ಮೆಕ್ಕೆ ಜೋಳ

ಮೆಕ್ಕೆ ಜೋಳದ ಬ್ಯಾಕ್ಟೀರಿಯಾ ಕಾಂಡ ಕೊಳೆತ

Dickeya zeae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಎಲೆಯ ಕವಚಗಳು ಬಣ್ಣ ಕಳೆದುಕೊಳ್ಳುತ್ತವೆ.
  • ನಂತರ ಕಾಂಡದಲ್ಲೂ ಇದು ಕಂಡುಬರುತ್ತದೆ.
  • ಕೆಟ್ಟ ವಾಸನೆ ಮತ್ತು ಸಸ್ಯದ ಮೇಲ್ಭಾಗವನ್ನು ಅದರ ಉಳಿದ ಭಾಗದಿಂದ ಸುಲಭವಾಗಿ ತೆಗೆಯಬಹುದು.
  • ಕಾಂಡದ ಒಳಗಿನ ಭಾಗವು ಬಣ್ಣಗೆಡುತ್ತದೆ ಮತ್ತು ಅಂಟಂಟಾದ ಕೊಳೆತವುಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಮೆಕ್ಕೆ ಜೋಳದ ಬ್ಯಾಕ್ಟೀರಿಯಾ ಕಾಂಡ ಕೊಳೆತವು ಎಲೆಗಳು, ಎಲೆ ಪೊರೆ ಮತ್ತು ಕಾಂಡದ ಗೆಣ್ಣುಗಳ ಬಣ್ಣ ಕೆಳೆದುಕೊಳ್ಳುವಿಕೆಯಿಂದ ಗುರುತಿಸಲ್ಪಡುತ್ತದೆ. ಈ ರೋಗವು ಸಂಪೂರ್ಣ ಕಾಂಡಕ್ಕೆ ಶೀಘ್ರವಾಗಿ ಹರಡುತ್ತದೆ, ನಂತರ ಇತರ ಎಲೆಗಳಿಗೂ ಹರಡುತ್ತದೆ. ಅಂಗಾಂಶಗಳು ಕೊಳೆತಂತೆ, ಒಂದು ಕೆಟ್ಟ ವಾಸನೆಯನ್ನು ಗುರುತಿಸಬಹುದು ಮತ್ತು ಸಸ್ಯದ ಮೇಲಿನ ಭಾಗವನ್ನು ಸಸ್ಯದ ಉಳಿದ ಭಾಗದಿಂದ ಸುಲಭವಾಗಿ ತೆಗೆದುಹಾಕಬಹುದು. ಕಾಂಡವು ಸಂಪೂರ್ಣವಾಗಿ ಕೊಳೆಯುತ್ತದೆ ಮತ್ತು ಕೆಲವೊಮ್ಮೆ ಮೇಲ್ಭಾಗವು ಉದುರುತ್ತದೆ. ಕಾಂಡವನ್ನು ಉದ್ದವಾಗಿ ಕತ್ತರಿಸಿದರೆ ಒಳಗೆ ಬಣ್ಣ ಕಳೆದುಕೊಂಡ ಮತ್ತು ಮೆತ್ತಗಿರುವ ಅಂಟಾದ ಕೊಳೆತ ವಸ್ತುವನ್ನು ಕಾಣಬಹುದು. ಇದು ಸಾಮಾನ್ಯವಾಗಿ ಗೆಣ್ಣುಗಳ ಬಳಿ ಕಂಡು ಬರುತ್ತದೆ. ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಸಸ್ಯದಿಂದ ಸಸ್ಯಕ್ಕೆ ಹರಡುವುದಿಲ್ಲವಾದ್ದರಿಂದ, ರೋಗಪೀಡಿತ ಸಸ್ಯಗಳು ಹೊಲದಲ್ಲಿ ಅಲ್ಲಲ್ಲಿ ಹರಡಿರುವಂತೆ ಕಂಡುಬರುತ್ತದೆ. ಆದರೂ, ಕೆಲವು ಕೀಟ ವಾಹಕಗಳ ಕಾರಣದಿಂದ ರೋಗವು ಸಸ್ಯದಿಂದ ಸಸ್ಯಕ್ಕೆ ಹರಡಿರುವ ವರದಿಗಳಿವೆ. ಮರುಕಳಿಸುವ ಭಾರೀ ಮಳೆಯ ನಂತರ ಅಧಿಕ ತಾಪಮಾನ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಇದ್ದಾಗ ಈ ಕಾಯಿಲೆ ಮೆಕ್ಕೆ ಜೋಳದಲ್ಲಿ ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ಸಧ್ಯಕ್ಕೆ ಇ. ಕ್ರಿಸಾಂಥೆಮಿಗೆ ಜೈವಿಕ ನಿಯಂತ್ರಣ ಆಯ್ಕೆಗಳು ಲಭ್ಯವಿಲ್ಲ. ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹೂಬಿಡುವ ಮೊದಲಿನ ಹಂತದಲ್ಲಿ ನೀರಾವರಿ ನೀರಿನ ಕ್ಲೋರಿನೀಕರಣ ಅಥವಾ ಬ್ಲೀಚಿಂಗ್ ಪುಡಿ (33% ಕ್ಲೋರಿನ್ @ 10 ಕೆ.ಜಿ / ಹೆ) ಜೊತೆ ಮಣ್ಣನ್ನು ಒದ್ದೆ ಮಾಡಲು ಸೂಚಿಸಲಾಗುತ್ತದೆ. ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಹೊಂದಿರುವ ಸೂತ್ರಗಳು ಸಹ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಅನ್ವಯಿಸಬಹುದು. ಅಂತಿಮವಾಗಿ, ಎರಡು ಭಾಗಗಳಲ್ಲಿ ಎಮ್ಓಪಿ 80 ಕೆ.ಜಿ. / ಹೆ ಹಾಕುವುದು ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ಎರ್ವಿನಿಯ ಕ್ರಿಸಾಂಥೆಮಿ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಣ್ಣಿನ ಮೇಲ್ಭಾಗದಲ್ಲಿರುವ ಕಾಂಡದ ಉಳಿಕೆಗಳಲ್ಲಿ ಮಾತ್ರ ಚಳಿಗಾಲವನ್ನು ಕಳೆಯುತ್ತದೆ. ಆದರೆ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಬದುಕುವುದಿಲ್ಲ. ಬ್ಯಾಕ್ಟೀರಿಯಾವು ಬೀಜಗಳ ಮೂಲಕ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೋಗಕ್ಕೆ ಸೂಕ್ತವಾದ ವಾತಾವರಣವೆಂದರೆ 32-35 °C ತಾಪಮಾನ ಮತ್ತು ಅಧಿಕ ಸಾಪೇಕ್ಷ ಆರ್ದ್ರತೆ. ಆಗಾಗ ಬರುವ ಮಳೆ ಮತ್ತು ಸ್ಪ್ರಿಂಕ್ಲರ್ ಉಪಯೋಗಿಸಿ ಮಾಡುವ ತುಂತುರು ನೀರಾವರಿಗಳು ದೀರ್ಘಕಾಲದವರೆಗೆ ಎಲೆಗಳನ್ನು ಒದ್ದೆಯಾಗಿರಿಸುತ್ತವೆ ಮತ್ತು ಎಲೆ ಸುರುಳಿಯಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರು ಬಿಸಿಯಾದಾಗ, ಅದು ಸಸ್ಯ ಅಂಗಾಂಶಗಳಿಗೆ ಹಾನಿಯುಂಟುಮಾಡಿ, ಸೋಂಕಿಗೆ ಸಹಾಯಮಾಡುವ ರೀತಿಯಲ್ಲಿ ತೆರೆದುಕೊಳ್ಳುತ್ತವೆ. ಮೊದಲಿಗೆ, ಹೆಚ್ಚಿನ ಉಷ್ಣಾಂಶ ಅಥವಾ ಪ್ರವಾಹಕ್ಕೆ ಒಳಗಾಗುವ ಸಸ್ಯಗಳ ತಳಭಾಗದಲ್ಲಿ ರೋಗಲಕ್ಷಣಗಳು ಕಂಡುಬರಬಹುದು. ನೀರಾವರಿಯ ನೀರು ಇನಾಕ್ಯುಲಮ್ ನ ಪ್ರಾಥಮಿಕ ಮೂಲವೆಂದು ನಂಬಲಾಗಿದೆ. ಇತರ ಗೆಣ್ಣುಗಳನ್ನು ಸೋಂಕಿತಗೊಳಿಸಲು ಸಂಪೂರ್ಣ ಸಸ್ಯಕ್ಕೆ ಬ್ಯಾಕ್ಟೀರಿಯಾವು ಹರಡುವುದಾದರೂ, ಇದು ಸಾಮಾನ್ಯವಾಗಿ ಇತರ ಸಸ್ಯಗಳಿಗೆ ಹರಡುವುದಿಲ್ಲ. ಆದರೆ, ಕೀಟವು ಬ್ಯಾಕ್ಟೀರಿಯಾದ ವಾಹಕವಾದಾಗ ಹರಡುವ ಸಾಧ್ಯತೆಗಳಿವೆ.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಒಳಚರಂಡಿ ವ್ಯವಸ್ಥೆಯ ಮೂಲಕ ನೀರು ನಿಲ್ಲುವುದನ್ನು ತಪ್ಪಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ರೋಗದ ಲಕ್ಷಣಗಳನ್ನು ಕಂಡುಹಿಡಿಯಲು ಭೂಮಿಯನ್ನು ನಿಯಮಿತವಾಗಿ ಪರೀಕ್ಷೆ ಮಾಡಿ.
  • ಸಾರಜನಕವನ್ನು ಅತಿಯಾಗಿ ಹಾಕಬೇಡಿ ಮತ್ತು ರೋಗದ ಸಂಭವನೀಯತೆಯನ್ನು ಕಡಿಮೆ ಮಾಡಲು ಯಾವಾಗಲೂ ಹೆಚ್ಚಿನ ಪ್ರಮಾಣದ ಫಾಸ್ಫರಸ್ ಮತ್ತು ಪೊಟ್ಯಾಸಿಯಮ್ಗಳೊಂದಿಗೆ ಸರಿಪಡಿಸಿ.
  • ದಿನದ ಅತ್ಯಂತ ಹೆಚ್ಚು ಉಷ್ಣ ಸಮಯಗಳಲ್ಲಿ ನೀರಾವರಿ ಮಾಡಬೇಡಿ.
  • ಅದರಿಂದ ಸಸ್ಯದ ಸುರುಳಿಯಲ್ಲಿ ನೀರು ಸಂಗ್ರಹವಾಗಬಹುದು.
  • ಸಾಂಕ್ರಾಮಿಕವಾಗಿ ರೋಗ ಹರಡುವ ಪ್ರದೇಶಗಳಲ್ಲಿ ಮೆಕ್ಕೆ ಜೋಳದ ಬಿತ್ತನೆ ಮಾಡುವ ಮೊದಲು ಮಣ್ಣಿನಲ್ಲಿ ಹಸಿರು ಗೊಬ್ಬರವನ್ನು ಸೇರಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ.
  • ಜೀವನಚಕ್ರವನ್ನು ಮುರಿಯಲು ಕೊಯ್ಲಿನ ನಂತರ ಸಸ್ಯ ಉಳಿಕೆಗಳನ್ನು ಮಣ್ಣಿನ ಜೊತೆ ಸೇರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ