ಭತ್ತ

ಭತ್ತದ ಏಷ್ಯನ್ ಕಣೆ ನೊಣ

Orseolia oryzae

ಕೀಟ

5 mins to read

ಸಂಕ್ಷಿಪ್ತವಾಗಿ

  • ಕಾಂಡಗಳ ತಳದಲ್ಲಿ ಕೊಳವೆಯಾಕಾರದ ರಚನೆಗಳು.
  • ಬೆಳ್ಳಿ ಬಣ್ಣಕ್ಕೆ ತಿರುಗಿದ ತೆನೆ ಕವಚಗಳು.
  • ಹೂಗೊಂಚಲುಗಳನ್ನು ಉತ್ಪಾದಿಸುವಲ್ಲಿ ವಿಫಲತೆ.
  • ವಿರೂಪಗೊಂಡ, ವಿಕೃತ ಮತ್ತು ಸುತ್ತಿಕೊಂಡ ಎಲೆಗಳು ಕಂಡುಬರುತ್ತವೆ.
  • ಸ್ಥಗಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಭತ್ತದ ಕಣೆ ನೊಣ ಒಂದು ಕೊಳವೆಯಾಕಾರದ ಗಂಟನ್ನು ಕಾಂಡಗಳ ತಳದಲ್ಲಿ ರೂಪಿಸುತ್ತದೆ. ಇದು ಈರುಳ್ಳಿ ಎಲೆ ಅಥವಾ ಬೆಳ್ಳಿ ಚಿಗುರು (ಸುಮಾರು 1 ಸೆಂ ಅಗಲ ಮತ್ತು 10-30 ಸೆಂ.ಮೀ ಉದ್ದ) ಎಂದು ಕರೆಯಲಾಗುವ ಉದ್ದವಾದ ಬೆಳ್ಳಿಯ ಎಲೆಕವಚಗಳನ್ನು ಉತ್ಪಾದಿಸುತ್ತದೆ. ಪೀಡಿತ ಕಾಂಡ, ಎಲೆಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಮತ್ತು ಹೂಗೊಂಚಲುಗಳನ್ನು ಉತ್ಪತ್ತಿ ಮಾಡಲು ವಿಫಲವಾಗುತ್ತದೆ. ಕುಂಠಿತವಾಗಿ ಬೆಳೆದ ಸಸ್ಯ, ಎಲೆಯ ವಿರೂಪತೆ, ಬಾಡುವಿಕೆ ಮತ್ತು ಸುರುಳಿಯಾಗುವುದು ಮುಂತಾದ ರೋಗಲಕ್ಷಣಗಳು ಬರ, ಪೊಟ್ಯಾಸಿಯಮ್ ಕೊರತೆ, ಲವಣಾಂಶ ಮತ್ತು ಭತ್ತದ ಥ್ರಿಪ್ಸ್ ಗಳಿಂದಲೂ ಉಂಟಾಗುವ ಲಕ್ಷಣಗಳಾಗಿವೆ. ಸಮಸ್ಯೆಯ ಕಾರಣವನ್ನು ದೃಢಪಡಿಸಲು, ಕೀಟಗಳ ಉಪಸ್ಥಿತಿಯನ್ನು ಪರಿಶೀಲಿಸಿ. ಉದ್ದನೆಯ-ಕೊಳವೆಯಾಕಾರದ ಮೊಟ್ಟೆಗಳು ಮತ್ತು ಮರಿಹುಳು-ರೀತಿಯ ಲಾರ್ವಾಗಳು, ಬೆಳೆಯುತ್ತಿರುವ ಮೊಗ್ಗುಗಳನ್ನು ತಿನ್ನುತ್ತಿವೆಯೇ ಎಂಬುದನ್ನು ನಿರ್ದಿಷ್ಟವಾಗಿ ಪರೀಕ್ಷಿಸಿ.

Recommendations

ಜೈವಿಕ ನಿಯಂತ್ರಣ

ಪ್ಲಾಟಿಗಸ್ಟಾರಿಡ್, ಯೂಪೆಲ್ಮಿಡ್, ಮತ್ತು ಟಿರೋಮಾಲಿಡ್ ಕಣಜಗಳು (ಲಾರ್ವಾಗಳ ಪರಾವಲಂಬಿಗಳು), ಫೈಟೊಸಾಯ್ಡ್ ಹುಳಗಳು (ಮೊಟ್ಟೆಗಳನ್ನು ತಿನ್ನುತ್ತವೆ), ಜೇಡಗಳು (ವಯಸ್ಕ ನೊಣಗಳನ್ನು ತಿನ್ನುತ್ತವೆ) ಮುಂತಾದ ಪರವಾಲಂಬಿಗಳನ್ನು ಯಶಸ್ವಿಯಾಗಿ ಬಳಸಲಾಗಿದೆ. ಭತ್ತದ ಗದ್ದೆಯಲ್ಲಿ ಕೀಟಗಳನ್ನು ಆಕರ್ಷಿಸುವ ಹೂಬಿಡುವ ಸಸ್ಯಗಳನ್ನು ಹೆಚ್ಚಾಗಿ ನೆಡುವುದೂ ಸಹ ನೆರವಾಗುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಪರಿಗಣಿಸಿ. ಭತ್ತದ ಕಣೆ ನೊಣ ಸಂಕುಲದ ಹೊರಹೊಮ್ಮುವಿಕೆಯ ಮೇಲೆ ಸಿಂಪಡಿಸುವ ಮೂಲಕ, ರೋಗ ಭಾದೆಯನ್ನು ನಿಯಂತ್ರಿಸಲು ಸಮಯ ಕೀಟನಾಶಕಳನ್ನು ನಿಖರವಾಗಿ ಬಳಸಿ. ಕ್ಲೋರ್ಪಿರಿಫೋಸ್ ಆಧಾರಿತ ಉತ್ಪನ್ನಗಳನ್ನು ಭತ್ತದ ಏಷ್ಯನ್ ಕಣೆ ನೊಣದ ವಿರುದ್ಧ, ಅದರ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದಾಗಿದೆ.

ಅದಕ್ಕೆ ಏನು ಕಾರಣ

ಭತ್ತದ ಟಿಲ್ಲರಿಂಗ್ ಹಂತದಲ್ಲಿ, ನೀರಾವರಿ ಅಥವಾ ಮಳೆಯಾಶ್ರಿತ, ತೇವವಾದ ಭತ್ತದ ಜಮೀನಿನ ಪರಿಸರದಲ್ಲಿ ಏಷ್ಯನ್ ಕಣೆ ನೊಣ ಕಂಡುಬರುತ್ತದೆ. ಇದು ಮೇಲ್ಮೈ ಭೂಮಿ ಮತ್ತು ಆಳ ನೀರಿನ ಭತ್ತಗಳಲ್ಲೂ ಸಹ ಸಾಮಾನ್ಯವಾಗಿದೆ. ಈ ಕೀಟವು ಕೋಶವಾಸ್ಥೆಯ ಹಂತದಲ್ಲಿ ಸುಪ್ತವಾಗಿದ್ದರೂ, ಮಳೆಯ ನಂತರ ಮೊಗ್ಗುಗಳು ಬೆಳೆಯುವಾಗ ಮತ್ತೆ ಸಕ್ರಿಯಗೊಳ್ಳುತ್ತದೆ. ಮೋಡ ಅಥವಾ ಮಳೆಯ ವಾತಾವರಣ, ಹೆಚ್ಚು ಎತ್ತರದ ಟಿಲ್ಲರಿಂಗ್ ಪ್ರಭೇದಗಳ ಕೃಷಿ, ತೀವ್ರ ನಿರ್ವಹಣೆಯ ಅಭ್ಯಾಸಗಳು ಇದರ ಸಂಖ್ಯಾ ಸಾಂದ್ರತೆಯನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಬಳಸಿ.
  • ಬೇಗನೆ, ಮಳೆಗಾಲದ ಆರಂಭದಲ್ಲೇ ಸಸಿ ನೆಡಿ.
  • ಸಸ್ಯಗಳ ನಡುವೆ ಅಂತರ ಕಡಿಮೆ ಇರದಂತೆ ನೋಡಿಕೊಳ್ಳಿ ಅಥವಾ ಬಿತ್ತನೆಯ ಪ್ರಮಾಣ ಕಡಿಮೆಯಿರಲಿ.
  • ಭತ್ತದ ಜಮೀನಿನ ಸುತ್ತಲೂ ಪ್ರಯೋಜನಕಾರಿ ಕೀಟಗಳನ್ನು ಆಕರ್ಷಿಸುವ ಬಲೆ ಸಸ್ಯಗಳನ್ನು ನೆಡಿ.
  • ಭತ್ತದ ಜಮೀನಿನ ಸುತ್ತಲೂ ಆ ಋತುವಿನದಲ್ಲದ ಎಲ್ಲಾ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.
  • ಸಾರಜನಕ ಮತ್ತು ಪೊಟ್ಯಾಶ್ ರಸಗೊಬ್ಬರಗಳ ಗರಿಷ್ಟ ಶಿಫಾರಸುಗಳನ್ನು ಪರಿಶೀಲಿಸಿ.
  • ಪತಂಗಗಳನ್ನು ಹಿಡಿಯಲು ಎಣ್ಣೆ ಅಥವಾ ಅಂಟಿನಿಂದ ಜಿಗುಟಾದ ಫಲಕ, ಬೆಳಕಿನ ಬಲೆಗಳನ್ನು ಬಳಸಿ.
  • ಸುಗ್ಗಿಯ ನಂತರ ಕೂಡಲೇ ಹಿಂದಿನ ಬೆಳೆಯ ಅವಶೇಷಗಳನ್ನು ಉಳುಮೆ ಮಾಡಿ ತೆಗೆಯಿರಿ.
  • ಋತು ಮುಗಿದ ಮೇಲೆ ಭೂಮಿಯನ್ನು ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ