ಇತರೆ

ಪೀಚ್ ಲೀಫ್ ಕರ್ಲ್

Taphrina deformans

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ವಿರೂಪತೆ ಮತ್ತು ಕೆಂಪು ಬಣ್ಣ.
  • ಎಲೆಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆ.
  • ಅಕಾಲಿಕ ಎಲೆ ಉದುರುವಿಕೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಬಾದಾಮಿ
ಜಲ್ದರು ಹಣ್ಣು
ಪೀಚ್

ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಸಾಮಾನ್ಯವಾಗಿ ಎಲೆ ಮೊಳೆತ ನಂತರ ಕಾಣಿಸಿಕೊಳ್ಳುತ್ತವೆ. ಎಲೆಗಳು ದಪ್ಪವಾಗುತ್ತವೆ ಮತ್ತು ಮರಗಳ ಪ್ರಭೇದದ ಆಧಾರದ ಮೇಲೆ ಸುಕ್ಕುಗಟ್ಟಿದ ಅಥವಾ ಸುರುಳಿಯಾಕಾರವಾಗುತ್ತದೆ ಮತ್ತು ಕೆಂಪು ಬಣ್ಣದಿಂದ ನೇರಳೆ ಬಣ್ಣಕ್ಕೆ ತಿರುಗಿ ತೀವ್ರವಾಗಿ ವಿರೂಪಗೊಳ್ಳುತ್ತವೆ. ಸೋಂಕು ಮುಂದುವರೆದಂತೆ, ಪೀಡಿತ ಎಲೆಗಳು ತಮ್ಮ ಮೇಲ್ಮೈಯಲ್ಲಿ ಶಿಲೀಂಧ್ರಗಳ ಬೆಳವಣಿಗೆಯ ಪರಿಣಾಮವಾಗಿ ಬಿಳಿ-ಬೂದು, ಪುಡಿಯಿಂದ ಆವೃತ್ತವಾದ ನೋಟವನ್ನು ಪಡೆಯುತ್ತವೆ. ಬೂದು ಹೊದಿಕೆಯು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಪ್ರಕ್ರಿಯೆಯು ಹಗಲಿನ ತಾಪಮಾನ ಹೆಚ್ಚಿರುವಾಗ ಕಂಡುಬರುತ್ತದೆ. ಅಂತಿಮವಾಗಿ, ರೋಗಗ್ರಸ್ತ ಎಲೆಗಳು ಸಾಯುತ್ತವೆ ಮತ್ತು ಬೀಳುತ್ತವೆ. ಇದು ಎಲೆ ಉದುರುವಿಕೆ ಮತ್ತು ಚೈತನ್ಯದ ನಷ್ಟಕ್ಕೆ ಕಾರಣವಾಗುತ್ತದೆ. ಅದೇ ಬೆಳವಣಿಗೆಯ ಬಿಂದುವಿನಿಂದ ಹೊರಹೊಮ್ಮುವ ಹೊಸ ಎಲೆಗಳು ಅವುಗಳನ್ನು ಶೀಘ್ರವಾಗಿ ಸ್ಥಳಾಂತರಿಸುತ್ತವೆ. ಸೋಂಕು ವ್ಯವಸ್ಥಿತವಾದಾಗ ತೊಗಟೆ ಅಥವಾ ಸಂಪೂರ್ಣ ಚಿಗುರುಗಳ ಪ್ರದೇಶಗಳನ್ನು ಕಪ್ಪಾಗಿಸಬಹುದು. ಅಂದರೆ, ಸಸ್ಯದ ಆಂತರಿಕ ಅಂಗಾಂಶಗಳಲ್ಲಿ ಶಿಲೀಂಧ್ರವು ಹರಡಲು ಪ್ರಾರಂಭಿಸಿದಾಗ. ಅಂತಹ ಸಂದರ್ಭಗಳಲ್ಲಿ, ಬೆಳೆಯುತ್ತಿರುವ ಚಿಗುರುಗಳು ಅಸಹಜ ಪಾರ್ಶ್ವ ರೆಂಬೆಗಳ ಬೆಳವಣಿಗೆಯನ್ನು ಮತ್ತು ಮಾಟಗಾತಿಯ ಪೊರಕೆಯನ್ನು ಹೋಲುವಂತಹ ಬೆಳವಣಿಗೆಯನ್ನು ಉಂಟುಮಾಡುತ್ತವೆ. ಹೆಚ್ಚು ರೋಗಪೀಡಿತ ಮರಗಳ ಮೇಲಿರುವ, ಹಣ್ಣುಗಳ ಮೇಲ್ಮೈ ತೀವ್ರ ಬದಲಾವಣೆಯನ್ನು ತೋರಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಶಿಲೀಂಧ್ರವನ್ನು ಪರಿಣಾಮಕಾರಿಯಾಗಿ ಎದುರಿಸಲು ಬೋರ್ಡೆಕ್ಸ್ ಮಿಶ್ರಣದಂತಹ ಸಾವಯವ ತಾಮ್ರದ ಸಂಯುಕ್ತಗಳನ್ನು ಹೊಂದಿರುವ ಶಿಲೀಂಧ್ರನಾಶಕ ಸ್ಪ್ರೇಗಳನ್ನು ಬಳಸಬಹುದು. ಶರತ್ಕಾಲದಲ್ಲಿ ಫಾಲ್ ನಂತರ ಒಮ್ಮೆ ಮತ್ತು ವಸಂತಕಾಲದಲ್ಲಿ ಮೊಗ್ಗುಗಳು ಮೊಳೆಯಲು ಪ್ರಾರಂಭಿಸುವ ಮೊದಲು ಚಿಕಿತ್ಸೆಯನ್ನು ಮಾಡಬೇಕು. ತಾಮ್ರದ ಉತ್ಪನ್ನಗಳ ಪುನರಾವರ್ತಿತ ಬಳಕೆಯು ಮಣ್ಣಿನಲ್ಲಿ ತಾಮ್ರದ ಶೇಖರಣೆಗೆ ಕಾರಣವಾಗಬಹುದು ಎಂಬುದನ್ನು ಗಮನಿಸಿ. ಇದು ಅಂತಿಮವಾಗಿ ಮಣ್ಣಿನ ಜೀವಿಗಳಿಗೆ ವಿಷಕಾರಿಯಾಗಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕಾಪರ್ ಆಕ್ಸಿಕ್ಲೋರೈಡ್, ಕ್ಯುಪ್ರಿಕ್ ಹೈಡ್ರಾಕ್ಸೈಡ್, ಥಿರಮ್, ಜಿರಾಮ್, ಚೋರೊಥಲೋನಿಲ್ ಅಥವಾ ಡೈಫೆನೊಕೊನಜೋಲ್ ಅನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ಬಳಸಬಹುದು. ಶರತ್ಕಾಲದಲ್ಲಿ ಫಾಲ್ ನಂತರ ಒಮ್ಮೆ ಮತ್ತು ವಸಂತಕಾಲದಲ್ಲಿ ಮೊಗ್ಗುಗಳು ಮೊಳೆಯಲು ಪ್ರಾರಂಭಿಸುವ ಮೊದಲು ಈ ಚಿಕಿತ್ಸೆಯನ್ನು ಮಾಡಬೇಕು.

ಅದಕ್ಕೆ ಏನು ಕಾರಣ

ಟ್ಯಾಫ್ರಿನಾ ಡಿಫಾರ್ಮನ್ಸ್ ಎಂಬ ಶಿಲೀಂಧ್ರವು ಸಸ್ಯ ಅಂಗಾಂಶಗಳನ್ನು ಆವರಿಸಿಕೊಳ್ಳುವ ಕಾರಣ ರೋಗಲಕ್ಷಣಗಳು ಉಂಟಾಗುತ್ತವೆ. ಎಲೆಯ ಮೇಲ್ಮೈಯಲ್ಲಿ ಉತ್ಪತ್ತಿಯಾಗುವ ಬೀಜಕಗಳು ಮಳೆಯ ಇರಚಲಿನಿಂದ ತೊಳೆದುಕೊಂಡು ಹೋಗಿ ಅಥವಾ ಗಾಳಿಯಿಂದಾಗಿ ಪೀಚ್ ಕೊಂಬೆಗಳು ಮತ್ತು ಮೊಗ್ಗುಗಳ ಮೇಲೆ ಹರಡಿ, ಹೊಸ ಸೋಂಕುಗಳನ್ನು ಪ್ರಾರಂಭಿಸುತ್ತದೆ. ವಸಂತಕಾಲದಲ್ಲಿ ಮೊಗ್ಗುಗಳು ತೆರೆದುಕೊಳ್ಳುವುದರಿಂದ ಮತ್ತು ಇನ್ನೂ ತೆರೆಯದ ಎಲೆಗಳಿಗೆ ಸೋಂಕು ತಗುಲುವುದರಿಂದ ಬೀಜಕಗಳು ಹೆಚ್ಚಾಗಿ ಮಳೆಯ ಅವಧಿಯಲ್ಲಿ ಮೊಳಕೆಯೊಡೆಯುತ್ತವೆ. ಬೀಜಕವು ಎಲೆಯ ಮೊಗ್ಗು ಪ್ರವೇಶಿಸಿದ ಕ್ಷಣದಿಂದ, ಹರಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಯಾವುದೇ ಪರಿಣಾಮಕಾರಿ ಪ್ರತಿಕ್ರಮಗಳಿಲ್ಲ. ಈ ಸಮಯದಲ್ಲಿ ಮಳೆಯು ಸಂಭವಿಸದಿದ್ದರೆ, ಬೀಜಕಗಳು ನಿಷ್ಕ್ರಿಯವಾಗಿರುತ್ತವೆ ಮತ್ತು ಸ್ವಲ್ಪ ಅಥವಾ ಯಾವುದೇ ಸೋಂಕು ಸಂಭವಿಸುವುದಿಲ್ಲ. ಬೇಸಿಗೆಯ ಉದ್ದಕ್ಕೂ ಮತ್ತು ಚಳಿಗಾಲದಲ್ಲಿ ಮೊಗ್ಗಿನ ಕವಚಗಳಲ್ಲಿ ಅಥವಾ ತೊಗಟೆಯ ಬಿರುಕುಗಳಲ್ಲಿ ನೆಲೆಸಿದ್ದು, ಅವು ಅಂತಿಮವಾಗಿ ಮುಂದಿನ ಋತುವಿನಲ್ಲಿ ಮೊಳಕೆಯೊಡೆಯುತ್ತವೆ. ಶಿಲೀಂಧ್ರವು 16 °C ವರೆಗಿನ ತಾಪಮಾನದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ ಮತ್ತು ಈ ಕಡಿಮೆ ತಾಪಮಾನದಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡಬಹುದು. ಟ್ಯಾಫ್ರಿನಾ ಡಿಫಾರ್ಮನ್ಸ್ ಪೀಚ್ ಮತ್ತು ನೆಕ್ಟರಿನ್ ಗಳು, ಬಾದಾಮಿ ಮತ್ತು ಕೆಲವೊಮ್ಮೆ ಏಪ್ರಿಕಾಟ್ ಮತ್ತು ಅಲಂಕಾರಿಕ ಪ್ರುನಸ್ ಗಳಿಗೆ ಸೋಂಕು ಉಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮೊಗ್ಗು ಮೊಳೆಯುವ ಹಂತದಲ್ಲಿ ಸಸ್ಯಗಳನ್ನು ಮಳೆ ಅಥವಾ ತುಂತುರು ನೀರಾವರಿಯಿಂದ ರಕ್ಷಿಸಿ.
  • ಎಲೆಗಳಿಗೆ ಸರಿಯಾದ ಗಾಳಿಯಾಡುವಂತೆ ಮಾಡಲು ಪ್ರತಿ ವರ್ಷ ಮರದ ತುದಿಯನ್ನು ಸಮರಿ.
  • ಮಧ್ಯಮ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಿ.
  • ಮೊಗ್ಗು ಮೊಳೆಯುವ ಮೊದಲು ಸಸ್ಯ ಫೋರ್ಟಿಫೈಯರ್ಗಳನ್ನು ಬಳಸಿ.
  • ರೋಗ ನಿರೋಧಕ ಸಸ್ಯ ಪ್ರಭೇದಗಳನ್ನು, ಉದಾಹರಣೆಗೆ ವೈಟ್ ಪ್ಲೆಷ್ ಪ್ರಭೇದಗಳನ್ನು ನೆಡಿ.
  • ಸ್ಪಷ್ಟವಾಗಿ ಸೋಂಕಿತವಾಗಿರುವ ಎಲೆಗಳು, ಮಮ್ಮಿಫೈಡ್ ಹಣ್ಣುಗಳು ಮತ್ತು ಚಿಗುರುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಸಾಧ್ಯವಾದಾಗಲೆಲ್ಲಾ, ಸೋಂಕನ್ನು ತಡೆಗಟ್ಟಲು ಪ್ಲಾಸ್ಟಿಕ್‌ನ ಮಳೆ ಚಪ್ಪರವನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ