ಹುಲ್ಲುಜೋಳ

ಆಂಥ್ರಾಕ್ನೋಸ್ ಎಲೆ ರೋಗ

Colletotrichum graminicola

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ಅಂಡಾಕಾರದ, ನೀರು-ತುಂಬಿದಂತಹ ಗಾಯಗಳು.
  • ಕಂದು ಬಣ್ಣದ ಮಧ್ಯಭಾಗ ಮತ್ತು ಕೆನ್ನೇರಳೆ ಅಂಚುಗಳಿರುವ ಕಲೆಗಳು.
  • ರೋಗದ ತೇಪೆಗಳು ಇಡೀ ಎಲೆಯನ್ನು ಆವರಿಸಿಕೊಳ್ಳುತ್ತವೆ.
  • ಮೇಲ್ಭಾಗ ಸಾಯುತ್ತದೆ.
  • ಕಾಂಡ ಕೊಳೆಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಹುಲ್ಲುಜೋಳ

ರೋಗಲಕ್ಷಣಗಳು

ಸಸ್ಯ ವಿಧ, ಪರಿಸರ ಪರಿಸ್ಥಿತಿಗಳು ಮತ್ತು ರೋಗಕಾರಕ ಬಲವು ಸೋಂಕಿನ ಫಲಿತಾಂಶವನ್ನು ನಿರ್ಧರಿಸುತ್ತದೆ. ರೋಗಕ್ಕೆ ತುತ್ತಾಗುವ ಪ್ರಭೇದಗಳ ಮೇಲೆ, ಸೋಂಕು ಮೂರು ವಿಭಿನ್ನ ಹಂತಗಳಿಂದ ನಿರೂಪಿಸಲ್ಪಡುತ್ತದೆ: ಎಲೆ ರೋಗ, ಮೇಲ್ಭಾಗದ ಡೈ ಬ್ಯಾಕ್ (ನಿರ್ಜೀವಗೊಳ್ಳುವಿಕೆ) ಮತ್ತು ತೊಟ್ಟಿನ ಕೊಳೆತ. ಸಣ್ಣ, ಅಂಡಾಕಾರದ, ನೀರಿನ-ನೆನೆಸಿದ ಗಾಯಗಳು ಮೊದಲು ಕೆಳಗಿರುವ ಎಲೆಗಳ ಮೇಲೆ, ಎಲೆ ತುದಿಯ ಬಳಿ ಅಥವಾ ಮಧ್ಯನಾಳದಲ್ಲಿ ಕಾಣಿಸುತ್ತವೆ ನಂತರ ಮೇಲೆ ಕಾಣಿಸಿಕೊಳ್ಳುತ್ತವೆ. ಅವುಗಳು ಅರೆಪಾರದರ್ಶಕ ಕಲೆಗಳಾಗಿ ಕುಂದಿದ ಮಧ್ಯಬಾಗಗಳೊಡನೆ ಮತ್ತು ಕೆನ್ನೇರಳೆ ಅಂಚುಗಳೊಂದಿಗೆ ಬೆಳೆಯುತ್ತವೆ ಮತ್ತು ಇವು ಸಂಪೂರ್ಣ ಎಲೆಯನ್ನು (ಎಲೆಯ ರೋಗ) ಆವರಿಸಿರುವಂತೆ ರೋಗದ ಕಲೆಗಳಾಗಿ ಒಟ್ಟುಗೂಡುತ್ತವೆ. ಸಸ್ಯ ಬೆಳವಣಿಗೆಯ ನಂತರದ ಹಂತಗಳಲ್ಲಿ, ಪರಿಸ್ಥಿತಿಗಳು ಅನುಕೂಲಕರವಾದರೆ ಕಡುವಾದ, ಉಬ್ಬಿದ ಚುಕ್ಕೆಗಳು ಸತ್ತ ಅಂಗಾಂಶದಲ್ಲಿ ಕಂಡುಬರುತ್ತವೆ. ತೊಟ್ಟುಗಳು ಮತ್ತು ಕಾಂಡಗಳ ಗಾಯಗಳು ಆಂತರಿಕ ಅಂಗಾಂಶಗಳ ವಸಾಹತಿಗೆ ಅನುಕೂಲ ಮಾಡಿಕೊಡುತ್ತವೆ, ಇದು ಮೇಲ್ಭಾಗದ ಡೈ ಬ್ಯಾಕ್ (ನಿರ್ಜೀವಗೊಳ್ಳುವಿಕೆ) ಮತ್ತು ತೊಟ್ಟಿನ ಕೊಳೆತದಂತಹ ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕೊಲೆಟೊಟ್ರಿಚುಮ್ ಗ್ರ್ಯಾಮಿನಿಕೊಲಾ ವಿರುದ್ಧ ಯಾವುದೇ ಪರಿಣಾಮಕಾರಿ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಇಲ್ಲಿಯವರೆಗೆ, ಯಾವುದೇ ಪರಿಣಾಮಕಾರಿ ಶಿಲೀಂಧ್ರನಾಶಕಗಳು ಲಭ್ಯವಿಲ್ಲ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿನ ಸಸ್ಯದ ಉಳಿಕೆಗಳಲ್ಲಿ ಶಿಲೀಂಧ್ರವು ಉಳಿದುಕೊಂಡಿರುತ್ತದೆ, ಇದು ಅಲ್ಲಿಂದ ಕೆಳಗಿರುವ ಎಲೆಗಳ ಮೇಲೆ ಗಾಳಿಯಿಂದ ಮತ್ತು ವಸಂತಕಾಲದಲ್ಲಿ ಚಿಮ್ಮುವ ಮಳೆಯಿಂದ ಹರಡುತ್ತದೆ. ಎಲೆ ಗರಿಗಳಲ್ಲಿ ಬೆಳವಣಿಗೆಯಾಗುವ ಗಾಯಗಳು ದ್ವಿತೀಯ ಹರಡುವಿಕೆಯನ್ನು ಮೇಲಿನ ಎಲೆಗಳು ಅಥವಾ ತೊಟ್ಟುಗಳಲ್ಲಿ ಉಂಟುಮಾಡುತ್ತವೆ. ತೊಟ್ಟಿನ ಗಾಯವು ಆಂತರಿಕ ಅಂಗಾಂಶಗಳ ವಸಾಹತು ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪರಿಸರದ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಇದರ ಪರಿಣಾಮವಾಗಿ ಇತರ ರೋಗಲಕ್ಷಣಗಳಾದ ಮೇಲ್ಭಾಗದ ಡೈ ಬ್ಯಾಕ್ (ನಿರ್ಜೀವಗೊಳ್ಳುವಿಕೆ) ಮತ್ತು ತೊಟ್ಟಿನ ಕೊಳೆತವು ಕಂಡುಬರುತ್ತವೆ. ಶಿಲೀಂಧ್ರ (ಮತ್ತು ರೋಗದ) ಜೀವನ ಚಕ್ರಕ್ಕೆ ಸಾಪೇಕ್ಷ ಬೆಚ್ಚಗಿನ ತಾಪಮಾನಗಳು (20 ರಿಂದ 30 °C), ದೀರ್ಘಕಾಲದ ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು ಆಗಾಗ ಮಳೆ ಅನುಕೂಲಕರವಾಗಿರುತ್ತದೆ. ಶಿಲೀಂಧ್ರವು ಸಸಿ ಹಂತದಲ್ಲಿ ಸಸ್ಯಗಳಿಗೆ ಸೋಂಕು ತಗುಲಿಸಬಹುದು ಆದರೆ ಗದ್ದೆಗಳಲ್ಲಿ ಸೂಕ್ತವಾದ ರಸಗೊಬ್ಬರಗಳನ್ನು ಬಳಸಿದಾಗ ಇದು ವಿರಳವಾಗಿ ಅತಿ ಕಡಿಮೆ ಇಳುವರಿ ನಷ್ಟವನ್ನುಂಟು ಮಾಡುತ್ತದೆ. ತ್ವರಿತವಾಗಿ ವಿಸ್ತರಗೊಳ್ಳುವ ಎಲೆಗಳು ಅಭಿವೃದ್ಧಿಶೀಲ ರೋಗಲಕ್ಷಣಗಳಿಗೆ ಹೆಚ್ಚು ತುತ್ತಾಗುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗ ತಡೆಯುವ ಬೆಳೆಗಳೊಂದಿಗೆ (ಹುಲ್ಲು ಅಲ್ಲದ ಬೆಳೆಗಳು ಅಥವಾ ಸೋಯಾಬೀನ್) ದೀರ್ಘಕಾಲದ ಬೆಳೆ ಸರದಿಯನ್ನು ಯೋಜಿಸಿ.
  • ರೋಗಲಕ್ಷಣಗಳ ಉಪಸ್ಥಿತಿಗಾಗಿ ಗದ್ದೆಗಳನ್ನು ಪರಿಶೀಲಿಸಿ, ಉದಾಹರಣೆಗೆ ತೊಟ್ಟಿನ ಕೊಳೆತ.
  • ಸಮತೋಲಿತ ಮಣ್ಣಿನ ಫಲವತ್ತತೆ ಮತ್ತು ಸ್ಥಿರ ಪಿಎಚ್-ಮಟ್ಟವನ್ನು ಕಾಪಾಡಿಕೊಳ್ಳಿ.
  • ಉತ್ತಮ ಒಳಚರಂಡಿಯನ್ನು ಗದ್ದೆಗೆ ಒದಗಿಸಿ.
  • ಗದ್ದೆ ಮತ್ತು ಅದರ ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ಸುಗ್ಗಿಯ ನಂತರ ಆಳವಾಗಿ ಉಳುಮೆ ಮಾಡಿ ಮತ್ತು ಉಳಿಕೆಗಳನ್ನು ಮುಚ್ಚಿಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ