ಕಬ್ಬು

ಕಬ್ಬಿನ ರಾಟೂನ್ ಸ್ಟಂಟಿಂಗ್ ರೋಗ

Leifsonia xyli

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಕೂಳೆ ಕಬ್ಬಿನ ಕುಂಠಿತಗೊಂಡ ಬೆಳವಣಿಗೆ.
  • ಗಿಡ್ಡದಾದ ಒಳಗೆಣ್ಣುಗಳ ಜೊತೆ ತೆಳು ಕಾಂಡಗಳು, ತಿಳಿ ಹಳದಿ ಎಲೆಗಳು.
  • ಆಂತರಿಕ ಕುಂದುವಿಕೆ ಅಥವಾ ಕಾಂಡದ ಕೆಂಪು ನೆಕ್ರೋಸಿಸ್ .

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಹೆಚ್ಚಾಗಿ ಕೂಳೆ ಕಬ್ಬಿನ ಬೆಳೆಗಳಲ್ಲಿ ಕಂಡುಬರುತ್ತದೆ. ಮೊದಲಿಗೆ, ಕುಂಠಿತ ಬೆಳವಣಿಗೆ ಬಿಟ್ಟು ಸ್ಪಷ್ಟವಾಗಿ ಗೋಚರಿಸುವ ರೋಗನಿರ್ಣಯದ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಗೆಣ್ಣಿನ ಪ್ರದೇಶದಲ್ಲಿನ ಆಂತರಿಕ ಮೃದು ಅಂಗಾಂಶದಲ್ಲಿ ಪಿನ್ ಹೆಡ್ಗಳನ್ನು ಹೋಲುವ ಬ್ಯಾಕ್ಟೀರಿಯಾದ ಕಿತ್ತಳೆ ಬಣ್ಣದ ಚುಕ್ಕೆಗಳು ಇರುತ್ತವೆ. ನಂತರ, ಕುಂಠಿತಗೊಂಡ ಬೆಳವಣಿಗೆ, ಗಿಡ್ಡದಾದ ಒಳಗೆಣ್ಣುಗಳ ಜೊತೆ ತೆಳು ಕಾಂಡಗಳು, ತಿಳಿ ಹಳದಿ ಎಲೆಗಳು ಮತ್ತು ಕಾಂಡದ ತುದಿಯು ತ್ವರಿತವಾಗಿ ಕಿರಿದಾಗುತ್ತಾ ಮೇಲಕ್ಕೇರುವಂತಹ ಗುಣಲಕ್ಷಣಗಳನ್ನು ಈ ರೋಗವು ಹೊಂದಿದೆ. ಹವಾಮಾನ ಮತ್ತು ತಳಿಯನ್ನು ಅವಲಂಬಿಸಿ ಗೆಣ್ಣು ಹಳದಿ ಬಣ್ಣದಿಂದ ಕೆಂಪು-ಕಂದು ಬಣ್ಣಕ್ಕೆ ತಿರುಗಬಹುದು. ಬಣ್ಣದ ಕುಂದುವಿಕೆ ಒಳಗೆಣ್ಣುಗಳಿಗೆ ವಿಸ್ತರಿಸುವುದಿಲ್ಲ. ಕೆಲವು ಹೆಚ್ಚಾಗಿ ರೋಗಕ್ಕೆ ಒಳಗಾಗಬಹುದಾದಂತಹ ತಳಿಗಳು ತೇವಾಂಶದ ಒತ್ತಡದ ಅಡಿಯಲ್ಲಿ ಸೊರಗುವುದನ್ನು ಮತ್ತು ತುದಿ ಹಾಗು ಅಂಚಿನಲ್ಲಿ ಎಲೆಗಳ ನೆಕ್ರೋಸಿಸ್ ಅನ್ನು ತೋರಿಸಬಹುದು. ಇಳುವರಿಯಲ್ಲಿನ ಇಳಿಕೆ ಮತ್ತೊಂದು ರೋಗಲಕ್ಷಣವಾಗಿದೆ.

Recommendations

ಜೈವಿಕ ನಿಯಂತ್ರಣ

ಸಂಸ್ಕರಣೆಯ ಮೊದಲು 1-5 ದಿನಗಳ ಮುಂಚೆ ಬಿತ್ತನೆಯ ಕಬ್ಬನ್ನು ಕತ್ತರಿಸಿ 10 ನಿಮಿಷಗಳ ಕಾಲ ಅದನ್ನು ಬಿಸಿ ನೀರಿನಲ್ಲಿ (50 ° ಸಿ ನಲ್ಲಿ) ಮೊದಲು-ಸಂಸ್ಕರಣೆ ಮಾಡಿ. ನಂತರದ ದಿನ 2-3 ಗಂಟೆಗಳ ಕಾಲ 50 ° ಸಿ ನಲ್ಲಿ ಬಿಸಿನೀರಿನಲ್ಲಿ ಅದನ್ನು ಸಂಸ್ಕರಿಸಿ. ಮೊಳಕೆಯೊಡೆಯುವಿಕೆಯ ಪ್ರಮಾಣವು ಇದರ ಪರಿಣಾಮವಾಗಿ ಕಡಿಮೆಯಾಗಬಹುದು ಎಂಬುದನ್ನು ಗಮನಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಅಮೋನಿಯಂ ಸಲ್ಫೇಟ್ನ ಬಳಕೆಯು ಕಬ್ಬಿನ ಇಳುವರಿ ಮತ್ತು ಬಿಳಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಗಮನಾರ್ಹವಾಗಿ ರೋಗ ಕಡಿಮೆಯಾಗುವುದಕ್ಕೆ ಕಾರಣವಾಗಿದೆ. 30 ನಿಮಿಷಗಳವರೆಗೆ 52 ಸಿ ನಲ್ಲಿ ಪ್ರತಿಜೀವಕ ಮತ್ತು ಬಿಸಿನೀರಿನ ಸಂಸ್ಕರಣೆಯ ಅಪ್ಲಿಕೇಶನ್ ಕೂಡಾ ರೋಗವನ್ನು ಭಾಗಶಃ ನಿಗ್ರಹಿಸುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ.

ಅದಕ್ಕೆ ಏನು ಕಾರಣ

ಬ್ಯಾಕ್ಟೀರಿಯಾವು ಸಸ್ಯಗಳ ಉಳಿಕೆಗಳಲ್ಲಿ ಅಥವಾ ಮಣ್ಣಿನಲ್ಲಿ ಹಲವಾರು ತಿಂಗಳು ಬದುಕುಳಿಯಬಹುದು ಮತ್ತು ಕೇವಲ ಗಾಯಗಳ ಮೂಲಕ ಸಸ್ಯಗಳನ್ನು ಪ್ರವೇಶಿಸುತ್ತದೆ. ಬ್ಯಾಕ್ಟೀರಿಯಾವು ಯಾಂತ್ರಿಕವಾಗಿ ಗಾಯದ ಮೂಲಕ ಸುಲಭವಾಗಿ ಹರಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗ ಹರಡುವುದನ್ನು ತಡೆಯಲು ಆರೋಗ್ಯಕರ ಕಬ್ಬಿನ ಸಸಿ ನೆಡಿ.
  • ಸಸ್ಯಗಳಿಗೆ ಹಾನಿಯನ್ನುಂಟು ಮಾಡದಂತೆ ಅವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.
  • ಕೊಯ್ಲಿನ ನಂತರ ಗದ್ದೆಯಿಂದ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ