ಗೋಧಿ

ಗೋದಿ ತೆನೆಯ ಬಂಟ್

Tilletia indica

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಪ್ರತಿ ದಂಟಿನ ಕೆಲವು ಧಾನ್ಯಗಳ ತಳವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
  • ಧಾನ್ಯಗಳು ಕಪ್ಪು ಪುಡಿಯ ದ್ರವ್ಯರಾಶಿಗಳಿಂದ ತುಂಬಿರುತ್ತವೆ.
  • ಕಾಳುಗಳನ್ನು ಬಿಡಿಸಿದಾಗ ಮೀನು ಕೊಳೆಯುವ ವಾಸನೆ ಬರುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಆರಂಭಿಕ ಹಂತಗಳಲ್ಲಿ, ಪ್ರತಿ ದಂಟಿಗೆ ಕೆಲವು ಧಾನ್ಯಗಳ ತಳದಲ್ಲಿ ಕಪ್ಪಾದ ಪ್ರದೇಶಗಳು ಬೆಳೆಯುತ್ತವೆ. ಸ್ವಲ್ಪ ಸ್ವಲ್ಪವಾಗಿ, ಧಾನ್ಯಗಳು ಟೊಳ್ಳಾಗಿ ಖಾಲಿಯಾಗಬಹುದು ಮತ್ತು ಇವು ಭಾಗಶಃ ಅಥವಾ ಸಂಪೂರ್ಣವಾಗಿ ಕಪ್ಪು ಪುಡಿಯ ದ್ರವ್ಯರಾಶಿಯಿಂದ ತುಂಬುವುವು. ಈ ಪ್ರಕ್ರಿಯೆಯಲ್ಲಿ ಧಾನ್ಯವು ಉಬ್ಬಿಕೊಳ್ಳುವುದಿಲ್ಲ ಮತ್ತು ಹೊಟ್ಟುಗಳು ಸಾಮಾನ್ಯವಾಗಿ ಹಾಗೇ ಉಳಿಯುತ್ತವೆ. ಕಾಯಿಲೆಯು ಮುಂದುವರೆದಂತೆ, ಇತರ ದಂಟುಗಳ ಮೇಲಿನ ಹೆಚ್ಚು ಧಾನ್ಯಗಳ ಮೇಲೆ ಪರಿಣಾಮ ಬೀರುತ್ತವೆ. ಪುಡಿಯಾದಾಗ, ಈ ಧಾನ್ಯಗಳು ಮೀನು ಕೊಳೆಯುತ್ತಿರುವ ಒಂದು ವಾಸನೆಯನ್ನು ಹೊರಸೂಸುತ್ತವೆ. ಹೀಗಾದರೂ, ಕೊಳೆತ ಧಾನ್ಯಗಳ ಸಂಖ್ಯೆ ಪ್ರತಿ ದಂಟಿಗೆ ಅಪರೂಪವಾಗಿ 5 ಅಥವಾ 6 ಮೀರುತ್ತದೆ. ಸೋಂಕಿತ ಸಸ್ಯಗಳು ಕುಬ್ಜವಾಗಬಹುದು. ರೋಗವು ಧಾನ್ಯದ ಇಳುವರಿಯ ಮೇಲೆ ಕನಿಷ್ಠ ಪರಿಣಾಮವನ್ನು ಬೀರುತ್ತದೆ, ಆದರೆ ಗುಣಮಟ್ಟದ ಸಮಸ್ಯೆಗಳಿಂದ ಅಥವಾ ಬೀಜಕಗಳ ಉಪಸ್ಥಿತಿಯಿಂದಾಗಿ ಬೀಜಗಳನ್ನು ನಿರಾಕರಿಸಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಟಿಲೆಟಿಯಾ ಇಂಡಿಕಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮೊಂದಿಗೆ ಸಂಪರ್ಕದಲ್ಲಿರಿ. ನಿಮ್ಮಿಂದ ಕೇಳಲು ನಾವು ಕಾಯುತ್ತಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಯು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಯಾವುದೇ ಬೀಜದ ಚಿಕಿತ್ಸೆಯು 100% ಪರಿಣಾಮಕಾರಿಯಾಗುವುದಿಲ್ಲ, ಆದರೆ ಶಿಲೀಂಧ್ರಗಳ ಬೆಳವಣಿಗೆಯನ್ನು ಮತ್ತು ಧಾನ್ಯದ ಹಾನಿಯನ್ನು ಪ್ರತಿಬಂಧಿಸುವ ಹಲವು ಚಿಕಿತ್ಸೆಗಳು ಇವೆ. ಕಾರ್ಬಾಕ್ಸಿನ್-ಥಿರಮ್, ಡೈಫಿನೊಕೊನಜೋಲ್, ಮೆಫೆನೊಕ್ಸಮ್ ಅಥವಾ ಟೆಬುಕೋನಜೋಲ್ ಅನ್ನು ಆಧರಿಸಿದ ಶಿಲೀಂಧ್ರನಾಶಕಗಳು ಪರಿಣಾಮಕಾರಿಯಾಗಿ ಹೊಲದಲ್ಲಿ ವಾಯುನಿಂದ-ಹರಡುವ ಸೋಂಕನ್ನು ನಿವಾರಿಸುತ್ತದೆ.

ಅದಕ್ಕೆ ಏನು ಕಾರಣ

ಕಾರ್ನಾಲ್ ಬಂಟ್- ಬೀಜ ಅಥವಾ ಮಣ್ಣಿನ ಮೂಲದ ಶಿಲೀಂಧ್ರ ಟಿಲೆಟಿಯ ಇಂಡಿಕಾದಿಂದ ಉಂಟಾಗುತ್ತದೆ. ಶಿಲೀಂಧ್ರವು ಮಣ್ಣಿನಲ್ಲಿ 4-5 ವರ್ಷಗಳವರೆಗೆ ಬದುಕಬಲ್ಲದು. ಕಲುಷಿತ ಮಣ್ಣು ಅಥವಾ ಸಸ್ಯದ ಉಳಿಕೆಗಳಲ್ಲಿರುವ ಬೀಜಕಣಗಳು ಆರೋಗ್ಯಕರ ಸಸ್ಯಗಳು ಮತ್ತು ಹೂಗೊಂಚಲುಗಳಿಗೆ ಹರಡುವುದು. ಹೂಬಿಡುವ ಅವಧಿಯುದ್ದಕ್ಕೂ ಸೋಂಕು ಸಂಭವಿಸಬಹುದು ಆದರೆ ದಂಟು ಹೊರಹೊಮ್ಮುವ ಸಮಯದಲ್ಲಿ ಸಸ್ಯಗಳು ಹೆಚ್ಚು ಸೋಂಕಿಗೆ ಒಳಗಾಗಬಹುದು. ಶಿಲೀಂಧ್ರಗಳು ಬೆಳೆಯುತ್ತಿರುವ ಬೀಜಗಳನ್ನು ವಸಾಹತುಗೊಳಿಸುತ್ತದೆ ಮತ್ತು ಕ್ರಮೇಣವಾಗಿ ಅವುಗಳ ತೆನೆಯಲ್ಲಿ ಹರಡುವುದು. ರೋಗಲಕ್ಷಣಗಳ ಬೆಳವಣಿಗೆಯಲ್ಲಿ ವಾತಾವರಣವು ಒಂದು ಪ್ರಮುಖ ಅಂಶವಾಗಿದೆ. ಆರ್ದ್ರತೆಯ ಹವಾಮಾನದ ಪರಿಸ್ಥಿತಿಗಳು (> 70%) ಮತ್ತು ಧಾನ್ಯ ರಚನೆಯ ಸಮಯದಲ್ಲಿ 18 ಮತ್ತು 24 ° ಸಿ ನಡುವಿನ ತಾಪಮಾನವು ರೋಗದ ಪ್ರಗತಿಗಾಗಿ ಅನುಕೂಲಕರವಾಗಿರುತ್ತದೆ. ಬೀಜಕಣಗಳು ಕೃಷಿ ಸಲಕರಣೆಗಳ, ಉಪಕರಣಗಳ, ಬಟ್ಟೆಗಳ ಮತ್ತು ವಾಹನಗಳ ಮೂಲಕ ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರ್ಯಾಯ ಹೋಸ್ಟ್ ಸಸ್ಯಗಳ ಕೃಷಿ ಮಾಡುವುದನ್ನು ತಪ್ಪಿಸಿ.
  • 5 ವರ್ಷಗಳವರೆಗೆ ನಾನ್ ಹೋಸ್ಟ್ ಸಸ್ಯಗಳೊಂದಿಗೆ ವ್ಯಾಪಕವಾಗಿ ಬೆಳೆ ಸರದಿ ಅಳವಡಿಸಿ.
  • ಶಿಲೀಂಧ್ರಕ್ಕೆ ಸೂಕ್ತವಾದ ಹವಾಮಾನ ಪರಿಸ್ಥಿತಿಗಳಲ್ಲಿ ತೆನೆ ರಚಿಸುವುದನ್ನು ತಪ್ಪಿಸುವಂತೆ ಬಿತ್ತನೆ ಸಮಯವನ್ನು ಹೊಂದಿಸಿ.
  • ಪ್ರದೇಶದ ಒಳಚರಂಡಿ ಸುಧಾರಿಸಿ ಮತ್ತು ಹೂಬಿಡುವ ಸಮಯದಲ್ಲಿ ಹೆಚ್ಚಿನ ನೀರಾವರಿ ತಪ್ಪಿಸಿ.
  • ಸಾರಜನಕದ ಅತಿಯಾದ ಫಲೀಕರಣವನ್ನು ತಪ್ಪಿಸಿ.
  • ಸೋಂಕು ತಗುಲಿದ ಪ್ರದೇಶಗಳಲ್ಲಿ ಬಳಸಲ್ಪಟ್ಟ ಕೃಷಿ ಯಂತ್ರೋಪಕರಣ ಮತ್ತು ಮಣ್ಣಿನ ಸಾಗಾಣೆಯನ್ನು ನಿರ್ಬಂಧಿಸಿ.
  • ಮಣ್ಣಿನ ತಾಪಮಾನವನ್ನು ಹೆಚ್ಚಿಸಲು ಮತ್ತು ಶಿಲೀಂಧ್ರಗಳ ಹರಡುವಿಕೆಯನ್ನು ಕಡಿಮೆ ಮಾಡಲು ಪ್ಲಾಸ್ಟಿಕ್ ಮಲ್ಚ್ ಅನ್ನು ಬಳಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ