ಭತ್ತ

ಬ್ಯಾಕ್ಟೀರಿಯ ತೆನೆ ರೋಗ

Burkholderia glumae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಧಾನ್ಯಗಳು ತಿಳಿ -ಕಂದು ಬಣ್ಣಕ್ಕೆ ತಿರುಗುತ್ತವೆ.
  • ನಂತರ ಇವು ಇತರ ಬ್ಯಾಕ್ಟೀರಿಯಾ ಅಥವ ಶಿಲೀಂಧ್ರಗಳಿಂದಾಗಿ ಬೂದು, ಕಪ್ಪು ಅಥವಾ ಗುಲಾಬಿ ಬಣ್ಣಗಳಿಗೆ ತಿರುಗಬಹುದು.
  • ಪ್ಯಾನಿಕಲ್ ಗಳು ನೇರವಾಗಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಗದ್ದೆಗಳಲ್ಲಿ ಇದು ವೃತ್ತಾಕಾರದ ಮಾದರಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಧಾನ್ಯ ತುಂಬಿಕೊಳ್ಳುವ ಸಮಯದಲ್ಲಿ ತೆನೆಯ ಸಣ್ಣ ಸಮೂಹಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಧಾನ್ಯದ ತೂಕದಿಂದ ಕೆಳಗೆ ಬಾಗುವ ಬದಲು ನೆಟ್ಟಗೆ ಇರುತ್ತವೆ. ಸೋಂಕಿಗೊಳಗಾಗುವ ಧಾನ್ಯಗಳು ತೆನೆಯಲ್ಲಿ ಅಸಮಾನವಾಗಿ ಹಂಚಿಕೆಯಾಗಿರುತ್ತದೆ. ಸೋಂಕಿಗೊಳಗಾದ ತೆನೆಯ ಕೆಳಗೆ ಇರುವ ಕಾಂಡವು ಹಸಿರು ಬಣ್ಣದಲ್ಲಿರುತ್ತದೆ. ಹೂಬಿಡುವ ಸಮಯದಲ್ಲಿ ಬ್ಯಾಕ್ಟೀರಿಯಾವು ಬೆಳೆಯುವ ಧಾನ್ಯಗಳನ್ನು ಸೋಂಕಿಗೆ ಒಳಪಡಿಸುತ್ತದೆ ಮತ್ತು ಧಾನ್ಯದ ಬೆಳವಣಿಗೆ ತಡೆಯುತ್ತದೆ ಅಥವಾ ಪರಾಗಸ್ಪರ್ಶದ ನಂತರ ಧಾನ್ಯದ ತುಂಬುವಿಕೆಯ ಸಮಯದಲ್ಲಿ ಕೊಳೆತ ಉಂಟುಮಾಡುತ್ತದೆ. ಧಾನ್ಯಗಳ ಸಿಪ್ಪೆಯ ಕೆಳಗಿನ ಮೂರನೇ ಒಂದು ಭಾಗ ಅಥವಾ ಅರ್ಧದಷ್ಟು ಭಾಗ ಮಧ್ಯಮ-ಕಂದು ಬಣ್ಣಕ್ಕೆ ತಿರುಗುತ್ತದೆ. ಇತರ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಸಿಪ್ಪೆಯೊಳಗೆ ಸೇರುವುದರಿಂದ ಧಾನ್ಯಗಳು ನಂತರ ಬೂದು, ಕಪ್ಪು ಅಥವಾ ಗುಲಾಬಿ ಬಣ್ಣಗಳಿಗೆ ತಿರುಗಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಬರ್ಕ್ಹೋಲ್ಡೆರಿಯಾ ಸ್ಪೀಶೀಸ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ಮಾಹಿತಿ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮಿಂದ ಮಾಹಿತಿ ಪಡೆಯುವ ನಿರೀಕ್ಷೆ ನಮ್ಮದು.

ರಾಸಾಯನಿಕ ನಿಯಂತ್ರಣ

ಕ್ಷಮಿಸಿ, ಬರ್ಖೋಲ್ಡೆರಿಯಾ ಗ್ಲುಮೆಯ ವಿರುದ್ಧ ಯಾವುದೇ ರಾಸಾಯನಿಕ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವಂತಹ ಏನಾದರೂ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮಿಂದ ಮಾಹಿತಿ ಪಡೆಯುವ ನಿರೀಕ್ಷೆ ನಮ್ಮದು.

ಅದಕ್ಕೆ ಏನು ಕಾರಣ

ಬ್ಯಾಕ್ಟೀರಿಯ ತೆನೆ ರೋಗವು ಬೀಜದಿಂದ ಹರಡುತ್ತದೆ. ಸೋಂಕಿತ ಭತ್ತವನ್ನು ನೆಟ್ಟರೆ ಯಾವುದೇ ಪ್ರಾಯೋಗಿಕ ನಿಯಂತ್ರಣ ಕ್ರಮಗಳಿಲ್ಲ. ರೋಗದ ಹರಡುವಿಕೆಯು ತಾಪಮಾನ ಅವಲಂಬಿತವಾಗಿದೆ. ಬ್ಯಾಕ್ಟೀರಿಯಾ ತೆನೆ ರೋಗ ಸಸ್ಯ ಬೆಳವಣಿಗೆಯ ನಂತರದ ಹಂತಗಳಲ್ಲಿ ಬಿಸಿ ತಾಪಮಾನ , ಶುಷ್ಕ ಹವಾಮಾನದ ಸಮಯದಲ್ಲಿ ಬೆಳೆಯುತ್ತದೆ. ಹಗಲಿನ ಉಷ್ಣತೆಯು ಸುಮಾರು 32 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಮೇಲಿದ್ದಾಗ ಇವುಗಳ ಹರಡುವಿಕೆ ಹೆಚ್ಚಾಗುತ್ತದೆ. ಹೆಚ್ಚಿನ ಸಾರಜನಕ ಮಟ್ಟ ಸಹ ರೋಗದ ಬೆಳವಣಿಗೆಯನ್ನು ಬೆಂಬಲಿಸುತ್ತವೆ. ವಸಂತಕಾಲಕ್ಕೂ ಮುಂಚೆ ನೆಟ್ಟ ಭತ್ತದ ಬೆಳೆಗೆ ಬ್ಯಾಕ್ಟೀರಿಯಾ ತೆನೆ ರೋಗದಿಂದ ಕಡಿಮೆ ಹಾನಿ ಉಂಟಾಗುತ್ತದೆ. ಏಕೆಂದರೆ ತೆನೆ ಮೂಡುವಾಗ ಮತ್ತು ಧಾನ್ಯದ ತುಂಬುವಿಕೆಯ ಸಮಯದಲ್ಲಿ ತಾಪಮಾನವು ಕಡಿಮೆ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಹಿಂದಿನ ಬೆಳೆಯಿಂದ ಸಸ್ಯದ ಉಳಿಕೆಗಳನ್ನು ಹೊಲದಿಂದ ತೆಗೆದು ಸ್ವಚ್ಛಗೊಳಿಸಿ.
  • ಪ್ರಮಾಣೀಕೃತ, ರೋಗ ಮುಕ್ತ ಬೀಜಗಳನ್ನು ಮಾತ್ರ ನೆಡಬೇಕು.
  • ಲಭ್ಯವಿದ್ದರೆ ಭಾಗಶಃ ಪ್ರತಿರೋಧ ಹೊಂದಿರುವ ಭತ್ತ ಪ್ರಬೇಧವನ್ನು ಆರಿಸಿ.
  • ವಸಂತಕಾಲದಲ್ಲಿ ಬೇಗನೆ ಬೆಳೆ ನೆಡಿ.
  • ನಿಮ್ಮ ರಸಗೊಬ್ಬರ ಬಳಕೆಯನ್ನು ನಿಯಂತ್ರಿಸಿ ಮತ್ತು ಶಿಫಾರಸು ಮಾಡಿದ ಪ್ರಮಾಣವನ್ನು ಮೀರದಿರಿ.
  • ಅದರಲ್ಲೂ ವಿಶೇಷವಾಗಿ ಸಾರಜನಕದ ಅತಿಯಾದ ಬಳಕೆ ಬೇಡ.
  • ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ.
  • ಬೆಳೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ ಮತ್ತು ಅನಾರೋಗ್ಯಕರ ಸಸ್ಯಗಳಿಗಾಗಿ ಪರಿಶೀಲಿಸಿ.
  • ದ್ವಿದಳ ಧಾನ್ಯಗಳಂತಹ ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಪರಿಗಣಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ