ಮೆಕ್ಕೆ ಜೋಳ

ಮೆಕ್ಕೆಜೋಳದ ಸದರ್ನ್ ಲೀಫ್ ಬ್ಲೈಟ್

Cochliobolus heterostrophus

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮೊದಲಿಗೆ, ಕಂದು ಬಣ್ಣದ, ಕಂದು ಬಣ್ಣದ ಅಂಚುಗಳಿರುವ ವಜ್ರಾಕಾರದ ಅಥವಾ ಉದ್ದವಾದ ಗಾಯಗಳು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
  • ಈ ಗಾಯಗಳು ವಿಭಿನ್ನ ಗಾತ್ರದ್ದಾಗಿದ್ದು ಅವು ಎಲೆ ಸಿರೆಗಳ ಆಚೆ ಹರಡುತ್ತವೆ.
  • ರೋಗಕ್ಕೆ ಬೇಗ ತುತ್ತಾಗುವ ಸಸ್ಯಗಳಲ್ಲಿ, ಅವು ಒಂದುಗೂಡಿ ಎಲೆಗಳ ಸಂಪೂರ್ಣ ಭಾಗಗಳಿಗೆ ರೋಗವು ಹರಡುವಂತೆ ಮಾಡುತ್ತದೆ.
  • ರೋಗದ ನಂತರದ ಹಂತಗಳಲ್ಲಿ, ಜೊಂಡುಗಳಲ್ಲಿ ಬೂದುಬಣ್ಣದ ಕವಚ ಮತ್ತು ವಿರೂಪತೆಯನ್ನು ಸಹ ಕಾಣಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ರೋಗಕಾರಕದ ಶಕ್ತಿ, ಸಸ್ಯದ ಪ್ರಭೇದ ಮತ್ತು ಪರಿಸರ ಪರಿಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ಬದಲಾಗುತ್ತವೆ. ಮೊದಲಿಗೆ, ಕಂದು ಬಣ್ಣದ, ಕಂದು ಬಣ್ಣದ ಅಂಚುಗಳಿರುವ ವಜ್ರಾಕಾರದ ಅಥವಾ ಉದ್ದವಾದ ಗಾಯಗಳು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ ನಂತರ ಅವು ನಿಧಾನವಾಗಿ ಎಳೆಯ ಎಲೆಗೊಂಚಲುಗಳಿಗೆ ಹರಡುತ್ತದೆ. ಈ ಗಾಯಗಳು ವಿಭಿನ್ನ ಗಾತ್ರದ್ದಾಗಿದ್ದು ಅವು ಎಲೆ ಸಿರೆಗಳ ಆಚೆ ಹರಡುತ್ತವೆ. ರೋಗಕ್ಕೆ ಬೇಗ ತುತ್ತಾಗುವ ಸಸ್ಯಗಳಲ್ಲಿ, ಅವು ಒಂದುಗೂಡಿ ಎಲೆಗಳ ಸಂಪೂರ್ಣ ಭಾಗಗಳಿಗೆ ರೋಗವು ಹರಡುವಂತೆ ಮಾಡುತ್ತದೆ. ರೋಗದ ನಂತರದ ಹಂತಗಳಲ್ಲಿ, ಜೊಂಡುಗಳಲ್ಲಿ ಬೂದುಬಣ್ಣದ ಕವಚ ಮತ್ತು ವಿರೂಪತೆಯನ್ನು ಸಹ ಕಾಣಬಹುದು. ಎಲೆಗಳ ಹಾನಿಯ ಕಾರಣದಿಂದಾಗುವ ಉತ್ಪಾದಕತೆಯ ನಷ್ಟದಿಂದ ಸಸ್ಯಗಳು ಒಣಗಿಹೋಗಿ ಕಾಂಡಗಳು ಮುರಿದುಬೀಳುತ್ತವೆ. ಇದಾದ ಬಳಿಕ ಅವುಗಳು ನೆಲಕ್ಕೆ ಕುಸಿಯಬಹುದು.

Recommendations

ಜೈವಿಕ ನಿಯಂತ್ರಣ

ರೋಗಕಾರಕದ ಸೋಂಕಿನ ವಿರುದ್ಧ ಜೈವಿಕ ನಿಯಂತ್ರಣದ ಜೊತೆ ಸ್ಪರ್ಧಾತ್ಮಕ ಶಿಲೀಂಧ್ರ ಟ್ರೈಕೋಡರ್ಮಾ ಆಟ್ರೊವೈರೈಡ್ SG3403 ಅನ್ನು ಯಶಸ್ವಿಯಾಗಿ ಬಳಸಲಾಯಿತು. ಹೀಗಿದ್ದರೂ, ಹೊಲಗಳಲ್ಲಿ ಈ ಚಿಕಿತ್ಸೆಯ ಫಲದಾಯಕತೆ ತೋರಿಸಲು ಹೊಲಗಳಲ್ಲಿನ ಪ್ರಯೋಗಗಳನ್ನು ಇನ್ನೂ ಕೈಗೊಳ್ಳಬೇಕಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೂಕ್ತ ಸಮಯದಲ್ಲಿ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿದರೆ ಅದರಿಂದ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ರೋಗದ ಬೆಳವಣಿಗೆ, ಸಂಭವನೀಯ ಇಳುವರಿ ನಷ್ಟ, ಹವಾಮಾನ ಮುನ್ಸೂಚನೆ ಮತ್ತು ಸಸ್ಯದ ಬೆಳವಣಿಗೆಯ ಹಂತದ ಆಧಾರದ ಮೇಲೆ ಮಾತ್ರ ಸಿಂಪರಿಕೆಯನ್ನು ಪರಿಗಣಿಸಿ. ಯಾವುದೇ ವೇಗವಾಗಿ ಕೆಲಸ ಮಾಡುವ, ವ್ಯಾಪಕ ಶ್ರೇಣಿಯ ಉತ್ಪನ್ನವನ್ನು ಬಳಸಬಹುದು. ಯಾವುದೇ ವೇಗವಾಗಿ ಕೆಲಸಮಾಡುವ, ವಿಶಾಲ ರೋಹಿತ ಉತ್ಪನ್ನವನ್ನು ಶಿಫಾರಸು ಮಾಡಲಾಗಿದೆ, ಉದಾಹರಣೆಗೆ ಮನ್ಕೊಜೆಬ್ (2.5 ಗ್ರಾಂ / ಲೀ) 8-10 ದಿನಗಳ ಮಧ್ಯಂತರದಲ್ಲಿ.

ಅದಕ್ಕೆ ಏನು ಕಾರಣ

ಈ ರೋಗವು ಕೊಕ್ಲಿಯೊಬೊಲಸ್ ಹೆಟೆರೋಸ್ಟ್ರೋಫು (ಬೈಪೋಲಾರಿಸ್ ಮೇಡಿಸ್ ಎಂದೂ ಕರೆಯಲಾಗುತ್ತದೆ) ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಮಣ್ಣಿನಲ್ಲಿನ ಸಸ್ಯದ ಉಳಿಕೆಗಳಲ್ಲಿ ಶಿಲೀಂಧ್ರವು ಬದುಕಿರುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ಇದು ಬೀಜಕಗಳನ್ನು ಉತ್ಪಾದಿಸುತ್ತದೆ ಮತ್ತು ಅವು ಹೊಸ ಸಸ್ಯಗಳಿಗೆ ಗಾಳಿ ಮತ್ತು ಮಳೆಯ ಹನಿಗಳ ಮೂಲಕ ಹರಡುತ್ತವೆ. ಇದು ಎಲೆಗಳ ಮೇಲೆ ಕುಡಿಯೊಡೆಯುತ್ತದೆ ಮತ್ತು 72 ಗಂಟೆಗಳ ಒಳಗೆ ಅದರ ಜೀವನಚಕ್ರವನ್ನು (ಸೋಂಕಿನಿಂದ ಹೊಸ ಬೀಜಕ ಉತ್ಪಾದನೆ) ಪೂರ್ಣಗೊಳಿಸಬಹುದು. ಶಿಲೀಂಧ್ರದ ಬೆಳವಣಿಗೆ ಮತ್ತು ಸೋಂಕಿನ ಪ್ರಕ್ರಿಯೆಗೆ ಸೂಕ್ತವಾದ ಪರಿಸ್ಥಿತಿಗಳೆಂದರೆ, ತೇವಾಂಶವುಳ್ಳ ಹವಾಮಾನ, ಎಲೆ ಆರ್ದ್ರತೆ ಮತ್ತು 22 ರಿಂದ 30 °C ವರೆಗಿನ ಉಷ್ಣತೆ. ಎಲೆಗಳ ಮೇಲೆ ಆಗುವ ಹಾನಿಯು ಸಸ್ಯದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಋತುವಿನ ಆರಂಭದಲ್ಲಿ ಸೋಂಕಾದರೆ ಇಳುವರಿಯು ಕಡಿಮೆ ಆಗಬಹುದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳು ಲಭ್ಯವಿದ್ದರೆ ಅದನ್ನು ನಾಟಿ ಮಾಡಿ.
  • ಏಕ ಬೇಸಾಯವನ್ನು ತಪ್ಪಿಸಲು ಮೆಕ್ಕೆ ಜೋಳದ ವಿಭಿನ್ನ ಪ್ರಭೇದಗಳನ್ನು ನೆಡಿ.
  • ಹೋಸ್ಟ್-ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ಮಣ್ಣಿನಲ್ಲಿ ಬೆಳೆ ಉಳಿಕೆಗಳನ್ನು ಹೂತು ಹಾಕಲು ಆಳವಾದ ಉಳುಮೆ ಮಾಡಿ.
  • ಕೊಯ್ಲಿನ ನಂತರ ಉಳುಮೆ ಮಾಡದೆ ಹಾಗೇ ಬಿಡಲು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ