ಕಬ್ಬು

ಕಬ್ಬಿನ ಹಳದಿ ಎಲೆ ವೈರಸ್

Sugarcane Yellow Leaf Virus

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮಧ್ಯನಾಳ ಹಳದಿಯಾಗುತ್ತದೆ.
  • ಎಳೆಯ ಎಲೆಗಳು ಒಣಗುತ್ತವೆ.
  • ಕಬ್ಬಿನ ಬೆಳವಣಿಗೆ ಕುಂಠಿತವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಕಬ್ಬಿನ ಹಳದಿ ಎಲೆ ವೈರಸ್‌, ಸೋಂಕು ಕಬ್ಬಿನ ಕುಂಠಿತಗೊಂಡ ಬೆಳವಣಿಗೆ, ಎಲೆಗಳ ಬಣ್ಣಗೆಡುವಿಕೆ ಮತ್ತು ಸಸ್ಯದ ಗೊಂಚಲಿನಂತಹ ರೂಪ ಸೇರಿದಂತೆ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಎಲೆಯ ಅಡಿಭಾಗದಲ್ಲಿರುವ ಎಲೆಯ ಮಧ್ಯದ ನಾಳದ ಹಳದಿ ಬಣ್ಣವು ಮೇಲಿನ ವಿಸ್ತರಿಸುತ್ತಿರುವ ಕದಿರು ಎಲೆಯಿಂದ ಕೆಳಗೆ ಎಣಿಸುತ್ತಾ ಬಂದರೆ 3 ರಿಂದ 6 ಎಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಋತು ಮುಂದುವರೆದಂತೆ ಹಳದಿ ಬಣ್ಣವು ಎಲೆಯ ಮಧ್ಯನಾಳದಿಂದ ಎಲೆಯ ಗರಿಗೆ ವಿಸ್ತರಿಸುತ್ತದೆ. ಎಲೆಗಳ ಸಾಮಾನ್ಯ ಹಳದಿ ಬಣ್ಣ ದೂರದಿಂದಲೇ ಕಾಣುವ ತನಕವೂ ಇದು ಹರಡುತ್ತದೆ. ಬೆಳೆದ ಕಬ್ಬಿನಲ್ಲಿ ಇದು ಹೆಚ್ಚು ಗಮನಾರ್ಹವಾಗಿರುತ್ತದೆ. ತೀವ್ರವಾದ ಸೋಂಕಿನ ಸಂದರ್ಭದಲ್ಲಿ, ಎಲೆಗಳ ಜೊತೆಗೆ ಕದಿರು ಒಣಗುತ್ತದೆ ಮತ್ತು ಮೇಲ್ಭಾಗವು ಗೊಂಚಲಿನ ರೂಪವನ್ನು ಪಡೆಯುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವನ್ನು ಗಮನಿಸಬಹುದು. ಬೆಳೆದ ಕಬ್ಬಿನಲ್ಲಿ, ರೋಗವು ಹೆಚ್ಚು ಹರಡುತ್ತದೆ ಮತ್ತು ದೂರದಿಂದಲೇ ಗುರುತಿಸಬಹುದಾಗಿದೆ. ರೋಗಲಕ್ಷಣಗಳು ಸಸ್ಯದ ಒತ್ತಡ, ಕೀಟಗಳಿಂದಾದ ಹಾನಿ ಅಥವಾ ನೀರಿನ ಕೊರತೆ ಮುಂತಾದ ಇತರ ಅಂಶಗಳಿಗೂ ಸಂಬಂಧಿಸಿರಬಹುದು ಎಂಬುದನ್ನು ಗಮನಿಸಬೇಕು.

Recommendations

ಜೈವಿಕ ನಿಯಂತ್ರಣ

ವೈರಸ್ ಹರಡುವುದನ್ನು ನಿಯಂತ್ರಿಸಲು ಗಿಡಹೇನು ಸಂಖ್ಯೆಯ ನಿಯಂತ್ರಣ ಅತ್ಯಗತ್ಯ. ಗಿಡಹೇನುಗಳಿಗಾಗಿ ಎಲೆಗಳ ಕೆಳಗಿನ ಭಾಗವನ್ನು ಪರಿಶೀಲಿಸಿ ಮತ್ತು ಕಂಡುಬಂದಲ್ಲಿ, ಕೀಟನಾಶಕ ಸೋಪ್, ಬೇವಿನ ಎಣ್ಣೆ ಅಥವಾ ಪೈರೆಥ್ರಾಯ್ಡ್ ಆಧಾರಿತ ಸಾವಯವ ಉತ್ಪನ್ನಗಳೊಂದಿಗೆ ತಕ್ಷಣ ಚಿಕಿತ್ಸೆ ನೀಡಿ. ಗಿಡಹೇನುಗಳನ್ನು ಆಹಾರವಾಗಿ ತಿನ್ನುವ ಪರಭಕ್ಷಕಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮಾಲಾಥಿಯಾನ್ @ 0.1% ಅಥವಾ ಡೈಮೆಕ್ರಾನ್ @ 0.2% ಅನ್ನು ಬಳಸುವ ಮೂಲಕ ಕೀಟಗಳ ವಾಹಕಗಳಿಂದ ದ್ವಿತೀಯಕ ಹರಡುವಿಕೆಯನ್ನು ನೀವು ತಡೆಯಬಹುದು. ಒಣ ಎಲೆಗಳನ್ನು ತೆಗೆದ ನಂತರ ಮಾಲಾಥಿಯಾನ್ @ 1.5 ಕೆಜಿ / ಹೆಕ್ಟೇರಿಗೆ ಎರಡು ಅನ್ವಯಿಕೆಗಳನ್ನು ತಿಂಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು. ಕಾರ್ಬೋಫುರಾನ್ 2 ಕೆಜಿ / ಹೆಕ್ಟೇರ್ ಅನ್ನು ಮಣ್ಣಿಗೆ ಸೇರಿಸಬಹುದು.

ಅದಕ್ಕೆ ಏನು ಕಾರಣ

ಕಬ್ಬಿನ ಹಳದಿ ಎಲೆ ವೈರಸ್‌ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ದ್ವಿತೀಯಕವಾಗಿ ಗಿಡಹೇನುಗಳು (ಮೆಲನಾಫಿಸ್ ಸ್ಯಾಚರಿ ಮತ್ತು ರೋಪಲೋಸಿಫಮ್ ಮೈಡಿಸ್) ಅಥವಾ ಕಬ್ಬಿನ ಹಳದಿ ಎಲೆ ಫೈಟೊಪ್ಲಾಸ್ಮಾ (ಎಸ್‌ಸಿವೈಎಲ್‌ಪಿ)ದಿಂದ ಹರಡುತ್ತದೆ. ಇದು ಪ್ರಾಥಮಿಕವಾಗಿ ಸೋಂಕಿತ ಬೀಜದ ಕಬ್ಬಿನ ಮೂಲಕ ಹರಡುತ್ತದೆ ಮತ್ತು ಯಾಂತ್ರಿಕವಾಗಿ ಹರಡುವುದಿಲ್ಲ. ಇತರ ಬೆಳೆಗಳಾದ ಗೋಧಿ, ಬಾರ್ಲಿ, ಹುಲ್ಲುಜೋಳ ಮತ್ತು ಓಟ್ಸ್ ಸಹ ರೋಗಕ್ಕೆ ತುತ್ತಾಗುತ್ತವೆ. ಆದರೆ ಕಬ್ಬನ್ನು ಹತ್ತಿರದಲ್ಲಿಯೇ ಬೆಳೆಸಿದಾಗ ಮಾತ್ರ ಅವುಗಳು ತೊಂದರೆಗೆ ಒಳಗಾಗುತ್ತವೆ. ಸುಗ್ಗಿಯ ಅಂತ್ಯದವರೆಗೂ ಶುಷ್ಕ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆದ ಕಬ್ಬಿನಲ್ಲಿ ಈ ರೋಗವು ಹೆಚ್ಚು ಗಮನಾರ್ಹವಾಗಿ ಕಂಡುಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗ ಮುಕ್ತ ಬೀಜ ಸಾಮಗ್ರಿಗಳು ಮತ್ತು ನಿರೋಧಕ ಪ್ರಭೇದಗಳನ್ನು ಮಾತ್ರ ಬಳಸಿ.
  • ನಿಮ್ಮ ಬೀಜಗಳನ್ನು ಮೊದಲು ನರ್ಸರಿಯಲ್ಲಿ ನೆಡುವುದರ ಮೂಲಕ ಮತ್ತು ನಂತರ ಅವುಗಳನ್ನು ನಿಮ್ಮ ಹೊಲದಲ್ಲಿ ನಾಟಿ ಮಾಡುವುದು ರೋಗವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಗಿಡಹೇನು ವಾಹಕಗಳ ನಿಯಂತ್ರಣಕ್ಕಾಗಿ ಹಳದಿ ಜಿಗುಟಾದ ಬಲೆಗಳನ್ನು ಬಳಸಿ.
  • ಬೆಳೆದ ಎಲೆಗಳನ್ನು ನಿಯಮಿತವಾಗಿ ತೆಗೆದುಹಾಕಿ, ಏಕೆಂದರೆ ಗಿಡಹೇನುಗಳು ಹೆಚ್ಚಾಗಿ ಅಲ್ಲೇ ಬದುಕಲು ಬಯಸುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ