ಇತರೆ

ಸಿಲ್ವರ್ ಲೀಫ್ (ಬೆಳ್ಳಿ ಎಲೆ)

Chondrostereum purpureum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಮಸುಕಾದ, ಬೆಳ್ಳಿಯಂತಹ ಹೊಳಪು.
  • ಕಾಂಡಗಳು ಮತ್ತು ಕೊಂಬೆಗಳು ಗಾಢ ಕಂದು ಬಣ್ಣಕ್ಕೆ ತಿರುಗಿ ಬಾಡುತ್ತವೆ(ಡೈಬ್ಯಾಕ್).
  • ತೊಗಟೆಯ ಮೇಲೆ ಬಿಳಿ ಉಣ್ಣೆಯ ಮೇಲ್ಭಾಗ ಮತ್ತು ನೇರಳೆ-ಕಂದು ಕೆಳಭಾಗವಿರುವ ಬ್ರಾಕೆಟ್-ಆಕಾರದ ಶಿಲೀಂಧ್ರಗಳು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಸೇಬು
ಜಲ್ದರು ಹಣ್ಣು
ಚೆರ್ರಿ
ಪೀಚ್
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಶಿಲೀಂಧ್ರವು ಮುತ್ತಿಕೊಂಡ ಎಲೆಗಳ ಮೇಲೆ ಮಸುಕಾದ, ಬೆಳ್ಳಿಯ ಹೊಳಪು ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಆರಂಭದಲ್ಲಿ ಒಂದು ಶಾಖೆಗೆ ಸೀಮಿತವಾಗಿರುತ್ತದೆ. ಆದರೆ ಕಾಲಾನಂತರದಲ್ಲಿ ಮರದ ಇತರ ಭಾಗಕ್ಕೆ ಹರಡಬಹುದು. ರೋಗದ ನಂತರದ ಹಂತಗಳಲ್ಲಿ, ಎಲೆಗಳು ಮುರಿದು ಅಂಚುಗಳು ಮತ್ತು ನಡು ದಿಂಡಿನ ಸುತ್ತಲೂ ಕಂದು ಬಣ್ಣಕ್ಕೆ ತಿರುಗಬಹುದು. ಪೀಡಿತ ಕಾಂಡಗಳ ಆಂತರಿಕ ಅಂಗಾಂಶಗಳು ತೊಗಟೆಯ ಅಡಿಯಲ್ಲಿ ಗಾಢ ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಸಾಯುತ್ತವೆ. ಬೇಸಿಗೆಯ ಅಂತ್ಯದಿಂದ, ಸತ್ತ ಶಾಖೆಗಳ ತೊಗಟೆಯ ಮೇಲೆ ಚಪ್ಪಟೆ ಅಥವಾ ಬ್ರಾಕೆಟ್-ಆಕಾರದ ಶಿಲೀಂಧ್ರಗಳು ಬೆಳೆಯುತ್ತವೆ. ಅವು ಬಿಳಿ ಉಣ್ಣೆಯ ಮೇಲ್ಭಾಗ ಮತ್ತು ನೇರಳೆ-ಕಂದು ಬಣ್ಣದ ಕೆಳಭಾಗವನ್ನು ಹೊಂದಿರುತ್ತವೆ. ಎರಡೂ ಬದಿಗಳು ಬೀಜಕ-ರೂಪಿಸುವ ದೇಹಗಳನ್ನು ಹೊಂದಿರುತ್ತವೆ ಮತ್ತು ಒದ್ದೆಯಾದಾಗ ಮೃದು ಮತ್ತು ಜಾರುವಂತಾಗುತ್ತವೆ. ಮತ್ತು ಒಣಗಿದಾಗ ಒರಟಾಗಿ ಸುಕ್ಕುಗಟ್ಟುತ್ತವೆ.

Recommendations

ಜೈವಿಕ ನಿಯಂತ್ರಣ

ಅನೇಕ ಸಂದರ್ಭಗಳಲ್ಲಿ, ಸಿಲ್ವರ್ ಲೀಫ್ ರೋಗದ ದಾಳಿಯಿಂದ ಮರಗಳು ಸ್ವಾಭಾವಿಕವಾಗಿ ಚೇತರಿಸಿಕೊಳ್ಳುತ್ತವೆ. ಆದ್ದರಿಂದ ಕ್ರಮ ತೆಗೆದುಕೊಳ್ಳುವ ಮೊದಲು ಸ್ವಲ್ಪ ಸಮಯ ಕಾಯಲು ಸೂಚಿಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ಕೀಟ ನಿರ್ವಹಣೆಯನ್ನು ಯಾವಾಗಲೂ ಪರಿಗಣಿಸಿ. ಸಿಲ್ವರ್ ಲೀಫ್ ರೋಗ ಪುನರಾವರ್ತಿತ ಸಮಸ್ಯೆಯಾಗಿರುವ ಪ್ರದೇಶಗಳಲ್ಲಿ ಸೂಕ್ಷ್ಮ ಮರಗಳಲ್ಲಿ, ಸಮರುವಿಕೆಯಲ್ಲಿ ಕತ್ತರಿಸಿದ ಭಾಗಗಳಿಗೆ ಪೇಂಟ್ ಗಳೊಂದಿಗೆ ಚಿಕಿತ್ಸೆ ಮಾಡುವುದು ಪ್ರಮಾಣಿತ ಅಭ್ಯಾಸವಾಗಿ ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ, ಕೆಲವು ತಜ್ಞರು ಈ ಗಾಯಗಳನ್ನು ಸ್ವಾಭಾವಿಕವಾಗಿ ಗುಣಪಡಿಸಲು ಅವಕಾಶ ನೀಡುವುದು ಉತ್ತಮ ಎಂದು ಹೇಳುತ್ತಾರೆ.

ಅದಕ್ಕೆ ಏನು ಕಾರಣ

ಕೊಂಡ್ರೊಸ್ಟೆರಿಯಮ್ ಪರ್ಪ್ಯೂರಿಯಮ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಕಾಂಡಗಳು ಮತ್ತು ಸತ್ತ ಕೊಂಬೆಗಳ ಮೇಲೆ ಎದ್ದುಕಾಣುವ ಫ್ರುಟಿಂಗ್ ದೇಹಗಳನ್ನು ನಿರ್ಮಿಸುತ್ತದೆ. ಈ ರಚನೆಗಳು ಬೀಜಕಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ನಂತರ ಗಾಳಿಯಿಂದ ಆರೋಗ್ಯಕರ ಮರಗಳು ಮತ್ತು ಪೊದೆಗಳಿಗೆ ಸಾಗಿಸಲ್ಪಡುತ್ತವೆ. ಅವು ಗಾಯಗಳ ಮೂಲಕ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಅದರಲ್ಲೂ ಮುಖ್ಯವಾಗಿ ಸಮರುವಿಕೆಯಿಂದ ಉಂಟಾದ ಗಾಯಗಳ ಮೂಲಕ. ಅವು ಮರದ ಒಳಭಾಗಕ್ಕೆ ಬೆಳೆಯುತ್ತಾ ಹೋದಂತೆ, ವಿಶಿಷ್ಟವಾದ ಕಪ್ಪು ರೀತಿಯ ಆಂತರಿಕ ಅಂಗಾಂಶಗಳನ್ನು ಉತ್ಪಾದಿಸುವ ಮೂಲಕ, ನಿಧಾನವಾಗಿ ಅದನ್ನು ಕೊಲ್ಲುತ್ತವೆ. ಅವು ಸಸ್ಯ ಜೀವರಸದ ಕಾಲುವೆ ಮೂಲಕ ಎಲೆಗಳವರೆಗೆ ಸಾಗಿ ಹೋಗುವ ವಿಷವನ್ನು ಸಹ ಸ್ರವಿಸುತ್ತವೆ. ಈ ವಿಷವು ಅಂಗಾಂಶಗಳನ್ನು ಹಾನಿಗೊಳಿಸುತ್ತದೆ ಮತ್ತು ಅವುಗಳ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಇದರಿಂದ, ಅವು ಬೆಳ್ಳಿಯ ಬಣ್ಣದ ಅಂಶವನ್ನು ಪಡೆಯುತ್ತವೆ. ಆದ್ದರಿಂದ, ಶಿಲೀಂಧ್ರವು ವಾಸ್ತವವಾಗಿ ಎಲೆಗಳಲ್ಲಿ ಇಲ್ಲದಿದ್ದರೂ, ಅದು ಎಲೆಗಳು ಮತ್ತು ಕೊಂಬೆಗಳನ್ನು ಕೊಲ್ಲುತ್ತದೆ. ಸತ್ತ ಮರದ ಮೇಲೆ ಹೊಸ ಫ್ರುಟಿಂಗ್ ಬಾಡಿಗಳು ಕಾಣಿಸಿಕೊಳ್ಳುತ್ತವೆ ಮತ್ತು ಚಕ್ರವು ಮತ್ತೆ ಪ್ರಾರಂಭವಾಗುತ್ತದೆ. ಗಾಳಿ ಅಥವಾ ಸೂರ್ಯನಿಲ್ಲದ ತುಂತುರು, ಮಳೆ, ಮಂಜು ಅಥವಾ ಆರ್ದ್ರ ದಿನಗಳು ಬೀಜಕ ಬಿಡುಗಡೆ ಮತ್ತು ಸೋಂಕಿಗೆ ಪರಿಪೂರ್ಣವಾಗಿ ಉತ್ತಮವಾದ ಪರಿಸ್ಥಿತಿಗಳನ್ನು ಒದಗಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಶುದ್ಧ, ಸೋಂಕುರಹಿತ ಉಪಕರಣಗಳೊಂದಿಗೆ ಮಾತ್ರ ಕೆಲಸ ಮಾಡಿ.
  • ಅನಗತ್ಯ ಗಾಯಗಳಿಂದ ಮರಗಳನ್ನು ರಕ್ಷಿಸಿ.
  • ನಿಯಮಿತವಾಗಿ ಹಣ್ಣಿನ ತೋಟವನ್ನು ಮೇಲ್ವಿಚಾರಣೆ ಮಾಡಿ.
  • ವಸಂತ ಋತುವಿನ ಕೊನೆಯಲ್ಲಿ ಅಥವಾ ಬೇಸಿಗೆಯಲ್ಲಿ ವಾಡಿಕೆಯ ಸಮರುವಿಕೆಯು ಮೂಲ ಸೋಂಕಿನ ಹಂತವನ್ನು ತಪ್ಪಿಸುತ್ತದೆ.
  • ಆರ್ದ್ರ ವಾತಾವರಣದ ಸಮಯದಲ್ಲಿ ಸಮರುವಿಕೆಯನ್ನು ಮಾಡಬೇಡಿ.
  • ಇದು ಸೋಂಕಿಗೆ ಅನುಕೂಲಕರವಾಗಿರುತ್ತದೆ.
  • ಬೀಜಕಗಳು ಕುಡಿಯೊಡೆಯುವುದನ್ನು ತಪ್ಪಿಸಲು ಗಾಯಗಳನ್ನು ಡ್ರೆಸ್ಸಿಂಗ್ ನೊಂದಿಗೆ ಮುಚ್ಚಿ.
  • ಫ್ರುಟಿಂಗ್ ಬಾಡಿಗಳು ನಿರಂತರವಾಗಿ ರೂಪುಗೊಳ್ಳುವುದರಿಂದ, ಕತ್ತರಿಸಿದ ವಸ್ತುವನ್ನು (ಸುಡುವಿಕೆ ಅಥವಾ ಹೂಳುವುದು) ತಕ್ಷಣವೇ ವಿಲೇವಾರಿ ಮಾಡಿ.
  • ಹಣ್ಣಿನ ತೋಟ ಮತ್ತು ಸುತ್ತಮುತ್ತಲಿನ ಜಾಗದಿಂದ ವಿಲೋಗಳು ಮತ್ತು ಪಾಪ್ಲರ್‌ಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ದೂರವಿಡುವಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ