ಇತರೆ

ಧಾನ್ಯಗಳಲ್ಲಿ ಐ ಸ್ಪಾಟ್

Oculimacula yallundae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಾಂಡಗಳು ಮತ್ತು ಕೆಳ ಎಲೆ ಪೊರೆಗಳ ಮೇಲೆ ಗಾಢ ಕಂದು ಬಣ್ಣದಿಂದ ಹಸಿರು ಕಂದು ಬಣ್ಣದ, ಅಂಡಾಕಾರದ, ಕಣ್ಣುಗುಡ್ಡೆ ತರಹದ ಕಲೆಗಳು.
  • ಕಲೆಗಳು ಒಟ್ಟಿಗೆ ಬೆಳೆಯುತ್ತವೆ ಮತ್ತು ಕಾಂಡವನ್ನು ಹುಳುಕು ಮಾಡಿ, ನೀರು ಮತ್ತು ಪೌಷ್ಠಿಕಾಂಶದ ಗ್ರಹಿಕೆಯನ್ನು ಕಡಿಮೆ ಮಾಡಬಹುದು.
  • ರೋಗವು ಮುಂದುವರೆದಂತೆ, ಇದು ಕಾಂಡವನ್ನು ದುರ್ಬಲಗೊಳಿಸುತ್ತದೆ ಮತ್ತು ನೆಲಕ್ಕೆ ಬಾಗುವಂತೆ ಮಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಇತರೆ

ರೋಗಲಕ್ಷಣಗಳು

ಸಸಿ ಹಂತದಲ್ಲಿ ಸೋಂಕುಗಳು ಸಸ್ಯಗಳ ನಾಶಕ್ಕೆ ಕಾರಣವಾಗಬಹುದು (ಡೈಬ್ಯಾಕ್). ದುಂಡಗಿನ, ಕಣ್ಣಿನ ಆಕಾರದ ಕಲೆಗಳು ಕಾಂಡದ ತಳದಲ್ಲಿ ಕಂಡುಬರುತ್ತವೆ. ಅವುಗಳು ಹುಲ್ಲು ಬಣ್ಣದ ಕೇಂದ್ರಗಳನ್ನು ಹೊಂದಿದ್ದು, ಹಸಿರು ಬಣ್ಣದಿಂದ ಗಾಢ ಕಂದು ಬಣ್ಣದ ರಿಂಗುಗಳಲ್ಲಿ ಸುತ್ತುವರಿಯಲ್ಪಟ್ಟಿರುತ್ತವೆ. ಅನೇಕ ಸಂದರ್ಭಗಳಲ್ಲಿ, ಮಣ್ಣಿನ ಬಳಿಯ ಎಲೆ ಕವಚದಲ್ಲಿ ಕಣ್ಣುಗುಡ್ಡೆ ಹೊರಹೊಮ್ಮುತ್ತವೆ. ಈ ಕಲೆಗಳು ಒಟ್ಟಿಗೆ ಬೆಳೆಯುತ್ತವೆ ಮತ್ತು ಕಾಂಡವನ್ನು ಸುತ್ತಿಕೊಳ್ಳುತ್ತವೆ ಮತ್ತು ಅವುಗಳ ವಿಶಿಷ್ಟ ದುಂಡನೆಯ ಆಕಾರವನ್ನು ಕಳೆದುಕೊಳ್ಳಬಹುದು. ಇದು ನೀರು ಮತ್ತು ಪೌಷ್ಟಿಕಾಂಶದ ಗ್ರಹಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಿಳಿ, ಮುದಡಿದ ಹೂವುಗಳು ಮತ್ತು ಇಳುವರಿ ನಷ್ಟವನ್ನು ಉಂಟುಮಾಡಬಹುದು. ರೋಗವು ಮುಂದುವರೆದಂತೆ, ಇದು ಕಾಂಡವನ್ನು ದುರ್ಬಲಗೊಳಿಸುತ್ತದೆ ಮತ್ತು ನೆಲಕ್ಕೆ ಬಾಗುವಂತೆ ಮಾಡುತ್ತದೆ. ಬೇರುಗಳು " ಕಣ್ಣುಗುಡ್ಡೆ " ಯಿಂದ ಹಾನಿಗೊಳಗಾಗುವುದಿಲ್ಲ ಮತ್ತು ಮೇಲೆ ವಿವರಿಸಿದ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಆಕ್ಯುಲಿಮಾಕ್ಯುಲ ಯಾಲುಂಡೆಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರುನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ಹೆಚ್ಚಿನ ಶಿಲೀಂಧ್ರನಾಶಕಗಳು ಆರೋಗ್ಯ ಅಥವಾ ಪರಿಸರಕ್ಕೆ ಅಪಾಯಕಾರಿ . ಆದ್ದರಿಂದ ಬಳಕೆಗೆ ಶಿಫಾರಸು ಮಾಡಲಾಗುವುದಿಲ್ಲ. ಹೆಚ್ಚು ಪರಿಣಾಮಕಾರಿಯಾದ ಶಿಲೀಂಧ್ರನಾಶಕಗಳು ಬೋಸ್ಕ್ಯಾಡ್ ಮತ್ತು ಟ್ರಿಯಜೊಲ್ ಪ್ರೋಥಿಯೊಕೊನಜೋಲ್ ಅನ್ನು ಆಧರಿಸಿವೆ. ಸೈಪ್ರೊಡಿನಿಲ್ ಕೂಡ ಪರಿಣಾಮಕಾರಿಯಾಗಿದೆ. ಆದರೆ ಇತರ ಧಾನ್ಯಗಳ ರೋಗಗಳ ನಿಯಂತ್ರಣಕ್ಕೆ ಮಾತ್ರ ಸೀಮಿತ ವ್ಯಾಪ್ತಿಯನ್ನು ಹೊಂದಿದೆ.

ಅದಕ್ಕೆ ಏನು ಕಾರಣ

ಈ ರೋಗವು ಆಕ್ಯುಲಿಮಾಕ್ಯುಲ ಯಾಲುಂಡೆಯ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಮಣ್ಣುಗಳಲ್ಲಿ ಬೆಳೆ ಉಳಿಕೆಗಳಲ್ಲಿ ದೀರ್ಘಕಾಲದವರೆಗೆ ಬದುಕಬಲ್ಲದು (2 ವರ್ಷಗಳು ಅಥವಾ ಹೆಚ್ಚು). ವಸಂತಕಾಲದಲ್ಲಿ ಬೀಜಕಗಳು ಮಳೆಯಿಂದ ಅಥವಾ ಗಾಳಿಯಿಂದ ಸಸ್ಯದ ಉಳಿಕೆಗಳಿಂದ ಬೆಳೆಗೆ ಸಾಗಿದಾಗ ಇಂಥ ಅನುಕೂಲಕರ ಪರಿಸ್ಥಿತಿಗಳಲ್ಲಿ ಪ್ರಾಥಮಿಕ ಸೋಂಕು ಉಂಟಾಗುತ್ತದೆ. ಸಸ್ಯದ ಕೇವಲ ತಳದ ಪ್ರದೇಶಗಳು ಶಿಲೀಂಧ್ರದಿಂದ ಸೋಂಕಿತವಾಗುವುದು. ಸೌಮ್ಯ ಮತ್ತು ತೇವಾಂಶದ ಹವಾಮಾನದ ಪರಿಸ್ಥಿತಿಗಳು (ಇಬ್ಬನಿ, ಮಂಜುಗಳು), ಮತ್ತು ಶರತ್ಕಾಲದ ಮತ್ತು ವಸಂತಕಾಲದಲ್ಲಿ ಆಗಾಗ್ಗೆ ಬೀಳುವ ಮಳೆಯು ಶಿಲೀಂಧ್ರ ಮತ್ತು ಸೋಂಕಿನ ಪ್ರಕ್ರಿಯೆಯ ಜೀವನ ಚಕ್ರಕ್ಕೆ ಅನುಕೂಲಕರವಾಗಿವೆ. ಕಾಂಡದೊಳಗೆ ಕಲೆ ನುಗ್ಗಿದ ಮೇಲೆ, ಹೆಚ್ಚಿನ ಉಷ್ಣತೆಯು ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ರಾಗಿ ಮತ್ತು ಓಟ್ಸನಂತಹ ಇತರ ಧಾನ್ಯಗಳೊಂದಿಗೆ ಬೆಳೆ ಸರದಿ ಅದರ ವ್ಯಾಪಕತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸೋಂಕಿಗೆ ಹೆಚ್ಚಿನ ಅವಕಾಶವನ್ನು ಉಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸ್ಥಿರ ಮತ್ತು ನಿರೋಧಕ ಪ್ರಭೇದಗಳನ್ನು ಬೆಳೆಸಿಕೊಳ್ಳಿ.
  • ನಾಟಿ ಮಾಡುವಾಗ ಆಳವಾಗಿ ಬೀಜಗಳನ್ನು ಬಿತ್ತದಂತೆ ನೋಡಿಕೊಳ್ಳಿ.
  • ಬೇಗ ಬಿತ್ತನೆ ಮಾಡುವುದನ್ನು ತಪ್ಪಿಸಿ.
  • ಪ್ರಾಥಮಿಕ ಸೋಂಕನ್ನು ತಡೆಗಟ್ಟಲು ಚೆನ್ನಾಗಿ ದಿಬ್ಬುಗಳನ್ನು ಮಾಡಿ.
  • ರೋಗ ಬರದ ಜಾತಿಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ ಮತ್ತು ಕಾರ್ಯಗತಗೊಳಿಸಿ.
  • ಸುಗ್ಗಿಯ ನಂತರ ಉಳಿಕೆಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ನೆಡುವಾಗ ಹೆಚ್ಚಿನ ಅಂತರವನ್ನು ಇಟ್ಟುಕೊಂಡು ನಿಮ್ಮ ಮೇಲಾವರಣವನ್ನು ಸುಧಾರಿಸಲು ಪ್ರಯತ್ನಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ