ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಹುಳಿ ಕೊಳೆತ

Geotrichum candidum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಮೃದುವಾದ, ನೀರಿನಿಂದ ತುಂಬಿದ, ಕಂದು ಕೊಳೆತ.
  • ವಿನೆಗರ್ ತರಹದ ವಾಸನೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಕೊಳೆಯಲು ಪ್ರಾರಂಭವಾಗುವ ಹಣ್ಣುಗಳ ಕಂದು ಬಣ್ಣ ಅಥವಾ ಕೆಲವೊಮ್ಮೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬಿಳಿ ತಳಿಯ ಹಣ್ಣುಗಳು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿದರೆ, ನೇರಳೆ ತಳಿಗಳ ಹಣ್ಣುಗಳು ನೇರಳೆ ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಹಣ್ಣಿನ ನೊಣಗಳು ಮತ್ತು ಹಣ್ಣಿನ ನೊಣಗಳ ಲಾರ್ವಾಗಳು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. ಹುಳಿ ಕೊಳೆತದ ಆರಂಭಿಕ ಲಕ್ಷಣಗಳು ಹಸಿರು ಮತ್ತು ನೀಲಿ ಮೋಲ್ಡ್ ಗಳಂತೆಯೇ ಇರುತ್ತವೆ. ಶಿಲೀಂಧ್ರವು ತೊಗಟೆ, ಹಣ್ಣಿನೊಳಗಿನ ತೊಳೆಯ ಪದರವನ್ನು ಮತ್ತು ತೊಳೆರಸದ ಕೋಶಕಗಳನ್ನು ಲೋಳೆಯ, ನೀರಿನಿಂದ ಕೂಡಿದ ರಾಶಿಯಂತಾಗಿ ಮಾರ್ಪಡಿಸಿ ಹಾಳುಮಾಡುತ್ತದೆ. ಹೆಚ್ಚಿನ ಸಾಪೇಕ್ಷ ಆರ್ದ್ರತೆಯಲ್ಲಿ, ಗಾಯಗಳು ಯೀಸ್ಟ್, ಮತ್ತು ಕೆಲವೊಮ್ಮೆ ಸುಕ್ಕುಗಟ್ಟಿದ ಬಿಳಿ ಅಥವಾ ಕೆನೆ ಬಣ್ಣದ ಮೈಸೀಲಿಯಂ ನಿಂದ ಮುಚ್ಚಲ್ಪಟ್ಟಿರಬಹುದು.

Recommendations

ಜೈವಿಕ ನಿಯಂತ್ರಣ

ಹುಳಿ ಕೊಳೆತದ ಬೆಳವಣಿಗೆಯನ್ನು ನಿಯಂತ್ರಿಸಲು ಪೆರಾಕ್ಸಿಡೇಸ್ (ಪಿಒಡಿ) ಮತ್ತು ಸೂಪರ್ಆಕ್ಸೈಡ್ ಡಿಮುಟೇಸ್ (ಎಸ್ಒಡಿ) ವಿರೋಧಿ ಯೀಸ್ಟ್ ಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಪೊಟ್ಯಾಸಿಯಮ್ ಮೆಟಾಬಿಸಲ್ಫೈಟ್‌ನ ದ್ರಾವಣಗಳಂತಹ ಸಾಮಾನ್ಯ ಆಂಟಿಮೈಕ್ರೊಬಿಯಲ್ ಅನ್ನು ಬಳಸಿ. ಡ್ರೊಸೊಫಿಲಿಯಾ ನೊಣಗಳ ವಿರುದ್ಧ ಕೀಟನಾಶಕ ಚಿಕಿತ್ಸೆಗಳೊಂದಿಗೆ ಸಂಯೋಜಿಸಿದಾಗ ಆಂಟಿಮೈಕ್ರೊಬಿಯಲ್ ಚಿಕಿತ್ಸೆಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಕೊಯ್ಲು ಮಾಡಿದ 24 ಗಂಟೆಗಳ ಒಳಗೆ ಗ್ವಾಜಟೈನ್ ಶಿಲೀಂಧ್ರನಾಶಕವನ್ನು ಹಚ್ಚಿ.

ಅದಕ್ಕೆ ಏನು ಕಾರಣ

ನೈಸರ್ಗಿಕವಾಗಿ ಸಂಭವಿಸುವ ವಿವಿಧ ಶಿಲೀಂಧ್ರಗಳಿಂದ ಹಾನಿ ಉಂಟಾಗುತ್ತದೆ. ರೋಗಕಾರಕಗಳು ಸಾಮಾನ್ಯವಾಗಿ ಹಣ್ಣುಗಳಿಗೆ ಗಾಯವಾಗಿರುವ ಸ್ಥಳದಿಂದ ಒಳಪ್ರವೇಶಿಸುತ್ತವೆ. ಇದು ಯಾಂತ್ರಿಕ ಬೆಳವಣಿಗೆ ಅಥವಾ ಬಿರುಕುಗಳು, ಕೀಟಗಳು ಅಥವಾ ಪಕ್ಷಿಗಳು ತಿಂದಿರುವುದರಿಂದ ಉಂಟಾಗಿರುವ ಗಾಯಗಳು ಅಥವಾ ಪೌಡ್ರೀ ಶಿಲೀಂಧ್ರದ ಸೋಂಕಿನ ಪರಿಣಾಮವಾಗಿ ಉಂಟಾದ ಗಾಯಗಳಾಗಿರಬಹುದು. ಒತ್ತಾದ ಹಣ್ಣಿನ ಗೊಂಚಲುಗಳು ಮತ್ತು ತೆಳುವಾದ ಸಿಪ್ಪೆ ಹೆಚ್ಚು ಧಾಳಿಗೆ ಒಳಗಾಗುವ ತಳಿಗಳಿಗೆ ಕಾರಣವಾಗುತ್ತದೆ. ಬೆಚ್ಚಗಿನ ಆರ್ದ್ರ ಪರಿಸ್ಥಿತಿಗಳು ಮತ್ತು ಹಣ್ಣುಗಳಲ್ಲಿ ಸಕ್ಕರೆಯ ಶೇಖರಣೆಯಂತಹ ಅನುಕೂಲಕರ ಪರಿಸ್ಥಿತಿಗಳು ನೂರಾರು ಮೊಟ್ಟೆಗಳನ್ನು ಇಡಲು ಹಣ್ಣಿನ ನೊಣವನ್ನು ಪ್ರೋತ್ಸಾಹಿಸುತ್ತವೆ. ರೋಗಕಾರಕವು ಸಾಮಾನ್ಯವಾಗಿ ಮಣ್ಣಿನಲ್ಲಿ ಕಂಡುಬರುತ್ತದೆ ಮತ್ತು ಗಾಳಿಯಿಂದ ಹರಡುತ್ತದೆ ಅಥವಾ ಮರದ ಮೇಲಾವರಣದೊಳಗಿನ ಹಣ್ಣಿನ ಮೇಲ್ಮೈಗಳಿಗೆ ತುಂತುರಿನ ಮೂಲಕ ಹರಡುತ್ತದೆ. ಹಣ್ಣುಗಳು ಬೆಳೆದಂತೆ, ಅವು ಹುಳಿ ಕೊಳೆತ ಸೋಂಕಿಗೆ ಹೆಚ್ಚು ಒಳಗಾಗುತ್ತವೆ. ರೋಗದ ಬೆಳವಣಿಗೆಯು ಹೆಚ್ಚಿನ ಆರ್ದ್ರತೆ ಮತ್ತು 10 °C ಗಿಂತ ಹೆಚ್ಚಿನ ತಾಪಮಾನವನ್ನು ಕೇಳುತ್ತದೆ. ಅನುಕೂಲಕರ ತಾಪಮಾನ 25-30 ° C ಆಗಿರುತ್ತದೆ. ಹುಳಿ ಕೊಳೆತದ ಮುಂದುವರಿದ ಹಂತಗಳಲ್ಲಿ ಹುಳಿ ವಾಸನೆಯು ನೊಣಗಳನ್ನು ಆಕರ್ಷಿಸುತ್ತದೆ (ಡ್ರೊಸೊಫಿಲಾ ಎಸ್ಪಿಪಿ.). ಇದು ಶಿಲೀಂಧ್ರವನ್ನು ಹರಡುತ್ತದೆ ಮತ್ತು ಇತರ ಗಾಯಗೊಂಡ ಹಣ್ಣುಗಳು ಸೋಂಕಿಗೆ ಒಳಗಾಗಲು ಕಾರಣವಾಗಬಹುದು. ಮಣ್ಣಿನಲ್ಲಿರುವ ಹುಳಿ ಕೊಳೆತ ಬೀಜಕಗಳು ಒದ್ದೆಯಾಗಿ ಅಲ್ಲೇ ಸುತ್ತುವ ನೀರಿನಲ್ಲಿ ಶೇಖರಗೊಳ್ಳಬಹುದು.


ಮುಂಜಾಗ್ರತಾ ಕ್ರಮಗಳು

  • ಬೆಳವಣಿಗೆಗೆ ಸಂಬಂಧಿಸಿದ ಕಾರಣಗಳಿಂದಾಗಿ ಹಣ್ಣಿಗೆ ಆಗುವ ಹಾನಿಯನ್ನು ಮೇಲಾವರಣ ನಿರ್ವಹಣೆ, ಹಣ್ಣಿನ ಸಂಖ್ಯೆ ಕಡಿಮೆ ಮಾಡುವುದು ಮತ್ತು ನೀರಾವರಿ ನಿರ್ವಹಣೆಯಿಂದ ತಡೆಯಬಹುದು.
  • ಹಾನಿಯನ್ನು ಕಡಿಮೆ ಮಾಡಲು ನಿಮ್ಮ ಸಸ್ಯಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ.
  • ಕಣಜಗಳನ್ನು ನಿಯಂತ್ರಿಸಲು ಬಲೆಗಳು ಮತ್ತು ಗೂಡು ತೆಗೆಯುವಿಕೆಯನ್ನು ಬಳಸಿ.
  • ಪಕ್ಷಿಗಳ ಆಕ್ರಮಣದಿಂದ ಉಂಟಾಗುವ ಹಾನಿಯನ್ನು ತಡೆಯಿರಿ.
  • ಮಳೆಗೆ ಮುಂಚಿತವಾಗಿ ಕೊಯ್ಲು ಮಾಡುವುದು, ಹುಳಿ ಕೊಳೆತದಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ