ಸಿರಿಧಾನ್ಯ

ಸಿರಿಧಾನ್ಯದ ಸೆರ್ಕೊಸ್ಪೊರಾ ಎಲೆ ಚುಕ್ಕೆ ರೋಗ

Cercospora penniseti

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಂಡಗಳ ಮೇಲೆ ಸಣ್ಣ, ಕಪ್ಪು ಮತ್ತು ಅಂಡಾಕಾರದ ಗಾಯಗಳು ಕಾಣಿಸಿಕೊಳ್ಳುತ್ತವೆ.
  • ಈ ಗಾಯಗಳ ಮೇಲೆ ಕಪ್ಪು ಮತ್ತು ಉಬ್ಬಿದ ಚುಕ್ಕೆಗಳು ಬೆಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ಮಧ್ಯದಲ್ಲಿ ಬೂದುಬಣ್ಣವಿರುವ ಸಣ್ಣ, ಕಪ್ಪು ಮತ್ತು ಅಂಡಾಕಾರದ ಗಾಯಗಳು ಎಲೆಗಳು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಗಾಯಗಳ ಮೇಲೆ ಕಪ್ಪು ಮತ್ತು ಉಬ್ಬಿದ ಚುಕ್ಕೆಗಳು ಬೆಳೆಯುತ್ತವೆ.

Recommendations

ಜೈವಿಕ ನಿಯಂತ್ರಣ

ಈ ರೋಗಕ್ಕೆ ಪರ್ಯಾಯ ಚಿಕಿತ್ಸೆ ಇಲ್ಲ. ಮುಂದಿನ ಬೆಳೆಯ ಋತುವಿನಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಿ.

ರಾಸಾಯನಿಕ ನಿಯಂತ್ರಣ

ಈ ರೋಗಕ್ಕೆ ಯಾವುದೇ ರಾಸಾಯನಿಕ ಚಿಕಿತ್ಸೆಯ ಅಗತ್ಯವಿಲ್ಲ. ಮುಂದಿನ ಬೆಳೆಯ ಋತುವಿನಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಿ.

ಅದಕ್ಕೆ ಏನು ಕಾರಣ

ಹೆಚ್ಚಿನ ಉಷ್ಣತೆ ಮತ್ತು ಅಧಿಕ ಆರ್ದ್ರತೆ ರೋಗಕ್ಕೆ ಅನುಕೂಲಕರ. ಶಿಲೀಂಧ್ರ ಗಾಳಿ ಮತ್ತು ಮಳೆಯಿಂದ ಹರಡುತ್ತದೆ. ಇದು ಬೆಳೆಯ ಉಳಿಕೆಗಳು ಮತ್ತು ಕಳೆಗಳಂತಹ ಆಶ್ರಯದಾತ ಸಸ್ಯಗಳ ಮೇಲೆ ರಕ್ಷಣೆ ಪಡೆಯುತ್ತದೆ. ಇಳುವರಿ ನಷ್ಟಗಳು ಹೆಚ್ಚಾಗಿ ಸಣ್ಣ ಮಟ್ಟದ್ದಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಹೆಚ್ಚು ಚೇತರಿಸಿಕೊಳ್ಳಬಲ್ಲ ಪ್ರಭೇದಗಳನ್ನು ನೆಡಿ.
  • ಕಳೆಗಳನ್ನು ನಿಯಂತ್ರಿಸಿ.
  • ಸರದಿ ಬೆಳೆ ವ್ಯವಸ್ಥೆ ಅಳವಡಿಸಿ.
  • ಚೆನ್ನಾಗಿ ಕೃಷಿ ಭೂಮಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ- ಯಾವುದೇ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಅಥವಾ ಸುಟ್ಟು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ