ಸೋಯಾಬೀನ್

ಸೋಯಾಬೀನಿನ ಕಾಂಡ ಮತ್ತು ಬೇರು ಕೊಳೆತ

Phytophthora sojae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸೋಂಕಿತ ಸಸ್ಯಗಳಲ್ಲಿ ಉದ್ದವಾದ ಕಂದು ಬಣ್ಣದ ಗಾಯಗಳು ಬೇರಿನಿಂದ ಆರಂಭವಾಗಿ ಕಾಂಡದ ಮಧ್ಯಭಾಗದವರೆಗೆ ಹರಡುತ್ತದೆ.
  • ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬಾಡುತ್ತವೆ, ಅಂತಿಮವಾಗಿ ನಿರ್ಜೀವಗೊಳ್ಳುತ್ತವೆ ಆದರೆ ಕಾಂಡದಿಂದ ಬೀಳುವುದಿಲ್ಲ.
  • ಸಂಕೋಚಿತ ಮಣ್ಣುಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹೆಚ್ಚು, ಮತ್ತು ಭಾರೀ ಮಳೆ ಈ ರೋಗವನ್ನು ಹೆಚ್ಚಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಆರಂಭದ ಬೆಳವಣಿಗೆಯ ಹಂತಗಳಲ್ಲಿ, ಶಿಲೀಂಧ್ರವು ಬೀಜಗಳನ್ನು ಕೊಳೆಸಬಹುದು ಅಥವಾ ಬೀಜ ಮೊಳಕೆಯೊಡೆದ ನಂತರ ಮೊಳಕೆಗಳನ್ನು ಪಸೆ ಮಾಡಿ ಹಾಳುಮಾಡಬಹುದು. ನಂತರದ ಬೆಳವಣಿಗೆಯ ಹಂತಗಳಲ್ಲಿ, ಸೋಂಕಿತ ಸಸ್ಯಗಳಲ್ಲಿ ಉದ್ದವಾದ ಕಂದು ಬಣ್ಣದ ಗಾಯಗಳು ಬೇರಿನಿಂದ ಆರಂಭವಾಗಿ ಕಾಂಡದ ಮಧ್ಯಭಾಗದವರೆಗೆ ಹರಡುತ್ತದೆ. ಮುಖ್ಯ ಬೇರು ಮತ್ತು ಕಾಂಡದ ಆಂತರಿಕ ಅಂಗಾಂಶಗಳಿಗೆ ಹಾನಿಯಾಗುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬಾಡುತ್ತವೆ, ಅಂತಿಮವಾಗಿ ನಿರ್ಜೀವಗೊಳ್ಳುತ್ತವೆ ಆದರೆ ಕಾಂಡದಿಂದ ಬೀಳುವುದಿಲ್ಲ. ಮೊದಲ ರೋಗಲಕ್ಷಣಗಳು ಸಾಮಾನ್ಯವಾಗಿ ಸಂಕೋಚಿತ ಮಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ, ಇವುಗಳಲ್ಲಿ ಭಾರೀ ಮಳೆಯಾದ ಒಂದು ಅಥವಾ ಎರಡು ವಾರಗಳ ನಂತರ ನೀರು ನಿಲ್ಲಲ್ಲು ಪ್ರಾರಂಭವಾಗುತ್ತದೆ. ಈ ರೋಗಕ್ಕೆ ಬೇಗ ತುತ್ತಾಗುವ ತಳಿಗಳಲ್ಲಿ ಭಾರೀ ನಷ್ಟವಾಗಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ ಈ ರೋಗದ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ತಿಳಿದುಬಂದಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಪಿ. ಸೋಜಾವನ್ನು ನಿಯಂತ್ರಿಸುವ ಏಕೈಕ ರಾಸಾಯನಿಕ ಚಿಕಿತ್ಸೆಯೆಂದರೆ ಶಿಲೀಂಧ್ರನಾಶಕಗಳೊಂದಿಗೆ ಬೀಜಗಳನ್ನು ಸಂಸ್ಕರಿಸುವುದು. ಮೆಫೆನೊಕ್ಸಮ್ ಮತ್ತು ಮೆಟಲಕ್ಸಿಲ್ ಅನ್ನು ಬೀಜ ಸಂಸ್ಕರಣೆಗಾಗಿ ಬಳಸಬಹುದು. ಕೆಲವು ಸಂದರ್ಭಗಳಲ್ಲಿ ಈ ಶಿಲೀಂಧ್ರನಾಶಕಗಳಿಗೆ ಪ್ರತಿರೋಧವನ್ನು ಗಮನಿಸಲಾಗಿದೆ. ತಾಮ್ರದ ಆಕ್ಸಿಕ್ಲೋರೈಡ್ (3ಗ್ರಾಂ/ 1 ಲೀ ನೀರು) ಮತ್ತು ಅನೇಕ ಬಾರಿ ಒಂದು ರೋಗನಿರೋಧಕದ (ಸ್ಟ್ರೆಪ್ಟೋಸೈಕ್ಲಿನ್) ಜೊತೆಗೆ ಮಣ್ಣನ್ನು ಒದ್ದೆಮಾಡುವುದು ಸಹ ಫಲಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಫಿಟೊಫ್ಥೊರಾ ಸೋಜಾ ಎಂಬುದು ಮಣ್ಣಿನ ಮೂಲದ ರೋಗಕಾರಕವಾಗಿದ್ದು, ಇದು ಹಲವಾರು ವರ್ಷಗಳ ಕಾಲ ಸಸ್ಯದ ಉಳಿಕೆಗಳ ಮೇಲೆ ಅಥವಾ ಬೀಜಗಳ ಮೇಲೆ ಬದುಕಬಲ್ಲದು, ಶೀತ ಅಥವಾ ಹಿಮಪಾತದ ಸಮಯಗಳಲ್ಲಿ ಕೂಡ. ಅದರ ಬೆಳವಣಿಗೆಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ (ಅಧಿಕ ಮಣ್ಣಿನ ತೇವಾಂಶ ಮತ್ತು 25 ರಿಂದ 30 °C ಗರಿಷ್ಠ ತಾಪಮಾನ) ಅದು ಋತುವಿನ ಉದ್ದಕ್ಕೂ ಸಸ್ಯಗಳ ಬೇರಿನ ಮೂಲಕ ಸಸ್ಯಗಳನ್ನು ಸೋಂಕು ಮಾಡಬಹುದು. ಭಾರೀ ಮಳೆಯಾದ ನಂತರ ಮೊದಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ಪೀಡಿತ ಸಸ್ಯಗಳು ಹೊಲದಲ್ಲಿ ಅಲ್ಲಲ್ಲೆ ಹರಡಿರುವಂತೆ ತೋರಬಹುದು ಅಥವಾ ಕಳಪೆ ಕಾಲುವೆ ವ್ಯವಸ್ಥೆಯಿರುವ ಪ್ರದೇಶಗಳಲ್ಲಿ ಅಥವಾ ತಗ್ಗು ಪ್ರದೇಶಗಳಲ್ಲಿ ಕಂಡುಬರಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗಕಾರಕ-ಮುಕ್ತ ಬೀಜಗಳನ್ನು ಖರೀದಿಸಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ನೀರು-ನಿಲ್ಲುವುದನ್ನು ತಪ್ಪಿಸಲು ಮಣ್ಣಿನ ಕಾಲುವೆ ವ್ಯವಸ್ಥೆಯನ್ನು ಉತ್ತಮಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ