುವಂತೆ ಮಾಡಿ.
  • ಮೇಲಿದ್ದಾಗ ಅವುಗಳನ್ನು ಕೀಟನಾಶಕಗಳನ್ನು ಬಳಸಿ ನಾಶಮಾಡಬಹುದು.
  • ರೋಗಕ್ಕೆ ಒಳಗಾಗಗದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.
  • ಆದರೆ, ಗೋಧಿ ಅಥವಾ ಮೆಕ್ಕೆ ಜೋಳದಂತಹ ಬೆಳೆಗಳನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ