ಆಲೂಗಡ್ಡೆ

ಆಲೂಗೆಡ್ಡೆ ಲೀಫ್ರೋಲ್ ವೈರಸ್

PLRV

ವೈರಸ್

5 mins to read

ಸಂಕ್ಷಿಪ್ತವಾಗಿ

  • ತಲೆಕೆಳಗಾದ ಅಂಚುಗಳು.
  • ಎಲೆಗಳ ಎಳೆಯ ಸಿರೆಗಳ ನಡುವೆ ಹಳದಿ.
  • ಹಳೆಯ ಎಲೆಗಳು ಗಡಸಾಗುತ್ತವೆ ಮತ್ತು ಕೆಳಭಾಗದಲ್ಲಿ ನೇರಳೆಯಾಗಿ ಸುಲಭವಾಗಿ ಮುರಿಯುವಂತಾಗುತ್ತವೆ.
  • ಸಸ್ಯಗಳ ಬೆಳವಣಿಗೆಯಲ್ಲಿ ಕುಂಠಿತತೆ.
  • ಗಟ್ಟಿಯಾದ ಮತ್ತು ಮೇಲ್ಮುಖವಾಗಿ ಬಾಗುವ ಕಾಂಡಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಸಸ್ಯ ವೈವಿಧ್ಯ, ಪರಿಸರ ಪರಿಸ್ಥಿತಿಗಳು ಮತ್ತು ಸೋಂಕಿನ ಪ್ರಕಾರಗಳ ಪ್ರಕಾರ ಗೋಚರವಾಗುವ ಲಕ್ಷಣಗಳು ಬದಲಾಗುತ್ತವೆ. ಗಿಡಹೇನುಗಳಿಂದ ಉಂಟಾಗುವ ಪ್ರಾಥಮಿಕ ಸೋಂಕು ಹೆಚ್ಚಾಗಿ ಕಿರಿಯ ಎಲೆಗಳಲ್ಲಿ ಕಂಡುಬರುತ್ತದೆ. ಅಂಚುಗಳು ಮೇಲ್ಮುಖವಾಗಿ ಸುತ್ತುತ್ತವೆ ಮತ್ತು ಒಣಗುತ್ತವೆ, ತೆಳುವಾಗುತ್ತವೆ ಅಥವಾ ಅಂತರ ನಾಳೀಯ ಕ್ಲೋರೋಸಿಸ್ ಬೆಳೆಯುತ್ತದೆ. ಕಲುಷಿತ ಗೆಡ್ಡೆಗಳಿಂದ (ದ್ವಿತೀಯ ಸೋಂಕು) ಬೆಳೆದ ಸಸ್ಯಗಳಲ್ಲಿ, ಹಳೆಯ ಎಲೆಗಳು ಮಗುಚಿ ಬೀಳುತ್ತವೆ, ಗಟ್ಟಿಯಾಗಿ ಗಡಸಾಗುತ್ತವೆ ಮತ್ತು ಅವುಗಳ ಕೆಳಭಾಗ ಕೆನ್ನೇರಳೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ, ಹಾಗೇ ಸಣ್ಣ ಎಲೆಗಳು ಮಡಚಿಕೊಂಡು ನೇರಳೆ ಮತ್ತು ತಿಳಿ ಹಸಿರು ಬಣ್ಣದಲ್ಲಿರುತ್ತವೆ ಅಥವಾ ಕ್ಲೋರೋಟಿಕ್ ಆಗಿರುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು ಮತ್ತು ಕಾಂಡಗಳು ಗಡಸಾಗಿ ಮೇಲ್ಮುಖವಾಗಿರುತ್ತವೆ. ಹೆಚ್ಚು ಸೋಂಕಿನ ಮಟ್ಟವು ಗೆಡ್ಡೆಗಳ ಇಳುವರಿ ಮತ್ತು ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ವೈರಸ್ ನ ನೇರ ಚಿಕಿತ್ಸೆ ಸಾಧ್ಯವಿಲ್ಲ, ಆದರೆ ಪರಭಕ್ಷಕ ಅಥವಾ ಪ್ಯಾರಾಸಿಟಾಯ್ಡಗಳ ಮೂಲಕ ಗಿಡಹೇನು ಸಂಖ್ಯೆಯನ್ನು ಕಡಿಮೆ ಮಾಡುವುದು ಒಂದು ಉಪಯುಕ್ತ ಮುಂಜಾಗ್ರತಾ ಕ್ರಮವಾಗಿದೆ. ಲೇಡಿ ಬರ್ಡ್ಸ್, ಸೊಲ್ಜರ ಜೀರುಂಡೆಗಳು, ಲೇಸ ವಿಂಗ್ಸ್, ಮತ್ತು ಕೆಲವು ವಿಧದ ಮಿಡ್ಜ್ಗಳು ಮತ್ತು ಕೀಟಗಳು ಪ್ರೌಢ ಗಿಡಹೇನುಗಳು ಮತ್ತು ಲಾರ್ವಾಗಳನ್ನು ತಿನ್ನುತ್ತವೆ. ಪರಾವಲಂಬಿ ಕಣಜಗಳನ್ನು ಸಹ ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಮುಂಜಾಗ್ರತಾ ಕ್ರಮಗಳನ್ನು ಒಟ್ಟಾಗಿ ಸೇರಿಸಿ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ವೈರಸ್ ರೋಗಗಳಿಗೆ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಆದಾಗ್ಯೂ, ಗಿಡಹೇನು ಸಂಖ್ಯೆಯನ್ನು ಸ್ವಲ್ಪ ಮಟ್ಟಕ್ಕೆ ನಿಯಂತ್ರಿಸಬಹುದು. ಉದಾಹರಣೆಗಾಗಿ ಬೆಳೆ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ನಿಯೋನಿಕೊಟಿನೈಲ್ ಕೀಟನಾಶಕಗಳನ್ನು ಹಾಕಿ.

ಅದಕ್ಕೆ ಏನು ಕಾರಣ

ಬೆಳವಣಿಗೆಯ ಋತುವಿನಲ್ಲಿ ಸಸ್ಯಗಳಿಗೆ ಸೋಂಕಾಗಾದಾಗ ಮತ್ತು ವೈರಸ್-ಸಾಗಿಸುವ ಗಿಡಹೇನುಗಳು ತಿನ್ನಲು ಪ್ರಾರಂಭಿಸಿದಾಗ ಆರಂಭಿಕ ಪ್ರಸರಣ ಸಂಭವಿಸುತ್ತದೆ. ಕಲುಷಿತಗೊಂಡ ಗೆಡ್ಡೆಗಳನ್ನು ನೆಟ್ಟಾಗ ದ್ವಿತೀಯ ಸೋಂಕು ತಗುಲುತ್ತದೆ ಮತ್ತು ಅದರಿಂದ ಆಲೂಗೆಡ್ಡೆ ಸಸ್ಯಗಳು ಬೆಳೆಯುತ್ತವೆ. ಗಿಡಹೇನುಗಳು ಸೋಂಕನ್ನು ಇತರ ಆರೋಗ್ಯಕರ ಸಸ್ಯಗಳಿಗೆ ವರ್ಗಾಯಿಸುತ್ತವೆ. ಗಿಡಹೇನಿನ ಜೀವನಕ್ಕೆ ಈ ವೈರಸ್ ನಿರಂತರವಾಗಿ ಅಂಟಿಕೊಂಡಿರುತ್ತದೆ, ಆದ್ದರಿಂದ ಸೋಂಕಿನ ಸಂಭಾವ್ಯತೆಯು ಅಧಿಕವಾಗಿರುತ್ತದೆ. ವೈರಸ್ ಅನ್ನು ಹರಡಲು, ಕೀಟಗಳು ಸಸ್ಯವನ್ನು ಕನಿಷ್ಠ 2 ಗಂಟೆಗಳ ಕಾಲ ಆಹಾರವನ್ನಾಗಿ ತಿನ್ನಬೇಕಾಗುತ್ತದೆ. ಆರ್ದ್ರ ಮಣ್ಣು ಸೋಂಕಿನ ಅಪಾಯವನ್ನು ಉತ್ತೇಜಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಗೆಡ್ಡೆಗಳ ಬೀಜವನ್ನು ಬಳಸಿ ಅಥವಾ ಪ್ರಮಾಣಿತ ಬೀಜಗಳನ್ನು ಪಡೆದುಕೊಳ್ಳಿ.
  • ಲಭ್ಯವಿದ್ದರೆ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಬೆಳೆಸಿ.
  • ಭೂಮಿಯನ್ನು ಮೇಲ್ವಿಚಾರಣೆ ಮಾಡಿ, ರೋಗಪೀಡಿತ ಸಸ್ಯಗಳನ್ನು ಆರಿಸಿ ಮತ್ತು ನಾಶಮಾಡಿ.
  • ವೈರಸ್ ಹರಡುವ ಸಸ್ಯಗಳು ಮತ್ತು ಗಿಡಹೇನುಗಳಿಗೆ ಆಹಾರ ನೀಡುವ ಕಳೆಗಳು ಮತ್ತು ತಾನಾಗೇ ಬೆಳೆಯುವ ಸಸ್ಯಗಳನ್ನು ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ