ದಾಳಿಂಬೆ

ದಾಳಿಂಬೆಯ ದಂಡಾಣು ಅಂಗಮಾರಿ ರೋಗ

Xanthomonas axonopodis pv. punicae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.
  • ಹಳದಿ ಮಿಶ್ರಿತ ನೀರು-ತುಂಬಿದ ವೃತ್ತಾಕಾರದ ಕಲೆಗಳ ಗೋಚರಿಸುತ್ತವೆ, ಎಲೆಗಳು ಅಕಾಲಿಕವಾಗಿ ಉದುರುತ್ತವೆ.
  • ಪೀಡಿತ ಹಣ್ಣುಗಳ ಮೇಲೆ ಬಿರುಕುಗಳು ಕಾಣಿಸಿಕೊಳ್ಳುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದಾಳಿಂಬೆ

ರೋಗಲಕ್ಷಣಗಳು

ಸೋಂಕಿನ 2-3 ದಿನಗಳ ನಂತರ ರೋಗಲಕ್ಷಣಗಳು ಮೊದಲು ಕಾಣಿಸಿಕೊಳ್ಳುತ್ತವೆ. ಹಳದಿ ಬಣ್ಣದ ನೀರು-ತುಂಬಿದ ವೃತ್ತಾಕಾರದ ಕಲೆಗಳನ್ನು ಸಸ್ಯದ ಭಾಗಗಳಲ್ಲಿ ಕಾಣಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಅಕಾಲಿಕವಾಗಿ ಎಲೆ ಉದುರುವುದು ಕಂಡುಬರುತ್ತದೆ. ವೃತ್ತಾಕಾರದ ಕಲೆಗಳು ನಂತರದ ಹಂತಗಳಲ್ಲಿ ಅನಿಯಮಿತ ಗಾಯಗಳಾಗಿ ಗೋಚರಿಸುತ್ತವೆ. ಕ್ರಮೇಣ, ಕಲೆಗಳ ಮಧ್ಯಭಾಗವು ಕೊಳೆತಂತಾಗಿ ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ. ರೋಗಕಾರಕವು ಕಾಂಡಗಳು ಮತ್ತು ಕೊಂಬೆಗಳನ್ನು ಆವರಿಸುತ್ತದೆ ಮತ್ತು ಬಿರುಕಿಗೆ ಕಾರಣವಾಗುತ್ತದೆ. ಸೋಂಕು ಮುಂದುವರಿದ ಹಂತಗಳಲ್ಲಿ, ಎಲೆಗಳು ಮತ್ತು ಕೊಂಬೆಗಳ ಮೇಲೆ ಅಂಗಾಂಶದ ಕೊಳೆತ ಕಂಡುಬರುತ್ತದೆ. ಈ ಕಾಯಿಲೆಯಿಂದಾಗಿ ಇಡೀ ಹಣ್ಣು ಒಡೆದು ತೆರೆದುಕೊಳ್ಳುತ್ತದೆ. ಅಂತಿಮವಾಗಿ ಇಡೀ ಹಣ್ಣು ಕಪ್ಪಾಗಿ, ಒಣಗಿಹೋಗುತ್ತದೆ. ಎಲ್ಲಾ ಬೆಳೆವಣಿಗೆ. ಹಂತದಲ್ಲೂ ಸಸ್ಯಗಳು ಈ ರೋಗಕ್ಕೆ ತುತ್ತಾಗಬಹುದು.

Recommendations

ಜೈವಿಕ ನಿಯಂತ್ರಣ

ಬಯೋಕಂಟ್ರೋಲ್ ಏಜೆಂಟ್‌ಗಳಾದ ಬ್ಯಾಸಿಲಸ್ ಸಬ್ಟಿಲಿಸ್, ಸ್ಯೂಡೋಮೊನಾಸ್ ಫ್ಲೋರೆಸೆನ್ಸ್ ಮತ್ತು ಟ್ರೈಕೊಡರ್ಮಾ ಹಾರ್ಜಿಯಾನಮ್ ಅನ್ನು ಬಳಸಿ. ಕೀಟಗಳನ್ನು ಮತ್ತು ಸಸ್ಯ ರೋಗಕಾರಕವನ್ನು ನಿಯಂತ್ರಿಸಲು ಬೇವಿನ ಎಲೆಗಳನ್ನು ಗೋ ಮೂತ್ರದಲ್ಲಿ ನೆನೆಸಿ ಸಿಂಪಡಿಸಿ. 40% ತುಳಸಿ ಎಲೆಯ ಸಾರವನ್ನು ನಂತರ ಬೇವಿನ ಬೀಜದ ಎಣ್ಣೆಯನ್ನು ಹಚ್ಚಿ. ಅಲ್ಲದೆ, ಬೆಳ್ಳುಳ್ಳಿ ಗೆಡ್ಡೆ, ಮೆಸ್ವಾಕ್ ಕಾಂಡ ಮತ್ತು ಪ್ಯಾಚೌಲಿ ಎಲೆಗಳ ಸಾರವನ್ನು ಪ್ರತಿ ಸಾಂದ್ರತೆಗೆ 30% ದರದಲ್ಲಿ ಹಚ್ಚಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕಾಯಿಲೆಗೆ ಯಾವುದೇ ಪರಿಣಾಮಕಾರಿ ರಾಸಾಯನಿಕ ನಿಯಂತ್ರಣ ಇನ್ನೂ ಪತ್ತೆಯಾಗಿಲ್ಲ. ಪ್ರತಿಜೀವಕಗಳು, ರಾಸಾಯನಿಕಗಳು ಮತ್ತು ಇತರ ಕೃಷಿ ಚಿಕಿತ್ಸೆಗಳ ಬಳಕೆಯೂ ಸೇರಿದಂತೆ ಹಲವಾರು ನಿರ್ವಹಣಾ ವಿಧಾನಗಳನ್ನು ಪರಿಗಣಿಸಲಾಗಿದೆ. ಆದರೆ ರಾಸಾಯನಿಕ ಚಿಕಿತ್ಸೆಗಳು ಕಡಿಮೆ ಪರಿಣಾಮಕಾರಿ. ಬೋರ್ಡೆಕ್ಸ್ ಮಿಶ್ರಣ, ಕ್ಯಾಪ್ಟನ್, ಕಾಪರ್ ಹೈಡ್ರಾಕ್ಸೈಡ್, ಬ್ರೊಮೊಪೋಲ್ ಮತ್ತು ಪ್ರತಿಜೀವಕ ಸ್ಟ್ರೆಪ್ಟೊಸೈಕ್ಲಿನ್ ನಂತಹ ರಾಸಾಯನಿಕಗಳನ್ನು ಪ್ರತ್ಯೇಕವಾಗಿ ಅಥವಾ ಸಂಯೋಜನೆಯಲ್ಲಿ ಬಳಸಬಹುದು.

ಅದಕ್ಕೆ ಏನು ಕಾರಣ

ಗಾಳಿಯಿಂದ ಹರಡುವ ಬ್ಯಾಕ್ಟೀರಿಯಂ ಕ್ಸಾಂಥೋಮೊನಾಸ್ ಆಕ್ಸೊನೊಪೊಡಿಸ್ ಪಿವಿ. ಪುನಿಕಾಯಿಂದ ಹಾನಿ ಉಂಟಾಗುತ್ತದೆ. ರೋಗಕಾರಕವು ಬೆಳವಣಿಗೆಯ ಹಂತವನ್ನು ಲೆಕ್ಕಿಸದೆ ಹಲವಾರು ಕೃಷಿ ಪ್ರಭೇದಗಳಿಗೆ ಸೋಂಕು ತರುತ್ತದೆ. ನೈಸರ್ಗಿಕ ತೆರೆಯುವಿಕೆಗಳು ಮತ್ತು ಗಾಯಗಳ ಮೂಲಕ ಬ್ಯಾಕ್ಟೀರಿಯಾ ಪ್ರವೇಶಿಸುತ್ತದೆ. ಸೋಂಕಿತ ಸಸ್ಯ ಎಲೆಗಳು, ಕಾಂಡಗಳು ಮತ್ತು ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ ಚಳಿಗಾಲವನ್ನು ಕಳೆಯುತ್ತದೆ. ಮಳೆಯ ತುಂತುರು, ಕೀಟಗಳು ಮತ್ತು ಕಲುಷಿತವಾದ ಸಮರುವಿಕೆಯ ಉಪಕರಣಗಳು ಸ್ಥಳೀಯವಾಗಿ ರೋಗಗಳನ್ನು ಹರಡಲು ಸಹಾಯ ಮಾಡುತ್ತದೆ. ಹೆಚ್ಚು ದಿನದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯು ರೋಗಕಾರಕ ಬೆಳವಣಿಗೆಗೆ ಅನುಕೂಲಕರವಾಗಿದೆ. ಬ್ಯಾಕ್ಟೀರಿಯಂನ ಬೆಳವಣಿಗೆಗೆ ಸೂಕ್ತವಾದ ತಾಪಮಾನವು 30 ಡಿಗ್ರೀ C ಆಗಿದೆ. ಮಳೆ ಮತ್ತು ಸಿಂಪಡಿಸುವ ತುಂತುರುಗಳು, ನೀರಾವರಿಯ ನೀರು, ಸಮರುವಿಕೆ ಸಾಧನಗಳು, ಮಾನವರು ಮತ್ತು ಕೀಟ ವಾಹಕಗಳು ಬ್ಯಾಕ್ಟೀರಿಯಾದ ದ್ವಿತೀಯಕ ಹರಡುವಿಕೆಗೆ ಕಾರಣವಾಗಿವೆ. ಈ ರೋಗ ಹಣ್ಣಿನ ಮಾರುಕಟ್ಟೆ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡಲು ರೋಗ ಮುಕ್ತ ಸಸಿಗಳನ್ನು ಆಯ್ಕೆಮಾಡಿ.
  • ನೆಡುವಿಕೆಯನ್ನು ಸರಿಯಾದ ಸಮಯದಲ್ಲಿ ಮತ್ತು ಸಾಕಷ್ಟು ಅಂತರವಿರುವಂತೆ ಮಾಡಬೇಕು.
  • ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
  • ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನಾಶಮಾಡಿ.
  • ಮಣ್ಣಿನ ಪರೀಕ್ಷೆಯ ಸಮಯದಲ್ಲಿ ಶಿಫಾರಸು ಮಾಡಿದಂತೆ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಹಾಕಿ.
  • ಬೆಳೆಯ ನಿರ್ಣಾಯಕ ಹಂತಗಳಲ್ಲಿ (ಹೂಬಿಡುವಾಗ) ನೀರಾವರಿ ಒದಗಿಸಿ.
  • ನೀರು ನಿಲ್ಲುವುದನ್ನು ತಪ್ಪಿಸಿ.
  • ಸಸ್ಯಾವಶೇಷಗಳನ್ನು ಸಂಗ್ರಹಿಸಿ ನಾಶಮಾಡಿ.
  • ಪೀಡಿತ ಶಾಖೆಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಕತ್ತರಿಸಿ ಮತ್ತು ಸುಟ್ಟುಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ