ಕಬ್ಬು

ಕಬ್ಬಿನ ಕಿತ್ತಳೆ ತುಕ್ಕು

Puccinia kuehnii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಸ್ಯದ ಮೇಲೆ ಕಿತ್ತಳೆಯಿಂದ, ಕಿತ್ತಳೆ-ಕಂದು ಬಣ್ಣದ ಗಾಯಗಳು.
  • ಎಲೆಗಳ ಕೆಳಭಾಗದಲ್ಲಿ ಬೀಜಕಗಳು.
  • ಎಲೆಗಳ ಕವಚಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಎಲೆಯ ಮೇಲೆ ಸಣ್ಣ ಸತ್ತ ತಾಣಗಳಾಗಿ ಗಾಯಗಳು ಪ್ರಾರಂಭವಾಗುತ್ತವೆ. ನಂತರ ಅವು 4 ಮಿ.ಮೀ ಉದ್ದ ಮತ್ತು 3 ಮಿ.ಮೀ ಅಗಲವಿರುವ ಕಿತ್ತಳೆ-ಕಂದು ಬಣ್ಣದ ಗಾಯಗಳಾಗಿ ಬೆಳೆಯುತ್ತವೆ. ಗಾಯಗಳು ಸಾಮಾನ್ಯವಾಗಿ ಎಲೆಯ ತಳದ ಕಡೆಗೆ ಕೇಂದ್ರೀಕೃತವಾಗಿರುತ್ತವೆ ಮತ್ತು ಗುಂಪುಗಳಲ್ಲಿರುತ್ತವೆ. ಕಿತ್ತಳೆ ಬೀಜಕಗಳು ಎಲೆಗಳ ಕೆಳಭಾಗದಲ್ಲಿ ಉತ್ಪಾದನೆಯಾಗುತ್ತವೆ. ತೀವ್ರವಾಗಿ ಬಾಧಿತ ಎಲೆಯ ಅಂಗಾಂಶಗಳು ಸಾಯುತ್ತವೆ. ಇದು ಬೆಳೆಯ ಮೇಲಾವರಣ ಕಡಿಮೆಯಾಗಲು ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಲೆಗಳ ಕವಚದಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಣಾಮವಾಗಿ ಇಡೀ ಎಲೆಗಳು ದೂರದಿಂದ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.

Recommendations

ಜೈವಿಕ ನಿಯಂತ್ರಣ

ಇಂದಿಗೂ, ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಗುರುತ್ವವನ್ನು ಕಡಿಮೆ ಮಾಡುವ ಯಾವುದೇ ಯಶಸ್ವಿ ವಿಧಾನದ ಬಗ್ಗೆ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳು ಇಳುವರಿ ನಷ್ಟವನ್ನು ಕಡಿಮೆ ಮಾಡುತ್ತವೆ. ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಪೈರಾಕ್ಲೋಸ್ಟ್ರೋಬಿನ್ ಮತ್ತು ಅಜಾಕ್ಸಿಸ್ಟ್ರೋಬಿನ್ ನಂತಹ ಸ್ಟ್ರೋಬಿಲುರಿನ್ ವರ್ಗದ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ. ಅಲ್ಲದೆ, ಟ್ರೈಜೋಲ್ ವರ್ಗದ ಶಿಲೀಂಧ್ರನಾಶಕಗಳಾದ ಮೆಟ್ಕೊನಜೋಲ್ ಮತ್ತು ಪ್ರೊಪಿಕೊನಜೋಲ್ ಅನ್ನು 3 ರಿಂದ 4 ವಾರಗಳ ಅಂತರದಲ್ಲಿ ಬಳಸಬಹುದು.

ಅದಕ್ಕೆ ಏನು ಕಾರಣ

ಪುಸ್ಸಿನಿಯಾ ಕುಹ್ನಿಯ ಶಿಲೀಂಧ್ರದಿಂದ ಈ ರೋಗ ಉಂಟಾಗುತ್ತದೆ. ಇದು ಬೀಜಕಗಳನ್ನು ಉತ್ಪಾದಿಸುವ, ತುಕ್ಕಿನಿಂದ ಹರಡುತ್ತದೆ. ಇದು ಸೂಕ್ಷ್ಮವಾಗಿದ್ದು, ಹಗುರವಾಗಿ,ಗಟ್ಟಿಯಾಗಿರುತ್ತದೆ. ಇದರಿಂದಾಗಿ ಗಾಳಿ ಮತ್ತು ನೀರಿನ ತುಂತುರುಗಳ ಮೂಲಕ ಶೀಘ್ರವಾಗಿ ಕಡಿಮೆ ಮತ್ತು ದೂರದ-ಹರಡುವಿಕೆ ಸುಲಭವಾಗುತ್ತದೆ. ಮಣ್ಣಿನಲ್ಲಿರುವ ಸಸ್ಯದ ಉಳಿಕೆಗಳಲ್ಲಿ ಬೀಜಕಗಳೂ ಬದುಕುಳಿಯುತ್ತವೆ. ಈ ರೋಗ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮತ್ತು ಶರತ್ಕಾಲದ ಆರಂಭದಲ್ಲಿ ಬೆಚ್ಚಗಿನ, ಆರ್ದ್ರ ಮತ್ತು ಹೆಚ್ಚು ತೇವದ ಪರಿಸರ ಪರಿಸ್ಥಿತಿಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚು ಬೆಳೆದ ಕಬ್ಬಿಗೆ ಸೋಕನ್ನು ತರುತ್ತದೆ (ಸಾಮಾನ್ಯವಾಗಿ 6 ತಿಂಗಳಿಗಿಂತ ಹೆಚ್ಚು ಹಳೆಯ). 30 ° C ಗಿಂತ ಹೆಚ್ಚಿನ ತಾಪಮಾನ ಮತ್ತು 70 ರಿಂದ 90% ನಡುವಿನ ತೇವಾಂಶದಲ್ಲಿ ಬೆಳವಣಿಗೆ ಮತ್ತು ಹರಡುವಿಕೆ ಸೀಮಿತವಾಗಿರುತ್ತದೆ. ಹೆಚ್ಚಿನ ಗಾಳಿಯ ವೇಗ ಮತ್ತು ನಿರಂತರ ಮೋಡವು ರೋಗವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ಹೊಲ ಅಥವಾ ಹಣ್ಣಿನ ತೋಟದ ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ.
  • ಉದಾಹರಣೆಗೆ ಸಸ್ಯ ಭಗ್ನಾವಶೇಷಗಳನ್ನು ತೆಗೆದುಹಾಕಿ.
  • ರೋಗದ ಚಿಹ್ನೆಗಳಿಗಾಗಿ ಹೊಲ ಅಥವಾ ತೋಟಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ