ಇತರೆ

ಬ್ಯಾಕ್ಟೀರಿಯಲ್ ವಿಲ್ಟ್

Ralstonia solanacearum

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಸಸ್ಯವು ಸೊರಗುತ್ತದೆ.
  • ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ ಮತ್ತು ಕಾಂಡಕ್ಕೆ ಅಂಟಿಕೊಂಡಿರುತ್ತವೆ.
  • ಬೇರುಗಳು ಮತ್ತು ಕೆಳಭಾಗದ ಕಾಂಡಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಬೇರುಗಳು ಕೊಳೆಯುತ್ತವೆ ಮತ್ತು ಹಳದಿ ಸ್ರವಿಸುವಿಕೆಯನ್ನು ಹೊರಹಾಕಬಹುದು.

ಇವುಗಳಲ್ಲಿ ಸಹ ಕಾಣಬಹುದು

9 ಬೆಳೆಗಳು

ಇತರೆ

ರೋಗಲಕ್ಷಣಗಳು

ಎಳೆಯ ಎಲೆಗಳು ದಿನದ ಅತ್ಯಂತ ಹೆಚ್ಚು ತಾಪಮಾನ ಸಮಯದಲ್ಲಿ ಸೊರಗಲು ಪ್ರಾರಂಭಿಸುತ್ತವೆ ಮತ್ತು ತಾಪಮಾನವು ತಂಪಾಗುವಾಗ ಭಾಗಶಃ ಚೇತರಿಸಿಕೊಳ್ಳುತ್ತವೆ. ಅನುಕೂಲಕರ ಪರಿಸ್ಥಿತಿಗಳಲ್ಲಿ, ಸೊರಗುವಿಕೆಯು ಇಡೀ ಸಸ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಶಾಶ್ವತವಾಗಿ ಉಳಿಯಬಹುದು. ಬಾಡಿದ ಎಲೆಗಳು ಅವುಗಳ ಹಸಿರು ಬಣ್ಣವನ್ನು ಉಳಿಸಿಕೊಳ್ಳುತ್ತವೆ ಮತ್ತು ಕಾಂಡಕ್ಕೆ ಜೋಡಿಸಲ್ಪಟ್ಟಿರುತ್ತವೆ. ಕಾಂಡದ ಬೇರುಗಳು ಮತ್ತು ಕೆಳಗಿನ ಭಾಗವು ಗಾಢವಾದ ಕಂದು ಬಣ್ಣವನ್ನು ತೋರಿಸುತ್ತವೆ. ದ್ವಿತೀಯ ಬ್ಯಾಕ್ಟೀರಿಯ ಸೋಂಕಿನಿಂದ ಆಕ್ರಮಣಗೊಂಡ ಬೇರುಗಳು ಕೊಳೆಯಬಹುದು. ಕತ್ತರಿಸಿದಾಗ, ಕಾಂಡಗಳಿಂದ ಬಿಳಿ ಬಣ್ಣದಿಂದ ಹಳದಿ ಬಣ್ಣದ, ಹಾಲಿನ ಸ್ರವಿಸುವಿಕೆಯನ್ನು ನೋಡಬಹುದು.

Recommendations

ಜೈವಿಕ ನಿಯಂತ್ರಣ

ಕ್ರುಸಿಫೆರೇಸ್ ಕುಟುಂಬದಿಂದ ಮಣ್ಣಿನ ಒಳಗೆ ತಾಜಾ ಸಸ್ಯ ರಾಶಿಯನ್ನು (ಹಸಿರು ಗೊಬ್ಬರ) ಸೇರಿಸುವುದು (ಬಯೋ ಫ್ಯುಮಿಗೇಷನ್) ರೋಗಕಾರಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಣ್ಣಿನೊಳಗೆ ಸೇರಿಸುವ ಮೊದಲು ಸಸ್ಯ ವಸ್ತುಗಳನ್ನುಯಾಂತ್ರಿಕವಾಗಿ ಅಥವಾ ಕೈಯಿಂದ ಮೆದುಗೊಳಿಸಬಹುದು ಅಥವಾ ಕತ್ತರಿಸಿಬಹುದು. ಸಸ್ಯಜನಕ ರಾಸಾಯನಿಕ ಥಿಮೊಲ್ ಅದೇ ಪರಿಣಾಮವನ್ನು ಹೊಂದಿದೆ. ಸೊಲನೇಶಿಯಸ್ ಸಸ್ಯಗಳ ಬೇರಿನ ವ್ಯವಸ್ಥೆಗಳನ್ನು ಆಕ್ರಮಿಸುವ ಸ್ಪರ್ಧಾತ್ಮಕ ಬ್ಯಾಕ್ಟೀರಿಯಾಗಳು ಸಹ ಪರಿಣಾಮಕಾರಿಯಾಗುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ರೋಗಕಾರಕವು ಮಣ್ಣಿನಿಂದ ಹುಟ್ಟುವ ಕಾರಣದಿಂದ ರೋಗಕ್ಕೆ ರಾಸಾಯನಿಕ ಚಿಕಿತ್ಸೆಯು ಅನುಪಯುಕ್ತವಾಗಬಹುದು ಅಥವಾ ಕಡಿಮೆ ಪರಿಣಾಮಕಾರಿ ಅಥವಾ ಪರಿಣಾಮಕಾರಿಯಲ್ಲವಾಗಬಹುದು.

ಅದಕ್ಕೆ ಏನು ಕಾರಣ

ಬ್ಯಾಕ್ಟೀರಿಯ ಮಣ್ಣಿನಲ್ಲಿ ದೀರ್ಘಕಾಲ ಬದುಕಬಲ್ಲದು, ಇದು ಸಸ್ಯದ ಉಳಿಕೆಗಳಲ್ಲಿ ಅಥವಾ ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ ಬದುಕಬಲ್ಲದು. ಪಾರ್ಶ್ವದ ಬೇರುಗಳ ಹೊರಹೊಮ್ಮುವ ಸಂದರ್ಭದಲ್ಲಿ ಬೇರಿನ ವ್ಯವಸ್ಥೆಯಲ್ಲಿನ ಗಾಯಗಳ ಮೂಲಕ ಇದು ಸಸ್ಯವನ್ನು ಪ್ರವೇಶಿಸುತ್ತದೆ. ಹೆಚ್ಚಿನ ತಾಪಮಾನಗಳು (30 ° C ನಿಂದ 35 ° C ವರೆಗೆ), ಹೆಚ್ಚಿನ ಆರ್ದ್ರತೆ ಮತ್ತು ಮಣ್ಣಿನ ತೇವಾಂಶ ಮತ್ತು ಕ್ಷಾರೀಯ ಮಣ್ಣಿನ pH ರೋಗ ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ದೀರ್ಘಕಾಲದವರೆಗೆ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳುವ ಭಾರೀ ಮಣ್ಣು ವಿಶೇಷವಾಗಿ ರೋಗಕ್ಕೆ ಒಳಗಾಗುತ್ತದೆ. ರಾಲ್ಸ್ಟೊನಿಯಾ ಸೊಲ್ಯಾನಕೇರಿಯಮ್ ನ ಮುಖ್ಯ ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ಟೊಮೆಟೊ, ತಂಬಾಕು, ಬಾಳೆ ಮತ್ತು ಬಾಳೆಹಣ್ಣುಗಳು.


ಮುಂಜಾಗ್ರತಾ ಕ್ರಮಗಳು

  • ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ರೋಗಕಾರಕ-ಮುಕ್ತವಾದ ಮಣ್ಣು, ನೀರಾವರಿ ನೀರು, ಬೀಜಗಳು ಮತ್ತು ಕಸಿಗಳನ್ನೇ ಬಳಸುವುದನ್ನು ಮರೆಯದಿರಿ.
  • ಸಲಹೆ ಮಾಡಿದ ನೆಡುವ ಜಾಗವನ್ನೇ ಬಳಸಿ.
  • ಗದ್ದೆಗೆ ಉತ್ತಮ ಒಳಚರಂಡಿ ಒದಗಿಸಿ.
  • 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಸರದಿ ಬೆಳೆ ಮಾಡಿ.
  • ಸ್ವಲ್ಪ ಆಮ್ಲೀಯ ಮಣ್ಣಿನ- pH 6,0-6,5 ನಷ್ಟು ಇರುವಂತೆ ಖಚಿತಪಡಿಸಿಕೊಳ್ಳಿ.
  • ಉತ್ತಮ ಪೋಷಕಾಂಶ ಪೂರೈಕೆ ಖಚಿತಪಡಿಸಿಕೊಳ್ಳಿ.
  • ರೋಗ ಹರಡುವುದನ್ನು ತಪ್ಪಿಸಲು ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ಕಲುಷಿತಗೊಂಡ ಮಣ್ಣಿನಿಂದ ಕಲುಷಿತವಾಗಿಲ್ಲದ ಮಣ್ಣಿಗೆ ಉಪಕರಣಗಳನ್ನು ವರ್ಗಾವಣೆ ಮಾಡುವುದನ್ನು ತಪ್ಪಿಸಿ.
  • ಮುಂದಿನ ಗದ್ದೆಯಲ್ಲಿ ಕೆಲಸ ಮಾಡುವ ಮೊದಲು ಬ್ಲೀಚ್ ನಿಂದ ಉಪಕರಣಗಳನ್ನು ಸೋಂಕು ಮುಕ್ತಗೊಳಿಸಿ.
  • ಎಲ್ಲಾ ಸೋಂಕಿತ ಸಸ್ಯಗಳನ್ನು ಮತ್ತು ಉಳಿಕೆಗಳನ್ನು ಬೆಂಕಿ ಹಾಕಿ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ