ಮೆಕ್ಕೆ ಜೋಳ

ಕೆಂಪು ಕೊಳೆತ

Glomerella tucumanensis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಾಂಡಗಳ ಮೇಲೆ ವಿವಿಧ ಗಾತ್ರಗಳ ಕೆಂಪು- ಕಂದು ಬಣ್ಣದ ತೇಪೆಗಳು.
  • ಬಿಳಿ ಬಣ್ಣದ ತಿರುಳಿನ ಒಳಗೆ ಕೆಂಪು ಕೊಳೆತ ಪ್ರದೇಶಗಳು.
  • ಎಲೆಗಳ ಮೇಲೆ ಕೆಂಪು ಅಂಡಾಕಾರದ ಚುಕ್ಕೆಗಳು, ಮುಖ್ಯವಾಗಿ ಮಧ್ಯನಾಳದಲ್ಲಿ ಕಂಡುಬರುತ್ತವೆ.
  • ಧಾನ್ಯಗಳು ಕೆಂಪು, ಕಂದು ಅಥವಾ ಬೂದು ಬಣ್ಣಕ್ಕೆ ತಿರುಗಿ ಕೊಳೆಯುತ್ತವೆ ಮತ್ತು ಹುಳಿ ವಾಸನೆ ಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಸೋಂಕಿಗೊಳಗಾದ ಕಾಂಡಗಳು ಮಂದ ಬಣ್ಣವನ್ನು ಹೊಂದಿರುತ್ತವೆ ಮತ್ತು ಮೇಲ್ಮೈಯಲ್ಲಿ ದೊಡ್ಡ ಕೆಂಪು ಬಣ್ಣದ ಕಲೆಗಳನ್ನು ತೋರಿಸುತ್ತವೆ. ಪ್ರಭೇದವನ್ನು ಅವಲಂಬಿಸಿ ಇವು ಹೆಚ್ಚು, ಕಡಿಮೆ ಮುಖ್ಯವಾಗಿರುತ್ತವೆ. ಕಾಂಡವನ್ನು ಉದ್ದವಾಗಿ ಕತ್ತರಿಸಿದಾಗ ಸಾಮಾನ್ಯವಾಗಿ ಬಿಳಿ ಬಣ್ಣದ ತಿರುಳಿರಬೇಕಾದ ಜಾಗದಲ್ಲಿ ಕೆಂಪು ಕೊಳೆತ ಅಂಗಾಂಶಗಳನ್ನು ಕಾಣಬಹುದು. ನಿರೋಧಕ ಸಸ್ಯಗಳಲ್ಲಿ, ಕೆಂಪು, ರೋಗಗ್ರಸ್ತ ಪ್ರದೇಶಗಳು ಹೆಚ್ಚಾಗಿ ಗೆಣ್ಣುಗಳ ನಡುವಿನ ಪ್ರದೇಶಕ್ಕೆ ಸೀಮಿತವಾಗಿರುತ್ತವೆ. ರೋಗ ಮುಂದುವರಿಯುತ್ತಿದ್ದಂತೆ, ತಿರುಳಿನೊಳಗೆ ಕುಳಿಗಳು ರಚನೆಯಾಗಬಹುದು ಮತ್ತು ಗಟ್ಟಿಯಾದ ನಾರುಗಳ ಗಂಟುಗಳು ಸಹ ಗೋಚರಿಸುತ್ತವೆ. ಎಲೆಗಳು ಬಾಡುತ್ತವೆ ಮತ್ತು ಸುಕ್ಕಾಗುತ್ತವೆ. ಸಸ್ಯಗಳು ಕೆಟ್ಟ ವಾಸನೆಯನ್ನು ಹೊರಸೂಸುತ್ತವೆ ಮತ್ತು ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿ ಕಾಂಡಗಳು ಸುಲಭವಾಗಿ ಮುರಿದುಹೋಗುತ್ತವೆ. ಎಲೆಗಳ ಮೇಲೆ, ಸಣ್ಣ ಕೆಂಪು ಅಂಡಾಕಾರದ ಅಥವಾ ಉದ್ದನೆಯ ಗಾಯಗಳು, ಕೆಲವೊಮ್ಮೆ ಮಧ್ಯನಾಳದ ಪೂರ್ಣ ಉದ್ದಕ್ಕೂ ವ್ಯಾಪಿಸಿ ಬೆಳೆಯುತ್ತವೆ. ಎಲೆ ಕವಚಗಳು ಕೆಂಪು ಬಣ್ಣದ ತೇಪೆಯನ್ನು ಹೊಂದಿರಬಹುದು ಮತ್ತು ಕೆಲವೊಮ್ಮೆ ಎಲೆಯ ಮೇಲೆ ಚಿಕ್ಕ ಕಪ್ಪು ಕಲೆಗಳು ಬೆಳೆಯುತ್ತವೆ.

Recommendations

ಜೈವಿಕ ನಿಯಂತ್ರಣ

ಬೀಜಗಳ ಮೇಲೆ ರೋಗಕಾರಕವನ್ನು ಕೊಲ್ಲಲು ಮತ್ತು ಕೆಂಪು ಕೊಳೆತವನ್ನು ನಿಯಂತ್ರಿಸಲು ಬಿಸಿ ನೀರಿನ ಸ್ನಾನ (ಉದಾಹರಣೆಗೆ 2 ಗಂಟೆಗಳ ಕಾಲ 50 °C) ವನ್ನು ಬಳಸಬಹುದು. ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಸಹ ಬೀಜಗಳ ಚಿಕಿತ್ಸೆಗೆ ಬಳಸಬಹುದು. ಇವುಗಳೆಂದರೆ ಚೇಟೋಮಿಯಮ್ ಮತ್ತು ಟ್ರೈಕೋಡರ್ಮಾ ಜಾತಿಯ ಶಿಲೀಂಧ್ರಗಳು ಮತ್ತು ಸೂಡೊಮೊನಸ್ ಬ್ಯಾಕ್ಟೀರಿಯಾದ ಕೆಲವು ಪ್ರಭೇದಗಳು. ಈ ದ್ರಾವಣವನ್ನು ಆಧರಿಸಿದ ಎಲೆಗಳ ದ್ರವೌಷಧಗಳು ರೋಗದ ಹರಡುವಿಕೆ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗಕಾರಕವನ್ನು ಕೊಲ್ಲಲು ಬಿಸಿ ನೀರಿನಲ್ಲಿ ಬೆರೆಸಿದ ಶಿಲೀಂಧ್ರನಾಶಕದಲ್ಲಿ (ಉದಾಹರಣೆಗೆ ಥಿರಾಮ್) ಬೀಜಗಳನ್ನು ಎರಡು ಗಂಟೆಗಳ ಕಾಲ 50-54 °C ಯಲ್ಲಿ ಬೀಜ ಚಿಕಿತ್ಸೆ ಮಾಡಿ. ಹೊಲದಲ್ಲಿ ರಾಸಾಯನಿಕ ಚಿಕಿತ್ಸೆಗಳು ಪರಿಣಾಮಕಾರಿಯಲ್ಲ ಮತ್ತು ಶಿಫಾರಸು ಮಾಡಲಾಗುವುದಿಲ್ಲ.

ಅದಕ್ಕೆ ಏನು ಕಾರಣ

ಗ್ಲೋಮೆರೆಲ್ಲಾ ಟುಕುಮೆನೆನ್ಸಿಸ್ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಣ್ಣಿನಲ್ಲಿ ಕೇವಲ ಅಲ್ಪಾವಧಿಯ (ತಿಂಗಳುಗಳು)ವರೆಗೆ ಮಾತ್ರ ಬದುಕಬಲ್ಲದು. ಇದು ನಿಜವಾಗಿ ಮಣ್ಣಿನಿಂದ ಹರಡುವ ರೋಗಕಾರಕವಲ್ಲವಾದರೂ, ಬೆಳೆ ಅವಶೇಷಗಳಿಂದ ಮಣ್ಣಿಗೆ ಹರಿದು ಹೋದ ಬೀಜಕಗಳು ಹೊಸದಾಗಿ ನೆಟ್ಟ ಬೀಜಗಳು ಅಥವಾ ಸಸಿಗಳಲ್ಲಿ ಸೋಂಕನ್ನು ಉಂಟುಮಾಡಬಹುದು. ಅದರ ನಂತರ, ಸೋಂಕಿತ ಸಸ್ಯಗಳ ಮಧ್ಯನಾಳ ಅಥವಾ ಕಾಂಡಗಳಲ್ಲಿ ಉತ್ಪತ್ತಿಯಾದ ಬೀಜಕಗಳ ಮೂಲಕ ರೋಗ ಹರಡುತ್ತವೆ. ಬೀಜಕಗಳು ಗಾಳಿ, ಮಳೆ, ಭಾರೀ ಹಿಮ ಮತ್ತು ನೀರಾವರಿ ನೀರಿನಿಂದ ಸಾಗಿಸಲ್ಪಡುತ್ತದೆ. ತಂಪಾದ, ಆರ್ದ್ರ ಹವಾಮಾನ, ಹೆಚ್ಚಿನ ಮಣ್ಣಿನ ತೇವಾಂಶ ಮತ್ತು ಏಕಬೆಳೆಗಳು ಈ ರೋಗಕ್ಕೆ ಅನುಕೂಲ. ಸಸ್ಯ ರೋಗಕ್ಕೆ ತುತ್ತಾಗುವ ಸಂಭವವನ್ನು ಬರ ಹೆಚ್ಚಿಸುತ್ತದೆ. ಕಬ್ಬಿನ ಜೊತೆಗೆ, ಶಿಲೀಂಧ್ರವು ಮೆಕ್ಕೆ ಜೋಳ ಮತ್ತು ಹುಲ್ಲು ಜೋಳದಂತಹ ಚಿಕ್ಕ ಆಶ್ರಯದಾತ ಸಸ್ಯಗಳನ್ನು ಕೂಡಾ ಸೋಂಕಿಗೆ ಒಳಪಡಿಸಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶಕ್ಕೆ ಸೂಕ್ತವಾದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಪ್ರಮಾಣೀಕೃತ ಮೂಲದಿಂದಲೇ ಆರೋಗ್ಯಕರ ಬೀಜಗಳು ಮತ್ತು ಸಸಿಗಳನ್ನು ಬಳಸಿ.
  • ಯಾವುದೇ ರೋಗವಿಲ್ಲದ ಜಮೀನಿನಿಂದ ನೆಡುವ ವಸ್ತುಗಳನ್ನು ಪಡೆದುಕೊಳ್ಳಿ.
  • ಋತುವಿನಲ್ಲಿ ತುಂಬಾ ಬಿಸಿಲಿನ ಅಥವಾ ತುಂಬಾ ತಂಪಾದ ತಾಪಮಾನಗಳನ್ನು ತಪ್ಪಿಸಲು ಬಿತ್ತನೆ ಸಮಯವನ್ನು ಬದಲಿಸಿ.
  • ನಿಯಮಿತವಾಗಿ ಹೊಲವನ್ನು ಮೇಲ್ವಿಚಾರಣೆ ಮಾಡಿ ಮತ್ತು ರೋಗಯುಕ್ತ ಸಸ್ಯಗಳು ಅಥವಾ ಪೊದೆಗಳನ್ನು ಕಿತ್ತು ಹಾಕಿ.
  • ರೋಗಯುಕ್ತ ಬೆಳೆಗಳ ರಟೂನಿಂಗ್ ಅನ್ನು ತಪ್ಪಿಸಿ.
  • ಸುಗ್ಗಿಯ ನಂತರ ಕ್ಷೇತ್ರದಿಂದ ಎಲ್ಲಾ ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ಬಿಡಿ.
  • ಪರ್ಯಾಯವಾಗಿ, ಸೂರ್ಯನ ಬೆಳಕಿಗೆ ಮಣ್ಣಿನಲ್ಲಿರುವ ಶಿಲೀಂಧ್ರಗಳನ್ನು ಒಡ್ಡಲು ಹಲವು ಬಾರಿ ಹೊಲದ ಉಳುಮೆ ಮಾಡಿ.
  • 2-3 ವರ್ಷಗಳ ಕಾಲ ರೋಗಕ್ಕೆ ಒಳಗಾಗದ ಸಸ್ಯಗಳೊಂದಿಗೆ ಉತ್ತಮ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ