ಬಾಳೆಹಣ್ಣು

ಬಾಳೆಯ ಕಪ್ಪು ಎಲೆ ಚುಕ್ಕೆ ರೋಗ

Deightoniella torulosa

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ದುಂಡನೆಯ, ಸೂಜಿಮೊನೆಯಾಕಾರದ, ಕಪ್ಪು ಚುಕ್ಕೆಗಳು ಮೊದಲು ಎಲೆಯ ಅಂಚುಗಳಲ್ಲಿ ಕಾಣಿಸುತ್ತವೆ.
  • ಅವು ನಂತರ ಎಲೆಯ ಮುಖ್ಯಭಾಗದ ತುದಿಗಳಿಗೆ ವಿಸ್ತರಿಸುತ್ತದೆ.
  • ಇದರಿಂದಾಗಿ 'ವಿ' ಆಕಾರದಲ್ಲಿ ಕಾಣುತ್ತದೆ.
  • ಹಣ್ಣಿನ ಮೇಲೆ ಕಪ್ಪು ಬಣ್ಣದ ಕಲೆಗಳು ಮೂಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ದುಂಡನೆಯ, ಸೂಜಿಮೊನೆಯಾಕಾರಾದ, ಕಪ್ಪು ಕಲೆಗಳು ಎಲೆಯ ಅಂಚಿನ ಹತ್ತಿರದಲ್ಲೇ ಮುಖ್ಯ ನಾಳಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಕ್ರಮೇಣ, ಈ ತಾಣಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ ಮತ್ತು ಕಿರಿದಾದ ಹಳದಿ ಅಂಚನ್ನು ಪಡೆಯುತ್ತವೆ. ಈ ದೊಡ್ಡ ಕಲೆಗಳ ಮಧ್ಯಬಾಗ ಒಣಗುತ್ತದೆ ಮತ್ತು ತೆಳು ಕಂದು ಪ್ರದೇಶಗಳು ಹಳದಿ ಅಂಚನ್ನು ಮೀರಿ ಎಲೆಯ ಅಂಚನ್ನು ತಲುಪುತ್ತವೆ. ಇದರಿಂದ ಈ ಕಲೆಗಳು ತಲೆಕೆಳಗಾದ 'ವಿ' ಆಕೃತಿಯಲ್ಲಿ ಗೋಚರಿಸುತ್ತವೆ. ಹಣ್ಣುಗಳಲ್ಲಿ ಮೊದಲು, ಕಪ್ಪು ಬಣ್ಣ ಹಣ್ಣಿನ ತುದಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಕೆಲವೊಮ್ಮೆ ಹಳದಿ ಅಂಚುಗಳಿರುವ, ಅನಿಯಮಿತ ದಟ್ಟ ಚುಕ್ಕೆ ಅಥವಾ ಮಚ್ಚೆಗಳಾಗಿ ಹಣ್ಣುಗಳ ಉದ್ದಕ್ಕೂ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಭೇದಗಳಲ್ಲಿ, ಬಹುತೇಕ ದುಂಡನೆಯ ಕೆಂಪು ಕಂದು ಚುಕ್ಕೆಗಳು ಅಥವಾ ಕಪ್ಪು ಕೇಂದ್ರಗಳಿರುವ ಮತ್ತು ಗಾಢ ಹಸಿರು ಬಣ್ಣದ, ನೀರಿನಲ್ಲಿ ನೆನೆಸಿದಂತಹ ವೃತ್ತಕಾರದ ಚುಕ್ಕೆಗಳು ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಈ ರೋಗದ ವಿರುದ್ಧ ಯಾವುದೇ ಶುದ್ಧ ಜೈವಿಕ ಪರಿಹಾರಗಳಿಲ್ಲ. ತೀವ್ರ ಸೋಂಕಿನ ಸಂದರ್ಭಗಳಲ್ಲಿ, ಸಾವಯವ ತಾಮ್ರದ ಮಿಶ್ರಣವನ್ನು, ಉದಾಹರಣೆಗೆ 1% ಬೋರ್ಡೆಕ್ಸ್ ಮಿಶ್ರಣವನ್ನು ಸೋಂಕಿತ ಪ್ರದೇಶಗಳ ಮೇಲೆ ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ನಿರೋಧಕ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನ ಇದ್ದರೆ ಅದನ್ನು ಮೊದಲು ಪರಿಗಣಿಸಿ. ತೀವ್ರ ಸೋಂಕಿನ ಸಂದರ್ಭಗಳಲ್ಲಿ 0.4% ಮಂಕೋಝೆಬ್ ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ ತೈಲವನ್ನು 0.2 -0.4% ಪ್ರಮಾಣದಲ್ಲಿ ಸಿಂಪಡಿಸಿ. ಸಂಪರ್ಕ ಶಿಲಿಂಧ್ರನಾಶಕಗಳಾದ ಕ್ಲೋರೋಥಲೋನಿಲ್ ಅಥವಾ ಮಂಕೋಝೆಬ್ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕಗಳಾದ ತೆಬುಕೋನಜೋಲ್ ಅಥವಾ ಪ್ರೊಪಿಕೊನಾಝೋಲ್ ಗಳನ್ನು ಶಿಫಾರಸು ಮಾಡಲಾಗಿದೆ. ಸಿಂಪಡಣೆ ಮೇಲಿನ ಭಾಗವನ್ನೂ ತಲುಪಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅದಕ್ಕೆ ಏನು ಕಾರಣ

ಡೈಗ್ಚೋನಿಯೆಲ್ಲಾ ಟೊರುಲೋಸಾ ಶಿಲೀಂಧ್ರ ಈ ರೋಗಕ್ಕೆ ಕಾರಣವಾಗಿದೆ. ಇದು ಸತ್ತ ಬಾಳೆ ಎಲೆಗಳಲ್ಲಿ ಕಂಡುಬರುತ್ತದೆ ಮತ್ತು ಮಳೆ ಹಾಗು ಹಿಮದ ಅವಧಿಗಳಲ್ಲಿ ಹೊಸ ಇನಾಕ್ಯುಲಮ್ ಅನ್ನು ಉತ್ಪಾದಿಸುತ್ತದೆ. ಆರ್ದ್ರತೆಯು ಕ್ಷೀಣಿಸಿದಂತೆ, ಬೀಜಕಗಳು ಬಿರುಸಾಗಿ ಬಿಡುಗಡೆ ಹೊಂದುತ್ತವೆ ಮತ್ತು ಅಂತಿಮವಾಗಿ ಗಾಳಿ ಮೂಲಕ ಹರಡುತ್ತವೆ. ಇದರಿಂದಾಗಿ, ಅಧಿಕ ವಾಯು ತೇವಾಂಶದ ಪರಿಸ್ಥಿತಿಯ ನಂತರ ಗಾಳಿಯಲ್ಲಿ ಶುಷ್ಕತೆಯ ಅವಧಿ ಆರಂಭವಾದರೆ ಈ ರೋಗ ಶೀಘ್ರವಾಗಿ ಹರಡುತ್ತದೆ. ಶಿಲೀಂಧ್ರದ ಹರಡುವಿಕೆಯು ನಿಕಟವಾಗಿ ನೆಡಲ್ಪಟ್ಟ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಶಿಲೀಂಧ್ರವು ಸಸ್ಯದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದ್ಯುತಿಸಂಶ್ಲೇಷಕ ಪ್ರದೇಶ ಗಮನಾರ್ಹವಾಗಿ ಕಡಿಮೆಯಾಗಿ , ಇಳುವರಿ ನಷ್ಟ ಸಂಭವಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದಲ್ಲಿ ಶಕ್ತಿಶಾಲಿ ಪ್ರಭೇದಗಳನ್ನು ನೆಡಿ.
  • (ಹಲವಾರು ಪ್ರಭೇದಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ).
  • ನೆರಳು ಬೀಳುವುದನ್ನು ಮತ್ತು ಎಲೆಗಳು ಪರಸ್ಪರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲು ಗಿಡಗಳ ನಡುವೆ ಸರಿಯಾದ ಅಂತರ ಇರಲಿ.
  • ಹೊಸ ಸಸ್ಯಗಳು ರೋಗ ಪೀಡಿತ ಸಸ್ಯಗಳಿಂದ ಸೂಕ್ತವಾದ ದೂರದಲ್ಲಿ ಇರುವಂತೆ ಖಚಿತಪಡಿಸಿಕೊಳ್ಳಿ.
  • ಗಾಳಿಯ ಸಾಪೇಕ್ಷ ಆರ್ದ್ರತೆಯನ್ನು ಕಡಿಮೆ ಮಾಡಲು ತುಂತುರು ನೀರಾವರಿ ತಪ್ಪಿಸಿ.
  • ಹನಿ ನೀರಾವರಿಗೆ ಆದ್ಯತೆ ಕೊಡಿ.
  • ಸಮತೋಲಿತ ಫೋಷಕಾಷಗಳನ್ನು ಬಳಸಿ.
  • ವಿಶೇಷವಾಗಿ ಹೆಚ್ಚುವರಿ ಎನ್.
  • ರಸಗೊಬ್ಬರ ಬಳಕೆ ತಪ್ಪಿಸಿ.
  • ಸೋಂಕಿತ ಎಲೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ಬಿಡಿ.
  • ಹಳೆಯ, ಒಣಗಿ ನೇತಾಡುತ್ತಿರುವ ಎಲೆಗಳನ್ನು ತೆಗೆದುಹಾಕುವುದರ ಮೂಲಕ ತೋಟದ ನೈರ್ಮಲ್ಯ ಕಾಪಾಡಿ.
  • ಸೋಂಕಿತ ಎಲೆಯ ಭಾಗಗಳನ್ನು ಮತ್ತು ಹಣ್ಣುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ