ಭತ್ತ

ಭತ್ತದ ಸ್ಟ್ಯಾಕ್ ಬರ್ನ್ ರೋಗ

Alternaria padwickii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಗಾಢ ಕಂದು ಅಂಚುಗಳಿರುವ ವೃತ್ತಾಕಾರದ ಮತ್ತು ಅಂಡಾಕಾರದ ಕಲೆಗಳು.
  • ಕಾಳುಗಳು ಸುಕ್ಕುಗಟ್ಟುತ್ತವೆ ಮತ್ತು ಸುಲಭವಾಗಿ ಮುರಿಯಬಹುದು.
  • ಇಡೀ ಸಸ್ಯವು ಸಸಿ ರೋಗ ಮತ್ತು ಕೊಳೆತವನ್ನು ತೋರಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಎಲೆಗಳು ಮತ್ತು ಮಾಗುತ್ತಿರುವ ಧಾನ್ಯಗಳ ಮೇಲೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಣ್ಣ ಗಾಢವಾದ ಗಾಯಗಳು ಬೇರುಗಳು ಅಥವಾ ಮೊದಲು ಹುಟ್ಟಿದ ಎಲೆಗಳ ಮೇಲೆ ಕಾಣಿಸುತ್ತವೆ. ಗಾಯಗಳ ಮೇಲಿನ ಸಸಿಯ ಭಾಗಗಳು ರೋಗದಿಂದ ಸಾಯಬಹುದು. ಎಲೆಗಳ ಮೇಲೆ ಗಾಢ ಕಂದು ಅಂಚುಗಳಿರುವ ವೃತ್ತಾಕಾರದಿಂದ ಅಂಡಾಕಾರದ ಕಲೆಗಳು (3-10 ಮಿಮೀ ವ್ಯಾಸ) ಕಾಣಿಸಿಕೊಳ್ಳುತ್ತವೆ. ಈ ದೊಡ್ಡ ಕಲೆಗಳ ಮಧ್ಯದಲ್ಲಿ ಅನೇಕ ತಿಳಿ ಕಂದು ಅಥವಾ ಬಿಳಿ ಕಲೆಗಳು ಇರುತ್ತವೆ. ಕಾಳುಗಳು ಸಣ್ಣದಾಗುತ್ತದೆ ಮತ್ತು ಸುಲಭವಾಗಿ ಮುರಿಯುತ್ತವೆ. ಸೋಂಕಿತ ಧಾನ್ಯವು ಸಾಮಾನ್ಯವಾಗಿ ಗಾಢ ಬಣ್ಣದಲ್ಲಿದ್ದು, ಸೀಮೆಸುಣ್ಣದಂತಿದ್ದು, ಸುಲಭವಾಗಿ ಪುಡಿಯಾಗುತ್ತದೆ ಮತ್ತು ಸುಕ್ಕುಗಟ್ಟಿರುತ್ತದೆ ಮತ್ತು ಚೈತನ್ಯ ಕಡಿಮೆಯಾಗಿರುತ್ತದೆ. ಕಾಳಿನ ಹೊಟ್ಟಿನ ಮೇಲೆ ಕೆಂಪು ಕಂದು ಕಲೆಗಳು ಕಾಣಿಸಿಕೊಳ್ಳುತ್ತವೆ. ಕಾಳುಗಳು ಸುಕ್ಕಾಗಿರುತ್ತದೆ ಮತ್ತು ಸುಲಭವಾಗಿ ಪುಡಿಯಾಗಬಹುದು.

Recommendations

ಜೈವಿಕ ನಿಯಂತ್ರಣ

ಬೀಜಗಳನ್ನು 2 ಗ್ರಾಂ/ಕೆಜಿಗೆ ಥಿರಾಮ್, ಕ್ಯಾಪ್ಟನ್ ಅಥವಾ ಮ್ಯಾಂಕೋಜೆಬ್‌ನೊಂದಿಗೆ ಸಂಸ್ಕರಿಸಿ. ಮೊಳಕೆಯೊಡೆಯುವಿಕೆ ಮತ್ತು ಸೋಂಕುರಾಹಿತ್ಯಕ್ಕೆ ಬೀಜಗಳನ್ನು ಬಿಸಿ ನೀರಿನನಲ್ಲಿ 54 °C ನಲ್ಲಿ 15 ನಿಮಿಷಗಳ ಕಾಲ ಸಂಸ್ಕರಿಸಿ. ಹೊಲದಲ್ಲಿನ ಉಳಿಕೆ ಹುಲ್ಲು ಮತ್ತು ಒಣಹುಲ್ಲನ್ನು ಸುಟ್ಟುಹಾಕಿ. ಅಕ್ಕಿಯ ರೈಜೋಸ್ಫಿಯರ್‌ನಲ್ಲಿ ವಾಸಿಸುವ ಸೂಡೊಮೊನಾಸ್ ಫ್ಲೋರೆಸೆನ್ಸ್ ಎಂಬ ಬ್ಯಾಕ್ಟೀರಿಯಾದ ಸೂತ್ರೀಕರಣವನ್ನು ಪ್ರತಿ ಕೆಜಿಗೆ 5 ಮತ್ತು 10 ರ ದರದಲ್ಲಿ ಪುಡಿಯ ರೂಪದಲ್ಲಿ ಅನ್ವಯಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಧಾನ್ಯಗಳು ಬಣ್ಣ ಕಳೆದುಕೊಳ್ಳುವುದನ್ನು ನಿಯಂತ್ರಿಸಲು ಕ್ಲೋರೊಥಲೋನಿಲ್, ಮ್ಯಾಂಕೋಜೆಬ್, ಕಾರ್ಬಾಕ್ಸಿನ್, ಪಾಲಿಯೊಕ್ಸಿನ್ ಮತ್ತು ಇಪ್ರೊಬೆನ್ಫೋಸ್ ನ ಶಿಲೀಂಧ್ರನಾಶಕ ಸಿಂಪಡಣೆಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ಭತ್ತದ ಕಾಳುಗಳಿಗೆ ಸೋಂಕು ತರುವ ಅಲೈಂಗಿಕವಾಗಿ ಪುನರುತ್ಪಾದಿಸುವ ಶಿಲೀಂಧ್ರವಾದ ಟಿ. ಪಡ್ವಿಕ್ಕಿಯ ಬೀಜದಿಂದ ಹರಡುವ ಶಿಲೀಂಧ್ರದಿಂದ ಈ ರೋಗ ಉಂಟಾಗುತ್ತದೆ. ಇದು ಬೀಜ ಬಣ್ಣ ಕಳೆದುಕೊಳ್ಳಲು, ಬೀಜ ಕೊಳೆತ ಮತ್ತು ಸಸಿ ರೋಗಕ್ಕೆ ಕಾರಣವಾಗಿದೆ. ರೋಗದ ಸಂಭವವೀಯತೆಯನ್ನು ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ದಾಖಲಿಸಲಾಗಿದೆ. ತೇವಾಂಶ ಮತ್ತು ಅಧಿಕ ತಾಪಮಾನವು ಶಿಲೀಂಧ್ರಗಳ ಬೆಳವಣಿಗೆಗೆ ಸಹಕಾರಿ. ಶಿಲೀಂಧ್ರಗಳು ಸಸ್ಯದ ಅವಶೇಷಗಳ ಮತ್ತು ಮಣ್ಣಿನಲ್ಲಿ ಸ್ಕ್ಲೆರೋಟಿಯಾದಂತೆ ಬದುಕಬಲ್ಲವು.


ಮುಂಜಾಗ್ರತಾ ಕ್ರಮಗಳು

  • ರೋಗ ರಹಿತ ಬೀಜಗಳನ್ನು ನೆಡಬೇಕು.
  • ಸಾಲುಗಳ ನಡುವೆ ಅಂತರ ಇರಲಿ (15, 20 ಮತ್ತು 25 ಸೆಂಮೀ ಅಗಲ).
  • ಬೀಜದಿಂದ ಹರಡುವ ಈ ರೋಗಕಾರಕವನ್ನು ಹೊಸ ಪ್ರದೇಶಗಳಿಗೆ ಆಮದು ಮಾಡಿಕೊಳ್ಳುವುದನ್ನು ಅಥವಾ ಈಗಾಗಲೇ ಸೋಂಕಿತವಾಗಿರುವ ಪ್ರದೇಶಗಳಲ್ಲಿ ಇನಾಕ್ಯುಲಮ್ ಹೆಚ್ಚಳವನ್ನು ತಡೆಗಟ್ಟಲು ಪರೀಕ್ಷಿಸಿದ ಮತ್ತು ಪ್ರಮಾಣೀಕೃತ ಬೀಜಗಳನ್ನು ಮಾತ್ರ ಬಳಸಿ.
  • ಮುಂದಿನ ಋತುವಿನಲ್ಲಿ ಸೋಂಕನ್ನು ಕಡಿಮೆ ಮಾಡಲು ಭತ್ತದ ಬೆಳೆಯ ಉಳಿಕೆಗಳನ್ನು ಸುಟ್ಟುಹಾಕಿ.
  • ಶೇಖರಣೆಯ ಮೊದಲು ಧಾನ್ಯವನ್ನು ಸರಿಯಾಗಿ ಒಣಗಿಸುವ ಮೂಲಕ ನಂತರದ ಸೋಂಕಿನ ಬೆಳವಣಿಗೆಯನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ