ಬಾದಾಮಿ

ಶಾಟ್ಹೋಲ್ ರೋಗ

Wilsonomyces carpophilus

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣ ನೇರಳೆ ಕಪ್ಪು ಕಲೆಗಳು.
  • ಮಚ್ಚೆಗಳು ದೊಡ್ಡದಾಗುತ್ತಿದ್ದಂತೆ ಮಧ್ಯದಲ್ಲಿ ತಿಳಿ ಕಂದು ಬಣ್ಣಕ್ಕೆ ತಿರುಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಬಾದಾಮಿ
ಜಲ್ದರು ಹಣ್ಣು
ಚೆರ್ರಿ
ಪೀಚ್

ಬಾದಾಮಿ

ರೋಗಲಕ್ಷಣಗಳು

ಆರಂಭಿಕ ರೋಗಲಕ್ಷಣಗಳು ವಸಂತಕಾಲದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಹೊಸ ಎಲೆಗಳ ಮೇಲೆ ಮತ್ತು ಸಾಂದರ್ಭಿಕವಾಗಿ ಚಿಗುರುಗಳು ಮತ್ತು ಮೊಗ್ಗುಗಳ ಮೇಲೆ ಕೆನ್ನೇರಳೆ ಅಥವಾ ಕೆಂಪು ಬಣ್ಣದ ಚುಕ್ಕೆಗಳ ರಚನೆಯಿಂದ ಗುರುತಿಸಲ್ಪಡುತ್ತವೆ. ಈ ಕಲೆಗಳು ಸಾಮಾನ್ಯವಾಗಿ ತಿಳಿ ಹಸಿರು ಅಥವಾ ಹಳದಿ ಅಂಚುಗಳಿಂದ ಸುತ್ತುವರಿದಿರುತ್ತವೆ. ಅವು ವಿಸ್ತರಿಸಿದಂತೆ, ಅವುಗಳ ಮಧ್ಯಭಾಗವು ಮೊದಲು ಕಂದು ಅಥವಾ ತುಕ್ಕು-ಬಣ್ಣಕ್ಕೆ ತಿರುಗುತ್ತದೆ ಮತ್ತು ಅಂತಿಮವಾಗಿ ಉದುರಿಹೋಗುತ್ತದೆ. ಇದರಿಂದಾಗಿ ಅಂಗಗಳ ಮೇಲೆ ವಿಶಿಷ್ಟವಾದ 'ಶಾಟ್ ಹೋಲ್' (ರಂಧ್ರಗಳು) ಉಳಿಯುತ್ತವೆ. ಹೀಗಾಗಿ, ರೋಗಕ್ಕೆ ಈ ಹೆಸರು ಬಂದಿದೆ. ಅಕಾಲಿಕ ಎಲೆ ಉದುರುವಿಕೆಯೂ ಸಂಭವಿಸಬಹುದು. ಕೊಂಬೆಗಳಲ್ಲಿ ಸತ್ತ ಮೊಗ್ಗುಗಳು, ಗಾಯಗಳು ಅಥವಾ ಅಂಟು ಹೊರಸೂಸುವ ಹುಣ್ಣುಗಳನ್ನು ನೋಡಬಹುದು. ಹಣ್ಣುಗಳ ಮೇಲೆ, ಕೆನ್ನೇರಳೆ ಅಂಚುಗಳೊಂದಿಗೆ ಒರಟಾದ ಮತ್ತು ಕಾರ್ಕ್ ನಂತಹ ಗಾಯಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೇಲಿನ ಮೇಲ್ಮೈಯಲ್ಲಿ ಮಾತ್ರ ಇವು ಕಾಣುತ್ತವೆ. ಇದರಿಂದ ಹಣ್ಣುಗಳು ಅನಾಕರ್ಷಕವಾಗಿ, ಮಾರಾಟವಾಗದೇ ಉಳಿಯಬಹುದು. ಭೂತಗನ್ನಡಿಯ ಮೂಲಕ ನೋಡಿದರೆ ಗಾಯಗಳ ಮಧ್ಯದಲ್ಲಿ ಸಣ್ಣ ಕಪ್ಪು ಚುಕ್ಕೆಗಳನ್ನು ಗಮನಿಸಬಹುದು.

Recommendations

ಜೈವಿಕ ನಿಯಂತ್ರಣ

ಚಳಿಗಾಲದ ಆರಂಭದಲ್ಲಿ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ರೋಗದ ವಿರುದ್ಧ ಮೊದಲ ರಕ್ಷಣೆಯಾಗಿದೆ. ಮನೆಯಲ್ಲಿ ತಯಾರಿಸಿದ ಬೋರ್ಡೆಕ್ಸ್ ಮಿಶ್ರಣ ಅಥವಾ ತಾಮ್ರದ ವಾಣಿಜ್ಯ ಸೂತ್ರೀಕರಣಗಳನ್ನು ಖರೀದಿಸಬಹುದು. ಝಿಂಕ್ ಸಲ್ಫೇಟ್ ಅನ್ನು ಶರತ್ಕಾಲದ ಕೊನೆಯಲ್ಲಿ ಎಲೆಗಳ ಮೇಲೆ ಸಿಂಪಡಿಸುವ ಮೂಲಕ ಎಲೆ ಉದುರುವಿಕೆಯನ್ನು ತ್ವರಿತಗೊಳಿಸಬಹುದು ಮತ್ತು ಹೊಸ ಋತುವಿನ ಆರಂಭಕ್ಕೆ ಮೊದಲು ಶಿಲೀಂಧ್ರದ ಉಪಸ್ಥಿತಿಯನ್ನು ಕಡಿಮೆಗೊಳಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹಣ್ಣುಗಳನ್ನು ರಕ್ಷಿಸಲು, ಶಿಲೀಂಧ್ರನಾಶಕಗಳನ್ನು ಹೂಬಿಡುವ ಅವಧಿಯ ಮೊದಲು ಮತ್ತು ನಂತರ, ಮೊಗ್ಗು ಮೊಳೆಯುವಿಕೆಯಿಂದ ಪ್ರಾರಂಭಿಸಿ ದಳ ಉದುರುವವರೆಗೂ ಸಿಂಪಡಿಸಬಹುದು. ಹೂವರುಳು ಆಸುಪಾಸಿನ ಅವಧಿಯಲ್ಲಿನ ಹವಾಮಾನದ ಮಾಹಿತಿಯು ಹಣ್ಣುಗಳನ್ನು ರಕ್ಷಿಸಲು ಸಿಂಪಡಣೆಗಳ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಈ ಹಂತದಲ್ಲಿ ತಾಮ್ರವನ್ನು ಶಿಫಾರಸು ಮಾಡದ ಕಾರಣ, ಥಿರಾಮ್, ಜಿರಾಮ್, ಅಜೋಕ್ಸಿಸ್ಟ್ರೋಬಿನ್, ಕ್ಲೋರೋಥಲೋನಿಲ್, ಐಪ್ರೊಡಿಯೋನ್ ಆಧಾರಿತ ಶಿಲೀಂಧ್ರನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ವಿಲ್ಸೊನೊಮೈಸಸ್ ಕಾರ್ಪೊಫಿಲಸ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹಲವಾರು ಜಾತಿಯ ಸ್ಟೋನ್ ಹಣ್ಣುಗಳಿಗೆ (ಪೀಚ್, ಬಾದಾಮಿ, ಚೆರ್ರಿ ಮತ್ತು ಏಪ್ರಿಕಾಟ್) ಸೋಂಕು ತರುತ್ತದೆ. ಪರ್ಯಾಯ ಆಶ್ರಯದಾತ ಸಸ್ಯಗಳು ಇಂಗ್ಲಿಷ್ ಲಾರೆಲ್ ಮತ್ತು ನೆಕ್ಟರಿನ್‌ಗಳು. ಮೊಗ್ಗುಗಳು ಮತ್ತು ಕೊಂಬೆಗಳಲ್ಲಿನ ಗಾಯಗಳಲ್ಲಿ ಅಥವಾ ಮಮ್ಮಿಫೈಡ್ ಹಣ್ಣುಗಳಲ್ಲಿ ಶಿಲೀಂಧ್ರವು ಚಳಿಗಾಲವನ್ನು ಕಳೆಯುತ್ತದೆ. ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದಾಗ, ಅವು ಬೆಳವಣಿಗೆಯನ್ನು ಪುನರಾರಂಭಿಸುತ್ತವೆ ಮತ್ತು ಆರೋಗ್ಯಕರ ಅಂಗಾಂಶಗಳಿಗೆ ಮಳೆ ತುಂತುರುಗಳಿಂದ ಹರಡುವ ಬೀಜಕಗಳನ್ನು ಉತ್ಪಾದಿಸುತ್ತವೆ. ಎಲೆಗಳ ವಿಸ್ತೃತ ಆರ್ದ್ರತೆಯ ಅವಧಿಗಳು (14-24 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು) ಮತ್ತು ಸುಮಾರು 22 °C ತಾಪಮಾನವು ಶಿಲೀಂಧ್ರದ ಜೀವನ ಚಕ್ರಕ್ಕೆ ಮತ್ತು ಆರೋಗ್ಯಕರ ಮರಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಬೆಚ್ಚಗಿನ, ಮಂಜು ಅಥವಾ ಮಳೆಯ ಚಳಿಗಾಲ ಮತ್ತು ವಸಂತದಲ್ಲಿ ಭಾರೀ ಮಳೆ ಬೀಜಕಗಳ ರಚನೆ ಮತ್ತು ಬಿಡುಗಡೆಗೆ ಅನುಕೂಲಕರವಾಗಿದೆ. ವಸಂತಕಾಲದಲ್ಲಿ ಅಸಾಮಾನ್ಯವಾದ ಆರ್ದ್ರ ವಾತಾವರಣದಲ್ಲಿ ಮಾತ್ರ ಈ ರೋಗವು ಕಲ್ಲಿನ ಹಣ್ಣುಗಳ ಮರಗಳ ಮೇಲೆ ಬೆಳೆಯುತ್ತದೆ.


ಮುಂಜಾಗ್ರತಾ ಕ್ರಮಗಳು

  • ನೀರಾವರಿ ಸಮಯದಲ್ಲಿ ಕೆಳಗಿನ ಎಲೆಗಳ ಮೇಲೆ ನೀರನ್ನು ಸಿಂಪಡಿಸಬೇಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟಗಳನ್ನು ಮೇಲ್ವಿಚಾರಣೆ ಮಾಡಿ.
  • ಎಲೆಗೊಂಚಲುಗಳಲ್ಲಿ ಉತ್ತಮವಾಗಿ ಗಾಳಿಯಾಡಲು ಅನುವು ಮಾಡಿಕೊಡುವಂತೆ ಸಮರುವಿಕೆಯನ್ನು ಮಾಡಿ.
  • ಸೋಂಕು ಪತ್ತೆಯಾದ ತಕ್ಷಣ, ಅನಾರೋಗ್ಯಕರ ಶಾಖೆಯನ್ನು ಆರೋಗ್ಯಕರ ಅಂಗಾಂಶದ ಕೆಲವು ಸೆಂಟಿಮೀಟರ್ ಗಳಷ್ಟು ಕೆಳಗೆ ಕತ್ತರಿಸಿ.
  • ತೋಟದ ಕೆಲಸದ ನಂತರ ಕತ್ತರಿಸುವ ಉಪಕರಣಗಳು ಮತ್ತು ಇತರ ಪಾತ್ರೆಗಳನ್ನು ಸೋಂಕುರಹಿತಗೊಳಿಸಿ.
  • ಹೊಲದಿಂದ ಕತ್ತರಿಸಿದ ಕೊಂಬೆಗಳನ್ನು ಮತ್ತು ಮರವನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಮರದ ಬಳಿ ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ನಿವಾರಕವಾಗಿ ಬೆಳೆಯಿರಿ.
  • ಪರ್ಯಾಯವಾಗಿ, ಕಾಂಡದ ಸುತ್ತಲೂ ಸಾವಯವ ಎಲೆಹಸಿರನ್ನು ಹರಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ