ಮೆಕ್ಕೆ ಜೋಳ

ಮೆಕ್ಕೆ ಜೋಳದ ತಡ ಬಾಡುವಿಕೆ

Magnaporthiopsis maydis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಇದು ಸಾಮಾನ್ಯವಾಗಿ ಹೂಬಿಡುವ ಹಂತದಲ್ಲಿ ಅಥವಾ ನಂತರ ಸಂಭವಿಸುತ್ತದೆ.
  • ಸಸ್ಯವು ಕೆಳಗಿನಿಂದ ಬಾಡಲು ಪ್ರಾರಂಭಿಸುತ್ತದೆ.
  • ಎಲೆಗಳು ಮೊದಲು ಮಂದವಾದ ಹಸಿರು ಬಣ್ಣವನ್ನು ಹೊಂದಿರುತ್ತವೆ ಮತ್ತು ನಂತರ ಕಳೆಗುಂದುತ್ತವೆ.
  • ಕೆಳಭಾಗದ ಗೆಣ್ಣುಗಳ ನಡುವಣ ಪ್ರದೇಶಗಳು ಬಣ್ಣ ಕಳೆದುಕೊಳ್ಳುತ್ತವೆ.
  • ಕೆಂಪು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಮೃದುವಾಗುತ್ತವೆ.
  • ನಂತರ, ಅಂತಿಮವಾಗಿ ಟೊಳ್ಳಾಗುತ್ತವೆ ಮತ್ತು ಒಣಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಹೂಬಿಡುವ ಹಂತದ ಸಮಯದಲ್ಲಿ ಅಥವಾ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮತ್ತು ಮೆಕ್ಕೆ ಜೋಳದ ಪ್ರಭೇದ ಮತ್ತು ಹವಾಮಾನದ ಸ್ಥಿತಿಗಳನ್ನು ಅವಲಂಬಿಸಿ ತೀವ್ರತೆ ಬದಲಾಗುತ್ತದೆ. ಸಸ್ಯಗಳ ಕೆಳಗಿನ ಭಾಗದ ಎಲೆಗಳು ಬಾಡುತ್ತವೆ ಮತ್ತು ಮಂದ ಹಸಿರು ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ, ಅವು ಒಣಗುತ್ತವೆ ಮತ್ತು ಒಳಮುಖವಾಗಿ ಸುರುಳಿ ಸುತ್ತಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ ರೋಗಲಕ್ಷಣಗಳು ಮೇಲ್ಮುಖವಾಗಿ ಹರಡಲು ಪ್ರಾರಂಭಿಸುತ್ತವೆ. ಬಾಧಿತ ಸಸ್ಯಗಳ ತೆನೆಗಳು ಸರಿಯಾಗಿ ಬೆಳೆಯುವುದಿಲ್ಲ, ಹೊಟ್ಟುಗಳಲ್ಲಿ ಕಲೆಗಳಿರಬಹುದು ಮತ್ತು ಧಾನ್ಯಗಳ ಬೆಳವಣಿಗೆ ದುರ್ಬಲವಾಗಬಹುದು. ಕೆಲವು ಸಂದರ್ಭಗಳಲ್ಲಿ, ಹಳದಿ ಬಣ್ಣದಿಂದ ನೇರಳೆ ಅಥವಾ ಗಾಢವಾದ ಕಂದು ಬಣ್ಣದ ಪಟ್ಟೆಗಳನ್ನು ಕಾಂಡಗಳ ತಳದಲ್ಲಿ ಕಾಣಬಹುದಾಗಿದೆ. ನಾಳೀಯ ಅಂಗಾಂಶ ಮತ್ತು ಗೆಣ್ಣುಗಳ ನಡುವಣ ಪ್ರದೇಶ ಕೆಂಪು-ಕಂದು ಬಣ್ಣಕ್ಕೆ ತಿರುಗುತ್ತವೆ. ಇದು ಕಾಂಡದ ಅಡ್ಡ-ಸೀಳುವಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಿಮವಾಗಿ ಇವು ಒಣಗಿ, ಕುಗ್ಗಿ, ಟೊಳ್ಳಾಗುತ್ತವೆ.

Recommendations

ಜೈವಿಕ ನಿಯಂತ್ರಣ

ಸೂಕ್ಷ್ಮಜೀವಿಗಳನ್ನು ಆಧರಿಸಿದ ಹಲವಾರು ದ್ರಾವಣಗಳನ್ನು ಬೀಜ ಚಿಕಿತ್ಸೆಗಾಗಿ ಮತ್ತು/ ಹಾಗು ಈ ರೋಗಾಣುಗಳ ಸಂಭವನೀಯತೆಯನ್ನು ಕಡಿಮೆ ಮಾಡಲು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ: ಶಿಲೀಂಧ್ರ ಟ್ರೈಚರಸ್ ಸ್ಪೈರಲಿಸ್, ಸ್ಟ್ರೆಪ್ಟೊಮೈಸಸ್ ಗ್ರ್ಯಾಮಿನೊಫ್ಯಾಸಿಯೆನ್ಸ್, ಎಸ್ ಗಿಬ್ಸೋನಿ, ಎಸ್. ಲಿಡಿಕಸ್, ಎಸ್. ನೊಗಲಾಟರ್, ಎಸ್. ರೊಚೆ, ಎಸ್. ಅನ್ನುಲಾಟಸ್ ಮತ್ತು ಯೀಸ್ಟ್ ಗಳಾದ ಕ್ಯಾಂಡಿಡಾ ಮಾಲ್ಟೋಸಾ, ಸಿ ಗ್ಲಬ್ರಾಟಾ, ಸಿ ಸ್ಲೂಫಿ, ರೊಡೊಟೋಲಾ ರುಬ್ರಾ ಮತ್ತು ಟ್ರೈಕೊಸ್ಪೊರೊನ್ ಕ್ಯುಟಾನಿಯಮ್. ವಿರೋಧಿ ಬ್ಯಾಕ್ಟೀರಿಯ ಬ್ಯಾಸಿಲಸ್ ಸಬ್ಟಿಲಿಸ್ ಹೊಂದಿರುವ ದ್ರಾವಣಗಳು ಸಹ ಬಿತ್ತನೆಯ ಸಮಯದಲ್ಲಿ ಮುತ್ತಿಗೆಗೆ ಒಳಗಾಗಿರುವ ಮಣ್ಣಿನಲ್ಲಿ ಸೇರಿಸಿದಾಗ ಸೋಂಕನ್ನು ಕಡಿಮೆ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ನಿಯಂತ್ರಣ ಕ್ರಮಗಳೊಂದಿಗೆ ತಡೆಗಟ್ಟುವ ಕ್ರಮಗಳನ್ನು ಸೇರಿಸಿ ಸಮಗ್ರ ಮಾರ್ಗವನ್ನು ಪರಿಗಣಿಸಿ. ಇದು ಮಣ್ಣು ಮತ್ತು ಬೀಜದ ಕಾಯಿಲೆಯಾಗಿರುವುದರಿಂದ, ಪ್ರಮಾಣೀಕೃತ ಮೂಲದಿಂದ ಬೀಜಗಳನ್ನು ಖರೀದಿಸಲು ಸೂಚಿಸಲಾಗುತ್ತದೆ. ಶಿಲೀಂಧ್ರನಾಶಕದ ನೀರಿನೊಂದಿಗೆ ಬೀಜ ಚಿಕಿತ್ಸೆಯು ಕೆಲಸ ಮಾಡಬಹುದು. ಅಜೋಕ್ಸಿಸ್ಟ್ರೋಬಿನ್, ಬೆನೊಮಿಲ್ ಅಥವಾ ಕಾಪ್ಟನ್ ಅಥವಾ ಶಿಲೀಂಧ್ರನಾಶಕಗಳ ಸಂಯೋಜನೆಯನ್ನು ಆಧರಿಸಿರುವ ಉತ್ಪನ್ನಗಳು ಶಿಲೀಂಧ್ರದ ವಿರುದ್ಧ ಪರಿಣಾಮಕಾರಿಯಾಗುತ್ತವೆ.

ಅದಕ್ಕೆ ಏನು ಕಾರಣ

ಮಗ್ನಪೊರ್ತಿಯಾಪ್ಸಿಸ್ ಮೇಡಿಸ್ ಎಂಬ, ಮಣ್ಣಿನಲ್ಲಿ ಮತ್ತು ಬೀಜಗಳ ಮೇಲೆ ಚಳಿಗಾಲ ಕಳೆಯುವ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಮಣ್ಣು- ಅಥವಾ ಬೀಜದಲ್ಲಿನ ಬೀಜಕಗಳು ಸಸಿಗಳ ಬೇರುಗಳಿಗೆ ಸಣ್ಣ ಗಾಯಗಳ ಮೂಲಕ ಪ್ರವೇಶಿಸಿ ಸೋಂಕು ತಗುಲಿಸುತ್ತವೆ, ಕ್ರಮೇಣ ಅವು ಬೆಳೆದಂತೆ ಅಂಗಾಂಶಗಳನ್ನು ಆಕ್ರಮಿಸುತ್ತವೆ. ನಾಳಗಳ ಮೂಲಕ, ಅವುಗಳು ಬೇರುಗಳಿಂದ ಕಾಂಡ ಮತ್ತು ತೆನೆ ಮತ್ತು ಧಾನ್ಯಗಳಿಗೆ ಸಾಗುತ್ತವೆ. ರೋಗದ ಬೆಳವಣಿಗೆಗೆ ಸೂಕ್ತವಾದ ಪರಿಸ್ಥಿತಿಗಳು: 24 ° C ಅಸುಪಾಸಿನ ಸ್ಥಿರವಾದ ತಾಪಮಾನ ಅಥವಾ 20 ಮತ್ತು 32 ° C ನಡುವಿನ ನೈಸರ್ಗಿಕ ತಾಪಮಾನ ವ್ಯತ್ಯಾಸಗಳು. ಅಧಿಕ ತಾಪಮಾನವು ಶಿಲೀಂಧ್ರದ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಉದಾಹರಣೆಗೆ 36 ° C ಯಲ್ಲಿ ಇವುಗಳ ಸಂಭವಿಸುವಿಕೆ ಕಡಿಮೆ. ಈ ರೋಗವು ಪ್ರಪಂಚದ ಹಲವಾರು ಭಾಗಗಳಲ್ಲಿ ಆರ್ಥಿಕವಾಗಿ ಮುಖ್ಯವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಪ್ರಮಾಣೀಕೃತ ಮೂಲದಿಂದ ಬೀಜಗಳನ್ನು ಖರೀದಿಸಿ.
  • ನೆಡುವ ಮೊದಲು ಶಿಲೀಂಧ್ರದ ಉಪಸ್ಥಿತಿಗಾಗಿ ಬೀಜಗಳನ್ನು ಪರೀಕ್ಷಿಸಿ.
  • ಮಣ್ಣಿನಲ್ಲಿ ಹೆಚ್ಚಿನ ತೇವಾಂಶವನ್ನು ತಪ್ಪಿಸಲು ಉತ್ತಮ ನೀರಾವರಿ ಯೋಜನೆಯನ್ನು ಯೋಜಿಸಿ.
  • ಸೋಂಕಿತ ಪ್ರದೇಶದಿಂದ ಬೀಜಗಳನ್ನು ಬಳಸಬೇಡಿ ಅಥವಾ ಬಿತ್ತಬೇಡಿ.
  • ಋತುವಿನಲ್ಲಿ, ಮುಖ್ಯವಾಗಿ ಪೊಟಾಷ್ ಬಳಕೆಯಲ್ಲಿ ಉತ್ತಮ ರಸಗೊಬ್ಬರ ಬಳಕೆ ಯೋಜಿಸಿ.
  • ಹಲವಾರು ವರ್ಷಗಳ ಕಾಲ ಭತ್ತ ಅಥವಾ ಇತರ ರೋಗಕ್ಕೆ ಒಳಗಾಗದ ಸಸ್ಯಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ