ಇತರೆ

ಹುಲ್ಲು ಜೋಳದ ಲಾಂಗ್ ಸ್ಮಟ್

Tolyposporium ehrenbergii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕೆನೆ-ಕಂದು ಬಣ್ಣದ, ಹೆಚ್ಚು ಕಡಿಮೆ ಕೊಳವೆಯಾಕಾರದ, ಮತ್ತು ಸ್ವಲ್ಪ ಬಾಗಿದ "ಸ್ಮಟ್ ಸೋರಿ" ಗಳು ತೆನೆಯ ಸುತ್ತ ಹರಡಿಕೊಂಡಿರುತ್ತವೆ.
  • ಸೋರಿಯು ಒಡೆದು ಕಪ್ಪು ಬಣ್ಣದ ಬೀಜಕಗಳನ್ನು ಬಿಡುಗಡೆ ಮಾಡುತ್ತದೆ.
  • 8-10 ಕಡು ಕಂದು ಬಣ್ಣದ ತಂತುಗಳಿರುವ ಕಟ್ಟು ಹೊರಗೆ ಕಾಣುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಈ ರೋಗವು ಸಾಮಾನ್ಯವಾಗಿ ಸಣ್ಣ ಪ್ರಮಾಣದ ಕಿರಿಹೂವುಗಳಿಗೆ ಸೀಮಿತವಾಗಿದ್ದು, ಇವು "ಸ್ಮಟ್ ಸೋರಿ" ಯಾಗಿ ರೂಪಾಂತರಗೊಳ್ಳುತ್ತವೆ, ಮತ್ತು ತೆನೆಗೆ ಹರಡುತ್ತವೆ. ಸೋರಿ ಎಂದರೆ ಉದ್ದನೆಯ, ಹೆಚ್ಚು ಕಡಿಮೆ ಕೊಳೆವೆಯಾಕಾರದ, ಸ್ವಲ್ಪ ಬಾಗಿದ ಶಿಲೀಂಧ್ರ ರಚನೆಗಳು. ಹೋಲಿಕೆಯಲ್ಲಿ ಇವು ದಪ್ಪ ಎನಿಸುವ ಕೆನೆ-ಕಂದು ಮುಚ್ಚುವ ಪದರಗಳನ್ನು ಹೊಂದಿರುತ್ತವೆ. ಪ್ರತಿ ಸೋರಸ್ ಕೂಡ ತುದಿಯ ಭಾಗದಲ್ಲಿ ಒಡೆದು ಕಪ್ಪು ಬೀಜಕಗಳ ಗುಂಪನ್ನು ಬಿಡುಗಡೆ ಮಾಡುತ್ತವೆ ಮತ್ತು ಇನ್ನಷ್ಟು ರೋಗವನ್ನು ಹರಡುತ್ತವೆ. ಸುಮಾರು 8-10 ಕಡು ಕಂದು ತಂತುಗಳು ಈ ರಚನೆಯೊಳಗೆ ಇರುತ್ತವೆ ಮತ್ತು ಉಳಿದ ಸಸ್ಯ ಹೂವಿನ ಅಂಗಾಂಶಗಳನ್ನು ಪ್ರತಿನಿಧಿಸುತ್ತವೆ.

Recommendations

ಜೈವಿಕ ನಿಯಂತ್ರಣ

ಜೈವಿಕ ಪಾದರಸದ ಸಂಯುಕ್ತಗಳೊಂದಿಗೆ ಬೀಜಗಳಿಗೆ ಚಿಕಿತ್ಸೆ ಮಾಡುವ ಮೂಲಕ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಶಿಫಾರಸು ಮಾಡಲಾಗಿದೆ.

ರಾಸಾಯನಿಕ ನಿಯಂತ್ರಣ

ಈ ರೋಗದ ಚಿಕಿತ್ಸೆಗಾಗಿ ಯಾವುದೇ ರಾಸಾಯನಿಕ ಚಿಕಿತ್ಸೆಯು ಲಭ್ಯವಿರುವಂತೆ ತೋರುತ್ತಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ನಮ್ಮನ್ನು ಸಂಪರ್ಕಿಸಿ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಟೊಲ್ಲಿಪೊಸ್ಪೋರಿಯಂ ಇಹ್ರೆನ್ಬರ್ಗೈ ಶಿಲೀಂಧ್ರದಿಂದ ಉಂಟಾಗುತ್ತವೆ. ಅದರ ಬೀಜಕಗಳು ಅನೇಕವೇಳೆ ಒಟ್ಟಿಗೆ ಅಂಟಿಕೊಂಡಿದ್ದು ಚೆಂಡಿನ ರೂಪ ಪಡೆದಿರುತ್ತವೆ. ಇದರಿಂದ ಅವುಗಳು ಅನೇಕ ವರ್ಷಗಳವರೆಗೆ ಮಣ್ಣಿನಲ್ಲಿ ಬದುಕುಳಿಯಲು ಅವಕಾಶವಾಗುತ್ತದೆ. ಈ ಬೀಜಕ ಚೆಂಡುಗಳು ಹುಲ್ಲುಜೋಳದ ಬೀಜಗಳಿಗೆ ಅಂಟಿಕೊಳ್ಳಬಹುದು ಮತ್ತು ಸೋಂಕಿನ ಪ್ರಾಥಮಿಕ ಮೂಲವಾಗಿಯೂ ಕಾರ್ಯನಿರ್ವಹಿಸಬಹುದು. ಹುಲ್ಲುಜೋಳ ತೆನೆ ಬಿಡಲು ಆರಂಭಿಸುವ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ, ಸುಪ್ತವಾಗಿದ್ದ ಬೀಜಕಗಳು ಹೂವಿನ ಅಂಗಾಂಶಗಳೊಳಗೆ ಕುಡಿಯೊಡೆಯುತ್ತವೆ ಮತ್ತು ಹೆಚ್ಚು ಬೀಜಕಗಳನ್ನು ಉತ್ಪಾದಿಸುತ್ತವೆ. ಆವು ಗಾಳಿಯ ಮೂಲಕ ಇತರ ಸಸ್ಯಗಳಿಗೆ ಹರಡುತ್ತದೆ ಮತ್ತು ಗೊಂಚಲಿನ ಕೆಳಗೆ ಇಳಿದು ಪ್ರತೀ ಸ್ಪೈಕ್ ಲೆಟ್ ಗಳಿಗೆ ಸೋಂಕು ಹರಡುತ್ತವೆ. ವಾಯುಗಾಮಿ ಬೀಜಕಗಳೂ ಎಲೆಗಳ ಪೊರೆಗಳಲ್ಲಿ ಸಂಗ್ರಹವಾಗಿರುವ ನೀರಿನ ಹನಿಗಳಲ್ಲಿ ಕೂಡ ಮೊಳಕೆಯೊಡೆಯಬಹುದು, ಮತ್ತು ನಂತರದ ಅವಧಿಯಲ್ಲಿ ಹೂ ಗೊಂಚಲಿನ ಆರಂಭಿಕ ಹೂವುಗಳಿಗೆ ಸೋಂಕು ತರಬಹುದು.


ಮುಂಜಾಗ್ರತಾ ಕ್ರಮಗಳು

  • ಕೇವಲ ಆರೋಗ್ಯಕರ ಬೀಜಗಳನ್ನು ಬಳಸಲು ಮರೆಯದಿರಿ.
  • ಹಲವಾರು ರೋಗ ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳು ಲಭ್ಯವಿವೆ.
  • ಅವುಗಳನ್ನು ಮಾತ್ರ ಬಿತ್ತಿ.
  • ರೋಗಪೀಡಿತ ಧಾನ್ಯಗಳು ಮತ್ತು ಸಸ್ಯ ವಸ್ತುಗಳನ್ನು ತಕ್ಷಣವೇ ಸಂಗ್ರಹಿಸಬೇಕು ಮತ್ತು ನಾಶ ಮಾಡಬೇಕು.
  • ಮಣ್ಣಿನಲ್ಲಿ ಬೀಜಕಗಳು ಸಾಯುವಂತೆ 2-3 ವರ್ಷಗಳ ಕಾಲ ಸರದಿ ಬೆಳೆ ಮಾಡಿ.
  • ಟಿ.
  • ಎಹ್ರೆನ್ಬರ್ಗೈ ಚಿಗುರುವ ಅವಧಿಯಲ್ಲಿ ವಾಯುಗಾಮಿ ಬೀಜಕಗಳಿಂದ ಹೊಸ ಸಸ್ಯಗಳು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಋತುವಿನ ಆರಂಭದಲ್ಲೇ ಬಿತ್ತನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ