ಮರಗೆಣಸು

ಮರಗೆಣಸಿನ ಕಂದು ಗೆರೆ ರೋಗ

CBSV

ವೈರಸ್

5 mins to read

ಸಂಕ್ಷಿಪ್ತವಾಗಿ

  • ವಿಶಿಷ್ಟವಾದ ಹಳದಿ ಅಥವಾ ನೆಕ್ರೋಟಿಕ್ ನಾಳಗಳ ಪಟ್ಟಿ, ನಂತರ ಇದು ದೊಡ್ಡ ತೇಪೆಗಳನ್ನು ರೂಪಿಸುತ್ತದೆ.
  • ಗೆಡ್ಡೆಗಳ ಒಳಗೆ ಗಾಢ ಕಂದು ಕಲೆಗಳು ಬೆಳೆಯುತ್ತವೆ.
  • ಕಾಯಿಲೆಯ ಆರಂಭಿಕ ಹಂತದಲ್ಲಿ ಕೆಲವೊಮ್ಮೆ ಎಳೆಯ ಕಾಂಡಗಳ ಮೇಲೆ ಕಂದು ಗಾಯಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ರೋಗದ ಲಕ್ಷಣಗಳು ಮರಗೆಣಸಿನ ಪ್ರಭೇದ ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿದೆ. ಇದು ರೋಗನಿರ್ಣಯವನ್ನು ಕಷ್ಟಕರವಾಗಿಸುತ್ತದೆ. ಆರಂಭಿಕ ರೋಗಲಕ್ಷಣಗಳೆಂದರೆ ಕಂದು ಗಾಯಗಳು ಅಥವಾ ಗೆರೆಗಳು. ಕೆಲವೊಮ್ಮೆ ಎಳೆಯ ಹಸಿರು ಕಾಂಡಗಳ ಮೇಲೆ ಕಾಣಿಸಿಕೊಳ್ಳಬಹುದು. ಆದಾಗ್ಯೂ, ಹೆಚ್ಚಾಗಿ ಕಾಣುವ, ಮತ್ತು ಹೆಚ್ಚು ಎದ್ದುಕಾಣುವ ವಿಶಿಷ್ಟ ರೋಗ ಲಕ್ಷಣವೆಂದರೆ, ಎಲೆಯ ಮೇಲ್ಮೈ ನಲ್ಲಿ ಹಳದಿ ಅಥವಾ ನೆಕ್ರೋಟಿಕ್ ನಾಳಗಳು. ಕ್ಲೋರೋಸಿಸ್ ನಂತರ ಬೆಳೆದ ದೊಡ್ಡದಾದ, ಹಳದಿ ಮಚ್ಚೆಗಳನ್ನು ರೂಪಿಸಬಹುದು. ನಂತರದ ಹಂತದಲ್ಲಿ, ಇಡೀ ಎಲೆಯು ಕ್ಲೋರೋಟಿಕ್ ಆಗಬಹುದು ಮತ್ತು ಕೊಳೆಯುವಿಕೆ ಉಂಟಾಗುತ್ತದೆ. ಸಾಮಾನ್ಯವಾಗಿ, ಬೆಳೆದ ಅಥವಾ ಬಹುತೇಕ ಬೆಳೆದ ಎಲೆಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಬೆಳೆಯುತ್ತಿರುವ ಬಲಿಯದ ಎಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಬೇರಿನ ಗಾತ್ರದಲ್ಲಿ ಸಾಮಾನ್ಯವಾಗಿ ಇಳಿಕೆ ಕಂಡುಬರುತ್ತದೆ ಮತ್ತು ಗೆಡ್ಡೆಗಳ ಒಳಗೆ ಗಾಢ ಕಂದು ನೆಕ್ರೋಟಿಕ್ ಪ್ರದೇಶಗಳು ಬೆಳೆಯುತ್ತವೆ. ಬೇರುಗಳಲ್ಲಿನ ಗಾಯಗಳು ಕಟಾವಿನ ನಂತರದಲ್ಲಿ ಬೆಳೆ ಹಾಳಾಗಲು ಕಾರಣವಾಗಬಹುದು. ಗೆಡ್ಡೆ ರೋಗದ ಲಕ್ಷಣಗಳಿಲ್ಲದೆ ಎಲೆ ಮತ್ತು/ಅಥವಾ ಕಾಂಡದ ಲಕ್ಷಣಗಳು ಕೂಡ ಕಂಡುಬರಬಹುದು.

Recommendations

ಜೈವಿಕ ನಿಯಂತ್ರಣ

ಒಮ್ಮೆ ಸಸ್ಯಗಳಿಗೆ ಸೋಂಕು ತಗುಲಿದಲ್ಲಿ ವೈರಸ್‌ನ್ನು ನಿಯಂತ್ರಿಸಲು ನೇರ ಜೈವಿಕ ನಿಯಂತ್ರಣ ಇರುವುದಿಲ್ಲ. ಸಿಬಿಎಸ್‌ವಿ ಹರಡುವ ಗಿಡಹೇನುಗಳು, ಹುಳಗಳು ಮತ್ತು ಬಿಳಿ ನೊಣಗಳು ಸೇರಿದಂತೆ ಎಲ್ಲಾ ತಿಳಿದಿರುವ ವಾಹಕಗಳಿಗೆ ಇರುವ ನೈಸರ್ಗಿಕ ಶತ್ರುಗಳಿಗೆ ಹಾನಿಕಾರಕವಾದ ಕೀಟನಾಶಕಗಳ ಅತಿಯಾದ ಬಳಕೆಯನ್ನು ತಡೆಯುವುದು ರೋಗದ ಹರಡುವಿಕೆಯನ್ನು ಕಡಿಮೆ ಮಾಡುವ ಒಂದು ಮಾರ್ಗವಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವೈರಸ್ ರೋಗಗಳಿಗೆ ರಾಸಾಯನಿಕಗಳ ಬಳಕೆಗಳೊಂದಿಗೆ ಚಿಕಿತ್ಸೆ ನೀಡಲಾಗುವುದಿಲ್ಲ. ಆದಾಗ್ಯೂ, ಬಿಳಿ ನೊಣಗಳು, ಹುಳಗಳು ಮತ್ತು ಗಿಡಹೇನುಗಳಂತಹ ವಾಹಕಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗದ ಸಂಭವವನ್ನು ಕಡಿಮೆ ಮಾಡಲು ಕೀಟನಾಶಕಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಕಸ್ಸಾವ ಬ್ರೌನ್ ಸ್ಟ್ರೀಕ್ ವೈರಸ್‌ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮರಗೆಣಸನ್ನು ಮತ್ತು ರಬ್ಬರ್ ಅನ್ನು ಉತ್ಪಾದಿಸುವ ಸಂಬಂಧಿತ ಸಸ್ಯಗಳಿಗೆ(ಸಿಯಾರಾ ರಬ್ಬರ್ ಮರ) ಮಾತ್ರ ಸೋಂಕು ತರುತ್ತದೆ ಎಂದು ತಿಳಿದಿದೆ. ಸಿಬಿಎಸ್‌ವಿ ಯನ್ನು ಹುಳಗಳು ಮತ್ತು ಗಿಡಹೇನುಗಳು, ಹಾಗೆಯೇ ಬಿಳಿ ನೊಣ ಬೆಮಿಸಿಯಾ ತಬಾಸಿ ಹರಡಬಹುದು. ಆದಾಗ್ಯೂ, ರೋಗವನ್ನು ಹರಡುವ ಪ್ರಮುಖ ವಿಧಾನವೆಂದರೆ ಸೋಂಕಿತ ಕಟ್ಟಿಂಗ್ ಅನ್ನು ಮಾನವವರು ಸಾಗಿಸುವ ಮೂಲಕ ಮತ್ತು ಹೊಲದ ನೈರ್ಮಲ್ಯದ ಕೊರತೆ. ಉದಾಹರಣೆಗೆ ಸೋಂಕಿತ ಕೃಷಿ ಉಪಕರಣಗಳ ಬಳಕೆಯಿಂದ. ಸೋಂಕಿನ ಭಾಗಗಳು ಮತ್ತು ಪರಿಸರದ ಪರಿಸ್ಥಿತಿಗಳನ್ನು ಅವಲಂಬಿಸಿ ಮರಗೆಣಸಿನ ಪ್ರಭೇದಗಳಲ್ಲಿ 18-70% ವರೆಗಿನ ಇಳುವರಿ ನಷ್ಟದೊಂದಿಗೆ ಅವುಗಳ ಸೂಕ್ಷ್ಮತೆ ಮತ್ತು ಸೋಂಕಿಗೆ ಅದರ ಪ್ರತಿಕ್ರಿಯೆ ಬಹಳ ಭಿನ್ನವಾಗಿರುತ್ತವೆ. ಸೋಂಕಿತ ಕತ್ತರಿಸಿದ ಭಾಗವನ್ನು ಬಾಧಿತವಲ್ಲದ ದೇಶದಿಂದ ಬಾಧಿತ ದೇಶಗಳಿಗೆ ನಿರ್ಬಂಧಿಸಲು ಸಿಬಿಎಸ್‌ಡಿ ಇನ್ನೂ ವರದಿಯಾಗಿಲ್ಲದ ಪ್ರದೇಶಗಳಲ್ಲಿ ಕ್ಯಾರೆಂಟೈನ್ ಕ್ರಮಗಳು ಅಗತ್ಯವಿದೆ.


ಮುಂಜಾಗ್ರತಾ ಕ್ರಮಗಳು

  • ದೃಢೀಕೃತ ಮೂಲಗಳಿಂದ ವೈರಸ್ ರಹಿತ ನೆಡು ವಸ್ತುಗಳನ್ನು ಬಳಸಿ.
  • ಮರಗೆಣಸಿನ ಕಂದು ಗೆರೆ ರೋಗಕ್ಕೆ ನಿರೋಧಕವಾದ ಅಥವಾ ಸಹಿಷ್ಣು ಎಂದು ಸಾಬೀತಾಗಿರುವ ಪ್ರಭೇದಗಳನ್ನು ಬೆಳೆಯಿರಿ.
  • ಮರಗೆಣಸಿನ ಬೆಳವಣಿಗೆಯ ಮೊದಲ 3 ತಿಂಗಳುಗಳವರೆಗೆ ಜಮೀನನನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಿ ಮತ್ತು ರೋಗಪೀಡಿತ ಅಥವಾ ವಿರೂಪಗೊಂಡ ಸಸ್ಯಗಳನ್ನು ತೆಗೆದುಹಾಕಿ.
  • ರೋಗಗ್ರಸ್ತ ಸಸ್ಯಗಳನ್ನು ಸುಡುವ ಮೂಲಕ ಅಥವಾ ಆಳವಾಗಿ ಹೂಳುವ ಮೂಲಕ ತಕ್ಷಣವೇ ನಾಶಮಾಡಿ.
  • ಮರಗೆಣಸಿನ ಕಂದು ಗೆರೆ ರೋಗವನ್ನು ಹರಡುವ ಕೀಟಗಳ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತಪ್ಪಿಸಲು ಹೊಲಗಳನ್ನು ಕಳೆರಹಿತವಾಗಿರಿಸಿ.
  • ವಿವಿಧ ಹೊಲಗಳ ನಡುವೆ ಕೆಲಸ ಮಾಡುವಾಗ ಕೃಷಿ ಉಪಕರಣಗಳನ್ನು ಸೋಂಕುರಹಿತಗೊಳಿಸಿ.
  • ಕತ್ತರಿಸಿದ ಭಾಗಗಳನ್ನು ಹೊಸ ಜಾಗ ಅಥವಾ ಪ್ರದೇಶಗಳಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ