ಹತ್ತಿ

ಹತ್ತಿಯ ರಸ್ಟ್

Phakopsora gossypii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಳೆಯ ಎಲೆಗಳ ಮೇಲ್ಮೈ ಮೇಲೆ ಸಣ್ಣ, ಪ್ರಕಾಶಮಾನವಾದ ಅಥವಾ ಕಿತ್ತಳೆ ಬಣ್ಣದ ಗಂಟುಗಳು.
  • ಕೆಳಭಾಗದಲ್ಲಿ ಸ್ವಲ್ಪ ದೊಡ್ಡದಾಗಿ ಮತ್ತು ಒರಟಾಗಿ ಕಾಣುವ ಆದರೆ ಅದೇ ಬಣ್ಣದ ಗಂಟುಗಳು.
  • ಋತುವಿನ ನಂತರದ ಭಾಗದಲ್ಲಿ ಅವು ಪತ್ರಕಗಳ ಮೇಲೆ ಮತ್ತು ಬೀಜಕೋಶಗಳ ಮೇಲೆ ಕಾಣಿಸಿಕೊಳ್ಳಬಹುದು.
  • ತೀವ್ರವಾದ ಸೋಂಕು ಎಲೆಗಳಚುವಿಕೆಯನ್ನು ಉಂಟುಮಾಡಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಉಷ್ಣವಲಯದ ರಸ್ಟ್ ನ ಮೊದಲ ರೋಗಲಕ್ಷಣಗಳು ಹಳೆಯ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಅವು ಹೆಚ್ಚಾಗಿ ಸಣ್ಣ, ಪ್ರಕಾಶಮಾನವಾದ ಹಳದಿ ಬಣ್ಣದಿಂದ ಕಿತ್ತಳೆ ಬಣ್ಣವಿರುವ ಗಾಯಗಳಂತೆ ಮೇಲಿನ ಎಲೆಗಳ ಮೇಲ್ಮೈ ಮೇಲೆ ಕಾಣುತ್ತವೆ. ಕೆಳಭಾಗದಲ್ಲಿ, ಅದೇ ಬಣ್ಣದ ಆದರೆ ಸ್ವಲ್ಪ ದೊಡ್ಡದಾಗಿ ಮತ್ತು ಒರಟಾಗಿ ಕಾಣುವ ಕಲೆಗಳು ಕಾಣುತ್ತವೆ. ರೋಗ ಮುಂದುವರೆದಂತೆ, ಅವು ದೊಡ್ಡದಾದ, ಉಬ್ಬಿದ, ಹಳದಿ ಪ್ರಭಾವಲಯದಿಂದ ಸುತ್ತುವರಿದ ಮಂಕು- ಕಂದು ಬಣ್ಣದ ಶಿಲೀಂಧ್ರದ ಗಂಟುಗಳಾಗಿ ಬದಲಾಗುತ್ತವೆ. ಅವು ಸಿಡಿದು ತೆರೆದುಕೊಂಡಂತೆ ಮತ್ತು ಅವುಗಳ ಬೀಜಕಣಗಳನ್ನು ಬಿಡುಗಡೆ ಮಾಡಿದಂತೆ ಸಾಮಾನ್ಯವಾಗಿ ಅವು ಒಟ್ಟುಗೂಡುತ್ತವೆ ಮತ್ತು ಅನಿಯಮಿತವಾದ ಗಾಢ ಕಂದು ಬಣ್ಣದ ಚುಕ್ಕೆಗಳಾಗುತ್ತವೆ. ಕಾಂಡಗಳ ಮತ್ತು ತೊಟ್ಟುಗಳ ಮೇಲೆ ಈ ಗಂಟುಗಳು ಸಾಮಾನ್ಯವಾಗಿ ಉದ್ದವಾಗಿರುತ್ತವೆ ಮತ್ತು ಅಷ್ಟಾಗಿ ಉಬ್ಬಿರುವುದಿಲ್ಲ. ರೋಗ ಬೆಳೆದಂತೆ ಸಸ್ಯಗಳಲ್ಲಿ ಅಕಾಲಿಕವಾಗಿ ಎಲೆಗಳಚುವಿಕೆ ಉಂಟಾಗುತ್ತದೆ ಇದು ಕುಗ್ಗಿದ ಬೀಜಕೋಶಗಳ ಗಾತ್ರಕ್ಕೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕೋರಿಡಿಯ ಸಿಟ್ರಿಯೋಡೋರಿಯ 1%, ಸಿಂಬೋಪೋಗೊನ್ ನಾರ್ಡಸ್ 0,5% ಮತ್ತು ತೈಮಸ್ ವಲ್ಗರಿಸ್ 0,3 % ನ ಸಾರಭೂತ ತೈಲಗಳು ಇನ್ನಿತರ ರಸ್ಟ್ಗಳ ಮೇಲೆ ಅವುಗಳ ಪ್ರಮಾಣ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಬಳಸಲಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸರಿಯಾದ ಶಿಲೀಂಧ್ರ ನಾಶಕವನ್ನು ಆರಿಸುವುದು ಮತ್ತು ಅದನ್ನು ಸರಿಯಾದ ಸಮಯಕ್ಕೆ ಹಾಕುವುದು ಬಹು ಮುಖ್ಯವಾಗಿದೆ. ಹೆಕ್ಸಕೊನಝೋಲ್ ಮತ್ತು ಪ್ರಾಪಿಕೊನಝೋಲ್ (1-2 ಮಿಲೀ/ಲೀ ನೀರು) ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಿತ್ತನೆಯ 75 ದಿನಗಳ ನಂತರ 15 ದಿನಗಳ ಮಧ್ಯಂತರದಂತೆ 120 ದಿನಗಳವರೆಗೂ ಹಾಕುವುದು ಇಳುವರಿ ನಷ್ಟಗಳನ್ನು ಮಿತವಾಗಿಸುತ್ತದೆ. ಗ್ರಾಮ್ಮ ಹುಲ್ಲುಗಳಿಂದ ಬೀಜಕಣಗಳು ರಚನೆಯಾಗುವ ಮೊದಲೇ ಮಂಕೋಝೇಬ್ 0.25% ಅನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಹತ್ತಿಯ ರಸ್ಟ್ ಫಾಕೋಸ್ಪೋರ ಗಸ್ಸಿಪಿ ಶಿಲೀಂಧ್ರಗಳಿಂದ ಉಂಟಾಗುವ ಆಕ್ರಮಣಕಾರಿ ರೋಗವಾಗಿದೆ. ಇದು ಬೀಜ ಅಥವಾ ಮಣ್ಣಿನಿಂದ ಹುಟ್ಟಿದ್ದಲ್ಲ ಮತ್ತು ಈ ಕಾರಣದಿಂದಾಗಿ, ಬದುಕುಳಿಯಲು ಹಸಿರು ಸಜೀವ ಜೀವಕೋಶಗಳ ಅಗತ್ಯತೆ ಇದಕ್ಕಿದೆ. ಋತುವಿನಲ್ಲಿ, ಹತ್ತಿಯ ಗಂಟುಗಳಲ್ಲಿ ಉತ್ಪಾದನೆಯಾದ ಬೀಜಕಣಗಳು ಹೊಲಗಳ ಸುತ್ತಲೂ ಗ್ರಾಮ್ಮ ಹುಲ್ಲುಗಳನ್ನು ಸೋಂಕಿಗೆ ಒಳಪಡಿಸುತ್ತವೆ (ಬೊಟೆಲ ಜಾತಿ) ಮತ್ತು ಉದ್ದನೆಯ ಕಂದು ಬಣ್ಣದ ಅಥವಾ ಕಪ್ಪು ಬಣ್ಣದ ಚುಕ್ಕೆಗಳನ್ನು ಅವುಗಳ ಎಲೆಗಳ ಮೇಲೆ ಉಂಟುಮಾಡುತ್ತವೆ. ಮುಂದಿನ ಋತುವಿನ ಪ್ರಾರಂಭದಲ್ಲಿ, ಈ ಹುಲ್ಲುಗಳ ಮೇಲೆ ಉತ್ಪಾದಿಸಲ್ಪಟ್ಟ ಬೀಜಕಣಗಳೇ ಹತ್ತಿಯ ಗಿಡಗಳನ್ನು ಅವುಗಳ ಜೀವನ ಚಕ್ರ ಪೂರ್ಣಗೊಳಿಸಲು ಸೋಂಕಿಗೆ ಒಳಪಡಿಸುತ್ತವೆ. ಎಲೆಯ ಅಂಗಾಂಶದ ರಂಧ್ರಗಳ ಅಥವಾ ಗಾಯಗಳ ಮೂಲಕವಲ್ಲದೆ, ಬೀಜಕಣಗಳು ನೇರವಾಗಿ ಸಸ್ಯ ಕೋಶಗಳ ಒಳಗೆ ನುಗ್ಗುತ್ತವೆ. ಹೆಚ್ಚಿನ ಆರ್ದ್ರತೆ, ಎಲೆಯ ತೇವಾಂಶ ಮತ್ತು ಮಧ್ಯಮದಿಂದ ಬೆಚ್ಚಗಿನ ತಾಪಮಾನಗಳು ಈ ರೋಗಕ್ಕೆ ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಬೇಗನೆ ನೆಡಿ ಮತ್ತು ಸಾಧ್ಯವಾದರೆ ಬೇಗನೆ ಪರಿಪಕ್ವವಾಗುವ ತಳಿಯನ್ನು ಆರಿಸಿ.
  • ಪರ್ಯಾಯವಾಗಿ, ಶುಷ್ಕ ಅವಧಿಗಳಿಂದ ಲಾಭ ಪಡೆಯಲು ತಡವಾಗಿ ನೆಡಿ.
  • ಮೇಲಾವರಣದ ಒಣಗುವಿಕೆಯನ್ನು ತ್ವರಿತಗೊಳಿಸಲು ಸಾಲಿನ ಅಂತರವನ್ನು ಅಗಲವಾಗಿರಿಸಿ.
  • ನಿಮ್ಮ ಸಸ್ಯಗಳನ್ನು ನಿಯಮಿತವಾಗಿ ಪರಿವೀಕ್ಷಿಸಿ ಮತ್ತು ಪರ್ಯಾಯ ಹೋಸ್ಟ್ ಗಳನ್ನು ವಿಶೇಷವಾಗಿ ಗ್ರಾಮ್ಮ ಹುಲ್ಲುಗಳನ್ನು ಹೊರತೆಗೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ