ಭತ್ತ

ಫಾಲ್ಸ್ ಸ್ಮಟ್

Villosiclava virens

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣ ಕಿತ್ತಳೆ ಬಣ್ಣದ ಮೃದುವಾದ ‘ಗುಂಡುಗಳು’ ಕೆಲವು ಅಕ್ಕಿ ಧಾನ್ಯಗಳ ಮೇಲೆ ಕಾಣಿಸುತ್ತವೆ.
  • ಈ ‘ಗುಂಡುಗಳು’ ಒಣಗುತ್ತವೆ ಮತ್ತು ಹಸಿರು-ಕಪ್ಪು ಬಣ್ಣಕ್ಕೆ ತಿರುಗುತ್ತವೆ.
  • ಧಾನ್ಯಗಳ ಬಣ್ಣ ಕುಂದುವಿಕೆ, ತೂಕದಲ್ಲಿ ಇಳಿಕೆ ಮತ್ತು ಮೊಳಕೆಯೊಡೆಯುವಿಕೆ ಪ್ರಮಾಣದಲ್ಲಿ ಇಳಿಕೆ.

ಇವುಗಳಲ್ಲಿ ಸಹ ಕಾಣಬಹುದು


ಭತ್ತ

ರೋಗಲಕ್ಷಣಗಳು

ರೋಗಲಕ್ಷಣಗಳು ಮೊದಲು ಹೂಗೊಂಚಲುಗಳು ರೂಪುಗೊಳ್ಳುವಾಗ, ವಿಶೇಷವಾಗಿ ಸ್ಪೈಕ್ಲೆಟ್ಟುಗಳು ಪಕ್ವತೆಯನ್ನು ಮುಟ್ಟುತ್ತಲೇ ಗೋಚರಿಸುತ್ತವೆ. ಹೂಗೊಂಚಲಿನ (ಪ್ಯಾನಿಕಲ್) ಪ್ರತ್ಯೇಕ ಧಾನ್ಯಗಳಲ್ಲಿ ಕಿತ್ತಳೆ ಬಣ್ಣದ ವೆಲ್ವೆಟ್ನಂತಹ ಮೃದುವಾದ 1 ಸೆಂಮೀ ವ್ಯಾಸದ ಅಂಡಾಕಾರದ ರಾಶಿಗಳು ಕಾಣಿಸಿಕೊಳ್ಳುತ್ತವೆ. ನಂತರ, ಧಾನ್ಯಗಳು ಹಳದಿ- ಹಸಿರು ಬಣ್ಣಕ್ಕೆ ಅಥವಾ ಹಸಿರು-ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಒಂದು ಹೂಗೊಂಚಲಿನಲ್ಲಿ ಕೇವಲ ಕೆಲವು ಧಾನ್ಯಗಳು ಮಾತ್ರ ಬೀಜಕಗಳ ಗುಂಡುಗಳನ್ನು ಹೊಂದಿರುತ್ತವೆ. ಅಂದರೆ ಸಸ್ಯದ ಇತರ ಭಾಗಗಳು ಹಾನಿಗೊಳಗಾಗುವುದಿಲ್ಲ. ಧಾನ್ಯದ ತೂಕ ಮತ್ತು ಬೀಜದ ಮೊಳಕೆಯೊಡೆಯುವಿಕೆ ತಗ್ಗುತ್ತದೆ.

Recommendations

ಜೈವಿಕ ನಿಯಂತ್ರಣ

10 ನಿಮಿಷಗಳ ಕಾಲ 52 °C ನಲ್ಲಿ ಬೀಜಗಳ ಸಂಸ್ಕರಣೆ ಸಹ ರೋಗದ ಸೋಂಕನ್ನು ತಪ್ಪಿಸುವ ಸಂಭವ ಹೆಚ್ಚಿಸುತ್ತದೆ. ಹೂಗೊಂಚಲು ಹೊರಹೊಮ್ಮುವಾಗ (2.5ಗ್ರಾಂ/ಲೀ ನೀರಿನಲ್ಲಿ) ತಾಮ್ರ ಆಧಾರಿತ ಶಿಲೀಂಧ್ರನಾಶಕಗಳ ಜೊತೆ ನಿರೋಧಕದ ಸಿಂಪರಣೆಯೂ ಸಹ ಪರಿಣಾಮಕಾರಿ. ಒಮ್ಮೆ ರೋಗವನ್ನು ಗುರುತಿಸಿದ ಮೇಲೆ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ರೋಗವನ್ನು ನಿಯಂತ್ರಿಸಲು ಮತ್ತು ಇಳುವರಿಯನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲು ಬೆಳೆಯ ಮೇಲೆ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಯು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳೊಂದಿಗಿನ ಬೀಜದ ಸಂಸ್ಕರಣೆಯು ಈ ರೋಗವನ್ನು ನಿಯಂತ್ರಿಸುವುದಿಲ್ಲ. ಅಜೋಕ್ಸಿಸ್ಟ್ರೋಬಿನ್, ಪ್ರೊಪಿಕೊನಜೋಲ್, ಕ್ಲೋರೋಥಲೋನಿಲ್, ಅಜೋಕ್ಸಿಸ್ಟ್ರೋಬಿನ್+ ಪ್ರೊಪಿಕೊನಜೋಲ್, ಟ್ರೈಫ್ಲಾಕ್ಸಿಸ್ಟ್ರೋಬಿನ್+ ಪ್ರೊಪಿಕೊನಜೋಲ್, ಟ್ರೈಫ್ಲಾಕ್ಸಿಸ್ಟ್ರೋಬಿನ್+ ಟೆಬ್ಯುಕೊನಜೋಲ್ ಆಧರಿತ ಉತ್ಪನ್ನಗಳನ್ನು ನಿರೋಧಕವಾಗಿ ಹೂಗೊಂಚಲು (ಪ್ಯಾನಿಕಲ್) ಬಿಡುವಾಗ(50-100%) ಸಿಂಪಡಿಸಿ. ಔರೆಫಂಗ್ಜಿನ್, ಕ್ಯಾಪ್ಟನ್ ಮತ್ತು ಮನ್ಕೊಜೆಬ್ ಅನ್ನು ಹೊಂದಿರುವ ಉತ್ಪನ್ನಗಳನ್ನು ಸೋಂಕಿನ ನಂತರ ರೋಗದ ಪ್ರಗತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಂಧಿಸಲು ಸಿಂಪಡಿಸಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ವಿಲ್ಲೋಸಿಕ್ಲಾವ ವೈರೆನ್ಸ್ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತವೆ. ಇದು ಸಸ್ಯಗಳನ್ನು ಎಲ್ಲಾ ಹಂತಗಳಲ್ಲೂ ಸೋಂಕಿತಗೊಳಿಸುವ ಆದರೆ ಇದರ ರೋಗಲಕ್ಷಣಗಳು ಹೂಬಿಟ್ಟ ನಂತರವೇ ಅಥವಾ ಧಾನ್ಯ-ತುಂಬುವ ಹಂತದಲ್ಲಿ ಮಾತ್ರ ಗೋಚರಿಸುವಂತ ರೋಗಕಾರಕವಾಗಿದೆ. ಸೋಂಕಿನ ಪರಿಣಾಮವನ್ನು ಹವಾಮಾನ ಪರಿಸ್ಥಿತಿಗಳು ನಿರ್ಧರಿಸುತ್ತವೆ ಏಕೆಂದರೆ ಅತಿ ಹೆಚ್ಚಿನ ಸಾಪೇಕ್ಷ ಆರ್ದ್ರತೆ ( >90%), ಸತತ ಮಳೆ ಮತ್ತು 25−35°Cವರೆಗಿನ ತಾಪಮಾನಗಳು ಈ ಶಿಲೀಂಧ್ರಕ್ಕೆ ಅನುಕೂಲಕರವಾಗಿವೆ. ಅತಿ ಹೆಚ್ಚಿನ ಮಟ್ಟದಲ್ಲಿ ಸಾರಜನಕ ಹೊಂದಿರುವ ಮಣ್ಣೂ ಸಹ ಈ ರೋಗಕ್ಕೆ ಅನುಕೂಲಕರ. ಬೇಗನೆ ಬಿತ್ತಲ್ಪಟ್ಟ ಭತ್ತದ ಸಸ್ಯಗಳು ಸಾಮಾನ್ಯವಾಗಿ ಫಾಲ್ಸ್ ಸ್ಪಟ್ಟಿನಿಂದ ಅತಿ ಕಡಿಮೆ ಸಮಸ್ಯೆಗಳನ್ನು ಎದುರಿಸುತ್ತವೆ. ಅತಿ ತೀವ್ರವಾದ ಸಂದರ್ಭಗಳಲ್ಲಿ ರೋಗವು ತೀವ್ರವಾಗಿರಬಹುದು ಮತ್ತು ಬೆಳೆಯ 25% ದಷ್ಟು ನಷ್ಟವಾಗಬಹುದು. ಭಾರತದಲ್ಲಿ, 75% ನಷ್ಟು ಇಳುವರಿ ನಷ್ಟವನ್ನು ಗಮನಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ವ್ಯಾಪಾರಿಗಳಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ಬಳಸಿ.
  • ಸಾಧ್ಯವಿದ್ದಲ್ಲಿ ರೋಗದ ತೀವ್ರತೆಯನ್ನು ತಪ್ಪಿಸಲು ಬೇಗನೆ ನೆಡಿ.
  • ಶಾಶ್ವತವಾದ ನೀರು ನಿಲ್ಲುವಿಕೆಯ (ಆದ್ರತೆಯಲ್ಲಿ ಕಡಿತ) ಬದಲು ಹೊಲಗಳನ್ನು ಪರ್ಯಾಯವಾಗಿ ಒದ್ದೆ ಮಾಡುವುದು ಮತ್ತು ಒಣಗಿಸುವುದು ಉತ್ತಮ.
  • ಸಾರಜನಕದ ನಿಯಮಿತ ಬಳೆಕೆಯಿರಲಿ ಮತ್ತು ಅದನ್ನು ಹಾಕಬೇಕಾದರೆ ಭಾಗಗಳಲ್ಲಿ ಹಾಕಿ.
  • ರೋಗಲಕ್ಷಣಗಳ ಚಿಹ್ನೆಗಳಿಗೆ ಹೊಲಗಳನ್ನು ಪರಿಶೀಲಿಸಿ.
  • ಹೊಲದಲ್ಲಿನ ಬಂಡ್ ಗಳನ್ನು ಮತ್ತು ನೀರಾವರಿ ಕಾಲುವೆಗಳನ್ನು ಸ್ವಚ್ಛವಾಗಿರಿಸಿ.
  • ಹೊಲವನ್ನು ಕಳೆಗಳಿಂದ ಮುಕ್ತಗೊಳಿಸಿ ಮತ್ತು ಸೋಂಕಿತ ಸಸ್ಯಗಳ ಉಳಿಕೆಗಳನ್ನು, ಪ್ಯಾನಿಕಲ್ಗಳನ್ನು ಮತ್ತು ಕೊಯ್ಲಿನ ನಂತರದ ಬೀಜಗಳನ್ನು ತೆಗೆದು ಹಾಕಿ.
  • ರೋಗದ ಮುಂದಿನ ಸೋಂಕನ್ನು ಕಡಿಮೆ ಮಾಡಲು ಕೊಯ್ಲಿನ ನಂತರ ಹೊಲವನ್ನು ಆಳವಾಗಿ ಉಳುವುದು ಮತ್ತು ಹೊಲದ ಸೌರೀಕರಣಗಳೂ ನೆರವಾಗುವವು.
  • ಸಾಧ್ಯವಿದ್ದಲ್ಲಿ, ಸಂರಕ್ಷಿತ ಟಿಲ್ಲೇಜ್ ಮತ್ತು ಸತತ ಭತ್ತದ ಬೆಳೆ ಯೋಜಿಸಿ.
  • ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ 2-3 ವರ್ಷಗಳ ಬೆಳೆ ಸರದಿ ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ