ಕಬ್ಬು

ಕಬ್ಬಿನ ಸೊರಗು ರೋಗ

Gibberella fujikuroi

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಸ್ಯವು ಹಳದಿಯಾಗಿ ಬಣ್ಣಗೆಡುವುದು.
  • ಸ್ಥಗಿತಗೊಂಡ ಬೆಳವಣಿಗೆ.
  • ಗಾಢ ಕೆಂಪಿನಿಂದ ನೇರಳೆ ಬಣ್ಣದ ಗೆಣ್ಣುಗಳು.
  • ಟೊಳ್ಳಾದ ಮತ್ತು ಒಣಗಿದ ಕಬ್ಬಿನ ಕಾಂಡಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಬೆಳವಣಿಗೆ ಹಂತದ ಕೊನೆಯಲ್ಲಿ ಹೆಚ್ಚಾಗಿ ರೋಗವು ಕಾಣಿಸಿಕೊಳ್ಳುತ್ತದೆ. ತಳದಿಂದ ಪ್ರಾರಂಭವಾಗಿ ಎಲೆಗಳು ಹಳದಿ-ಹಸಿರು ಬಣ್ಣಕ್ಕೆ ತಿರುಗುತ್ತವೆ, ದೃಢತೆ ಕಳೆದುಕೊಳ್ಳುತ್ತವೆ ಮತ್ತು ಅಂತಿಮವಾಗಿ ಶುಷ್ಕವಾಗುತ್ತವೆ. ಮೇಲ್ಭಾಗಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಅಥವಾ ಮಂಕಾದ ಹಸಿರು ಬಣ್ಣದ ಬ್ಲೇಡ್ನಿಂದ ಆವೃತವಾದ ಹಳದಿ ಮಧ್ಯನಾಳವನ್ನು ತೋರಿಸುತ್ತವೆ. ಪೀಡಿತ ಜಲ್ಲೆಗಳು ಕುಂಠಿತವಾಗುತ್ತವೆ, ತೂಕದಲ್ಲಿ ಹಗುರವಾಗಿರುತ್ತವೆ ಮತ್ತು ಟೊಳ್ಳಾದ ಇಂಟರ್ನೋಡುಗಳನ್ನು ಹೊಂದಿರುತ್ತವೆ ಆದರೆ ನೋಡುಗಳಿಗೆ ಮತ್ತು ಮೊಗ್ಗುಗಳಿಗೆ ಯಾವುದೇ ಹಾನಿಯಿರುವುದಿಲ್ಲ . ಉದ್ದುದ್ದವಾಗಿ ಕತ್ತರಿಸಿದಾಗ ನೋಡ್ಗಳಲ್ಲಿನ ಬೆಳವಣಿಗೆ ವಲಯಕ್ಕಿಂತ ಸ್ವಲ್ಪ ಮೇಲೆ ಗಾಢ ಕೆಂಪು ಬಣ್ಣದಿಂದ ನೇರಳೆ ಬಣ್ಣದ ಆಂತರಿಕ ಅಂಗಾಂಶವನ್ನು ಕಂಡುಬರುತ್ತದೆ. ತೀವ್ರವಾದ ಸಂದರ್ಭಗಳಲ್ಲಿ ಇಳುವರಿ ಬಹಳವಾಗಿ ಕಡಿಮೆಯಾಗಿಬಿಡುತ್ತದೆ.

Recommendations

ಜೈವಿಕ ನಿಯಂತ್ರಣ

ಬೀಜಗಳನ್ನು ತೇವಭರಿತ ಬಿಸಿಗಾಳಿಯಲ್ಲಿ 54°C ನಲ್ಲಿ 150 ನಿಮಿಷಗಳ ಕಾಲ ಸಂಸ್ಕರಿಸಿ. ನಂತರ ಬೀಜಗಳನ್ನು 0-1% ಬ್ಲೀಚ್ ದ್ರಾವಣದಲ್ಲಿ ಹತ್ತರಿಂದ 15 ನಿಮಿಷಗಳವರೆಗೆ ಮುಳುಗಿಸಿ. ದಯವಿಟ್ಟು ನೈರ್ಮಲ್ಯಕ್ಕೆ ಗಮನ ಕೊಡಿ ಮತ್ತು ಕೈಗವಸುಗಳನ್ನು ಹಾಗೂ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿಕೊಳ್ಳಿ. ಇಲ್ಲಿ ಬಳಸಲಾದ ಪಾತ್ರೆಯನ್ನು ನಂತರ ಮನೆಕೆಲಸಗಳಿಗಾಗಿ ಉಪಯೋಗಿಸದಿರಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕಬ್ಬಿನ ಸೊರಗು ರೋಗದ ವಿರುದ್ಧ ಯಾವುದೇ ರಾಸಾಯನಿಕ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ.

ಅದಕ್ಕೆ ಏನು ಕಾರಣ

ಸಸ್ಯಗಳು ಮಳೆಗಾಲದಲ್ಲಿ ಅಥವಾ ನಂತರ ರೋಗಲಕ್ಷಣಗಳನ್ನು ತೋರಿಸುತ್ತವೆ. ಶಿಲೀಂಧ್ರವು ಮುಖ್ಯವಾಗಿ ಇತರ ಕೀಟಗಳಾದ ರೂಟ್ ಬೋರೆರ್, ಟರ್ಮೈಟ್, ಸ್ಕೇಲ್ಸ್, ಮೀಲಿ ಬಗ್ಗುಗಳು ಇತ್ಯಾದಿಗಳು ಮಾಡಿದ ಗಾಯಗಳ ಮೂಲಕ ಪ್ರವೇಶಿಸುತ್ತದೆ. ಬರ ಮತ್ತು ನೀರು ನಿಲ್ಲುವಿಕೆಯಂತಹ ಜೈವಿಕ ಒತ್ತಡಗಳು ಸಸ್ಯಗಗಳು ವಿಲ್ಟ್ ಸೋಂಕಿಗೆ ತುತ್ತಾಗುವಂತೆ ಮಾಡುತ್ತವೆ. ಹೆಚ್ಚಿನ ಉಷ್ಣತೆ ಮತ್ತು ಕಡಿಮೆ ಆರ್ದ್ರತೆಯೊಂದಿಗೆ ತೇವಾಂಶದ ಒತ್ತಡವು ವಿಲ್ಟಿನ ವಿರುದ್ಧ ಸಸ್ಯದ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಬೀಜಗಳು ಅಥವಾ ಕಸಿ ಪಡೆಯಲು ಖಚಿತಪಡಿಸಿಕೊಳ್ಳಿ.
  • ನಾನ್-ಹೋಸ್ಟ್ ಸಸ್ಯಗಳೊಂದಿಗೆ ಸರದಿ ಬೆಳೆ ಶಿಫಾರಸು ಮಾಡಲಾಗಿದೆ.
  • ಗದ್ದೆಯಲ್ಲಿ, ಅದರಲ್ಲೂ ವಿಶೇಷವಾಗಿ ಸಾರಜನಕದ ಅತಿಯಾದ ರಸಗೊಬ್ಬರಗಳ ಬಳಕೆ ತಪ್ಪಿಸಿ.
  • ಕೆಲಸ ಮಾಡುವಾಗ ಸಸ್ಯಗಳ ಮೇಲಾಗಬಹುದಾದ ಗಾಯಗಳನ್ನು ತಪ್ಪಿಸಿ.
  • ಹೊಲದಲ್ಲಿ ಉತ್ತಮ ಒಳಚರಂಡಿ ಒದಗಿಸಿ ಮತ್ತು ಅತಿಯಾಗಿ ನೀರು ಸುರಿಯುವುದನ್ನು ತಪ್ಪಿಸಿ.
  • ಸುಗ್ಗಿಯ ನಂತರ ಹಳೆಯ ಸಸ್ಯದ ಉಳಿಕೆಗಳನ್ನು ವಿಲೇವಾರಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ