ಗೋಧಿ

ಗೋಧಿ ಬ್ಲಾಸ್ಟ್

Magnaporthe oryzae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಿರುಕದಿರುಗಳು ಮತ್ತು ತೆನೆಗಳು ಅಕಾಲಿಕವಾಗಿ ಬಿಳುಚಿಕೊಳ್ಳುವುದು ಮತ್ತು ಅದರಲ್ಲಿ ಸುಕ್ಕುಗಟ್ಟಿದ ಧಾನ್ಯಗಳಿರುತ್ತವೆ ಅಥವಾ ಧಾನ್ಯಗಳು ತುಂಬಿರುವುದಿಲ್ಲ ಅಥವಾ ಯಾವುದೇ ಧಾನ್ಯಗಳೇ ಇರುವುದಿಲ್ಲ.
  • ಹೆಚ್ಚಾಗಿ, ಎಲೆಗಳ ಮೇಲೆ ಬೂದು ಬಣ್ಣದ ಕೇಂದ್ರಗಳೊಂದಿಗೆ ಅಂಡಾಕಾರದ ಅಥವಾ ಕಣ್ಣಿನ ಆಕಾರದ ನೆಕ್ರೋಟಿಕ್ ಗಾಯಗಳು ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಗೋಧಿ ಸಸ್ಯದ ಎಲ್ಲಾ ನೆಲದ ಮೇಲಿನ ಭಾಗಗಳ ಮೇಲೆ ಪರಿಣಾಮವಾಗಬಹುದು, ಆದರೆ ತೆನೆಗಳು ಅಕಾಲಿಕವಾಗಿ ಬಿಳುಚಿಕೊಳ್ಳುವುದು ಅತ್ಯಂತ ಗಮನಾರ್ಹವಾದ ಲಕ್ಷಣವಾಗಿದೆ. ರೋಗಕಾರಕವು ಕೆಲವೇ ದಿನಗಳಲ್ಲಿ ಇಳುವರಿಯ ಮೇಲೆ ಪರಿಣಾಮ ಬೀರಬಹುದು, ಈ ರೀತಿ ರೈತರಿಗೆ ಕ್ರಮ ತೆಗೆದುಕೊಳ್ಳಲು ಸಾಕಷ್ಟು ಸಮಯವಿರುವುದಿಲ್ಲ. ಹೂಬಿಡುವ ಹಂತದ ಸಮಯದಲ್ಲಿ ತೆನೆಗೆ ಸೋಂಕುಗಳು ಉಂಟಾದರೆ, ಯಾವುದೇ ಧಾನ್ಯ ಉತ್ಪಾದನೆಯಾಗುವುದಿಲ್ಲ. ಹೇಗಾದರೂ, ಧಾನ್ಯ ತುಂಬುವ ಹಂತದಲ್ಲಿ ಸೋಂಕುಂಟಾದರೆ ಸಣ್ಣ, ಗಟ್ಟಿಯಾದ ಮತ್ತು ಬಣ್ಣಗೆಟ್ಟ ಧಾನ್ಯಗಳು ಬೆಳೆಯುತ್ತವೆ. ಹಳೆಯ ಎಲೆಗಳಲ್ಲಿ ಎರಡು ವಿಧದ ಗಾಯಗಳು ಗೋಚರಿಸುತ್ತವೆ: ಸೋಂಕು ಕಡಿಮೆ ಇದ್ದ ಸಂದರ್ಭಗಳಲ್ಲಿ, ಕಪ್ಪು ಮಚ್ಚೆಗಳು ಮತ್ತು ತಿಳಿ ಬೂದು ಕೇಂದ್ರಗಳು ಮತ್ತು ಗಾಢವಾದ ಅಂಚಿರುವ ದೊಡ್ಡ ಕಣ್ಣಿನ ಆಕಾರದ ಗಾಯಗಳು ಕಂಡುಬರುತ್ತವೆ. ಪ್ರತಿಯಾಗಿ, ತೀವ್ರವಾಗಿ ಸೋಂಕಿತ ಎಲೆಗಳಲ್ಲಿ, ಕಪ್ಪು ಮಚ್ಚೆಗಳು ಹಾಗು ಕಪ್ಪು ಅಂಚುಗಳುಳ್ಳ ಮತ್ತು ಕೆಲವೊಮ್ಮೆ ಒಂದು ಕ್ಲೋರೋಟಿಕ್ ಅಂಚಿರುವ ಸಣ್ಣ ಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ. ತೆನೆಯ ಮೇಲಿನ ರೋಗಲಕ್ಷಣಗಳು ಫ್ಯುಸಾರಿಯಮ್ ತೆನೆ ಅಂಗಮಾರಿಯ ಲಕ್ಷಣಗಳನ್ನು ನಿಕಟವಾಗಿ ಹೋಲುತ್ತವೆ ಮತ್ತು ಆ ರೋಗವೆಂದು ಸುಲಭವಾಗಿ ತಪ್ಪು ತಿಳಿಯಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ, ಎಂ. ಓರಿಝೆಯ ಜೈವಿಕ ನಿಯಂತ್ರಣದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಭತ್ತದಲ್ಲಿ, ಸೂಡೊಮೊನಸ್ ಫ್ಲೂರಸೀನ್ಗಳ ಸೂತ್ರೀಕರಣಗಳನ್ನು ಬಳಸಿಕೊಂಡು ಬೀಜ ಸಂಸ್ಕರಣೆ ಮತ್ತು ಎಲೆಗಳ ಸಿಂಪಡಣೆಯು ಬ್ಲಾಸ್ಟ್ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಮತ್ತು ಧಾನ್ಯದ ಇಳುವರಿಯನ್ನು ಹೆಚ್ಚಿಸುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೂಬಿಡುವ ಅಥವಾ ಧಾನ್ಯ ತುಂಬುವ ಹಂತಗಳಲ್ಲಿ ಅತಿಯಾದ ಮಳೆ ಅಥವಾ ದೀರ್ಘಕಾಲದವರೆಗೆ ಇಬ್ಬನಿಗೆ ಒಡ್ಡಿಕೊಳ್ಳುವುದು ಗೋಧಿ ಬ್ಲಾಸ್ಟ್ ರೋಗವನ್ನು ಪ್ರಚೋದಿಸುತ್ತದೆ. ವ್ಯವಸ್ಥಿತ ಶಿಲೀಂಧ್ರನಾಶಕಗಳನ್ನು ಮುಂಜಾಗ್ರತಾ ಕ್ರಮವಾಗಿ ಬಳಸುವ ಮೊದಲು ಮಳೆ/ ಇಬ್ಬನಿಗಾಗಿ ಹವಾಮಾನ ಮುನ್ಸೂಚನೆಯನ್ನು ಪರಿಶೀಲಿಸಿ. ಏನೇ ಆದರೂ, ಶಿಲೀಂಧ್ರನಾಶಕಗಳು ಸಾಮಾನ್ಯವಾಗಿ ಭಾಗಶಃ ರಕ್ಷಣೆಯನ್ನು ಮಾತ್ರ ನೀಡುತ್ತವೆ. ಸಕ್ರಿಯ ಪದಾರ್ಥಗಳಾದ ಟ್ರಿಫ್ಲೋಕ್ಸಿಸ್ಟ್ರೋಬಿನ್ + ಟೆಬುಕೋನಜೋಲ್ ಅನ್ನು ಒಳಗೊಂಡಿರುವ ದ್ರಾವಣಗಳನ್ನು ಹೂವು ಬಿಡುವ ಹಂತದಲ್ಲಿ ಮಳೆ ಅಥವಾ ಇಬ್ಬನಿಗೆ ಮುಂಚಿತವಾಗಿ ಸಿಂಪಡಿಸಿ. ಪ್ರತಿ ವರ್ಷವೂ ಒಂದೇ ವಿಧಾನದಲ್ಲಿ ರಾಸಾಯನಿಕಗಳನ್ನು ಬಳಸಬೇಡಿ. ಇದು ಪ್ರತಿರೋಧಕ್ಕೆ ಕಾರಣವಾಗಬಹುದು.

ಅದಕ್ಕೆ ಏನು ಕಾರಣ

ಬೀಜಗಳು ಮತ್ತು ಸಸ್ಯಾವಶೇಷಗಳ ಮೇಲೆ ಬದುಕಬಲ್ಲ ಶಿಲೀಂಧ್ರವಾದ ಮ್ಯಾಗ್ನಾಪೋರ್ಥೆ ಒರಿಝೆಯಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಈ ಜಾತಿಗಳು ವೈವಿಧ್ಯಮಯವಾದವು ಮತ್ತು ಗೋಧಿಯ ಜೊತೆಗೆ, ಬಾರ್ಲಿ ಹಾಗು ಭತ್ತ ಮತ್ತು ಇತರ ಅನೇಕ ಸಸ್ಯಗಳೂ ಸೇರಿದಂತೆ ಪ್ರಮುಖ ಬೆಳೆಗಳಿಗೆ ಸೋಂಕು ತಗುಲಿಸುತ್ತವೆ. ಇದರಿಂದಾಗಿ ಅದನ್ನು ನಿಯಂತ್ರಿಸಲು ಸರದಿ ಬೆಳೆ ಪರಿಣಾಮಕಾರಿಯಲ್ಲ. ಈಗ ಬೆಳೆಯುತ್ತಿರುವ ಹೆಚ್ಚಿನ ಗೋಧಿ ತಳಿಗಳು ಈ ರೋಗಕ್ಕೆ ಸೂಕ್ಷ್ಮವಾಗಿರುತ್ತವೆ. ತೆನೆಯ ಹೊರಹೊಮ್ಮುವಿಕೆ ಮತ್ತು ಧಾನ್ಯ ತುಂಬುವ ಹಂತಗಳಲ್ಲಿ, ಬೆಚ್ಚಗಿನ ತಾಪಮಾನ ಮತ್ತು (18-30 °ಸಿ) ಮತ್ತು 80% ಕ್ಕಿಂತ ಹೆಚ್ಚಿನ ತೇವಾಂಶವು ತೀವ್ರ ಹಾನಿ ಉಂಟುಮಾಡುತ್ತದೆ ಮತ್ತು ಕೆಲವೊಮ್ಮೆ ಒಂದು ವಾರದಲ್ಲಿಯೇ ಬೆಳೆಯ ವಿನಾಶಕ್ಕೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶ / ದೇಶದಲ್ಲಿರುವ ಸಂಪರ್ಕತಡೆಯ ನಿಬಂಧನೆಗಳ ಬಗ್ಗೆ ತಿಳಿದುಕೊಳ್ಳಿ.
  • ರೋಗಲಕ್ಷಣಗಳನ್ನು ಗುರುತಿಸಲು ಬೆಳೆಗಾರರು ಮತ್ತು ವಿಸ್ತರಣಾ ಕೆಲಸಗಾರರಿಗೆ ಶಿಕ್ಷಣ ನೀಡಿ.
  • ಪ್ರಮಾಣೀಕೃತ ಮೂಲದಿಂದ ಬೀಜಗಳನ್ನು ಬಳಸಿ ಅಥವಾ ಬೀಜಗಳು ಶಿಲೀಂಧ್ರಗಳ ಸೋಂಕಿನಿಂದ ಮುಕ್ತವಾಗಿವೆ ಎಂದು ಖಚಿತಪಡಿಸಿಕೊಳ್ಳಿ.
  • ನಿರೋಧಕ ಅಥವಾ ಚೇತರಿಸಿಕೊಳ್ಳುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಿ (ಮಾರುಕಟ್ಟೆಯಲ್ಲಿ ಹಲವಾರು ಲಭ್ಯವಿದೆ).
  • ಗದ್ದೆಯಿಂದ ಸಸ್ಯದ ಉಳಿಕೆಗಳು ಮತ್ತು ಪರ್ಯಾಯ ಆಶ್ರಯ ಗಿಡಗಳನ್ನು ತೆಗೆದುಹಾಕಿ.
  • ಅತಿಯಾದ ಸಾರಜನಕ ರಸಗೊಬ್ಬರ ಬಳಕೆಯನ್ನು ಮಾಡಬೇಡಿ.
  • ಆಶ್ರಯ ಗಿಡಗಳ ಪ್ರತಿರೋಧವನ್ನು ಹೆಚ್ಚಿಸಲು ಸಿಲಿಕಾ ಸುಧಾರಣೆಗಳನ್ನು ಬಳಸಿ.
  • ಹೂಬಿಡುವ ಅಥವಾ ಧಾನ್ಯ ತುಂಬುವ ಹಂತಗಳಲ್ಲಿ ಮಳೆಯನ್ನು ತಪ್ಪಿಸಲು ಬಿತ್ತನೆ ಸಮಯವನ್ನು ಸರಿಹೊಂದಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ