ಇತರೆ

ಹ್ಯಾಲೊ ಬ್ಲೈಟ್

Pseudomonas savastanoi pv. phaseolicola

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಸಣ್ಣ, ಅನಿಯಮಿತ ನೀರಿನಲ್ಲಿ-ನೆನೆಸಿದಂತಹ ಕಲೆಗಳು ಮೊದಲು ಎಲೆಗಳಲ್ಲಿ ಕಾಣಿಸುತ್ತವೆ.
  • ಈ ಕಲೆಗಳನ್ನು ವಿಶಾಲವಾದ ಕ್ಲೋರೋಟಿಕ್ ಹಳದಿ-ಹಸಿರು ಹೊರ ಆವೃತ್ತ ಸುತ್ತುವರೆದಿರುತ್ತದೆ.
  • ಬೆಚ್ಚಗಿನ, ಶುಷ್ಕ ಪರಿಸ್ಥಿತಿಗಳಲ್ಲಿ, ಈ ಕಲೆಗಳ ಮಧ್ಯಭಾಗದಲ್ಲಿರುವ ಅಂಗಾಂಶವು ಕಂದು ಬಣ್ಣಕ್ಕೆ ತಿರುಗಿ ಕೊಳೆಯುತ್ತದೆ.
  • ಬೀಜಕೋಶಗಳು ನೀರಿನಲ್ಲಿ-ನೆನೆಸಿದಂತಹ, ಗಾಢ ಹಸಿರು ಕಲೆಗಳು ಅಥವಾ ಪಟ್ಟಿಗಳು ಜೋಡಣೆಯ ಉದ್ದಕ್ಕೂ ಕಂಡುಬರುತ್ತವೆ.
  • ಹಲವಾರು ದಿನಗಳ ಬೆಳವಣಿಗೆಯ ನಂತರ ಬ್ಯಾಕ್ಟೀರಿಯಾದ ದ್ರವವು ಅವುಗಳಿಗೆ ಜಿಡ್ಡಿನಂತಹ ಲಕ್ಷಣ ನೀಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಸಣ್ಣ, ಅನಿಯಮಿತ ನೀರಿನಲ್ಲಿ ನೆನೆಸಿದಂತಹ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಅವು ಸಾಮಾನ್ಯವಾಗಿ ಕೆಳ ಮೇಲ್ಮೈಯಲ್ಲಿ ಕಂಡುಬರುತ್ತವೆ. ರೋಗ ಹೆಚ್ಚಿದಂತೆ ಕಲೆಗಳು ಗಣನೀಯವಾಗಿ ಹೆಚ್ಚುವುದಿಲ್ಲ. ಆದರೆ ಎಲೆಯ ಮೇಲಿನ ಭಾಗದಲ್ಲಿ ಅವು ಬೆಳೆಯಲು ಪ್ರಾರಂಭಿಸುತ್ತವೆ. ವಿಶಾಲವಾದ, ಕ್ಲೋರೋಟಿಕ್, ಹಳದಿ-ಹಸಿರು ಹೊರ ವರ್ತುಲ ಈ ಕಲೆಗಳನ್ನು ಸುತ್ತುವರೆಯುತ್ತದೆ. ಬೆಚ್ಚಗಿನ, ಶುಷ್ಕ ಪರಿಸ್ಥಿತಿಗಳಲ್ಲಿ, ಕಲೆಗಳ ಮಧ್ಯಭಾಗದಲ್ಲಿರುವ ಅಂಗಾಂಶವು ಕಪ್ಪಾಗಿ, ಕೊಳೆಯುತ್ತವೆ. ಹೊರವರ್ತುಲ ಕಡಿಮೆ ಗೋಚರವಾಗಲು ಆರಂಭಿಸುತ್ತದೆ. ಆರಂಭಿಕ ಹಂತಗಳಲ್ಲಿ ಸೋಂಕಿತಗೊಂಡ ಸಸ್ಯಗಳ ಎಲೆಗಳು ಬಾಗುತ್ತವೆ ಮತ್ತು ಹಸಿರುಬಣ್ಣ ಕಳೆದುಕೊಳ್ಳುತ್ತವೆ. ಆದರೆ ಅವು ವಿಶಿಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಬೀಜಕೋಶಗಳ ಮೇಲೆ ನೀರನಲ್ಲಿ ನೆನೆಸಿದಂತಹ, ಗಾಢವಾದ ಹಸಿರು ಕಲೆಗಳು ಅಥವಾ ಗೆರೆಗಳು ಜೋಡಣೆಯ ಉದ್ದಕ್ಕೂ ಕಂಡುಬರುತ್ತವೆ. ಆರ್ದ್ರ, ಮಳೆಯ ವಾತಾವರಣದ ನಂತರ ಅವು ಕಂದು ಬಣ್ಣಕ್ಕೆ ತಿರುಗುತ್ತವೆ. ಹಲವು ದಿನಗಳ ಬೆಳವಣಿಗೆಯ ಬ್ಯಾಕ್ಟೀರಿಯಾದ ದ್ರವವು ಎಲೆಗಳು ಮತ್ತು ಬೀಜಕೋಶಗಳಿಗೆ ಜಿಡ್ಡಿನ ರೂಪವನ್ನು ನೀಡುತ್ತದೆ.

Recommendations

ಜೈವಿಕ ನಿಯಂತ್ರಣ

ಲೂಪಿನಸ್ ಅಲ್ಬಸ್, ಎಲ್. ಲೂಟಿಯಸ್ ಅಥವಾ ಬೆಳ್ಳುಳ್ಳಿಯ ಸಾರ ಪಿ. ಸಾವಸ್ಟನೋಯಿ ಪಿವಿ. ಫಾಸಿಯೋಲಿಕೊಲಾ. ವಿರುದ್ಧ ಕೆಲವು ಬ್ಯಾಕ್ಟೀರಿಯನಾಶಕ ಪರಿಣಾಮವನ್ನು ತೋರಿಸುತ್ತವೆ. ಎರ್ವಿನಿಯ ಹರ್ಬಿಕೋಲಾ ವನ್ನು ಬೀಜಗಳಿಗೆ ಹಾಕುವ ಮೂಲಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರತಿಬಂಧಿಸಬಹುದು.

ರಾಸಾಯನಿಕ ನಿಯಂತ್ರಣ

ಸಾಧ್ಯವಾದರೆ ಜೈವಿಕ ಕ್ರಮಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೀಜಗಳ ಮಾಲಿನ್ಯವನ್ನು ಕಡಿಮೆ ಮಾಡಲು ಅಧಿಕೃತ ಪ್ರತಿಜೀವಕದಿಂದ ಚಿಕಿತ್ಸೆ ನೀಡಬಹುದು. ಕೊನೆಯಲ್ಲಿ ಸಸ್ಯಕ ಹಂತಗಳಲ್ಲಿ ತಾಮ್ರ ಆಧಾರಿತ ಸ್ಪ್ರೇಗಳನ್ನು ಬಳಸುವುದು ಸಹ ಸ್ವಲ್ಪ ಮಟ್ಟಿನ ನಿಯಂತ್ರಣವನ್ನು ನೀಡುತ್ತದೆ.

ಅದಕ್ಕೆ ಏನು ಕಾರಣ

ಸ್ಯೂಡೋಮೊನಸ್ ಸಿರಿಂಜೆ ಪಿವಿ. ಫಾಸೊಲಿಕಾ ಎನ್ನುವುದು ರೋಗಕಾರಕವಾಗಿದ್ದು, ಬೀಜಗಳು ಮತ್ತು ಮಣ್ಣಿನಲ್ಲಿ ಸಸ್ಯದ ಉಳಿಕೆಗಳ ಮೇಲೆ ಚಳಿಗಾಲವನ್ನು ಕಳೆಯುತ್ತವೆ. ಇದಕ್ಕೆ ಬದುಕಲು ಸಸ್ಯದ ಅಂಗಾಂಶದ ಅಗತ್ಯವಿದೆ. ಆರ್ದ್ರ ವಾತಾವರಣದ ಸಮಯದಲ್ಲಿ ನೀರು ಸಿಡಿದಾಗ ಮತ್ತು ಮಣ್ಣು ಹಾರಿದಾಗ ರೋಗಕಾರಕಗಳನ್ನು ಅದು ಎಲೆಗಳಿಗೆ ಕೊಂಡೊಯ್ಯುತ್ತದೆ. ಇದರಿಂದ ಪ್ರಾಥಮಿಕ ಸೋಂಕು ಸಂಭವಿಸುತ್ತದೆ. ಮಳೆ, ಆಲಿಕಲ್ಲು ಅಥವಾ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಸಸ್ಯಗಳಿಗೆ ಆಗುವ ಗಾಯಗಳು ಈ ವರ್ಗಾವಣೆಗೆ ನೆರವಾಗುತ್ತವೆ. ತಂಪು ಹವಾಮಾನ (ಸುಮಾರು 20 °C) ರೋಗಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಟಾಕ್ಸಿನ್ (ಫಾಸೊಲೊಟಾಕ್ಸಿನ್) ಅನ್ನು ಬಿಡುಗಡೆ ಮಾಡುತ್ತದೆ, ಇದು ಸಸ್ಯಗಳಲ್ಲಿ ವಿಶಿಷ್ಟ ಲಕ್ಷಣಗಳನ್ನು ಉಂಟುಮಾಡುತ್ತದೆ. 25 ಡಿಗ್ರಿ ಸೆಲ್ಸಿಯಸ್ ತಾಪಮಾನವು ಹೊರವರ್ತುಲದ ರಚನೆಯನ್ನು ನಿರ್ಬಂಧಿಸುತ್ತದೆ. ಸೋಂಕು ಸಸ್ಯದ ಉತ್ಪಾದಕತೆ, ಹಣ್ಣಿನ ಇಳುವರಿ ಮತ್ತು ಗುಣಮಟ್ಟವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗಕಾರಕ-ಮುಕ್ತ ಮೂಲದಿಂದ ಪಡೆದ ಬೀಜಗಳನ್ನು ಬಳಸಿ.
  • ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಸಸ್ಯಗಳ ಸಾಮಾನ್ಯ ಬಲಪಡಿಸುವಿಕೆಗಾಗಿ ಫೋರ್ಟಿಫೈಯರ್ ಗಳನ್ನು ಬಳಸಿ.
  • ಕೃಷಿ ಮಾಡುವ ಸಮಯದಲ್ಲಿ ಯಾಂತ್ರಿಕ ಹಾನಿ ತಪ್ಪಿಸಿ.
  • ಸಾಲು ಅಥವಾ ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಿ.
  • ಎಲೆಗಳು ತೇವವಾಗಿದ್ದಾಗ ಜಮೀನಿನಲ್ಲಿ ಕೆಲಸ ಮಾಡಬೇಡಿ.
  • ಕಳೆಗಳನ್ನು ಮತ್ತು ತಾವಾಗೇ ಬೆಳೆದ ಬೀನ್ಸ್ ಸಸ್ಯಗಳನ್ನು ನಿವಾರಿಸಿ.
  • ಕೊಳೆತಕ್ಕೆ ಅನುಕೂಲವಾಗುವಂತೆ ಸುಗ್ಗಿಯ ನಂತರ ಸಸ್ಯದ ಅವಶೇಷಗಳನ್ನು ಆಳವಾಗಿ ಹೂತು ಬಿಡಿ. ಕನಿಷ್ಠ ಎರಡು ವರ್ಷಗಳಿಗೊಮ್ಮೆ ರೋಗಕ್ಕೆ ಆಶ್ರಯ ನೀಡದ ಬೆಳೆಗಳೊಂದಿಗೆ ಸರದಿ ಬೆಳೆ ಯೋಜಿಸಿ.
  • ಸೋಂಕಿತ ಹುರುಳಿ ಹುಲ್ಲನ್ನು ಹಸಿಗೊಬ್ಬರವಾಗಿ ಬಳಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ