ದ್ರಾಕ್ಷಿ

ಕೋನೀಯ ಎಲೆ ಚುಕ್ಕೆ ರೋಗ

Mycosphaerella angulata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ತಿಳಿ ಹಳದಿ ಬಣ್ಣದ ಕಲೆಗಳು.
  • ಕಲೆಗಳ ಮಧ್ಯಭಾಗದಲ್ಲಿ ಅನಿಯಮಿತ ಕಂದುಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಎಲೆಗಳು ಹಳದಿಯಾಗಿ ಸೊರಗುತ್ತವೆ.
  • ಎಲೆಗಳು ಉದುರುವುದರಿಂದ ಸಸ್ಯದ ಚಟುವಟಿಕೆ ಕಡಿಮೆಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ರೋಗಕಾರಕ ಜೀವಿಗಳು ಎಲೆಗಳನ್ನು ಮಾತ್ರ ಆಕ್ರಮಿಸುತ್ತವೆ. ರೋಗದ ಆರಂಭಿಕ ಹಂತಗಳಲ್ಲಿ, ಸೋಂಕಿತ ಬಳ್ಳಿಗಳ ಎಲೆಗಳು ಮಸುಕಾದ, ಕ್ಲೋರೋಟಿಕ್ ಕಲೆಗಳನ್ನು ಹೊಂದುತ್ತವೆ. ಇದು ಹೆಚ್ಚಾಗಿ ಎಲೆಯ ಕೆಳ ಮೇಲ್ಮೈ ಮೇಲೆ ಗಣನೀಯವಾಗಿರುತ್ತದೆ. ಗಾತ್ರದಲ್ಲಿ ಬೆಳೆದಂತೆ, ಅನಿಯಮಿತ ಕಂದುಬಣ್ಣದ ಚುಕ್ಕೆಗಳು ಹಳದಿ ಕಲೆಗಳ ಮಧ್ಯಭಾಗದಲ್ಲಿ ಬೆಳೆಯುತ್ತವೆ. ಇದರಿಂದ ಇವುಗಳಿಗೆ ಕೋನೀಯ ಲಕ್ಷಣ ಬರುತ್ತದೆ ಮತ್ತು ಅವುಗಳು ಹೆಚ್ಚು ಎದ್ದು ಕಾಣುತ್ತವೆ. ರೋಗವು ಎಲೆಯ ಉಳಿದ ಭಾಗಗಳಿಗೆ ವಿಸ್ತರಿಸಬಹುದು ಮತ್ತು ಅಂತಿಮವಾಗಿ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸಾಯಬಹುದು. ರೋಗ ಮುಂದುವರೆದಂತೆ, ಋತುವಿನ ಅಂತ್ಯದ ವೇಳೆಗೆ ಎಲೆ ಉದುರುವಿಕೆಗೆ ಕಾರಣವಾಗಬಹುದು. ಎಲೆಗಳ ಕೊರತೆ ಸಸ್ಯದ ಚಟುವಟಿಕೆ ಮತ್ತು ಇಳುವರಿ ಕಡಿಮೆಯಾಗಲು ಹಾಗು ದ್ರಾಕ್ಷಿಯ ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಮೈಕೋಸ್ಫರೆಲ್ಲಾ ಆಂಗ್ಯುಲೇಟಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧಾನ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಯಾವಾಗಲೂ ಮೊದಲು ಪರಿಗಣಿಸಿ. ಕೋನೀಯ ಎಲೆಚುಕ್ಕೆಯನ್ನು ಸಾಂಪ್ರದಾಯಿಕ ಶಿಲೀಂಧ್ರನಾಶಕಗಳ ಸಕಾಲಿಕ ಬಳಕೆಯ ಮೂಲಕ ನಿಯಂತ್ರಿಸಬಹುದು. ಋತುವಿನ ಆರಂಭದಲ್ಲಿ ಶಿಲೀಂಧ್ರನಾಶಕಗಳ ಪುನರಾವರ್ತಿತ ಬಳಕೆ ಸೋಂಕನ್ನು ತಪ್ಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

ಅದಕ್ಕೆ ಏನು ಕಾರಣ

ಸಸ್ಯ ರೋಗಕಾರಕ ಶಿಲೀಂಧ್ರವಾದ ಮೈಕೋಸ್ಫೆರೆಲ್ಲಾ ಆಂಗ್ಯುಲೇಟಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಸ್ಕಡೀನ್ ದ್ರಾಕ್ಷಿಗೆ (ವಿಟಿಸ್ ರೋಟಂಡಿಫೋಲಿಯಾ) ಬರುವ ಪ್ರಮುಖ ರೋಗವಾಗಿದೆ. ಆದರೆ ಇತರ ದ್ರಾಕ್ಷಿಗಳ ಮೇಲೂ ಕೂಡಾ ಪರಿಣಾಮ ಬೀರಬಹುದು. ಬೀಜಗಳು ಗಾಳಿ ಮತ್ತು ನೀರಿನ ತುಂತುರುಗಳಿಂದ ಇತರ ಎಲೆಗಳು ಮತ್ತು ಸಸ್ಯಗಳಿಗೆ ಹರಡುತ್ತವೆ. ಅವು ಎಲೆಗಳ ಮೇಲಿರುವ ನೈಸರ್ಗಿಕ ರಂಧ್ರಗಳು ಅಥವಾ ಗಾಯಗಳ ಮೂಲಕ ಸಸ್ಯಗಳ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಮತ್ತು ಸೋಂಕು ತರುತ್ತವೆ. ಸೋಂಕಿತ ಎಲೆಗಳಲ್ಲಿ ದ್ಯುತಿಸಂಶ್ಲೇಷಣೆ ಕಳಪೆಯಾಗಿರುತ್ತದೆ ಮತ್ತು ಇದು ಎಲೆಗಳು ಉದುರಲು ಕಾರಣವಾಗುತ್ತದೆ. ಮತ್ತು ಬಳ್ಳಿಗಳ ಚಟುವಟಿಕೆ ಕಡಿಮೆಯಾಗಲು ಮತ್ತು ದ್ರಾಕ್ಷಿಗಳು ಸೂರ್ಯನ ಕಿರಣಗಳಿಗೆ ನೇರವಾಗಿ ತೆರೆದುಕೊಂಡು ಸುಟ್ಟಂತಾಗುತ್ತವೆ. ಹಣ್ಣು ಬೆಳೆಯುವ ಮೊದಲೇ ಇದು ಸಂಭವಿಸಿದರೆ, ಪೂರ್ತಿ ಬೆಳೆಯುವ ಮುನ್ನವೇ ಸೋಂಕು ಹಣ್ಣುಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು ಅಥವಾ ನಿಲ್ಲಿಸಬಹುದು. ಬೆಳವಣಿಗೆಯ ಅವಧಿಯ ಮೊದಲಿಗೆ ವಿಶೇಷವಾಗಿ ಬೆಚ್ಚಗಿನ, ಆರ್ದ್ರ ಸ್ಥಿತಿಯಲ್ಲಿ ರೋಗಕಾರಕವು ಹುಲುಸಾಗಿ ಬೆಳೆಯುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ, ಹೆಚ್ಚು ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ರೋಗದ ಚಿಹ್ನೆಗಳಿಗಾಗಿ ಆಗಾಗ್ಗೆ ದ್ರಾಕ್ಷಿತೋಟವನ್ನು ಪರಿಶೀಲಿಸಿ.
  • ಉತ್ತಮ ರಸಗೊಬ್ಬರ ಕಾರ್ಯಕ್ರಮದ ಮೂಲಕ ಬಳ್ಳಿಗಳ ಆರೋಗ್ಯ ನೋಡಿಕೊಳ್ಳಿ.
  • ತಡವಾಗಿ ರಸಗೊಬ್ಬರ ಹಾಕುವುದನ್ನು ತಪ್ಪಿಸಿ.
  • ದ್ರಾಕ್ಷಿತೋಟಗಳ ಸುತ್ತಲೂ ಹತ್ತಿರದ ಕಾಡು ಮಸ್ಕಡೈನ್ ಬಳ್ಳಿಗಳನ್ನು ತೆಗೆದುಹಾಕಿ.
  • ಮೇಲಾವರಣವನ್ನು ಸ್ವಲ್ಪ ಕತ್ತರಿಸಿ ಎಲೆಗೊಂಚಲುಗಳಿಗೆ ಉತ್ತಮವಾಗಿ ಗಾಳಿಯಾಡುವಂತೆ ಮಾಡಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೋಟದಿಂದ ತೆಗೆದು ಸ್ವಚ್ಛಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ