ಇತರೆ

ಬಿಟರ್ ರಾಟ್ (ಕಹಿ ಕೊಳೆತ)

Glomerella cingulata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಕೆಂಪು ಪ್ರಭಾವಲಯದೊಂದಿಗೆ ಸಣ್ಣ, ಗುಳಿಬಿದ್ದ, ಕಂದು ಗಾಯಗಳು.
  • ಗಾಯಗಳು ಅವುಗಳ ಮಧ್ಯದಲ್ಲಿ ಸಣ್ಣ ಕಪ್ಪು ಚುಕ್ಕೆಗಳೊಂದಿಗೆ ಹಿಗ್ಗುತ್ತವೆ.
  • ಕಂದು ಕೊಳೆತವು ಮೇಲ್ಮೈಯಿಂದ ಹಣ್ಣಿನ ಮೂಲಕ್ಕೆ ವಿ-ಆಕಾರದ ಮಾದರಿಯಲ್ಲಿ ವಿಸ್ತರಿಸುತ್ತದೆ.
  • ಸೇಬಿನ ಕೊಳೆಯುವಿಕೆ ಮತ್ತು ಒಣಗುವಿಕೆ - ಒಣ ಸುಕ್ಕು ಹಣ್ಣು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೇಬು
ಚೆರ್ರಿ

ಇತರೆ

ರೋಗಲಕ್ಷಣಗಳು

ಮೊದಲ ರೋಗಲಕ್ಷಣಗಳು ವಸಂತಕಾಲದಲ್ಲಿ ಎಳೆಯ ಹಣ್ಣುಗಳ ಮೇಲೆ ಸಣ್ಣ ಬೂದು ಅಥವಾ ಕಂದು ಬಣ್ಣದ ಚುಕ್ಕೆಗಳಂತೆ ಕಾಣಿಸಿಕೊಳ್ಳುತ್ತವೆ. ಬೇಸಿಗೆಯ ಹೊತ್ತಿಗೆ, ಈ ಮಚ್ಚೆಗಳು ಸಣ್ಣ, ಗುಳಿಬಿದ್ದ, ಕಂದು ಗಾಯಗಳಾಗಿ ಅಭಿವೃದ್ಧಿ ಹೊಂದುತ್ತವೆ. ಕೆಲವೊಮ್ಮೆ ಎದ್ದುಕಾಣುವ ಕೆಂಪು ಪ್ರಭಾವಲಯದಿಂದ ಆವೃತವಾಗಿರುತ್ತವೆ. ಪರಿಸ್ಥಿತಿಗಳು ಅನುಕೂಲಕರವಾದಾಗ, ಈ ಕೆಲವು ಗಾಯಗಳು ಮತ್ತಷ್ಟು ಹಿಗ್ಗುತ್ತವೆ ಮತ್ತು ಅವುಗಳ ಮಧ್ಯದಲ್ಲಿ ಸಣ್ಣ, ಕಪ್ಪು ಅಥವಾ ಗಾಢ ಕಂದು ಚುಕ್ಕೆಗಳು ಕಾಣಿಸುತ್ತವೆ. ಕ್ರಮೇಣ ಕಂದು ಬಣ್ಣದ ನೀರಿನ ಕೊಳೆತವು ಮೇಲ್ಮೈಯಿಂದ ಹಣ್ಣಿನ ಮಧ್ಯಭಾಗಕ್ಕೆ ವಿ-ಆಕಾರದ ಮಾದರಿಯನ್ನು ರೂಪಿಸುತ್ತಾ ವಿಸ್ತರಿಸುತ್ತದೆ (ಮಧ್ಯಭಾಗದ ಸುತ್ತಲೂ ಸಿಲಿಂಡರಾಕಾರದ ಕೊಳೆತ ಮಾದರಿಯು ಸೇಬಿನ ಮತ್ತೊಂದು ಕಾಯಿಲೆಯ ವಿಶಿಷ್ಟವಾಗಿದೆ, ಬೋಟ್ ಕೊಳೆತ). ಕೊಳೆಯುವಿಕೆಯಿಂದ ಆವರಿಸಲ್ಪಟ್ಟ, ಕೊಳೆಯುತ್ತಿರುವ ಸೇಬು ಒಣಗುತ್ತದೆ ಮತ್ತು ಸಾಮಾನ್ಯವಾಗಿ ಕೊಂಬೆಯ ಮೇಲೆಯೇ ನೇತಾಡುತ್ತಿರುತ್ತದೆ. ಇದನ್ನು ಮಮ್ಮಿಫೈಡ್ ಹಣ್ಣು ಎಂದು ಕರೆಯಲಾಗುತ್ತದೆ. ಎಲೆಗಳ ಮೇಲೆ ಸೋಂಕುಗಳು ಸಣ್ಣ ನೇರಳೆ ಬಣ್ಣದ ಚುಕ್ಕೆಗಳಿಂದ ಕೂಡಿದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅದು ನಂತರ ಅನಿಯಮಿತ ನೆಕ್ರೋಟಿಕ್ ಪ್ರದೇಶಗಳಾಗಿ ವಿಸ್ತರಿಸುತ್ತದೆ. ಅತೀವ ಪೀಡಿತ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಉದುರಿಹೋಗುತ್ತವೆ. ಚಿಗುರುಗಳಿಗೆ ಉಂಟಾದ ರೋಗದ ಸೋಂಕು ಮುಂದಿನ ಋತುವಿನಲ್ಲಿನ ಹೂಬಿಡುವಿಕೆಗೆ ತಡೆಯೊಡ್ಡುತ್ತದೆ. ಎಲ್ಲಾ ಸೇಬು ಪ್ರಭೇದಗಳು ಕಹಿ ಕೊಳೆತಕ್ಕೆ ಒಳಗಾಗುತ್ತವೆ.

Recommendations

ಜೈವಿಕ ನಿಯಂತ್ರಣ

ನಿಯಂತ್ರಿತ ಪರಿಸ್ಥಿತಿಗಳಲ್ಲಿ 'ಗೋಲ್ಡನ್ ಡೆಲಿಶಿಯಸ್' ಸೇಬುಗಳ ಮೇಲೆ ಕಹಿ ಕೊಳೆತವನ್ನು ನಿಯಂತ್ರಿಸಲು, ಮೆಚ್ನಿಕೋವಿಯಾ ಪುಲ್ಚೆರಿಮಾ T5-ಅ೨ ಎಂಬ ವಿರೋಧಿಯನ್ನು, ಶಾಖ ಚಿಕಿತ್ಸೆಯ ಸಂಯೋಜನೆಯಲ್ಲಿ ಬಳಸಲಾಗುತ್ತದೆ. ಈ ಚಿಕಿತ್ಸೆಗಳು ಇನ್ನೂ ಜಮೀನಿನ ಪ್ರಯೋಗಗಳಲ್ಲಿ ಪರೀಕ್ಷಿಸಬೇಕಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಉತ್ತಮ ನೈರ್ಮಲ್ಯ ಕಾರ್ಯಕ್ರಮವನ್ನು ಅನುಸರಿಸಿ, ಪ್ರತಿ ಹದಿನೈದು ದಿನಗಳಿಗೊಮ್ಮೆ ಡೈನಾಶನ್, ತಾಮ್ರ ಅಥವಾ ಗಂಧಕ ಆಧರಿಸಿದ ಸಿಂಪಡಕಗಳ ಸಿಂಪರಣೆ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಬೆಚ್ಚಗಿನ, ಆರ್ದ್ರ ವಾತಾವರಣದ ಅವಧಿಗಳು ಸಂಭವಿಸಿದಲ್ಲಿ, ಪ್ರತಿ 14 ದಿನಗಳಿಗಿಂತ ಹೆಚ್ಚು ಬೇಗ ಸಿಂಪಡಿಸುವುದು ಕಡ್ಡಾಯವಾಗಿದೆ.

ಅದಕ್ಕೆ ಏನು ಕಾರಣ

ಎಲೆಗಳು ಮತ್ತು ಹಣ್ಣುಗಳ ಮೇಲಿನ ರೋಗಲಕ್ಷಣಗಳು ಒಂದೇ ರೋಗಕಾರಕದ ಎರಡು ವಿಭಿನ್ನ ಲೈಂಗಿಕ ಹಂತಗಳಿಂದ ಉಂಟಾಗುತ್ತವೆ. ಎಲೆಗಳು ಮತ್ತು ಹಣ್ಣುಗಳ ಮೇಲಿನ ಕಲೆಗಳು ಗ್ಲೋಮೊರೆಲ್ಲಾ ಸಿಂಗ್ಯುಲಾಟಾ ಎಂಬ ಲೈಂಗಿಕ ರೂಪದ ಅಂಗಾಂಶಗಳ ವಸಾಹತೀಕರಣದ ಫಲಿತಾಂಶಗಳಾಗಿವೆ. ಅಲೈಂಗಿಕ ರೂಪವನ್ನು ಕೊಲೆಟೊಟ್ರಿಕಮ್ ಗ್ಲೋಯೊಸ್ಪೊರಿಯೊಯಿಡ್ಸ್ ಎಂದು ಕರೆಯಲಾಗುತ್ತದೆ ಮತ್ತು ಋತುವಿನ ನಂತರದ ಹಣ್ಣಿನ ಗಾಯಗಳಿಗೆ ಇದು ಕಾರಣವಾಗಿದೆ. ಮಮ್ಮಿಫೈಡ್ ಹಣ್ಣುಗಳು ಮತ್ತು ಸೋಂಕಿತ ಮರಗಳು ಶಿಲೀಂಧ್ರದ ಚಳಿಗಾಲದ ಸ್ಥಳಗಳಾಗಿವೆ. ವಸಂತಕಾಲದಲ್ಲಿ, ಇದು ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಮಳೆ ತುಂತುರುಗಳಿಂದ ಬಿಡುಗಡೆಯಾಗುವ ಮತ್ತು ಗಾಳಿಯಿಂದ ಚದುರಿದ ಬೀಜಕಗಳನ್ನು ಉತ್ಪಾದಿಸುತ್ತದೆ. ಹೆಚ್ಚಿನ ತಾಪಮಾನಗಳು (25°C) ಮತ್ತು ದೀರ್ಘಾವಧಿಯ ಎಲೆ ತೇವ ಶಿಲೀಂಧ್ರದ ಜೀವನ ಚಕ್ರ ಮತ್ತು ಸೋಂಕಿನ ಪ್ರಕ್ರಿಯೆಗೆ ಅನುಕೂಲಕರವಾಗಿದೆ. ಹಣ್ಣುಗಳ ಸೋಂಕು ಅವುಗಳ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಸಂಭವಿಸಬಹುದು. ಆದರೆ ಋತುವಿನ ಉತ್ತರಾರ್ಧದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಹಣ್ಣಿನ ಬೆಳವಣಿಗೆಯ ಸಮಯದಲ್ಲಿ ದೀರ್ಘಾವಧಿಯ ಆರ್ದ್ರತೆ ಮತ್ತು ಬೆಚ್ಚಗಿನ ಹವಾಮಾನವು ಸಾಂಕ್ರಾಮಿಕ ರೋಗಲಕ್ಷಣಗಳು ಮತ್ತು ವ್ಯಾಪಕವಾದ ನಷ್ಟಗಳನ್ನು ಉಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಜಮೀನಿನಲ್ಲಿ ಉತ್ತಮ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಿ.
  • ಕಡಿಮೆ ಪ್ರಕರಣಗಳು ಇರುವಾಗಲೇ, ತೋಟಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು ಬೆಳವಣಿಗೆಯ ಋತುವಿನಲ್ಲಿ ಮರದಿಂದ ರೋಗಪೀಡಿತ ಹಣ್ಣುಗಳನ್ನು ತೆಗೆದುಹಾಕಿ.
  • ಕೊಯ್ಲಿನ ನಂತರ ಸೋಂಕಿತ ಮರ ಮತ್ತು ಮರದ ಅವಶೇಷಗಳನ್ನು ತೆಗೆದುಹಾಕಬೇಕು ಮತ್ತು ನಾಶಪಡಿಸಬೇಕು.
  • ಪರ್ಯಾಯವಾಗಿ, ಕೊಳೆಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ನೆಲದ ಮೇಲಿನ ನಿರ್ಜೀವ ಕೊಂಬೆಗಳನ್ನು ಮತ್ತಷ್ಟು ಕತ್ತರಿಸಿ.
  • ಸಸ್ಯವು ಸೋಂಕಿನ ವಿರುದ್ಧ ನಿರೋಧಕವಾಗಿರಲು ಸಸ್ಯ ಬಲವರ್ಧಕವನ್ನು ಅನ್ವಯಿಸಬಹುದು.
  • ಸಮತೋಲಿತ ರಸಗೊಬ್ಬರ ಬಳಕೆಯನ್ನು ಸರಿಯಾಗಿ ನಿರ್ವಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ